<p><strong>ಬೆಂಗಳೂರು:</strong> ವಿಧಾನಸೌಧದ ಪಶ್ಚಿಮದ ನೆಲಮಹಡಿಯಲ್ಲಿನ ನವೀಕೃತ ಪ್ರವೇಶ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಉದ್ಘಾಟಿಸಿದರು.</p>.<p>ವಿಧಾನಸಭಾ ಸಭಾಂಗಣಕ್ಕೆ ನೇರ ಪ್ರವೇಶ ಕಲ್ಪಿಸುವ ಈ ದ್ವಾರಕ್ಕೆ ಬೀಟೆ ಮರದಲ್ಲಿ ಆಕರ್ಷಕವಾದ ಕೆತ್ತನೆಯುಳ್ಳ ನೂತನ ಬಾಗಿಲನ್ನು ₹84 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಧಾನಸೌಧದ ಸೌಂದರ್ಯಕ್ಕೆ ತಕ್ಕಂತೆ ಲೋಕೋಪಯೋಗಿ ಇಲಾಖೆ ಪಶ್ಚಿಮ ದ್ವಾರದ ಕಬ್ಬಿಣದ ಗ್ರಿಲ್ ಬದಲಾಯಿಸಿ ಕುಸುರಿ ಕೆತ್ತನೆಯ ಬೀಟೆ ಮರದ ಬಾಗಿಲನ್ನು ರೂಪಿಸಿದೆ.</p>.<p>ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಕಾಮಗಾರಿಯ ಗುತ್ತಿಗೆ ನಿರ್ವಹಿಸಿತ್ತು. ಮೈಸೂರು ಅರಮನೆಯಲ್ಲಿನ ಬಾಗಿಲುಗಳ ಮಾದರಿಯ ಕುಸುರಿ ಕೆತ್ತನೆ, ದ್ವಾರದ ಮೇಲ್ಭಾಗದಲ್ಲಿ ರಾಜ್ಯದ ಲಾಂಛನ, ಗಂಡಭೇರುಂಡ ಮತ್ತು ರಾಷ್ಟ್ರದ ಅಶೋಕ ಸ್ತಂಭ ಕಲಾಕೃತಿಗಳನ್ನು ದ್ವಾರಕ್ಕೆ ಅಳವಡಿಸಲಾಗಿದೆ. </p>.<p>ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಚಿವರಾದ ಎಚ್.ಕೆ. ಪಾಟೀಲ, ಜಿ.ಪರಮೇಶ್ವರ, ರಾಮಲಿಂಗಾರೆಡ್ಡಿ, ಎನ್.ಎಸ್.ಬೋಸರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಧಾನಸೌಧದ ಪಶ್ಚಿಮದ ನೆಲಮಹಡಿಯಲ್ಲಿನ ನವೀಕೃತ ಪ್ರವೇಶ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಉದ್ಘಾಟಿಸಿದರು.</p>.<p>ವಿಧಾನಸಭಾ ಸಭಾಂಗಣಕ್ಕೆ ನೇರ ಪ್ರವೇಶ ಕಲ್ಪಿಸುವ ಈ ದ್ವಾರಕ್ಕೆ ಬೀಟೆ ಮರದಲ್ಲಿ ಆಕರ್ಷಕವಾದ ಕೆತ್ತನೆಯುಳ್ಳ ನೂತನ ಬಾಗಿಲನ್ನು ₹84 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಧಾನಸೌಧದ ಸೌಂದರ್ಯಕ್ಕೆ ತಕ್ಕಂತೆ ಲೋಕೋಪಯೋಗಿ ಇಲಾಖೆ ಪಶ್ಚಿಮ ದ್ವಾರದ ಕಬ್ಬಿಣದ ಗ್ರಿಲ್ ಬದಲಾಯಿಸಿ ಕುಸುರಿ ಕೆತ್ತನೆಯ ಬೀಟೆ ಮರದ ಬಾಗಿಲನ್ನು ರೂಪಿಸಿದೆ.</p>.<p>ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಕಾಮಗಾರಿಯ ಗುತ್ತಿಗೆ ನಿರ್ವಹಿಸಿತ್ತು. ಮೈಸೂರು ಅರಮನೆಯಲ್ಲಿನ ಬಾಗಿಲುಗಳ ಮಾದರಿಯ ಕುಸುರಿ ಕೆತ್ತನೆ, ದ್ವಾರದ ಮೇಲ್ಭಾಗದಲ್ಲಿ ರಾಜ್ಯದ ಲಾಂಛನ, ಗಂಡಭೇರುಂಡ ಮತ್ತು ರಾಷ್ಟ್ರದ ಅಶೋಕ ಸ್ತಂಭ ಕಲಾಕೃತಿಗಳನ್ನು ದ್ವಾರಕ್ಕೆ ಅಳವಡಿಸಲಾಗಿದೆ. </p>.<p>ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಚಿವರಾದ ಎಚ್.ಕೆ. ಪಾಟೀಲ, ಜಿ.ಪರಮೇಶ್ವರ, ರಾಮಲಿಂಗಾರೆಡ್ಡಿ, ಎನ್.ಎಸ್.ಬೋಸರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>