ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,‘ ಗೋವಿನೊಂದಿಗೆ ಭಾರತೀಯರು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿರುವ ಗೋವನ್ನು ಪೂಜಿಸುತ್ತೇವೆ. ವೆಂಕಟೇಶ್ ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ತಮಗೆ ನೀಡಿರುವ ಖಾತೆ ಬದಲಿಸಲಿ ಎಂದೊ ಅಥವಾ ಹೈಕಮಾಂಡ್ ಮೆಚ್ಚಿಸುವ ಉದ್ದೇಶಕ್ಕೊ’ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.