<p><strong>ಬೆಂಗಳೂರು: </strong>ರಾಜ್ಯದ ಮುಖ್ಯಮಂತ್ರಿಯಾಗಿ ಇಂದು (ಜೂನ್ 3ರಂದು) ಪ್ರಮಾಣವಚನ ಸ್ವೀಕರಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಮೊದಲ ಮಗನಾಗಿ 1962ರ ಮೇ 15ರಂದು ಜನಿಸಿದ ಶಿವಕುಮಾರ್ ಅವರ ಹುಟ್ಟು ಹೆಸರು ಕೆಂಪರಾಜು.</p><p>ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.</p><p>ದೊಡ್ಡ ಆಲದ ಹಳ್ಳಿಯ ಪಕ್ಕದಲ್ಲಿರುವ ಶಿವಾಲದಪ್ಪನ ಬೆಟ್ಟವಿದೆ. ಮೂರು ವರ್ಷ ಮಕ್ಕಳಾಗಿರಲಿಲ್ಲ. ಹಾಗಾಗಿ, ಬೆಟ್ಟದ ಶಿವ ಮೂರ್ತಿಗೆ, ‘ವಂಶ ಬೆಳೆಯಲಿ; ಗಂಡು ಮಗು ಹುಟ್ಟಿದರೆ ಪರ ಮಾಡಿಸುತ್ತೇನೆ’ ಎಂದು ಹರಕೆ ಹೊತ್ತಿದ್ದಾಗಿ ಗೌರಮ್ಮ ಅವರೂ ಹೇಳಿದ್ದಾರೆ.</p><p>‘ನಮ್ಮ ಮನೆದೇವರು ಕೆಂಪೀರಮ್ಮ. ಆ ಕಾರಣಕ್ಕೆ ನಮ್ಮ ಮನೆಯಲ್ಲಿ ಹೆಣ್ಣ ಹುಟ್ಟಿದರೆ ಕೆಂಪಮ್ಮ ಎಂದೂ, ಗಂಡು ಜನಸಿದರೆ ಕೆಂಪರಾಜು ಎಂದೂ ಹೆಸರಿಡಲಾಗುತ್ತಿತ್ತು. ಮುಂದೆ ಶಿವ ಮೂರ್ತಿಯ ಹರಕೆಯಂತೆ ನನ್ನ ಹೆಸರು ಬದಲಿಸಲಾಯಿತು’ ಎಂದು ಶಿವಕುಮಾರ್ ಅವರೇ ಹೇಳಿಕೊಂಡಿದ್ದಾರೆ.</p>.ಡಿ.ಕೆ. ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮ: ವಾಹನ ಸವಾರರಿಗೆ ಸಂಚಾರ ಸಲಹೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದ ಮುಖ್ಯಮಂತ್ರಿಯಾಗಿ ಇಂದು (ಜೂನ್ 3ರಂದು) ಪ್ರಮಾಣವಚನ ಸ್ವೀಕರಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಮೊದಲ ಮಗನಾಗಿ 1962ರ ಮೇ 15ರಂದು ಜನಿಸಿದ ಶಿವಕುಮಾರ್ ಅವರ ಹುಟ್ಟು ಹೆಸರು ಕೆಂಪರಾಜು.</p><p>ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.</p><p>ದೊಡ್ಡ ಆಲದ ಹಳ್ಳಿಯ ಪಕ್ಕದಲ್ಲಿರುವ ಶಿವಾಲದಪ್ಪನ ಬೆಟ್ಟವಿದೆ. ಮೂರು ವರ್ಷ ಮಕ್ಕಳಾಗಿರಲಿಲ್ಲ. ಹಾಗಾಗಿ, ಬೆಟ್ಟದ ಶಿವ ಮೂರ್ತಿಗೆ, ‘ವಂಶ ಬೆಳೆಯಲಿ; ಗಂಡು ಮಗು ಹುಟ್ಟಿದರೆ ಪರ ಮಾಡಿಸುತ್ತೇನೆ’ ಎಂದು ಹರಕೆ ಹೊತ್ತಿದ್ದಾಗಿ ಗೌರಮ್ಮ ಅವರೂ ಹೇಳಿದ್ದಾರೆ.</p><p>‘ನಮ್ಮ ಮನೆದೇವರು ಕೆಂಪೀರಮ್ಮ. ಆ ಕಾರಣಕ್ಕೆ ನಮ್ಮ ಮನೆಯಲ್ಲಿ ಹೆಣ್ಣ ಹುಟ್ಟಿದರೆ ಕೆಂಪಮ್ಮ ಎಂದೂ, ಗಂಡು ಜನಸಿದರೆ ಕೆಂಪರಾಜು ಎಂದೂ ಹೆಸರಿಡಲಾಗುತ್ತಿತ್ತು. ಮುಂದೆ ಶಿವ ಮೂರ್ತಿಯ ಹರಕೆಯಂತೆ ನನ್ನ ಹೆಸರು ಬದಲಿಸಲಾಯಿತು’ ಎಂದು ಶಿವಕುಮಾರ್ ಅವರೇ ಹೇಳಿಕೊಂಡಿದ್ದಾರೆ.</p>.ಡಿ.ಕೆ. ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮ: ವಾಹನ ಸವಾರರಿಗೆ ಸಂಚಾರ ಸಲಹೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>