<p><strong>ಬೆಂಗಳೂರು</strong>: ‘ಪಂಚಾಯಿತಿಯಿಂದ ಸಂಸತ್ತಿನವರೆಗೆ ಚುನಾಯಿತರಾದ ಜನಪ್ರತಿನಿಧಿಗಳು, ತಮಗೆ ಸಿಕ್ಕ ಅಧಿಕಾರವು ಜನಹಿತಕ್ಕಾಗಿಯೇ ಹೊರತು ಸ್ವಹಿತಕ್ಕಲ್ಲ ಎನ್ನುವುದನ್ನು ಅರಿತಿರಬೇಕು’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಕಿವಿಮಾತು ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.</p>.<p>‘ಜನಮತದಿಂದ ಅಧಿಕಾರ ಪಡೆದ ರಾಜಕಾರಣಿಗಳು ತಮ್ಮ ಕುರ್ಚಿಯನ್ನು ದರ್ಪಕ್ಕಾಗಿ ಬಳಸಿಕೊಳ್ಳದೆ, ಸೇವೆಗೆ ಉಪಯೋಗಿಸಿಕೊಳ್ಳಬೇಕು. ಸರ್ಕಾರವೊಂದು ಕೈಗೊಳ್ಳುವ ಆಡಳಿತಾತ್ಮಕ ತೀರ್ಮಾನಗಳು ನಾಗರಿಕರ ಮೇಲೆ ಪರಿಣಾಮ ಬೀರಲಿವೆ. ಆದ್ದರಿಂದ ರಾಜಕೀಯ ಕ್ಷೇತ್ರದಲ್ಲಿರುವವರು ಪ್ರಾಮಾಣಿಕ, ಸರಳ ಹಾಗೂ ಜನಪರವಾಗಿರಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನರು ಒಳ್ಳೆಯ ಚರಿತ್ರೆ ಹೊಂದಿರಬೇಕು. ಅಂತಹವರು ಸಿಗುವವರೆಗೂ ಸಂವಿಧಾನದ ಆಶಯಗಳು ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.</p>.<p>‘ಒಬ್ಬ ವ್ಯಕ್ತಿ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾನೆ ಎನ್ನುವುದು ಮುಖ್ಯವಲ್ಲ. ಬದಲಾಗಿ, ಅಧಿಕಾರದಲ್ಲಿ ಇದ್ದಾಗ ಆತ ಏನು ಮಾಡಿದ ಎನ್ನುವುದು ಮುಖ್ಯ. ಕಡಿದಾಳ್ ಮಂಜಪ್ಪ ಅವರು ಮುಖ್ಯಮಂತ್ರಿಯಾಗಿ, ಕಂದಾಯ ಸಚಿವರಾಗಿ ರೈತಪರ ಕಾಳಜಿಯಿಂದ ಕೆಲಸ ಮಾಡಿದ್ದರು. ಅವರು ಗಾಂಧಿ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಪ್ರಾಮಾಣಿಕತೆ, ಸರಳತೆ ಹಾಗೂ ನೈತಿಕತೆಯನ್ನು ಜೀವಂತವಾಗಿಟ್ಟುಕೊಂಡಿದ್ದರು. ಅಂತಹವರು ರಾಜಕೀಯ ಕ್ಷೇತ್ರದಲ್ಲಿ ಕಾಣಸಿಗುವುದು ವಿರಳ’ ಎಂದರು.</p>.<p>ದತ್ತಿ ಉಪನ್ಯಾಸ ನೀಡಿದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘35 ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿದವರಲ್ಲಿ, ನನ್ನನ್ನು ಸೇರಿ ಯಾರೂ ಕೂಡ ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವ ಹಣ ಚುನಾವಣಾ ಆಯೋಗ ನಿಗದಿ ಮಾಡಿದ ಹಣಕ್ಕಿಂತ ಜಾಸ್ತಿಯೇ ಇರುತ್ತದೆ. ಆದರೆ, ಪ್ರಮಾಣಪತ್ರ ಸಲ್ಲಿಸುವಾಗ ಕಡಿಮೆ ಖರ್ಚಿನ ಲೆಕ್ಕ ನೀಡುತ್ತೇವೆ. ಆದ್ದರಿಂದ ರಾಜಕಾರಣಿಗಳು ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ. ಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರಕ್ಕೆ ದೊಡ್ಡ ವ್ಯತ್ಯಾಸವಿದೆ’ ಎಂದು ಹೇಳಿದರು.</p>.<p>ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಡಿ.ಆರ್.ಪಾಟೀಲ, ‘ಈಗ ಕಡಿದಾಳ್ ಮಂಜಪ್ಪ ಅಂತಹ ನಾಯಕರ ಕೊರತೆಯಿದೆ. ರಾಜಕೀಯ ಕ್ಷೇತ್ರ ಬಹಳ ಕೆಳಗೆ ಹೋಗಿದೆ. ಎಲ್ಲ ನಾಯಕರು ವಿಫಲರಾದಾಗ ಸಮಾಜವೇ ರೊಚ್ಚಿಗೆದ್ದು ಬದಲಾವಣೆ ತರುವ ಕಾಲ ಬರುತ್ತದೆ. ಮುಂಬರುವ ವ್ಯವಸ್ಥೆಯಲ್ಲಿ ಕಡಿದಾಳ್ ಮಂಜಪ್ಪ ಅಂತಹವರು ಉದಯಿಸುತ್ತಾರೆಂಬ ವಿಶ್ವಾಸವಿದೆ’ ಎಂದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಕ್ರಮಗಳ ನಿರ್ದೇಶಕ ಜಿ.ಬಿ.ಶಿವರಾಜು, ‘ಕಡಿದಾಳ್ ಮಂಜಪ್ಪ ಅವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಅವರ ಸಮಾಧಿ ಸ್ಥಳವನ್ನು ಯಾತ್ರಾಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು. ಅವರು ವಾಸವಿದ್ದ ಮನೆ ಒಂದೆರಡು ವರ್ಷದಲ್ಲಿ ಬೀಳುವ ಸಾಧ್ಯತೆಯಿದ್ದು, ಕವಿಶೈಲ ಮಾದರಿಯಲ್ಲಿ ಉಳಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಪಂಚಾಯಿತಿಯಿಂದ ಸಂಸತ್ತಿನವರೆಗೆ ಚುನಾಯಿತರಾದ ಜನಪ್ರತಿನಿಧಿಗಳು, ತಮಗೆ ಸಿಕ್ಕ ಅಧಿಕಾರವು ಜನಹಿತಕ್ಕಾಗಿಯೇ ಹೊರತು ಸ್ವಹಿತಕ್ಕಲ್ಲ ಎನ್ನುವುದನ್ನು ಅರಿತಿರಬೇಕು’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಕಿವಿಮಾತು ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.</p>.<p>‘ಜನಮತದಿಂದ ಅಧಿಕಾರ ಪಡೆದ ರಾಜಕಾರಣಿಗಳು ತಮ್ಮ ಕುರ್ಚಿಯನ್ನು ದರ್ಪಕ್ಕಾಗಿ ಬಳಸಿಕೊಳ್ಳದೆ, ಸೇವೆಗೆ ಉಪಯೋಗಿಸಿಕೊಳ್ಳಬೇಕು. ಸರ್ಕಾರವೊಂದು ಕೈಗೊಳ್ಳುವ ಆಡಳಿತಾತ್ಮಕ ತೀರ್ಮಾನಗಳು ನಾಗರಿಕರ ಮೇಲೆ ಪರಿಣಾಮ ಬೀರಲಿವೆ. ಆದ್ದರಿಂದ ರಾಜಕೀಯ ಕ್ಷೇತ್ರದಲ್ಲಿರುವವರು ಪ್ರಾಮಾಣಿಕ, ಸರಳ ಹಾಗೂ ಜನಪರವಾಗಿರಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನರು ಒಳ್ಳೆಯ ಚರಿತ್ರೆ ಹೊಂದಿರಬೇಕು. ಅಂತಹವರು ಸಿಗುವವರೆಗೂ ಸಂವಿಧಾನದ ಆಶಯಗಳು ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.</p>.<p>‘ಒಬ್ಬ ವ್ಯಕ್ತಿ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾನೆ ಎನ್ನುವುದು ಮುಖ್ಯವಲ್ಲ. ಬದಲಾಗಿ, ಅಧಿಕಾರದಲ್ಲಿ ಇದ್ದಾಗ ಆತ ಏನು ಮಾಡಿದ ಎನ್ನುವುದು ಮುಖ್ಯ. ಕಡಿದಾಳ್ ಮಂಜಪ್ಪ ಅವರು ಮುಖ್ಯಮಂತ್ರಿಯಾಗಿ, ಕಂದಾಯ ಸಚಿವರಾಗಿ ರೈತಪರ ಕಾಳಜಿಯಿಂದ ಕೆಲಸ ಮಾಡಿದ್ದರು. ಅವರು ಗಾಂಧಿ ವಿಚಾರಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಪ್ರಾಮಾಣಿಕತೆ, ಸರಳತೆ ಹಾಗೂ ನೈತಿಕತೆಯನ್ನು ಜೀವಂತವಾಗಿಟ್ಟುಕೊಂಡಿದ್ದರು. ಅಂತಹವರು ರಾಜಕೀಯ ಕ್ಷೇತ್ರದಲ್ಲಿ ಕಾಣಸಿಗುವುದು ವಿರಳ’ ಎಂದರು.</p>.<p>ದತ್ತಿ ಉಪನ್ಯಾಸ ನೀಡಿದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘35 ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿದವರಲ್ಲಿ, ನನ್ನನ್ನು ಸೇರಿ ಯಾರೂ ಕೂಡ ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವ ಹಣ ಚುನಾವಣಾ ಆಯೋಗ ನಿಗದಿ ಮಾಡಿದ ಹಣಕ್ಕಿಂತ ಜಾಸ್ತಿಯೇ ಇರುತ್ತದೆ. ಆದರೆ, ಪ್ರಮಾಣಪತ್ರ ಸಲ್ಲಿಸುವಾಗ ಕಡಿಮೆ ಖರ್ಚಿನ ಲೆಕ್ಕ ನೀಡುತ್ತೇವೆ. ಆದ್ದರಿಂದ ರಾಜಕಾರಣಿಗಳು ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ. ಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರಕ್ಕೆ ದೊಡ್ಡ ವ್ಯತ್ಯಾಸವಿದೆ’ ಎಂದು ಹೇಳಿದರು.</p>.<p>ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಡಿ.ಆರ್.ಪಾಟೀಲ, ‘ಈಗ ಕಡಿದಾಳ್ ಮಂಜಪ್ಪ ಅಂತಹ ನಾಯಕರ ಕೊರತೆಯಿದೆ. ರಾಜಕೀಯ ಕ್ಷೇತ್ರ ಬಹಳ ಕೆಳಗೆ ಹೋಗಿದೆ. ಎಲ್ಲ ನಾಯಕರು ವಿಫಲರಾದಾಗ ಸಮಾಜವೇ ರೊಚ್ಚಿಗೆದ್ದು ಬದಲಾವಣೆ ತರುವ ಕಾಲ ಬರುತ್ತದೆ. ಮುಂಬರುವ ವ್ಯವಸ್ಥೆಯಲ್ಲಿ ಕಡಿದಾಳ್ ಮಂಜಪ್ಪ ಅಂತಹವರು ಉದಯಿಸುತ್ತಾರೆಂಬ ವಿಶ್ವಾಸವಿದೆ’ ಎಂದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಕ್ರಮಗಳ ನಿರ್ದೇಶಕ ಜಿ.ಬಿ.ಶಿವರಾಜು, ‘ಕಡಿದಾಳ್ ಮಂಜಪ್ಪ ಅವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಅವರ ಸಮಾಧಿ ಸ್ಥಳವನ್ನು ಯಾತ್ರಾಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು. ಅವರು ವಾಸವಿದ್ದ ಮನೆ ಒಂದೆರಡು ವರ್ಷದಲ್ಲಿ ಬೀಳುವ ಸಾಧ್ಯತೆಯಿದ್ದು, ಕವಿಶೈಲ ಮಾದರಿಯಲ್ಲಿ ಉಳಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>