ಸುದೀರ್ಘ ಹೋರಾಟಕ್ಕೆ ಫಲವಾಗಿ ಸಿಕ್ಕಿದೆ, ಐದು ವರ್ಷಗಳ ಹಿಂದೆ ದುರಂತದಲ್ಲಿ ಮನೆಗೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿತ್ತು. ತಡವಾಗಿಯಾದರೂ ನ್ಯಾಯ ಸಿಕ್ಕಿದೆ. ಬೆಂಬಲಿಸಿದವರಿಗೆ ಧನ್ಯವಾದ.
–ನಾಗರತ್ನಾ, ಯರಗಂಬಳ್ಳಿ
ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ, ತಡವಾಗಿಯಾದರೂ ಬದುಕಿಗೆ ಆಧಾರವಾಗಿ ಸರ್ಕಾರಿ ನೌಕರಿ ನೀಡಿದೆ. ಹೋರಾಟದ ಹಾದಿಯಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.
–ಮಂಜುನಾಥ್ ಎಸ್. ನಲ್ಲೂರು
5 ವರ್ಷಗಳ ಹಿಂದೆ ಗುಂಡ್ಲು ಪೇಟೆಗೆ ಬಂದಿದ್ದ ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದರು. ಅದರಂತೆ ಇಲ್ಲೇ ನೇಮಕಾತಿ ಪತ್ರಗಳನ್ನು ನೀಡಿ ನುಡಿದಂತೆ ನಡೆದುಕೊಂಡಿದ್ದಾರೆ.
–ನಾಗರತ್ನಾ, ಕೆಸ್ತೂರು
ಸರ್ಕಾರಿ ಉದ್ಯೋಗ ದೊರೆತಿರುವುದು ಹೊಸ ಜೀವನ ಸಿಕ್ಕಂತಾಗಿದೆ. ಹೋರಾಟಕ್ಕೆ ಬಲ ತುಂಬಿದ ಎಸ್ಡಿಪಿಐ, ತಾರ್ಕಿಕ ಅಂತ್ಯಕ್ಕೆ ಕೈಜೋಡಿಸಿದ ಸಂಘಟನೆಗಳು, ಶಾಸಕರು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.