<p><strong>ಬೆಂಗಳೂರು:</strong> ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿದ ಸಾಧನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರವೂ ಪ್ರಮುಖವಾಗಿದೆ. ಸತತ ಎಂಟನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ‘ಡಿಕೆಶಿ’ ಸದ್ಯ ರಾಜ್ಯ ರಾಜಕಾರಣದ ಪ್ರಭಾವಿ ನಾಯಕರಲ್ಲಿ ಒಬ್ಬರು. ಪಕ್ಷವನ್ನು ಯಶಸ್ವಿಯಾಗಿ ಗೆಲುವಿನ ದಡ ಮುಟ್ಟಿಸಿದ್ದಕ್ಕೆ ಉಪಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಒಲಿದು ಬಂದಿತ್ತು. </p><p>ನೇರ ನಡೆ–ನುಡಿಯ, ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಪಕ್ಷದ ಪರ ನಿಲ್ಲುವ ಅವರ ನಿಷ್ಠೆಯೇ ಇಂತಹ ಅವಕಾಶಗಳನ್ನು ತಂದುಕೊಟ್ಟಿದೆ. ಯಾವ ಅಂಜಿಕೆ, ಅಳಕು, ಹಿಂಜರಿಕೆ, ಮುಲಾಜಿಲ್ಲದ ದಾರ್ಷ್ಟ್ಯ ವ್ಯಕ್ತಿತ್ವವೇ ಶಿವಕುಮಾರ್ ಹೆಗ್ಗುರುತು. ಪಕ್ಷ ಆಪತ್ತಿನಲ್ಲಿ ಇರುವಾಗ ಮುನ್ನುಗ್ಗುವ ಛಾತಿಯಿಂದಾಗಿಯೇ ‘ಬಂಡೆ’, ‘ಟ್ರಬಲ್ ಶೂಟರ್’ ಎಂದೇ ಚಿರಪರಿಚಿತ. ಸಂದಿಗ್ಧ ಪರಿಸ್ಥಿತಿಗಳಲ್ಲಿ ರಾಜ್ಯ ಕಾಂಗ್ರೆಸ್ ಪಾಲಿಗೆ ‘ಬಂಡೆ’ಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸಿದ, ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೆಗಲು ಕೊಟ್ಟು ದುಡಿದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೊನೆಗೂ ಮುಖ್ಯಮಂತ್ರಿ ಹುದ್ದೆಯನ್ನು ದಕ್ಕಿಸಿಕೊಂಡಿದ್ದಾರೆ.</p><p>‘ಟ್ರಬಲ್ ಶೂಟರ್’ ಎಂದೇ ಖ್ಯಾತಿಯಾದ ಡಿಕೆಶಿ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದು, ಕಾಂಗ್ರೆಸ್ನಲ್ಲಿ ಸಾಮಾನ್ಯ ಕಾರ್ಯಕರ್ತನಿಂದ ಯಾತ್ರೆ ಆರಂಭಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಹುದ್ದೆಯವರೆಗೆ ಏರಿದವರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನ ತಂತ್ರಗಾರಿಕೆಯ ನೇತೃತ್ವವನ್ನೂ ವಹಿಸಿದವರು. 2020ರ ಮಾರ್ಚ್ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ಈವರೆಗೆ ಹಿಂತಿರುಗಿ ನೋಡಿದ್ದಿಲ್ಲ. ಧಾಡಸಿ ಮನೋಭಾವದ ಅವರ ಮಾತು, ರಾಜ್ಯದ ಇತರ ನಾಯಕರ ‘ಪಾಲಿಷ್ಡ್’ ರೀತಿಯದಲ್ಲ. ಅದೇನಿದ್ದರೂ ನೇರಾನೇರ. ಎದುಗಿರುವವರನ್ನು ಆ ಮಾತು ನಾಟಿದರೂ ಚಿಂತೆಯಿಲ್ಲ, ಅಂದುಕೊಂಡಿದ್ದನ್ನು ನಾಟಿ ಶೈಲಿಯಲ್ಲಿ ಹೇಳಿಯೇ ಸಿದ್ಧ ಎನ್ನುವ ಮನೋಭಾವ ಅವರದು.</p>.<p>ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶಿವಕುಮಾರ್ರದ್ದು ರಾಜ್ಯ ರಾಜಕಾರಣದಲ್ಲಿ ಪರಿಚಿತ ಹೆಸರು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು. ಈ ಬಾರಿ 1.22 ಲಕ್ಷ ಮತಗಳ ಅಂತರದಿಂದ ಗೆದ್ದಿರುವುದು ಅವರ ಜನಪ್ರಿಯತೆ ಮತ್ತು ತಂತ್ರಗಾರಿಕೆಗೆ ಸಾಕ್ಷಿ.</p><p>ದೇವರಾಜ ಅರಸು ಕಾಲದಲ್ಲಿ ರಾಜಕಾರಣ ಪ್ರವೇಶ ಮಾಡಿದ ಶಿವಕುಮಾರ್ ವಿದ್ಯಾರ್ಥಿ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದವರು. ಅವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು 1985ರಲ್ಲಿ. ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಅವರಿಗೆ ಸ್ಪರ್ಧಿಯಾಗಿದ್ದು ಜನತಾ ಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇಗೌಡ. ಮೊದಲ ಚುನಾವಣೆಯಲ್ಲೇ ಗೌಡರ ವಿರುದ್ಧ ಸೋಲು ಕಂಡ ಶಿವಕುಮಾರ್, ಮುಂದೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸಾತನೂರು ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭೆ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದು ಗೆಲುವಿನ ನಗೆ ಬೀರಿದರು. ಅಲ್ಲಿಂದ ಇಲ್ಲಿಯವರೆಗೆ ಅವರು ತಿರುಗಿ ನೋಡಿದ್ದಿಲ್ಲ. 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾದಾಗಲೂ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡವರು. 1999ರ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಂತಹ ನಾಯಕನನ್ನೂ ಮಣಿಸಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ತೇಜಸ್ವಿನಿ ಅವರನ್ನು ನಿಲ್ಲಿಸಿ, ಘಟಾನುಘಟಿಗೇ ಸೋಲುಣಿಸಿದ ಛಲವಂತ ನಾಯಕನಾಗಿಯೂ ಹೆಸರಾದವರು.</p>. <p><strong>ಮಾಗಿದ ವ್ಯಕ್ತಿತ್ವ:</strong> </p><p>ಎದುರಾಳಿಯ ಮುಖಕ್ಕೆ ಹೊಡೆದಂತೆ ಮಾತನಾಡುವುದು ಶಿವಕುಮಾರ್ ವ್ಯಕ್ತಿತ್ವಕ್ಕೆ ಸಹಜವಾಗಿತ್ತು. ರಾಜ್ಯದ ಭೂಗತ ಜಗತ್ತನ್ನೇ ತನ್ನ ಕೈಯಳತೆಯಲ್ಲಿಟ್ಟುಕೊಂಡಿದ್ದ ರೌಡಿ ಕೊತ್ವಾಲ್ ರಾಮಚಂದ್ರನ ಜತೆ ಅವರ ನಂಟಿತ್ತು ಎಂದು ವಿರೋಧಿಗಳು ಆಪಾದಿಸುವುದುಂಟು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗುವುದಕ್ಕೂ ಮುನ್ನ, ಪೂರ್ವಾಶ್ರಮದ ಒರಟುತನ, ಮಾತಿನಲ್ಲಿ ಧಿಮಾಕು ಅವರ ವ್ಯಕ್ತಿತ್ವಕ್ಕೆ ಅಂಟಿಕೊಂಡಿತ್ತು. ತಮ್ಮ ‘ಶಿಲೆ’ಯಂತಹ ಮೈಮಾಟ–ಮಾತುಗಾರಿಕೆಗೆ ಕಲೆಯ ಕುಸುರಿಗಾರಿಕೆ ತಂದುಕೊಳ್ಳಬೇಕೆಂದು ನಿಶ್ಚಯಿಸಿದ ಅವರು, ಮಾಗತೊಡಗಿದರು. ಸಂಸ್ಕೃತ ಹಾಗೂ ಸಾಹಿತ್ಯವನ್ನು ಗುರುಮುಖೇನ ಕಲಿತ ಶಿವಕುಮಾರ್, ಹೋದಲ್ಲೆಲ್ಲ ಸಂಸ್ಕೃತ ಶ್ಲೋಕ, ಸಾಹಿತ್ಯದ ಉದಾಹರಣೆಗಳನ್ನು ಉಲ್ಲೇಖಿಸಿ ತಮ್ಮ ಶೈಲಿಯನ್ನೇ ಬದಲಿಸಿಕೊಂಡರು. ಮಾತಿನಲ್ಲಿದ್ದ ಕಠಿಣತೆ, ಧಿಮಾಕುಗಳು ಕಾಣೆಯಾಗಿ ಸೌಜನ್ಯ–ತಾಳ್ಮೆ ಅವರ ಶಾರೀರದಲ್ಲಿ ಕಾಣತೊಡಗಿತು. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪೂರ್ಣ ಮಾಗುವಿಕೆಗೆ ಅವರ ದೇಹ–ಭಾಷೆ ಪಳಗಿತಾದರೂ ಆಗೊಮ್ಮೆ–ಈಗೊಮ್ಮೆ ಹಳೆಯ ದರ್ಪಗಳೂ ಇಣುಕಿ ಮರೆಯಾಗುತ್ತಿದ್ದವು.</p><p><strong>ಮಂತ್ರಿ ಪದವಿ:</strong> </p><p>ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಬಂದಿಖಾನೆ, ಸಹಕಾರ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಶಿವಕುಮಾರ್ ಅವರದ್ದು. ಈ ಇಬ್ಬರೂ ನಾಯಕರ ‘ಬ್ಲ್ಯೂ ಐ ಬಾಯ್’ ಎಂದೂ ರಾಜಕಾರಣದಲ್ಲಿ ಗುರುತಿಸಲ್ಪಟ್ಟವರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಇಂಧನ ಸಚಿವರಾಗಿ ಮತ್ತು ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವಿ. ಕೆಪಿಸಿಸಿ ಕಾರ್ಯದರ್ಶಿಯಾಗಿ, ಕಾರ್ಯಾಧ್ಯಕ್ಷರಾಗಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.</p>. <p><strong>ರೆಸಾರ್ಟ್ ಆತಿಥ್ಯದಿಂದ ವಿಶ್ವಾಸ ಗಳಿಕೆ:</strong> </p><p>ಎರಡೂವರೆ ದಶಕಗಳ ರಾಜಕಾರಣವನ್ನು ನೀವು ಬಲ್ಲಿರಾದರೆ 2002ರಲ್ಲಿ ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ನೇತೃತ್ವದ ಸರ್ಕಾರ ಬೀಳದಂತೆ ಅದರ ನೆರವಿಗೆ ಧಾವಿಸಿದವರು ಡಿಕೆಶಿ. ಹತ್ತು ದಿನಗಳವರೆಗೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿಯೇ ಆತಿಥ್ಯ ಒದಗಿಸಿದ್ದರು.</p><p>2017ರಲ್ಲಿ ಗುಜರಾತ್ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ 44 ಗುಜರಾತ್ ಶಾಸಕರನ್ನು ಬಿಜೆಪಿ ಸರ್ಕಾರ ಹೈಜಾಕ್ ಮಾಡಲು ಯತ್ನಿಸಿದಾಗ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅವರಿಗೆ ಕರ್ನಾಟಕದಲ್ಲಿ ಆತಿಥ್ಯ ಮತ್ತು ರಕ್ಷಣೆ ನೀಡಿದ್ದು ಇದೇ ಡಿ.ಕೆ. ಶಿವಕುಮಾರ್. ಇದೇ ಕಾರಣಕ್ಕೆ ಅವರು ಈಗಲ್ಟನ್ ರೆಸಾರ್ಟ್ನಲ್ಲಿ ಇದ್ದಾಗಲೇ ಐ.ಟಿ. ದಾಳಿ ಎದುರಿಸಬೇಕಾಯಿತು.</p><p>2018ರಲ್ಲಿ ರಾಜ್ಯ ರಾಜಕಾರಣದಲ್ಲಿ ಅತಂತ್ರ ಸನ್ನಿವೇಶ ಎದುರಾದಾಗ ‘ಟ್ರಬಲ್ ಶೂಟರ್’ ಆಗಿ ಕಾರ್ಯ ನಿರ್ವಹಿಸಿದ್ದು ಇದೇ ಶಿವಕುಮಾರ್. ಹೈಕಮಾಂಡ್ ಸೂಚನೆಗೆ ತಲೆಬಾಗಿ, ಎಚ್.ಡಿ. ದೇವೇಗೌಡರ ಕುಟುಂಬದ ಜೊತೆಗಿನ ರಾಜಕೀಯ ವೈಷಮ್ಯವನ್ನು ಬದಿಗೊತ್ತಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಒಂದೂವರೆ ವರ್ಷದ ಬಳಿಕ ಸರ್ಕಾರ ಬಿದ್ದು ಹೋಗುವ ಸಂದರ್ಭದಲ್ಲೂ ಮುಂಬೈನ ಬೀದಿಯಲ್ಲಿ ನಿಂತು ಅತೃಪ್ತ ಶಾಸಕರ ಮನವೊಲಿಕೆಗೆ ಪ್ರಯತ್ನಿಸಿದ್ದು ಅವರ ಛಲದ ರಾಜಕಾರಣಕ್ಕೆ ಸಾಕ್ಷಿ.</p><p>ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಅನೇಕ ಹೋರಾಟಗಳ ಮುಂಚೂಣಿಯನ್ನೂ ಅವರು ವಹಿಸಿದ್ದಾರೆ. ವರ್ಷಗಳ ಹಿಂದೆ ತಮ್ಮದೇ ತವರೂರಿನಲ್ಲಿ ನಡೆದ ಮೇಕೆದಾಟು ಪಾದಯಾತ್ರೆ, ಚುನಾವಣೆ ಹೊಸ್ತಿಲಲ್ಲಿನ ಪ್ರಜಾಧ್ವನಿ ಯಾತ್ರೆಗಳ ಯಶಸ್ಸು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ. ಭಾರತ್ ಜೋಡೊ ಯಾತ್ರೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳು– ಹೋರಾಟಗಳಿಗೆ ಸದಾ ಹೆಗಲು ಕೊಟ್ಟು ದುಡಿದಿದ್ದಾರೆ. </p>.ಕಾಂಗ್ರೆಸ್ 'ಆಪತ್ಬಾಂಧವ', 'ಬಂಡೆ', 'ಟ್ರಬಲ್ ಶೂಟರ್' ಎಂದೇ ಚಿರಪರಿಚಿತ ಡಿಕೆಶಿ.ಮಾಸ್ ಲೀಡರ್ ಸಿದ್ದರಾಮಯ್ಯ: ಮರಳಿನ ಮೇಲೆ ಅಕ್ಷರಾಭ್ಯಾಸದಿಂದ ಸಿಎಂ ಗಾದಿವರೆಗೆ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿದ ಸಾಧನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರವೂ ಪ್ರಮುಖವಾಗಿದೆ. ಸತತ ಎಂಟನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ‘ಡಿಕೆಶಿ’ ಸದ್ಯ ರಾಜ್ಯ ರಾಜಕಾರಣದ ಪ್ರಭಾವಿ ನಾಯಕರಲ್ಲಿ ಒಬ್ಬರು. ಪಕ್ಷವನ್ನು ಯಶಸ್ವಿಯಾಗಿ ಗೆಲುವಿನ ದಡ ಮುಟ್ಟಿಸಿದ್ದಕ್ಕೆ ಉಪಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಒಲಿದು ಬಂದಿತ್ತು. </p><p>ನೇರ ನಡೆ–ನುಡಿಯ, ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಪಕ್ಷದ ಪರ ನಿಲ್ಲುವ ಅವರ ನಿಷ್ಠೆಯೇ ಇಂತಹ ಅವಕಾಶಗಳನ್ನು ತಂದುಕೊಟ್ಟಿದೆ. ಯಾವ ಅಂಜಿಕೆ, ಅಳಕು, ಹಿಂಜರಿಕೆ, ಮುಲಾಜಿಲ್ಲದ ದಾರ್ಷ್ಟ್ಯ ವ್ಯಕ್ತಿತ್ವವೇ ಶಿವಕುಮಾರ್ ಹೆಗ್ಗುರುತು. ಪಕ್ಷ ಆಪತ್ತಿನಲ್ಲಿ ಇರುವಾಗ ಮುನ್ನುಗ್ಗುವ ಛಾತಿಯಿಂದಾಗಿಯೇ ‘ಬಂಡೆ’, ‘ಟ್ರಬಲ್ ಶೂಟರ್’ ಎಂದೇ ಚಿರಪರಿಚಿತ. ಸಂದಿಗ್ಧ ಪರಿಸ್ಥಿತಿಗಳಲ್ಲಿ ರಾಜ್ಯ ಕಾಂಗ್ರೆಸ್ ಪಾಲಿಗೆ ‘ಬಂಡೆ’ಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸಿದ, ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೆಗಲು ಕೊಟ್ಟು ದುಡಿದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೊನೆಗೂ ಮುಖ್ಯಮಂತ್ರಿ ಹುದ್ದೆಯನ್ನು ದಕ್ಕಿಸಿಕೊಂಡಿದ್ದಾರೆ.</p><p>‘ಟ್ರಬಲ್ ಶೂಟರ್’ ಎಂದೇ ಖ್ಯಾತಿಯಾದ ಡಿಕೆಶಿ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದು, ಕಾಂಗ್ರೆಸ್ನಲ್ಲಿ ಸಾಮಾನ್ಯ ಕಾರ್ಯಕರ್ತನಿಂದ ಯಾತ್ರೆ ಆರಂಭಿಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಹುದ್ದೆಯವರೆಗೆ ಏರಿದವರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನ ತಂತ್ರಗಾರಿಕೆಯ ನೇತೃತ್ವವನ್ನೂ ವಹಿಸಿದವರು. 2020ರ ಮಾರ್ಚ್ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ಈವರೆಗೆ ಹಿಂತಿರುಗಿ ನೋಡಿದ್ದಿಲ್ಲ. ಧಾಡಸಿ ಮನೋಭಾವದ ಅವರ ಮಾತು, ರಾಜ್ಯದ ಇತರ ನಾಯಕರ ‘ಪಾಲಿಷ್ಡ್’ ರೀತಿಯದಲ್ಲ. ಅದೇನಿದ್ದರೂ ನೇರಾನೇರ. ಎದುಗಿರುವವರನ್ನು ಆ ಮಾತು ನಾಟಿದರೂ ಚಿಂತೆಯಿಲ್ಲ, ಅಂದುಕೊಂಡಿದ್ದನ್ನು ನಾಟಿ ಶೈಲಿಯಲ್ಲಿ ಹೇಳಿಯೇ ಸಿದ್ಧ ಎನ್ನುವ ಮನೋಭಾವ ಅವರದು.</p>.<p>ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಶಿವಕುಮಾರ್ರದ್ದು ರಾಜ್ಯ ರಾಜಕಾರಣದಲ್ಲಿ ಪರಿಚಿತ ಹೆಸರು. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ಅವರದ್ದು. ಈ ಬಾರಿ 1.22 ಲಕ್ಷ ಮತಗಳ ಅಂತರದಿಂದ ಗೆದ್ದಿರುವುದು ಅವರ ಜನಪ್ರಿಯತೆ ಮತ್ತು ತಂತ್ರಗಾರಿಕೆಗೆ ಸಾಕ್ಷಿ.</p><p>ದೇವರಾಜ ಅರಸು ಕಾಲದಲ್ಲಿ ರಾಜಕಾರಣ ಪ್ರವೇಶ ಮಾಡಿದ ಶಿವಕುಮಾರ್ ವಿದ್ಯಾರ್ಥಿ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯದ ಇನ್ನಿಂಗ್ಸ್ ಆರಂಭಿಸಿದವರು. ಅವರು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು 1985ರಲ್ಲಿ. ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಅವರಿಗೆ ಸ್ಪರ್ಧಿಯಾಗಿದ್ದು ಜನತಾ ಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇಗೌಡ. ಮೊದಲ ಚುನಾವಣೆಯಲ್ಲೇ ಗೌಡರ ವಿರುದ್ಧ ಸೋಲು ಕಂಡ ಶಿವಕುಮಾರ್, ಮುಂದೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸಾತನೂರು ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭೆ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದು ಗೆಲುವಿನ ನಗೆ ಬೀರಿದರು. ಅಲ್ಲಿಂದ ಇಲ್ಲಿಯವರೆಗೆ ಅವರು ತಿರುಗಿ ನೋಡಿದ್ದಿಲ್ಲ. 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾದಾಗಲೂ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡವರು. 1999ರ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಂತಹ ನಾಯಕನನ್ನೂ ಮಣಿಸಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ತೇಜಸ್ವಿನಿ ಅವರನ್ನು ನಿಲ್ಲಿಸಿ, ಘಟಾನುಘಟಿಗೇ ಸೋಲುಣಿಸಿದ ಛಲವಂತ ನಾಯಕನಾಗಿಯೂ ಹೆಸರಾದವರು.</p>. <p><strong>ಮಾಗಿದ ವ್ಯಕ್ತಿತ್ವ:</strong> </p><p>ಎದುರಾಳಿಯ ಮುಖಕ್ಕೆ ಹೊಡೆದಂತೆ ಮಾತನಾಡುವುದು ಶಿವಕುಮಾರ್ ವ್ಯಕ್ತಿತ್ವಕ್ಕೆ ಸಹಜವಾಗಿತ್ತು. ರಾಜ್ಯದ ಭೂಗತ ಜಗತ್ತನ್ನೇ ತನ್ನ ಕೈಯಳತೆಯಲ್ಲಿಟ್ಟುಕೊಂಡಿದ್ದ ರೌಡಿ ಕೊತ್ವಾಲ್ ರಾಮಚಂದ್ರನ ಜತೆ ಅವರ ನಂಟಿತ್ತು ಎಂದು ವಿರೋಧಿಗಳು ಆಪಾದಿಸುವುದುಂಟು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗುವುದಕ್ಕೂ ಮುನ್ನ, ಪೂರ್ವಾಶ್ರಮದ ಒರಟುತನ, ಮಾತಿನಲ್ಲಿ ಧಿಮಾಕು ಅವರ ವ್ಯಕ್ತಿತ್ವಕ್ಕೆ ಅಂಟಿಕೊಂಡಿತ್ತು. ತಮ್ಮ ‘ಶಿಲೆ’ಯಂತಹ ಮೈಮಾಟ–ಮಾತುಗಾರಿಕೆಗೆ ಕಲೆಯ ಕುಸುರಿಗಾರಿಕೆ ತಂದುಕೊಳ್ಳಬೇಕೆಂದು ನಿಶ್ಚಯಿಸಿದ ಅವರು, ಮಾಗತೊಡಗಿದರು. ಸಂಸ್ಕೃತ ಹಾಗೂ ಸಾಹಿತ್ಯವನ್ನು ಗುರುಮುಖೇನ ಕಲಿತ ಶಿವಕುಮಾರ್, ಹೋದಲ್ಲೆಲ್ಲ ಸಂಸ್ಕೃತ ಶ್ಲೋಕ, ಸಾಹಿತ್ಯದ ಉದಾಹರಣೆಗಳನ್ನು ಉಲ್ಲೇಖಿಸಿ ತಮ್ಮ ಶೈಲಿಯನ್ನೇ ಬದಲಿಸಿಕೊಂಡರು. ಮಾತಿನಲ್ಲಿದ್ದ ಕಠಿಣತೆ, ಧಿಮಾಕುಗಳು ಕಾಣೆಯಾಗಿ ಸೌಜನ್ಯ–ತಾಳ್ಮೆ ಅವರ ಶಾರೀರದಲ್ಲಿ ಕಾಣತೊಡಗಿತು. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪೂರ್ಣ ಮಾಗುವಿಕೆಗೆ ಅವರ ದೇಹ–ಭಾಷೆ ಪಳಗಿತಾದರೂ ಆಗೊಮ್ಮೆ–ಈಗೊಮ್ಮೆ ಹಳೆಯ ದರ್ಪಗಳೂ ಇಣುಕಿ ಮರೆಯಾಗುತ್ತಿದ್ದವು.</p><p><strong>ಮಂತ್ರಿ ಪದವಿ:</strong> </p><p>ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಬಂದಿಖಾನೆ, ಸಹಕಾರ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಶಿವಕುಮಾರ್ ಅವರದ್ದು. ಈ ಇಬ್ಬರೂ ನಾಯಕರ ‘ಬ್ಲ್ಯೂ ಐ ಬಾಯ್’ ಎಂದೂ ರಾಜಕಾರಣದಲ್ಲಿ ಗುರುತಿಸಲ್ಪಟ್ಟವರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಇಂಧನ ಸಚಿವರಾಗಿ ಮತ್ತು ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವಿ. ಕೆಪಿಸಿಸಿ ಕಾರ್ಯದರ್ಶಿಯಾಗಿ, ಕಾರ್ಯಾಧ್ಯಕ್ಷರಾಗಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.</p>. <p><strong>ರೆಸಾರ್ಟ್ ಆತಿಥ್ಯದಿಂದ ವಿಶ್ವಾಸ ಗಳಿಕೆ:</strong> </p><p>ಎರಡೂವರೆ ದಶಕಗಳ ರಾಜಕಾರಣವನ್ನು ನೀವು ಬಲ್ಲಿರಾದರೆ 2002ರಲ್ಲಿ ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ನೇತೃತ್ವದ ಸರ್ಕಾರ ಬೀಳದಂತೆ ಅದರ ನೆರವಿಗೆ ಧಾವಿಸಿದವರು ಡಿಕೆಶಿ. ಹತ್ತು ದಿನಗಳವರೆಗೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿಯೇ ಆತಿಥ್ಯ ಒದಗಿಸಿದ್ದರು.</p><p>2017ರಲ್ಲಿ ಗುಜರಾತ್ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ 44 ಗುಜರಾತ್ ಶಾಸಕರನ್ನು ಬಿಜೆಪಿ ಸರ್ಕಾರ ಹೈಜಾಕ್ ಮಾಡಲು ಯತ್ನಿಸಿದಾಗ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಅವರಿಗೆ ಕರ್ನಾಟಕದಲ್ಲಿ ಆತಿಥ್ಯ ಮತ್ತು ರಕ್ಷಣೆ ನೀಡಿದ್ದು ಇದೇ ಡಿ.ಕೆ. ಶಿವಕುಮಾರ್. ಇದೇ ಕಾರಣಕ್ಕೆ ಅವರು ಈಗಲ್ಟನ್ ರೆಸಾರ್ಟ್ನಲ್ಲಿ ಇದ್ದಾಗಲೇ ಐ.ಟಿ. ದಾಳಿ ಎದುರಿಸಬೇಕಾಯಿತು.</p><p>2018ರಲ್ಲಿ ರಾಜ್ಯ ರಾಜಕಾರಣದಲ್ಲಿ ಅತಂತ್ರ ಸನ್ನಿವೇಶ ಎದುರಾದಾಗ ‘ಟ್ರಬಲ್ ಶೂಟರ್’ ಆಗಿ ಕಾರ್ಯ ನಿರ್ವಹಿಸಿದ್ದು ಇದೇ ಶಿವಕುಮಾರ್. ಹೈಕಮಾಂಡ್ ಸೂಚನೆಗೆ ತಲೆಬಾಗಿ, ಎಚ್.ಡಿ. ದೇವೇಗೌಡರ ಕುಟುಂಬದ ಜೊತೆಗಿನ ರಾಜಕೀಯ ವೈಷಮ್ಯವನ್ನು ಬದಿಗೊತ್ತಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಒಂದೂವರೆ ವರ್ಷದ ಬಳಿಕ ಸರ್ಕಾರ ಬಿದ್ದು ಹೋಗುವ ಸಂದರ್ಭದಲ್ಲೂ ಮುಂಬೈನ ಬೀದಿಯಲ್ಲಿ ನಿಂತು ಅತೃಪ್ತ ಶಾಸಕರ ಮನವೊಲಿಕೆಗೆ ಪ್ರಯತ್ನಿಸಿದ್ದು ಅವರ ಛಲದ ರಾಜಕಾರಣಕ್ಕೆ ಸಾಕ್ಷಿ.</p><p>ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಅನೇಕ ಹೋರಾಟಗಳ ಮುಂಚೂಣಿಯನ್ನೂ ಅವರು ವಹಿಸಿದ್ದಾರೆ. ವರ್ಷಗಳ ಹಿಂದೆ ತಮ್ಮದೇ ತವರೂರಿನಲ್ಲಿ ನಡೆದ ಮೇಕೆದಾಟು ಪಾದಯಾತ್ರೆ, ಚುನಾವಣೆ ಹೊಸ್ತಿಲಲ್ಲಿನ ಪ್ರಜಾಧ್ವನಿ ಯಾತ್ರೆಗಳ ಯಶಸ್ಸು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ. ಭಾರತ್ ಜೋಡೊ ಯಾತ್ರೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳು– ಹೋರಾಟಗಳಿಗೆ ಸದಾ ಹೆಗಲು ಕೊಟ್ಟು ದುಡಿದಿದ್ದಾರೆ. </p>.ಕಾಂಗ್ರೆಸ್ 'ಆಪತ್ಬಾಂಧವ', 'ಬಂಡೆ', 'ಟ್ರಬಲ್ ಶೂಟರ್' ಎಂದೇ ಚಿರಪರಿಚಿತ ಡಿಕೆಶಿ.ಮಾಸ್ ಲೀಡರ್ ಸಿದ್ದರಾಮಯ್ಯ: ಮರಳಿನ ಮೇಲೆ ಅಕ್ಷರಾಭ್ಯಾಸದಿಂದ ಸಿಎಂ ಗಾದಿವರೆಗೆ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>