<p><strong>ಬೆಂಗಳೂರು</strong>: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಪಕ್ಷ ಹಾಗೂ ಸರ್ಕಾರದ ಕಡೆಯಿಂದ ಕಾನೂನು ಹೋರಾಟ ಮಾಡುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.</p><p>ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಎಸ್ಐಆರ್ ಎನ್ನುವುದು ಬಿಜೆಪಿಯನ್ನು ಗೆಲ್ಲಿಸಲೆಂದೇ ಮಾಡಿರುವ ವಿನ್ಯಾಸ’ ಎಂದು ಆರೋಪಿಸಿದರು.</p><p>‘ಹೊಸ ನಿಯಮ ತಂದು ಯಾರನ್ನು ಬೇಕಾದರೂ ಮತದಾರರ ಪಟ್ಟಿಯಿಂದ ತೆಗೆಯಬಹುದು ಎಂದಾದರೆ, ಅದನ್ನು ಸಂವಿಧಾನದ ಪ್ರಕಾರ ನಡೆಯುತ್ತಿದೆ ಎಂದು ಹೇಳಲು ಆಗುತ್ತದೆಯೇ? ಇದು ಸಂಪೂರ್ಣ ಅಸಾಂವಿಧಾನಾತ್ಮಕ’ ಎಂದು ವಾಗ್ದಾಳಿ ನಡೆಸಿದರು.</p><p>‘ಎಸ್ಐಆರ್ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ, ಕಾನೂನಾತ್ಮಕವಾಗಿ ಮಾಡಿ ಎನ್ನುವುದು ನಮ್ಮ ಬೇಡಿಕೆ. ಪ್ರತಿಯೊಬ್ಬ ನಾಗರಿಕನಿಗೂ ತೊಂದರೆ ಆಗದಂತೆ ಸಂವಿಧಾನದ ಹಕ್ಕು ಕೊಡಬೇಕು’ ಎಂದರು. </p><p>‘ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಮೊದಲು ಚುನಾವಣಾ ಆಯೋಗ ಸರಿಪಡಿಸಬೇಕು.<br>ಪಾರದರ್ಶಕವಾಗಿ ತಿದ್ದಿದ ಬಳಿಕವೇ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು’ ಎಂದೂ ಆಗ್ರಹಿಸಿದರು.</p><p><strong>ಬಿಜೆಪಿಯವರದ್ದು ನಾಟಕ:</strong> ಪ್ರಧಾನಿ ಮೋದಿ ಅವರ ಇಂಧನ ಮಿತವ್ಯಯ ಕರೆಗೆ ಸ್ಪಂದಿಸಿದ ರಾಜ್ಯ ಬಿಜೆಪಿ ನಾಯಕರ ನಡೆಗೆ ವ್ಯಂಗ್ಯವಾಡಿದ ಪ್ರಿಯಾಂಕ್, ‘ಬಿಜೆಪಿ ನಾಯಕರ ಮೆಟ್ರೊ ಮತ್ತು ಬೈಕ್ ಪ್ರಯಾಣ ಬರೀ ನಾಟಕ’ ಎಂದಿದ್ದಾರೆ. </p><p>‘ಒಂದು ದಿನ ಒಬ್ಬ ಮೆಟ್ರೊ ಹತ್ತುವುದು, ಮತ್ತೊಬ್ಬ ಬೈಕ್ ಹತ್ತುವುದು ಜನರಿಗಾಗಿ ಮಾಡಿದ ಕೆಲಸ ಅಲ್ಲ. ನಿಜವಾಗಿಯೂ ಜನರ ಕಷ್ಟ ಗೊತ್ತಾಗಬೇಕೆಂದರೆ ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ. ನಮ್ಮ ಶಕ್ತಿ ಯೋಜನೆ ಉಪಯೋಗ ಪಡೆದುಕೊಳ್ಳಲಿ’ ಎಂದು ಸವಾಲು ಹಾಕಿದರು.</p><p>‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮೆಟ್ರೊ ಹತ್ತುವಂತೆ ಮಾಡಿದವರು ಯಾರು. ಆ ಪರಿಸ್ಥಿತಿ ಯಾಕೆ ಬಂತು. ಅದಕ್ಕೂ ಉತ್ತರ ಬೇಕಲ್ಲವೇ’ ಎಂದೂ ಪ್ರಶ್ನಿಸಿದರು.</p><p><strong>‘ಬೆಂಗಾವಲು ವಾಹನ ಕಡಿತ: 21ರಂದು ಚರ್ಚೆ’</strong></p><p>‘ಸರ್ಕಾರದ ಮಟ್ಟದಲ್ಲಿ ಬೆಂಗಾವಲು ವಾಹನಗಳನ್ನು ಕಡಿತ ಮಾಡುವ ವಿಚಾರದ ಕುರಿತು 21ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ’ ಎಂದು ಪ್ರಿಯಾಂಕ್ ಹೇಳಿದರು.</p><p>‘ಇಂಧನ ಕೊರತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರೆ, ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ವಾಗಿಲ್ಲ ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳುತ್ತಾರೆ. ನಾವು ಯಾರ ಮಾತು ನಂಬಬೇಕು’ ಎಂದೂ ಪ್ರಶ್ನಿಸಿದರು.</p><p><strong>ಯಾವಾಗ ಹೇಳಿದ್ದಾರೆ ?</strong></p><p>ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವಾಗ ಹೇಳಿದ್ದಾರೆ’ ಎಂದು ಮರುಪ್ರಶ್ನಿಸಿದರು.</p><p>‘ಅವರು ಹಾಗೇ ಹೇಳಿಲ್ಲ. ಏನು ಮಾಡಬೇಕೆಂದು ನನಗೆ ಗೊತ್ತಿದೆ ಅಂದಿದ್ದಾರೆ ಅಷ್ಟೆ’ ಎಂದರು. </p><p>‘ಹಾಗಿದ್ದರೆ ಮುಖ್ಯಮಂತ್ರಿ ಬದಲಾವಣೆ ವಿಷಯ ಜೀವಂತವಾಗಿದೆಯೇ’ ಎಂಬ ಪ್ರಶ್ನೆಗೆ, ‘ಅದನ್ನು ಎಐಸಿಸಿ ಅಧ್ಯಕ್ಷರನ್ನೇ ಕೇಳಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಪಕ್ಷ ಹಾಗೂ ಸರ್ಕಾರದ ಕಡೆಯಿಂದ ಕಾನೂನು ಹೋರಾಟ ಮಾಡುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.</p><p>ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಎಸ್ಐಆರ್ ಎನ್ನುವುದು ಬಿಜೆಪಿಯನ್ನು ಗೆಲ್ಲಿಸಲೆಂದೇ ಮಾಡಿರುವ ವಿನ್ಯಾಸ’ ಎಂದು ಆರೋಪಿಸಿದರು.</p><p>‘ಹೊಸ ನಿಯಮ ತಂದು ಯಾರನ್ನು ಬೇಕಾದರೂ ಮತದಾರರ ಪಟ್ಟಿಯಿಂದ ತೆಗೆಯಬಹುದು ಎಂದಾದರೆ, ಅದನ್ನು ಸಂವಿಧಾನದ ಪ್ರಕಾರ ನಡೆಯುತ್ತಿದೆ ಎಂದು ಹೇಳಲು ಆಗುತ್ತದೆಯೇ? ಇದು ಸಂಪೂರ್ಣ ಅಸಾಂವಿಧಾನಾತ್ಮಕ’ ಎಂದು ವಾಗ್ದಾಳಿ ನಡೆಸಿದರು.</p><p>‘ಎಸ್ಐಆರ್ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ, ಕಾನೂನಾತ್ಮಕವಾಗಿ ಮಾಡಿ ಎನ್ನುವುದು ನಮ್ಮ ಬೇಡಿಕೆ. ಪ್ರತಿಯೊಬ್ಬ ನಾಗರಿಕನಿಗೂ ತೊಂದರೆ ಆಗದಂತೆ ಸಂವಿಧಾನದ ಹಕ್ಕು ಕೊಡಬೇಕು’ ಎಂದರು. </p><p>‘ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಮೊದಲು ಚುನಾವಣಾ ಆಯೋಗ ಸರಿಪಡಿಸಬೇಕು.<br>ಪಾರದರ್ಶಕವಾಗಿ ತಿದ್ದಿದ ಬಳಿಕವೇ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು’ ಎಂದೂ ಆಗ್ರಹಿಸಿದರು.</p><p><strong>ಬಿಜೆಪಿಯವರದ್ದು ನಾಟಕ:</strong> ಪ್ರಧಾನಿ ಮೋದಿ ಅವರ ಇಂಧನ ಮಿತವ್ಯಯ ಕರೆಗೆ ಸ್ಪಂದಿಸಿದ ರಾಜ್ಯ ಬಿಜೆಪಿ ನಾಯಕರ ನಡೆಗೆ ವ್ಯಂಗ್ಯವಾಡಿದ ಪ್ರಿಯಾಂಕ್, ‘ಬಿಜೆಪಿ ನಾಯಕರ ಮೆಟ್ರೊ ಮತ್ತು ಬೈಕ್ ಪ್ರಯಾಣ ಬರೀ ನಾಟಕ’ ಎಂದಿದ್ದಾರೆ. </p><p>‘ಒಂದು ದಿನ ಒಬ್ಬ ಮೆಟ್ರೊ ಹತ್ತುವುದು, ಮತ್ತೊಬ್ಬ ಬೈಕ್ ಹತ್ತುವುದು ಜನರಿಗಾಗಿ ಮಾಡಿದ ಕೆಲಸ ಅಲ್ಲ. ನಿಜವಾಗಿಯೂ ಜನರ ಕಷ್ಟ ಗೊತ್ತಾಗಬೇಕೆಂದರೆ ಪ್ರತಿದಿನ ಬಿಎಂಟಿಸಿ ಬಸ್ ಹತ್ತಲಿ. ನಮ್ಮ ಶಕ್ತಿ ಯೋಜನೆ ಉಪಯೋಗ ಪಡೆದುಕೊಳ್ಳಲಿ’ ಎಂದು ಸವಾಲು ಹಾಕಿದರು.</p><p>‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮೆಟ್ರೊ ಹತ್ತುವಂತೆ ಮಾಡಿದವರು ಯಾರು. ಆ ಪರಿಸ್ಥಿತಿ ಯಾಕೆ ಬಂತು. ಅದಕ್ಕೂ ಉತ್ತರ ಬೇಕಲ್ಲವೇ’ ಎಂದೂ ಪ್ರಶ್ನಿಸಿದರು.</p><p><strong>‘ಬೆಂಗಾವಲು ವಾಹನ ಕಡಿತ: 21ರಂದು ಚರ್ಚೆ’</strong></p><p>‘ಸರ್ಕಾರದ ಮಟ್ಟದಲ್ಲಿ ಬೆಂಗಾವಲು ವಾಹನಗಳನ್ನು ಕಡಿತ ಮಾಡುವ ವಿಚಾರದ ಕುರಿತು 21ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ’ ಎಂದು ಪ್ರಿಯಾಂಕ್ ಹೇಳಿದರು.</p><p>‘ಇಂಧನ ಕೊರತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರೆ, ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ವಾಗಿಲ್ಲ ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳುತ್ತಾರೆ. ನಾವು ಯಾರ ಮಾತು ನಂಬಬೇಕು’ ಎಂದೂ ಪ್ರಶ್ನಿಸಿದರು.</p><p><strong>ಯಾವಾಗ ಹೇಳಿದ್ದಾರೆ ?</strong></p><p>ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವಾಗ ಹೇಳಿದ್ದಾರೆ’ ಎಂದು ಮರುಪ್ರಶ್ನಿಸಿದರು.</p><p>‘ಅವರು ಹಾಗೇ ಹೇಳಿಲ್ಲ. ಏನು ಮಾಡಬೇಕೆಂದು ನನಗೆ ಗೊತ್ತಿದೆ ಅಂದಿದ್ದಾರೆ ಅಷ್ಟೆ’ ಎಂದರು. </p><p>‘ಹಾಗಿದ್ದರೆ ಮುಖ್ಯಮಂತ್ರಿ ಬದಲಾವಣೆ ವಿಷಯ ಜೀವಂತವಾಗಿದೆಯೇ’ ಎಂಬ ಪ್ರಶ್ನೆಗೆ, ‘ಅದನ್ನು ಎಐಸಿಸಿ ಅಧ್ಯಕ್ಷರನ್ನೇ ಕೇಳಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>