<p><strong>ಬೆಂಗಳೂರು</strong>: ಹೃದಯದ ಕವಾಟಕ್ಕೆ ಸಂಬಂಧಿಸಿದ ಕಾಯಿಲೆಯಾದ ‘ಅಯೋರ್ಟಿಕ್ ರಿಗರ್ಜಿಟೇಷನ್’ಗೆ ಒಳಗಾದ ರೋಗಿಗಳಿಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರು ವಿಶೇಷ ಟಿಎವಿಆರ್ (ಟ್ರಾನ್ಸ್ಕ್ಯಾಥೆಟರ್ ವಾಲ್ವ್ ರಿಪ್ಲೇಸ್ಮೆಂಟ್) ಸಾಧನ ಅಳವಡಿಸಿದ್ದಾರೆ.</p>.<p>ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಸೂರಜ್ ನರಸಿಂಹನ್ ಅವರು ಟಿಎವಿಆರ್ ಸಾಧನ ಅಳವಡಿಕೆ ಮೂಲಕ ಚಿಕಿತ್ಸೆ ಒದಗಿಸಿದ್ದಾರೆ.</p>.<p>‘ಅಯೋರ್ಟಿಕ್ ರಿಗರ್ಜಿಟೇಷನ್ ಕವಾಟದ ಕಾಯಿಲೆಯಾಗಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಶೇ 2ಕ್ಕಿಂತ ಹೆಚ್ಚು ಜನರು ಈ ಕಾಯಿಲೆಯ ಮಧ್ಯಮ ಅಥವಾ ತೀವ್ರ ಸ್ವರೂಪದ ರೋಗ ಲಕ್ಷಣ ಹೊಂದಿರುತ್ತಾರೆ. ಕಳೆದೊಂದು ದಶಕದಲ್ಲಿ ವೈದ್ಯಕೀಯ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾದರೂ, ಶಸ್ತ್ರಚಿಕಿತ್ಸೆ ನೀಡುವುದು ಹೆಚ್ಚು ಕಷ್ಟವಾಗಿತ್ತು’ ಎಂದು ಡಾ. ಸೂರಜ್ ನರಸಿಂಹನ್ ಹೇಳಿದರು.</p>.<p>‘80 ವರ್ಷ ಮತ್ತು 69 ವರ್ಷದ ಇಬ್ಬರು ಪುರುಷ ರೋಗಿಗಳು ತೀವ್ರತರದ ಅಯೋರ್ಟಿಕ್ ರಿಗರ್ಜಿಟೇಷನ್ನಿಂದ ಬಳಲುತ್ತಿದ್ದರು. ಅವರಿಗೆ ಟಿಎವಿಆರ್ ಸಾಧನ ಅಳವಡಿಸುವ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು. ಈ ವಿಧಾನದಲ್ಲಿ ಎದೆಯ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸದೆ, ರಕ್ತನಾಳದ ಮೂಲಕ ಹೃದಯದ ಕವಾಟವನ್ನು ಬದಲಾಯಿಸಲಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹೃದಯದ ಕವಾಟಕ್ಕೆ ಸಂಬಂಧಿಸಿದ ಕಾಯಿಲೆಯಾದ ‘ಅಯೋರ್ಟಿಕ್ ರಿಗರ್ಜಿಟೇಷನ್’ಗೆ ಒಳಗಾದ ರೋಗಿಗಳಿಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರು ವಿಶೇಷ ಟಿಎವಿಆರ್ (ಟ್ರಾನ್ಸ್ಕ್ಯಾಥೆಟರ್ ವಾಲ್ವ್ ರಿಪ್ಲೇಸ್ಮೆಂಟ್) ಸಾಧನ ಅಳವಡಿಸಿದ್ದಾರೆ.</p>.<p>ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಸೂರಜ್ ನರಸಿಂಹನ್ ಅವರು ಟಿಎವಿಆರ್ ಸಾಧನ ಅಳವಡಿಕೆ ಮೂಲಕ ಚಿಕಿತ್ಸೆ ಒದಗಿಸಿದ್ದಾರೆ.</p>.<p>‘ಅಯೋರ್ಟಿಕ್ ರಿಗರ್ಜಿಟೇಷನ್ ಕವಾಟದ ಕಾಯಿಲೆಯಾಗಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಶೇ 2ಕ್ಕಿಂತ ಹೆಚ್ಚು ಜನರು ಈ ಕಾಯಿಲೆಯ ಮಧ್ಯಮ ಅಥವಾ ತೀವ್ರ ಸ್ವರೂಪದ ರೋಗ ಲಕ್ಷಣ ಹೊಂದಿರುತ್ತಾರೆ. ಕಳೆದೊಂದು ದಶಕದಲ್ಲಿ ವೈದ್ಯಕೀಯ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾದರೂ, ಶಸ್ತ್ರಚಿಕಿತ್ಸೆ ನೀಡುವುದು ಹೆಚ್ಚು ಕಷ್ಟವಾಗಿತ್ತು’ ಎಂದು ಡಾ. ಸೂರಜ್ ನರಸಿಂಹನ್ ಹೇಳಿದರು.</p>.<p>‘80 ವರ್ಷ ಮತ್ತು 69 ವರ್ಷದ ಇಬ್ಬರು ಪುರುಷ ರೋಗಿಗಳು ತೀವ್ರತರದ ಅಯೋರ್ಟಿಕ್ ರಿಗರ್ಜಿಟೇಷನ್ನಿಂದ ಬಳಲುತ್ತಿದ್ದರು. ಅವರಿಗೆ ಟಿಎವಿಆರ್ ಸಾಧನ ಅಳವಡಿಸುವ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು. ಈ ವಿಧಾನದಲ್ಲಿ ಎದೆಯ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸದೆ, ರಕ್ತನಾಳದ ಮೂಲಕ ಹೃದಯದ ಕವಾಟವನ್ನು ಬದಲಾಯಿಸಲಾಗುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>