<p><strong>ಬೆಂಗಳೂರು:</strong> ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದ ಸನ್ನಿವೇಶಗಳಲ್ಲಿ 'ಆಪತ್ಬಾಂಧವ'ನ ಪಾತ್ರವನ್ನು ಡಿ.ಕೆ.ಶಿವಕುಮಾರ್ ಸಮರ್ಥವಾಗಿ ನಿರ್ವಹಿಸುತ್ತಲೇ ಬಂದಿದ್ದಾರೆ. ಮೂರು ವರ್ಷಗಳ ಆಡಳಿತ ಪೂರೈಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ (ಮೇ 28) ರಾಜೀನಾಮೆ ನೀಡಿದ್ದಾರೆ. ಅವರ ಉತ್ತರಾಧಿಕಾರಿಯಾಗುವ ಹಂಬಲದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರಕ್ಕೇರುವ ಬಾಗಿಲು ತೆರೆದಿದೆ. </p><p>ಕಾಂಗ್ರೆಸ್ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿದ ಸಾಧನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರವೂ ಪ್ರಮುಖವಾಗಿದೆ. ಸತತ ಎಂಟನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ 'ಡಿಕೆಶಿ' ಸದ್ಯ ರಾಜ್ಯ ರಾಜಕಾರಣದ ಪ್ರಭಾವಿ ನಾಯಕರಲ್ಲಿ ಒಬ್ಬರು. ಪಕ್ಷವನ್ನು ಯಶಸ್ವಿಯಾಗಿ ಗೆಲುವಿನ ದಡ ಮುಟ್ಟಿಸಿದ್ದಕ್ಕೆ ಉಪಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಒಲಿದು ಬಂದಿತ್ತು. ಈ ಹಿಂದೆಯೂ ನಾಲ್ವರು ಮುಖ್ಯಮಂತ್ರಿಗಳ ಆಡಳಿತದಲ್ಲಿ ಹಲವು ಖಾತೆ ನಿರ್ವಹಿಸಿದ ಅನುಭವ ಅವರ ಬೆನ್ನಿಗಿದೆ. </p>.ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ: ಡಿಕೆಶಿ ಪೋಸ್ಟ್.ಸಿದ್ದರಾಮಯ್ಯ ಪದತ್ಯಾಗ: ಡಿ.ಕೆ. ಶಿವಕುಮಾರ್ ಹಾದಿ ಸುಗಮ. <p>ನೇರ ನಡೆ–ನುಡಿಯ, ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಪಕ್ಷದ ಪರ ನಿಲ್ಲುವ ಅವರ ನಿಷ್ಠೆಯೇ ಇಂತಹ ಅವಕಾಶಗಳನ್ನು ತಂದುಕೊಟ್ಟಿದೆ. ಯಾವ ಅಂಜಿಕೆ, ಅಳಕು, ಹಿಂಜರಿಕೆ, ಮುಲಾಜಿಲ್ಲದ ದಾರ್ಷ್ಟ್ಯ ವ್ಯಕ್ತಿತ್ವವೇ ಶಿವಕುಮಾರ್ ಹೆಗ್ಗುರುತು. ಪಕ್ಷ ಆಪತ್ತಿನಲ್ಲಿ ಇರುವಾಗ ಮುನ್ನುಗ್ಗುವ ಛಾತಿಯಿಂದಾಗಿಯೇ 'ಬಂಡೆ', 'ಟ್ರಬಲ್ ಶೂಟರ್' ಎಂದು ಚಿರಪರಿಚಿತ. </p>. <p>ಸಂದಿಗ್ಧ ಪರಿಸ್ಥಿತಿಗಳಲ್ಲಿ ರಾಜ್ಯ ಕಾಂಗ್ರೆಸ್ ಪಾಲಿಗೆ ‘ಬಂಡೆ’ಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸಿ 'ಟ್ರಬಲ್ ಶೂಟರ್' ಎಂದೇ ಖ್ಯಾತಿಯಾದ ಡಿಕೆಶಿ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದು, ಕಾಂಗ್ರೆಸ್ನಲ್ಲಿ ಸಾಮಾನ್ಯ ಕಾರ್ಯಕರ್ತನಿಂದ ಯಾತ್ರೆ ಆರಂಭಿಸಿ ಕೆಪಿಸಿಸಿ ಅಧ್ಯಕ್ಷರ ಹುದ್ದೆಯವರೆಗೆ ಏರಿದವರು. 2020ರ ಮಾರ್ಚ್ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ಈವರೆಗೆ ಹಿಂತಿರುಗಿ ನೋಡಿದ್ದಿಲ್ಲ. ಧಾಡಸಿ ಮನೋಭಾವದ ಅವರ ಮಾತು, ರಾಜ್ಯದ ಇತರ ನಾಯಕರ ‘ಪಾಲಿಷ್ಡ್’ ರೀತಿಯದಲ್ಲ. ಅದೇನಿದ್ದರೂ ನೇರಾನೇರ. ಎದುಗಿರುವವರನ್ನು ಆ ಮಾತು ನಾಟಿದರೂ ಚಿಂತೆಯಿಲ್ಲ, ಅಂದುಕೊಂಡಿದ್ದನ್ನು ನಾಟಿ ಶೈಲಿಯಲ್ಲಿ ಹೇಳಿಯೇ ಸಿದ್ಧ ಎನ್ನುವ ಮನೋಭಾವ ಅವರದು. </p><p>ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶಿವಕುಮಾರ್ರದ್ದು ರಾಜ್ಯ ರಾಜಕಾರಣದಲ್ಲಿ ಪರಿಚಿತ ಹೆಸರು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು. </p>. <p><strong>ರೆಸಾರ್ಟ್ ಆತಿಥ್ಯದಿಂದ ವಿಶ್ವಾಸ ಗಳಿಕೆ:</strong> </p><p>ಎರಡೂವರೆ ದಶಕಗಳ ರಾಜಕಾರಣವನ್ನು ನೀವು ಬಲ್ಲಿರಾದರೆ 2002ರಲ್ಲಿ ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ನೇತೃತ್ವದ ಸರ್ಕಾರ ಬೀಳದಂತೆ ಅದರ ನೆರವಿಗೆ ಧಾವಿಸಿದವರು ಡಿಕೆಶಿ. ಹತ್ತು ದಿನಗಳವರೆಗೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿಯೇ ಆತಿಥ್ಯ ಒದಗಿಸಿದ್ದರು.</p><p>2017ರಲ್ಲಿ ಗುಜರಾತ್ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ 44 ಗುಜರಾತ್ ಶಾಸಕರನ್ನು ಬಿಜೆಪಿ ಸರ್ಕಾರ ಹೈಜಾಕ್ ಮಾಡಲು ಯತ್ನಿಸಿದಾಗ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅವರಿಗೆ ಕರ್ನಾಟಕದಲ್ಲಿ ಆತಿಥ್ಯ ಮತ್ತು ರಕ್ಷಣೆ ನೀಡಿದ್ದು ಇದೇ ಡಿ.ಕೆ. ಶಿವಕುಮಾರ್. ಇದೇ ಕಾರಣಕ್ಕೆ ಅವರು ಈಗಲ್ಟನ್ ರೆಸಾರ್ಟ್ನಲ್ಲಿ ಇದ್ದಾಗಲೇ ಐ.ಟಿ. ದಾಳಿ ಎದುರಿಸಬೇಕಾಯಿತು.</p><p>2018ರಲ್ಲಿ ರಾಜ್ಯ ರಾಜಕಾರಣದಲ್ಲಿ ಅತಂತ್ರ ಸನ್ನಿವೇಶ ಎದುರಾದಾಗ ‘ಟ್ರಬಲ್ ಶೂಟರ್’ ಆಗಿ ಕಾರ್ಯ ನಿರ್ವಹಿಸಿದ್ದು ಇದೇ ಶಿವಕುಮಾರ್. ಹೈಕಮಾಂಡ್ ಸೂಚನೆಗೆ ತಲೆಬಾಗಿ, ಎಚ್.ಡಿ. ದೇವೇಗೌಡರ ಕುಟುಂಬದ ಜೊತೆಗಿನ ರಾಜಕೀಯ ವೈಷಮ್ಯವನ್ನು ಬದಿಗೊತ್ತಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಒಂದೂವರೆ ವರ್ಷದ ಬಳಿಕ ಸರ್ಕಾರ ಬಿದ್ದು ಹೋಗುವ ಸಂದರ್ಭದಲ್ಲೂ ಮುಂಬೈನ ಬೀದಿಯಲ್ಲಿ ನಿಂತು ಅತೃಪ್ತ ಶಾಸಕರ ಮನವೊಲಿಕೆಗೆ ಪ್ರಯತ್ನಿಸಿದ್ದು ಅವರ ಛಲದ ರಾಜಕಾರಣಕ್ಕೆ ಸಾಕ್ಷಿ.</p>. <p>2024ರ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಪಕ್ಷದ 6 ಶಾಸಕರು ಬಿಜೆಪಿಗೆ ಮತ ಚಲಾಯಿಸುವುದರೊಂದಿಗೆ ಭಿನ್ನಮತ ಇನ್ನಷ್ಟು ಜೋರಾಯಿತು. ಆಗ ಅಲ್ಲಿನ ಭಿನ್ನಮತ ಶಮನಕ್ಕೆ ಹೋಗಿದ್ದು ಡಿ.ಕೆ. ಶಿವಕುಮಾರ್. ಕಾಂಗ್ರೆಸ್ ಪಕ್ಷದಲ್ಲಿ 'ಟ್ರಬಲ್ ಶೂಟರ್' ಎಂದೇ ಶಿವಕುಮಾರ್ ಖ್ಯಾತಿ ಪಡೆದಿದ್ದಾರೆ.</p><p>ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಅನೇಕ ಹೋರಾಟಗಳ ಮುಂಚೂಣಿಯನ್ನೂ ಅವರು ವಹಿಸಿದ್ದಾರೆ. ವರ್ಷಗಳ ಹಿಂದೆ ತಮ್ಮದೇ ತವರೂರಿನಲ್ಲಿ ನಡೆದ ಮೇಕೆದಾಟು ಪಾದಯಾತ್ರೆ, ಚುನಾವಣೆ ಹೊಸ್ತಿಲಲ್ಲಿನ ಪ್ರಜಾಧ್ವನಿ ಯಾತ್ರೆಗಳ ಯಶಸ್ಸು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ. ಭಾರತ್ ಜೋಡೊ ಯಾತ್ರೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳು–ಹೋರಾಟಗಳಿಗೆ ಸದಾ ಹೆಗಲು ಕೊಟ್ಟು ದುಡಿದಿದ್ದಾರೆ. </p><p>(ಮೂಲ: ಪ್ರಜಾವಣಿ ಕಡತ)</p>.PHOTOS: ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ ಡಿಕೆಶಿ.ಮಾಸ್ ಲೀಡರ್ ಸಿದ್ದರಾಮಯ್ಯ: ಮರಳಿನ ಮೇಲೆ ಅಕ್ಷರಾಭ್ಯಾಸದಿಂದ ಸಿಎಂ ಗಾದಿವರೆಗೆ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದ ಸನ್ನಿವೇಶಗಳಲ್ಲಿ 'ಆಪತ್ಬಾಂಧವ'ನ ಪಾತ್ರವನ್ನು ಡಿ.ಕೆ.ಶಿವಕುಮಾರ್ ಸಮರ್ಥವಾಗಿ ನಿರ್ವಹಿಸುತ್ತಲೇ ಬಂದಿದ್ದಾರೆ. ಮೂರು ವರ್ಷಗಳ ಆಡಳಿತ ಪೂರೈಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ (ಮೇ 28) ರಾಜೀನಾಮೆ ನೀಡಿದ್ದಾರೆ. ಅವರ ಉತ್ತರಾಧಿಕಾರಿಯಾಗುವ ಹಂಬಲದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರಕ್ಕೇರುವ ಬಾಗಿಲು ತೆರೆದಿದೆ. </p><p>ಕಾಂಗ್ರೆಸ್ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿದ ಸಾಧನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರವೂ ಪ್ರಮುಖವಾಗಿದೆ. ಸತತ ಎಂಟನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ 'ಡಿಕೆಶಿ' ಸದ್ಯ ರಾಜ್ಯ ರಾಜಕಾರಣದ ಪ್ರಭಾವಿ ನಾಯಕರಲ್ಲಿ ಒಬ್ಬರು. ಪಕ್ಷವನ್ನು ಯಶಸ್ವಿಯಾಗಿ ಗೆಲುವಿನ ದಡ ಮುಟ್ಟಿಸಿದ್ದಕ್ಕೆ ಉಪಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಒಲಿದು ಬಂದಿತ್ತು. ಈ ಹಿಂದೆಯೂ ನಾಲ್ವರು ಮುಖ್ಯಮಂತ್ರಿಗಳ ಆಡಳಿತದಲ್ಲಿ ಹಲವು ಖಾತೆ ನಿರ್ವಹಿಸಿದ ಅನುಭವ ಅವರ ಬೆನ್ನಿಗಿದೆ. </p>.ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ: ಡಿಕೆಶಿ ಪೋಸ್ಟ್.ಸಿದ್ದರಾಮಯ್ಯ ಪದತ್ಯಾಗ: ಡಿ.ಕೆ. ಶಿವಕುಮಾರ್ ಹಾದಿ ಸುಗಮ. <p>ನೇರ ನಡೆ–ನುಡಿಯ, ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಪಕ್ಷದ ಪರ ನಿಲ್ಲುವ ಅವರ ನಿಷ್ಠೆಯೇ ಇಂತಹ ಅವಕಾಶಗಳನ್ನು ತಂದುಕೊಟ್ಟಿದೆ. ಯಾವ ಅಂಜಿಕೆ, ಅಳಕು, ಹಿಂಜರಿಕೆ, ಮುಲಾಜಿಲ್ಲದ ದಾರ್ಷ್ಟ್ಯ ವ್ಯಕ್ತಿತ್ವವೇ ಶಿವಕುಮಾರ್ ಹೆಗ್ಗುರುತು. ಪಕ್ಷ ಆಪತ್ತಿನಲ್ಲಿ ಇರುವಾಗ ಮುನ್ನುಗ್ಗುವ ಛಾತಿಯಿಂದಾಗಿಯೇ 'ಬಂಡೆ', 'ಟ್ರಬಲ್ ಶೂಟರ್' ಎಂದು ಚಿರಪರಿಚಿತ. </p>. <p>ಸಂದಿಗ್ಧ ಪರಿಸ್ಥಿತಿಗಳಲ್ಲಿ ರಾಜ್ಯ ಕಾಂಗ್ರೆಸ್ ಪಾಲಿಗೆ ‘ಬಂಡೆ’ಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸಿ 'ಟ್ರಬಲ್ ಶೂಟರ್' ಎಂದೇ ಖ್ಯಾತಿಯಾದ ಡಿಕೆಶಿ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದು, ಕಾಂಗ್ರೆಸ್ನಲ್ಲಿ ಸಾಮಾನ್ಯ ಕಾರ್ಯಕರ್ತನಿಂದ ಯಾತ್ರೆ ಆರಂಭಿಸಿ ಕೆಪಿಸಿಸಿ ಅಧ್ಯಕ್ಷರ ಹುದ್ದೆಯವರೆಗೆ ಏರಿದವರು. 2020ರ ಮಾರ್ಚ್ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ಈವರೆಗೆ ಹಿಂತಿರುಗಿ ನೋಡಿದ್ದಿಲ್ಲ. ಧಾಡಸಿ ಮನೋಭಾವದ ಅವರ ಮಾತು, ರಾಜ್ಯದ ಇತರ ನಾಯಕರ ‘ಪಾಲಿಷ್ಡ್’ ರೀತಿಯದಲ್ಲ. ಅದೇನಿದ್ದರೂ ನೇರಾನೇರ. ಎದುಗಿರುವವರನ್ನು ಆ ಮಾತು ನಾಟಿದರೂ ಚಿಂತೆಯಿಲ್ಲ, ಅಂದುಕೊಂಡಿದ್ದನ್ನು ನಾಟಿ ಶೈಲಿಯಲ್ಲಿ ಹೇಳಿಯೇ ಸಿದ್ಧ ಎನ್ನುವ ಮನೋಭಾವ ಅವರದು. </p><p>ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶಿವಕುಮಾರ್ರದ್ದು ರಾಜ್ಯ ರಾಜಕಾರಣದಲ್ಲಿ ಪರಿಚಿತ ಹೆಸರು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು. </p>. <p><strong>ರೆಸಾರ್ಟ್ ಆತಿಥ್ಯದಿಂದ ವಿಶ್ವಾಸ ಗಳಿಕೆ:</strong> </p><p>ಎರಡೂವರೆ ದಶಕಗಳ ರಾಜಕಾರಣವನ್ನು ನೀವು ಬಲ್ಲಿರಾದರೆ 2002ರಲ್ಲಿ ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ನೇತೃತ್ವದ ಸರ್ಕಾರ ಬೀಳದಂತೆ ಅದರ ನೆರವಿಗೆ ಧಾವಿಸಿದವರು ಡಿಕೆಶಿ. ಹತ್ತು ದಿನಗಳವರೆಗೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿಯೇ ಆತಿಥ್ಯ ಒದಗಿಸಿದ್ದರು.</p><p>2017ರಲ್ಲಿ ಗುಜರಾತ್ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ 44 ಗುಜರಾತ್ ಶಾಸಕರನ್ನು ಬಿಜೆಪಿ ಸರ್ಕಾರ ಹೈಜಾಕ್ ಮಾಡಲು ಯತ್ನಿಸಿದಾಗ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅವರಿಗೆ ಕರ್ನಾಟಕದಲ್ಲಿ ಆತಿಥ್ಯ ಮತ್ತು ರಕ್ಷಣೆ ನೀಡಿದ್ದು ಇದೇ ಡಿ.ಕೆ. ಶಿವಕುಮಾರ್. ಇದೇ ಕಾರಣಕ್ಕೆ ಅವರು ಈಗಲ್ಟನ್ ರೆಸಾರ್ಟ್ನಲ್ಲಿ ಇದ್ದಾಗಲೇ ಐ.ಟಿ. ದಾಳಿ ಎದುರಿಸಬೇಕಾಯಿತು.</p><p>2018ರಲ್ಲಿ ರಾಜ್ಯ ರಾಜಕಾರಣದಲ್ಲಿ ಅತಂತ್ರ ಸನ್ನಿವೇಶ ಎದುರಾದಾಗ ‘ಟ್ರಬಲ್ ಶೂಟರ್’ ಆಗಿ ಕಾರ್ಯ ನಿರ್ವಹಿಸಿದ್ದು ಇದೇ ಶಿವಕುಮಾರ್. ಹೈಕಮಾಂಡ್ ಸೂಚನೆಗೆ ತಲೆಬಾಗಿ, ಎಚ್.ಡಿ. ದೇವೇಗೌಡರ ಕುಟುಂಬದ ಜೊತೆಗಿನ ರಾಜಕೀಯ ವೈಷಮ್ಯವನ್ನು ಬದಿಗೊತ್ತಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಒಂದೂವರೆ ವರ್ಷದ ಬಳಿಕ ಸರ್ಕಾರ ಬಿದ್ದು ಹೋಗುವ ಸಂದರ್ಭದಲ್ಲೂ ಮುಂಬೈನ ಬೀದಿಯಲ್ಲಿ ನಿಂತು ಅತೃಪ್ತ ಶಾಸಕರ ಮನವೊಲಿಕೆಗೆ ಪ್ರಯತ್ನಿಸಿದ್ದು ಅವರ ಛಲದ ರಾಜಕಾರಣಕ್ಕೆ ಸಾಕ್ಷಿ.</p>. <p>2024ರ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಪಕ್ಷದ 6 ಶಾಸಕರು ಬಿಜೆಪಿಗೆ ಮತ ಚಲಾಯಿಸುವುದರೊಂದಿಗೆ ಭಿನ್ನಮತ ಇನ್ನಷ್ಟು ಜೋರಾಯಿತು. ಆಗ ಅಲ್ಲಿನ ಭಿನ್ನಮತ ಶಮನಕ್ಕೆ ಹೋಗಿದ್ದು ಡಿ.ಕೆ. ಶಿವಕುಮಾರ್. ಕಾಂಗ್ರೆಸ್ ಪಕ್ಷದಲ್ಲಿ 'ಟ್ರಬಲ್ ಶೂಟರ್' ಎಂದೇ ಶಿವಕುಮಾರ್ ಖ್ಯಾತಿ ಪಡೆದಿದ್ದಾರೆ.</p><p>ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಅನೇಕ ಹೋರಾಟಗಳ ಮುಂಚೂಣಿಯನ್ನೂ ಅವರು ವಹಿಸಿದ್ದಾರೆ. ವರ್ಷಗಳ ಹಿಂದೆ ತಮ್ಮದೇ ತವರೂರಿನಲ್ಲಿ ನಡೆದ ಮೇಕೆದಾಟು ಪಾದಯಾತ್ರೆ, ಚುನಾವಣೆ ಹೊಸ್ತಿಲಲ್ಲಿನ ಪ್ರಜಾಧ್ವನಿ ಯಾತ್ರೆಗಳ ಯಶಸ್ಸು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ. ಭಾರತ್ ಜೋಡೊ ಯಾತ್ರೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳು–ಹೋರಾಟಗಳಿಗೆ ಸದಾ ಹೆಗಲು ಕೊಟ್ಟು ದುಡಿದಿದ್ದಾರೆ. </p><p>(ಮೂಲ: ಪ್ರಜಾವಣಿ ಕಡತ)</p>.PHOTOS: ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ ಡಿಕೆಶಿ.ಮಾಸ್ ಲೀಡರ್ ಸಿದ್ದರಾಮಯ್ಯ: ಮರಳಿನ ಮೇಲೆ ಅಕ್ಷರಾಭ್ಯಾಸದಿಂದ ಸಿಎಂ ಗಾದಿವರೆಗೆ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>