<p>ಬೆಂಗಳೂರು: ‘ಇಹಪರದ ಚರ್ಚೆ ನಡೆಯುತ್ತಿದ್ದ ಮಹಾಮನೆಗೂ, ಅಧ್ಯಕ್ಷರೇ ಸಭಾತ್ಯಾಗ ಮಾಡುವ ಈಗಿನ ಸದನಗಳಿಗೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ಚಿಂತಕ ಶಿವರಾಮಯ್ಯ ಹೇಳಿದರು.</p>.<p>ನಯನ ಸಭಾಂಗಣದಲ್ಲಿ ಬುಧವಾರಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಜಿ. ಸಿದ್ಧರಾಮಯ್ಯ ಅವರ ‘ಮಹಾಮನೆ’ ನಾಟಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>‘ಬಸವಣ್ಣ ಅವರು ಎಲ್ಲ ಸಮುದಾಯದವರನ್ನು ಒಳಗೊಂಡು ವಚನಕಾರರೊಂದಿಗೆ ಮಹಾಮನೆಯಲ್ಲಿ ಮುಕ್ತವಾಗಿ ಮಾತನಾಡುತ್ತಿದ್ದರು.ಅಲ್ಲಿ ಸಮಾಜದ ಎಲ್ಲ ಸ್ತರಗಳ ಜನರ ಚರ್ಚೆಗಳು ಒಳಿತಿನ ಕುರಿತೇ ಇರುತ್ತಿದ್ದವು. ಮಹಾಮನೆಯ ಪರಿಕಲ್ಪನೆಯಲ್ಲಿ ಮೂಡಿ ಬಂದ ಸಂಸತ್ತು, ವಿಧಾನಸಭೆಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಜಗಳಗಳನ್ನೇ ನೋಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ಮಹಾಮನೆ ಎಲ್ಲರನ್ನೂ ಒಳಗೊಂಡ ಮನೆಯೇ ಆಗಿತ್ತು. ಈಗಲೂ ಚಾತುರ್ವರ್ಣ ವ್ಯವಸ್ಥೆ ನಮ್ಮಲ್ಲಿ ಜೀವಂತವಾಗಿದೆ. ದೇವಸ್ಥಾನದ ಒಳಕ್ಕೆ ಬಿಡದ ಘಟನೆಗಳನ್ನು ಕಾಣುತ್ತಿರುವುದು ಬೇಸರದ ಸಂಗತಿ. ಇದೇ ಕಾರಣದಿಂದ ಮಹಾಮನೆ, ವಚನಗಳ ಮಹತ್ವ ತಿಳಿಸಲು ನಾಟಕ ರಚಿಸಿದೆ’ ಎಂದರು.</p>.<p>ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಬೇಲೂರುರಘುನಂದನ ಪುಸ್ತಕ ಕುರಿತು ಮಾತನಾಡಿದರು. ಕಸಾಪ ನಗರ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ರಾಧಾಕೃಷ್ಣ ಹೆಗಡೆ, ಬಿ.ಎಸ್. ವಿದ್ಯಾರಣ್ಯ ಉಪಸ್ಥಿತರಿದ್ದರು.</p>.<p>ಲೇಖಕಿ ಎಚ್.ಎಲ್. ಪುಷ್ಪ, ಪದ್ಮಾ ಟಿ. ಚಿನ್ಮಯಿ, ವಡವಾಟಿ ಶಾರದಾ ಭರತ್, ಕಾವೇರಿ ಶ್ರೀಧರ್, ಭಾಸ್ಕರ್ ಕುಪ್ಪೂರು ಅವರಿಗೆ ರಂಗಗೌರವ ಸಲ್ಲಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-4-2106909065</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಇಹಪರದ ಚರ್ಚೆ ನಡೆಯುತ್ತಿದ್ದ ಮಹಾಮನೆಗೂ, ಅಧ್ಯಕ್ಷರೇ ಸಭಾತ್ಯಾಗ ಮಾಡುವ ಈಗಿನ ಸದನಗಳಿಗೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ಚಿಂತಕ ಶಿವರಾಮಯ್ಯ ಹೇಳಿದರು.</p>.<p>ನಯನ ಸಭಾಂಗಣದಲ್ಲಿ ಬುಧವಾರಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಜಿ. ಸಿದ್ಧರಾಮಯ್ಯ ಅವರ ‘ಮಹಾಮನೆ’ ನಾಟಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>‘ಬಸವಣ್ಣ ಅವರು ಎಲ್ಲ ಸಮುದಾಯದವರನ್ನು ಒಳಗೊಂಡು ವಚನಕಾರರೊಂದಿಗೆ ಮಹಾಮನೆಯಲ್ಲಿ ಮುಕ್ತವಾಗಿ ಮಾತನಾಡುತ್ತಿದ್ದರು.ಅಲ್ಲಿ ಸಮಾಜದ ಎಲ್ಲ ಸ್ತರಗಳ ಜನರ ಚರ್ಚೆಗಳು ಒಳಿತಿನ ಕುರಿತೇ ಇರುತ್ತಿದ್ದವು. ಮಹಾಮನೆಯ ಪರಿಕಲ್ಪನೆಯಲ್ಲಿ ಮೂಡಿ ಬಂದ ಸಂಸತ್ತು, ವಿಧಾನಸಭೆಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಜಗಳಗಳನ್ನೇ ನೋಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ಮಹಾಮನೆ ಎಲ್ಲರನ್ನೂ ಒಳಗೊಂಡ ಮನೆಯೇ ಆಗಿತ್ತು. ಈಗಲೂ ಚಾತುರ್ವರ್ಣ ವ್ಯವಸ್ಥೆ ನಮ್ಮಲ್ಲಿ ಜೀವಂತವಾಗಿದೆ. ದೇವಸ್ಥಾನದ ಒಳಕ್ಕೆ ಬಿಡದ ಘಟನೆಗಳನ್ನು ಕಾಣುತ್ತಿರುವುದು ಬೇಸರದ ಸಂಗತಿ. ಇದೇ ಕಾರಣದಿಂದ ಮಹಾಮನೆ, ವಚನಗಳ ಮಹತ್ವ ತಿಳಿಸಲು ನಾಟಕ ರಚಿಸಿದೆ’ ಎಂದರು.</p>.<p>ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಬೇಲೂರುರಘುನಂದನ ಪುಸ್ತಕ ಕುರಿತು ಮಾತನಾಡಿದರು. ಕಸಾಪ ನಗರ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ರಾಧಾಕೃಷ್ಣ ಹೆಗಡೆ, ಬಿ.ಎಸ್. ವಿದ್ಯಾರಣ್ಯ ಉಪಸ್ಥಿತರಿದ್ದರು.</p>.<p>ಲೇಖಕಿ ಎಚ್.ಎಲ್. ಪುಷ್ಪ, ಪದ್ಮಾ ಟಿ. ಚಿನ್ಮಯಿ, ವಡವಾಟಿ ಶಾರದಾ ಭರತ್, ಕಾವೇರಿ ಶ್ರೀಧರ್, ಭಾಸ್ಕರ್ ಕುಪ್ಪೂರು ಅವರಿಗೆ ರಂಗಗೌರವ ಸಲ್ಲಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-4-2106909065</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>