<p>2019ರಲ್ಲಿ ಕಾಂಗ್ರೆಸ್–ಜೆಡಿಎಸ್ನ ಮೈತ್ರಿ ಸರ್ಕಾರದಿಂದ ಅಸಮಾಧಾನಿತರಾಗಿದ್ದ ಕೆಲವು ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈನ ಪಂಚತಾರ ಹೋಟೆಲ್ನಲ್ಲಿ ಠಿಕಾಣಿ ಹೂಡಿದ್ದರು. ಅವರನ್ನು ಭೇಟಿಯಾಗಲು ಜಿ.ಟಿ. ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ ಮತ್ತು ಸಿ.ಎನ್. ಬಾಲಕೃಷ್ಣ ಅವರೊಂದಿಗೆ ಡಿ.ಕೆ ಶಿವಕುಮಾರ್ 2019ರ ಜುಲೈ 10ರಂದು ಮುಂಬೈಗೆ ತೆರಳಿದ್ದರು.</p>.ಅವಕಾಶ ತಪ್ಪಿಸಿದರೂ ಧೃತಿಗೆಡದ ನಾಯಕ ಡಿ.ಕೆ ಶಿವಕುಮಾರ್!.<p>ಕರ್ನಾಟಕದ ರಾಜೀನಾಮೆ ನೀಡಿರುವ ಶಾಸಕರು ತಂಗಿರುವ ಹೋಟೆಲ್ನೊಳಗೆ ಪ್ರವೇಶಿಸಲು ಶಿವಕುಮಾರ್ ಪ್ರಯತ್ನಿಸಿದ್ದ ಅವರನ್ನು ಪೊಲೀಸರು ತಡೆದಿದ್ದರು. ಸುಮಾರು ಆರು ತಾಸು, ಸುರಿಯುವ ಮಳೆಯಲ್ಲಿಯೇ ಹೋಟೆಲ್ನ ಹೊರಗೆ ನಿಂತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗಲೇ ಶಿವಕುಮಾರ್ ಅವರನ್ನು ಪೊಲೀಸರು ಎಳೆದೊಯ್ದಿದ್ದರು.</p><p> ಅಂದು ನಸುಕಿನಲ್ಲಿಯೇ ಮುಂಬೈ ತಲುಪಿದ್ದ ಶಿವಕುಮಾರ್ ಅವರು 8.20ರ ಹೊತ್ತಿಗೆ ರಿನೈಸಾನ್ಸ್ ಹೋಟೆಲ್ನ ಹೊರಭಾಗ ತಲುಪಿದ್ದರು. ಗೇಟಿನಲ್ಲಿಯೇ ಅವರನ್ನು ಪೊಲೀಸರು ತಡೆದರು. ಹೋಟೆಲ್ನಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ ಎಂದು ಅವರು ಹೇಳಿದರೂ ಪೊಲೀಸರು ಅದಕ್ಕೆ ಕಿವಿಗೆ ಹಾಕಿಕೊಳ್ಳಲಿಲ್ಲ. </p><p>ಶಿವಕುಮಾರ್ ಅವರು ಹೋಟೆಲ್ಗೆ ಬಂದರೆ ತಮಗೆ ಜೀವಬೆದರಿಕೆ ಇದೆ ಎಂದು ಅಲ್ಲಿ ತಂಗಿರುವ ಕಾಂಗ್ರೆಸ್–ಜೆಡಿಎಸ್ನ ಹತ್ತು ಶಾಸಕರು ದೂರು ಕೊಟ್ಟಿದ್ದಾರೆ. ಹಾಗಾಗಿ ಹೋಟೆಲ್ನ ಒಳಗೆ ಹೋಗಲು ಅವಕಾಶ ನೀಡಲಾಗದು ಎಂದು ಅವರಿಗೆ ಪೊಲೀಸರು ತಿಳಿಸಿದರು. ‘ಎಲ್ಲವೂ ಸಾಧ್ಯವಾಗುವ ಕಲೆಯೇ ರಾಜಕಾರಣ’ ಎಂದ ಶಿವಕುಮಾರ್, ತಮ್ಮನ್ನು ಒಳಗೆ ಬಿಡುವಂತೆ ಪೊಲೀಸರ ಮನವೊಲಿಸಲು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ಹಾಗಾಗಿ, ಪೋವೈನಲ್ಲಿರುವ ಹೋಟೆಲ್ನ ಹೊರಭಾಗದಲ್ಲಿಯೇಅವರು ಠಿಕಾಣಿ ಹೂಡಿದ್ದರು.</p>.ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿವರೆಗೆ: ಡಿ.ಕೆ. ಶಿವಕುಮಾರ್ ಯಶೋಗಾಥೆ.<p>ತಾವು ಶಾಂತಿಯ ಉದ್ದೇಶದಿಂದ ಬಂದಿರುವುದಾಗಿಯೂ ತಮ್ಮಿಂದ ಬಂಡಾಯ ಶಾಸಕರಿಗೆ ಯಾವುದೇ ಬೆದರಿಕೆ ಇಲ್ಲ. ಹಾಗಿದ್ದರೂ ತಮ್ಮಿಂದ ಭದ್ರತೆಗೆ ಬೆದರಿಕೆ ಇದೆ ಎಂದು ಹೋಟೆಲ್ನ ಆಡಳಿತ ಹೇಳುತ್ತಿದೆ. ನಾನು ಯಾವುದೇ ಆಯುಧ ತಂದಿಲ್ಲ ಅಥವಾ ಜತೆಗೆ ಭದ್ರತಾ ಸಿಬ್ಬಂದಿಯೂ ಇಲ್ಲ. ಜತೆಗಿರುವುದು ಹೃದಯ ಮಾತ್ರ. ನನಗೆ ಗೆಳೆಯರನ್ನು ಭೇಟಿಯಾಗಿ ಅವರ ಜತೆಗೆ ಕಾಫಿ ಕುಡಿಯಬೇಕಿದೆ. ಇಡೀ ಬಿಕ್ಕಟ್ಟಿನ ಹಿಂದೆ ಬಿಜೆಪಿ ಇಲ್ಲ ಎಂದಾದರೆ ನಾವು ಒಳಗೆ ಹೋಗುವುದನ್ನು ತಡೆಯುತ್ತಿರುವುದು ಯಾಕೆ’ ಎಂದು ಪ್ರಶ್ನಿಸಿದ್ದರು. ಅವರಿಗೆ ಪೊಲೀಸರೇ ಕಾಫಿ ತರಿಸಿಕೊಟ್ಟಿದ್ದರು.</p><p>ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ಅಲ್ಲಿ ಜಮಾಯಿಸಿದರು. ‘ಶಿವಕುಮಾರ್ ವಾಪಸ್ ಹೋಗಿ’ ಎಂದು ಒಂದು ಗುಂಪು ಘೋಷಣೆ ಕೂಗಿದರೆ ಅದಕ್ಕೆ ಪ್ರತಿ ಘೋಷಣೆಯೂ ಕೇಳಿ ಬಂದಿತ್ತು. ಹೋಟೆಲ್ನಲ್ಲಿ ತಂಗಿರುವ ಶಾಸಕರನ್ನು ಭೇಟಿಯಾಗದೆ ವಾಪಸಾಗುವ ಪ್ರಶ್ನೆಯೇ ಇಲ್ಲ ಎಂದು ಶಿವಕುಮಾರ್ ಪಟ್ಟು ಹಿಡಿದಿದ್ದರು. ಈ ನಡುವೆಯೇ ಶಿವಕುಮಾರ್ ಅವರಿಗೆ ಕಾಯ್ದಿರಿಸಿದ್ದ ಕೊಠಡಿಯನ್ನು ರದ್ದು ಮಾಡಲಾಗಿದೆ ಎಂಬ ಇ–ಮೇಲ್ ಸಂದೇಶ ಹೋಟೆಲ್</p><p>ನಿಂದ ಕೊಠಡಿ ಕಾಯ್ದಿರಿಸಿದ್ದ ಸಂಸ್ಥೆಗೆ ಹೋಯಿತು. ‘ತುರ್ತು ಸ್ಥಿತಿ’ಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸಮಜಾಯಿಷಿ ನೀಡಲಾಗಿತ್ತು. </p>.ಮುಖ್ಯಮಂತ್ರಿ ಗದ್ದುಗೆಗೇರಲು ಸಜ್ಜಾದ ಡಿ.ಕೆ. ಶಿವಕುಮಾರ್: ಸಾಹಸ, ಸಂಘರ್ಷದ ಹಾದಿ.<p>‘ನನ್ನ ವಿರುದ್ಧದ ಘೋಷಣೆಗೆ ಬೆದರುವುದಿಲ್ಲ... ಭದ್ರತೆಗೆ ಬೆದರಿಕೆ ಎಂಬ ಕಾರಣ ಕೊಟ್ಟು ಹೋಟೆಲ್ಗೆ ಹೋಗಲು ಬಿಡುತ್ತಿಲ್ಲ. ಮಹಾರಾಷ್ಟ್ರ ಸರ್ಕಾರದ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ನನ್ನಲ್ಲಿ ಯಾವುದೇ ಆಯುಧ ಇಲ್ಲ’ ಎಂದು ಶಿವಕುಮಾರ್ ಹೇಳಿದ್ದರು.</p><p>‘ಮುಂಬೈಯಲ್ಲಿ ಒಳ್ಳೆಯ ಸರ್ಕಾರ ಇದೆ. ಮುಖ್ಯಮಂತ್ರಿ (ದೇವೇಂದ್ರ ಫಡಣವೀಸ್) ನನ್ನ ಒಳ್ಳೆಯ ಗೆಳೆಯ. ನಾನು ಇಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ. ನನ್ನ ಗೆಳೆಯರು ಇಲ್ಲಿದ್ದಾರೆ. ಕೆಲವು ಸಮಸ್ಯೆಗಳು ಇವೆ. ಇಲ್ಲಿ ಇರುವ ನನ್ನ ಗೆಳೆಯರನ್ನು ಬಿಜೆಪಿ ನಾಯಕರು ಭೇಟಿಯಾಗಬಹುದು ಎಂದಾದ</p><p>ದರೆ ನಾನು ಯಾಕೆ ಭೇಟಿ ಮಾಡಬಾರದು’ ಎಂದು ಅವರು ಪ್ರಶ್ನಿಸಿದ್ದರು.</p><p>‘ಮುಂಬೈ ಪೊಲೀಸ್ ಅಥವಾ ಬೇರೆ ಯಾವುದೇ ಭದ್ರತಾ ಪಡೆಯನ್ನು ನಿಯೋಜಿಸಲಿ. ನಾವು ಗೆಳೆಯರನ್ನು ಭೇಟಿ ಮಾಡಿಯೇ ಹೋಗುತ್ತೇವೆ’ ಎಂದು ಮುಂಬೈಗೆ ತಲುಪಿದ ಕೂಡಲೇ ಅವರು ಹೇಳಿದ್ದರು. </p><p><em><strong>(ಪಿಟಿಐ ಹಾಗೂ ಇತರೆ ಏಜೆನ್ಸಿಗಳ ಮಾಹಿತಿ)</strong></em></p>.₹ 3000 ಪಾಸ್ಪೋರ್ಟ್ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ಡಿಕೆಶಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2019ರಲ್ಲಿ ಕಾಂಗ್ರೆಸ್–ಜೆಡಿಎಸ್ನ ಮೈತ್ರಿ ಸರ್ಕಾರದಿಂದ ಅಸಮಾಧಾನಿತರಾಗಿದ್ದ ಕೆಲವು ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈನ ಪಂಚತಾರ ಹೋಟೆಲ್ನಲ್ಲಿ ಠಿಕಾಣಿ ಹೂಡಿದ್ದರು. ಅವರನ್ನು ಭೇಟಿಯಾಗಲು ಜಿ.ಟಿ. ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ ಮತ್ತು ಸಿ.ಎನ್. ಬಾಲಕೃಷ್ಣ ಅವರೊಂದಿಗೆ ಡಿ.ಕೆ ಶಿವಕುಮಾರ್ 2019ರ ಜುಲೈ 10ರಂದು ಮುಂಬೈಗೆ ತೆರಳಿದ್ದರು.</p>.ಅವಕಾಶ ತಪ್ಪಿಸಿದರೂ ಧೃತಿಗೆಡದ ನಾಯಕ ಡಿ.ಕೆ ಶಿವಕುಮಾರ್!.<p>ಕರ್ನಾಟಕದ ರಾಜೀನಾಮೆ ನೀಡಿರುವ ಶಾಸಕರು ತಂಗಿರುವ ಹೋಟೆಲ್ನೊಳಗೆ ಪ್ರವೇಶಿಸಲು ಶಿವಕುಮಾರ್ ಪ್ರಯತ್ನಿಸಿದ್ದ ಅವರನ್ನು ಪೊಲೀಸರು ತಡೆದಿದ್ದರು. ಸುಮಾರು ಆರು ತಾಸು, ಸುರಿಯುವ ಮಳೆಯಲ್ಲಿಯೇ ಹೋಟೆಲ್ನ ಹೊರಗೆ ನಿಂತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗಲೇ ಶಿವಕುಮಾರ್ ಅವರನ್ನು ಪೊಲೀಸರು ಎಳೆದೊಯ್ದಿದ್ದರು.</p><p> ಅಂದು ನಸುಕಿನಲ್ಲಿಯೇ ಮುಂಬೈ ತಲುಪಿದ್ದ ಶಿವಕುಮಾರ್ ಅವರು 8.20ರ ಹೊತ್ತಿಗೆ ರಿನೈಸಾನ್ಸ್ ಹೋಟೆಲ್ನ ಹೊರಭಾಗ ತಲುಪಿದ್ದರು. ಗೇಟಿನಲ್ಲಿಯೇ ಅವರನ್ನು ಪೊಲೀಸರು ತಡೆದರು. ಹೋಟೆಲ್ನಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ ಎಂದು ಅವರು ಹೇಳಿದರೂ ಪೊಲೀಸರು ಅದಕ್ಕೆ ಕಿವಿಗೆ ಹಾಕಿಕೊಳ್ಳಲಿಲ್ಲ. </p><p>ಶಿವಕುಮಾರ್ ಅವರು ಹೋಟೆಲ್ಗೆ ಬಂದರೆ ತಮಗೆ ಜೀವಬೆದರಿಕೆ ಇದೆ ಎಂದು ಅಲ್ಲಿ ತಂಗಿರುವ ಕಾಂಗ್ರೆಸ್–ಜೆಡಿಎಸ್ನ ಹತ್ತು ಶಾಸಕರು ದೂರು ಕೊಟ್ಟಿದ್ದಾರೆ. ಹಾಗಾಗಿ ಹೋಟೆಲ್ನ ಒಳಗೆ ಹೋಗಲು ಅವಕಾಶ ನೀಡಲಾಗದು ಎಂದು ಅವರಿಗೆ ಪೊಲೀಸರು ತಿಳಿಸಿದರು. ‘ಎಲ್ಲವೂ ಸಾಧ್ಯವಾಗುವ ಕಲೆಯೇ ರಾಜಕಾರಣ’ ಎಂದ ಶಿವಕುಮಾರ್, ತಮ್ಮನ್ನು ಒಳಗೆ ಬಿಡುವಂತೆ ಪೊಲೀಸರ ಮನವೊಲಿಸಲು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ಹಾಗಾಗಿ, ಪೋವೈನಲ್ಲಿರುವ ಹೋಟೆಲ್ನ ಹೊರಭಾಗದಲ್ಲಿಯೇಅವರು ಠಿಕಾಣಿ ಹೂಡಿದ್ದರು.</p>.ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿವರೆಗೆ: ಡಿ.ಕೆ. ಶಿವಕುಮಾರ್ ಯಶೋಗಾಥೆ.<p>ತಾವು ಶಾಂತಿಯ ಉದ್ದೇಶದಿಂದ ಬಂದಿರುವುದಾಗಿಯೂ ತಮ್ಮಿಂದ ಬಂಡಾಯ ಶಾಸಕರಿಗೆ ಯಾವುದೇ ಬೆದರಿಕೆ ಇಲ್ಲ. ಹಾಗಿದ್ದರೂ ತಮ್ಮಿಂದ ಭದ್ರತೆಗೆ ಬೆದರಿಕೆ ಇದೆ ಎಂದು ಹೋಟೆಲ್ನ ಆಡಳಿತ ಹೇಳುತ್ತಿದೆ. ನಾನು ಯಾವುದೇ ಆಯುಧ ತಂದಿಲ್ಲ ಅಥವಾ ಜತೆಗೆ ಭದ್ರತಾ ಸಿಬ್ಬಂದಿಯೂ ಇಲ್ಲ. ಜತೆಗಿರುವುದು ಹೃದಯ ಮಾತ್ರ. ನನಗೆ ಗೆಳೆಯರನ್ನು ಭೇಟಿಯಾಗಿ ಅವರ ಜತೆಗೆ ಕಾಫಿ ಕುಡಿಯಬೇಕಿದೆ. ಇಡೀ ಬಿಕ್ಕಟ್ಟಿನ ಹಿಂದೆ ಬಿಜೆಪಿ ಇಲ್ಲ ಎಂದಾದರೆ ನಾವು ಒಳಗೆ ಹೋಗುವುದನ್ನು ತಡೆಯುತ್ತಿರುವುದು ಯಾಕೆ’ ಎಂದು ಪ್ರಶ್ನಿಸಿದ್ದರು. ಅವರಿಗೆ ಪೊಲೀಸರೇ ಕಾಫಿ ತರಿಸಿಕೊಟ್ಟಿದ್ದರು.</p><p>ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ಅಲ್ಲಿ ಜಮಾಯಿಸಿದರು. ‘ಶಿವಕುಮಾರ್ ವಾಪಸ್ ಹೋಗಿ’ ಎಂದು ಒಂದು ಗುಂಪು ಘೋಷಣೆ ಕೂಗಿದರೆ ಅದಕ್ಕೆ ಪ್ರತಿ ಘೋಷಣೆಯೂ ಕೇಳಿ ಬಂದಿತ್ತು. ಹೋಟೆಲ್ನಲ್ಲಿ ತಂಗಿರುವ ಶಾಸಕರನ್ನು ಭೇಟಿಯಾಗದೆ ವಾಪಸಾಗುವ ಪ್ರಶ್ನೆಯೇ ಇಲ್ಲ ಎಂದು ಶಿವಕುಮಾರ್ ಪಟ್ಟು ಹಿಡಿದಿದ್ದರು. ಈ ನಡುವೆಯೇ ಶಿವಕುಮಾರ್ ಅವರಿಗೆ ಕಾಯ್ದಿರಿಸಿದ್ದ ಕೊಠಡಿಯನ್ನು ರದ್ದು ಮಾಡಲಾಗಿದೆ ಎಂಬ ಇ–ಮೇಲ್ ಸಂದೇಶ ಹೋಟೆಲ್</p><p>ನಿಂದ ಕೊಠಡಿ ಕಾಯ್ದಿರಿಸಿದ್ದ ಸಂಸ್ಥೆಗೆ ಹೋಯಿತು. ‘ತುರ್ತು ಸ್ಥಿತಿ’ಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸಮಜಾಯಿಷಿ ನೀಡಲಾಗಿತ್ತು. </p>.ಮುಖ್ಯಮಂತ್ರಿ ಗದ್ದುಗೆಗೇರಲು ಸಜ್ಜಾದ ಡಿ.ಕೆ. ಶಿವಕುಮಾರ್: ಸಾಹಸ, ಸಂಘರ್ಷದ ಹಾದಿ.<p>‘ನನ್ನ ವಿರುದ್ಧದ ಘೋಷಣೆಗೆ ಬೆದರುವುದಿಲ್ಲ... ಭದ್ರತೆಗೆ ಬೆದರಿಕೆ ಎಂಬ ಕಾರಣ ಕೊಟ್ಟು ಹೋಟೆಲ್ಗೆ ಹೋಗಲು ಬಿಡುತ್ತಿಲ್ಲ. ಮಹಾರಾಷ್ಟ್ರ ಸರ್ಕಾರದ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ನನ್ನಲ್ಲಿ ಯಾವುದೇ ಆಯುಧ ಇಲ್ಲ’ ಎಂದು ಶಿವಕುಮಾರ್ ಹೇಳಿದ್ದರು.</p><p>‘ಮುಂಬೈಯಲ್ಲಿ ಒಳ್ಳೆಯ ಸರ್ಕಾರ ಇದೆ. ಮುಖ್ಯಮಂತ್ರಿ (ದೇವೇಂದ್ರ ಫಡಣವೀಸ್) ನನ್ನ ಒಳ್ಳೆಯ ಗೆಳೆಯ. ನಾನು ಇಲ್ಲಿ ಕೊಠಡಿ ಕಾಯ್ದಿರಿಸಿದ್ದೇನೆ. ನನ್ನ ಗೆಳೆಯರು ಇಲ್ಲಿದ್ದಾರೆ. ಕೆಲವು ಸಮಸ್ಯೆಗಳು ಇವೆ. ಇಲ್ಲಿ ಇರುವ ನನ್ನ ಗೆಳೆಯರನ್ನು ಬಿಜೆಪಿ ನಾಯಕರು ಭೇಟಿಯಾಗಬಹುದು ಎಂದಾದ</p><p>ದರೆ ನಾನು ಯಾಕೆ ಭೇಟಿ ಮಾಡಬಾರದು’ ಎಂದು ಅವರು ಪ್ರಶ್ನಿಸಿದ್ದರು.</p><p>‘ಮುಂಬೈ ಪೊಲೀಸ್ ಅಥವಾ ಬೇರೆ ಯಾವುದೇ ಭದ್ರತಾ ಪಡೆಯನ್ನು ನಿಯೋಜಿಸಲಿ. ನಾವು ಗೆಳೆಯರನ್ನು ಭೇಟಿ ಮಾಡಿಯೇ ಹೋಗುತ್ತೇವೆ’ ಎಂದು ಮುಂಬೈಗೆ ತಲುಪಿದ ಕೂಡಲೇ ಅವರು ಹೇಳಿದ್ದರು. </p><p><em><strong>(ಪಿಟಿಐ ಹಾಗೂ ಇತರೆ ಏಜೆನ್ಸಿಗಳ ಮಾಹಿತಿ)</strong></em></p>.₹ 3000 ಪಾಸ್ಪೋರ್ಟ್ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ಡಿಕೆಶಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>