<p>ಬೆಂಗಳೂರು: ‘ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಭಾರತೀಯರ ಮತದಾನದ ಹಕ್ಕನ್ನು ನಾಶ ಮಾಡುತ್ತಿದ್ದು, ರಾಜ್ಯದ ಮತದಾರರು ಇದನ್ನು ವಿರೋಧಿಸಬೇಕು’ ಎಂದು ಆಗ್ರಹಿಸಿ ನನ್ನ ಮತ ನನ್ನ ಹಕ್ಕು ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.</p>.<p>ನಗರದ ಕೋರಮಂಗಲದ ವೆಂಕಟಾಪುರ, ಚೆಲುವಾದಿಪಾಳ್ಯ, ಆನಂದಪುರ, ಜನತಾ ಕಾಲೊನಿ, ವಿನೋಬಾ ನಗರ, ಕೆ.ಪಿ ಅಗ್ರಹಾರ, ಬಿಳೇಕಹಳ್ಳಿ, ಬನಶಂಕರಿ, ಸುಭಾಷ್ ನಗರ, ಜಕ್ಕಸಂದ್ರ, ಸೋಮಸುಂದರಪಾಳ್ಯ, ಕದಿರೇನಹಳ್ಳಿ ಮತ್ತು ಚಿನ್ನಪ್ಪ ಗಾರ್ಡನ್ ಪ್ರದೇಶಗಳಲ್ಲಿ ವಿವಿಧ ಗುಂಪುಗಳಿಂದ ಪ್ರತಿಭಟನೆ ನಡೆಯಿತು.</p>.<p>ವಿಧಾನಸೌಧದ ಎದುರು 30 ಮಂದಿ ಚಿಂತಕರು, ವಕೀಲರು ಮತ್ತು ಹೋರಾಟಗಾರರು ಬುಧವಾರ ಘೋಷಣೆಗಳನ್ನು ಕೂಗಿ, ರಾಜಕೀಯ ಸಮಾನತೆಯನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಂಡರು.</p>.<p>‘ಪಶ್ಚಿಮ ಬಂಗಾಳದ ಮತದಾರರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದಾಗ, ತೆಗೆದು ಹಾಕಲಾದ ಮತದಾರರ ಹೆಸರನ್ನು ತಾತ್ಕಾಲಿಕವಾಗಿ ಉಳಿಸಲು ನಿರಾಕರಿಸಲಾಗಿದೆ. ಅವರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಆದೇಶವು ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 21(3)ರ ಉಲ್ಲಂಘನೆಯಾಗಿದೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.</p>.<p>‘ಬಡವರು, ಕಟ್ಟಕಡೆಯ ವ್ಯಕ್ತಿಗೂ ದೇಶದ ದಿಕ್ಕು ರೂಪಿಸುವ ಹಕ್ಕು ದೊರೆಯಲೆಂದು ಸಂವಿಧಾನವು ಮತದಾನದ ಹಕ್ಕನ್ನು ನೀಡಿದೆ. ವಿಶೇಷ ಪರಿಷ್ಕರಣೆ ಪ್ರಶ್ನಿಸದಿದ್ದರೆ ರಾಜಕೀಯ ಸಮಾನತೆಯ ಭರವಸೆ ಉಳಿಯುವುದಿಲ್ಲ’ ಎಂದು ಹೇಳಿದರು.</p>.<p>‘ಎಸ್ಐಆರ್ ವಿರುದ್ಧ ರಾಜ್ಯ ಸರ್ಕಾರ ದೃಢ ನಿಲುವು ತೆಗೆದುಕೊಳ್ಳಬೇಕು. ಮತಹಕ್ಕು ಕಾಪಾಡುವುದಕ್ಕಾಗಿ ಪರಿಷ್ಕರಣೆ ವಿರೋಧಿಸಲು ರಾಜ್ಯದ ಜನತೆ ಮುಂದಾಗಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-4-1123113301</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಭಾರತೀಯರ ಮತದಾನದ ಹಕ್ಕನ್ನು ನಾಶ ಮಾಡುತ್ತಿದ್ದು, ರಾಜ್ಯದ ಮತದಾರರು ಇದನ್ನು ವಿರೋಧಿಸಬೇಕು’ ಎಂದು ಆಗ್ರಹಿಸಿ ನನ್ನ ಮತ ನನ್ನ ಹಕ್ಕು ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.</p>.<p>ನಗರದ ಕೋರಮಂಗಲದ ವೆಂಕಟಾಪುರ, ಚೆಲುವಾದಿಪಾಳ್ಯ, ಆನಂದಪುರ, ಜನತಾ ಕಾಲೊನಿ, ವಿನೋಬಾ ನಗರ, ಕೆ.ಪಿ ಅಗ್ರಹಾರ, ಬಿಳೇಕಹಳ್ಳಿ, ಬನಶಂಕರಿ, ಸುಭಾಷ್ ನಗರ, ಜಕ್ಕಸಂದ್ರ, ಸೋಮಸುಂದರಪಾಳ್ಯ, ಕದಿರೇನಹಳ್ಳಿ ಮತ್ತು ಚಿನ್ನಪ್ಪ ಗಾರ್ಡನ್ ಪ್ರದೇಶಗಳಲ್ಲಿ ವಿವಿಧ ಗುಂಪುಗಳಿಂದ ಪ್ರತಿಭಟನೆ ನಡೆಯಿತು.</p>.<p>ವಿಧಾನಸೌಧದ ಎದುರು 30 ಮಂದಿ ಚಿಂತಕರು, ವಕೀಲರು ಮತ್ತು ಹೋರಾಟಗಾರರು ಬುಧವಾರ ಘೋಷಣೆಗಳನ್ನು ಕೂಗಿ, ರಾಜಕೀಯ ಸಮಾನತೆಯನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಂಡರು.</p>.<p>‘ಪಶ್ಚಿಮ ಬಂಗಾಳದ ಮತದಾರರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದಾಗ, ತೆಗೆದು ಹಾಕಲಾದ ಮತದಾರರ ಹೆಸರನ್ನು ತಾತ್ಕಾಲಿಕವಾಗಿ ಉಳಿಸಲು ನಿರಾಕರಿಸಲಾಗಿದೆ. ಅವರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಆದೇಶವು ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 21(3)ರ ಉಲ್ಲಂಘನೆಯಾಗಿದೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.</p>.<p>‘ಬಡವರು, ಕಟ್ಟಕಡೆಯ ವ್ಯಕ್ತಿಗೂ ದೇಶದ ದಿಕ್ಕು ರೂಪಿಸುವ ಹಕ್ಕು ದೊರೆಯಲೆಂದು ಸಂವಿಧಾನವು ಮತದಾನದ ಹಕ್ಕನ್ನು ನೀಡಿದೆ. ವಿಶೇಷ ಪರಿಷ್ಕರಣೆ ಪ್ರಶ್ನಿಸದಿದ್ದರೆ ರಾಜಕೀಯ ಸಮಾನತೆಯ ಭರವಸೆ ಉಳಿಯುವುದಿಲ್ಲ’ ಎಂದು ಹೇಳಿದರು.</p>.<p>‘ಎಸ್ಐಆರ್ ವಿರುದ್ಧ ರಾಜ್ಯ ಸರ್ಕಾರ ದೃಢ ನಿಲುವು ತೆಗೆದುಕೊಳ್ಳಬೇಕು. ಮತಹಕ್ಕು ಕಾಪಾಡುವುದಕ್ಕಾಗಿ ಪರಿಷ್ಕರಣೆ ವಿರೋಧಿಸಲು ರಾಜ್ಯದ ಜನತೆ ಮುಂದಾಗಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-4-1123113301</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>