<p><strong>ಬೆಂಗಳೂರು</strong>: ‘ಸ್ಥಳೀಯ ಅಗತ್ಯಗಳ ಆಧಾರದಲ್ಲಿ ನರೇಗಾ ಯೋಜನೆ ಅಡಿ ಅನುದಾನ ಒದಗಿಸಲಾಗುತ್ತಿತ್ತು. ಆದರೆ ವಿಬಿ–ಜಿರಾಮ್–ಜಿ ಯೋಜನೆಯು ಸ್ಥಳೀಯ ಅಗತ್ಯಗಳನ್ನು ಪರಿಗಣಿಸುವುದೇ ಇಲ್ಲ’ ಎಂದು ಅರ್ಥಶಾಸ್ತ್ರಜ್ಞ ನರೇಂದ್ರ ಪಾಣಿ ಅಭಿಪ್ರಾಯಪಟ್ಟರು.</p>.<p>ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಬುಧವಾರ ಆಯೋಜಿಸಿದ್ದ ‘ನರೇಗಾ ವರ್ಸಸ್ ಜಿರಾಮ್–ಜಿ ಯೋಜನೆಯಲ್ಲಿ ಬದಲಾವಣೆ–ಸಾಧಕ ಬಾಧಕಗಳು’ ವಿಚಾರ ಸಂಕಿರಣದಲ್ಲಿ, ‘ಉದ್ಯೋಗ ಖಾತ್ರಿ ಯೋಜನೆ ಕಲಿಸಿದ ಪಾಠಗಳು–ಕರ್ನಾಟಕದ ಅನುಭವಗಳು’ ಕುರಿತು ಅವರು ಮಾತನಾಡಿದರು.</p>.<p>‘ನರೇಗಾ ಯೋಜನೆ ಜಾರಿಗೆ ತರುವಾಗ ದೇಶದ ಕಡುಬಡತನವನ್ನು ಹೋಗಲಾಡಿಸಬೇಕು, ಜನರ ಜೀವನಮಟ್ಟವನ್ನು ಸುಧಾರಿಸಬೇಕು ಹಾಗೂ ಆ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂಬ ಆಶಯ ಇತ್ತು. ಆ ಕಾರಣದಿಂದಲೇ ದೇಶದ ಪ್ರತಿ ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಗಳ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಯ ರೂಪುರೇಷ ಸಿದ್ಧಪಡಿಸಲಾಗುತ್ತಿತ್ತು’ ಎಂದು ವಿವರಿಸಿದರು.</p>.<p>‘ತಮ್ಮ ಗ್ರಾಮಕ್ಕೆ ಏನು ಬೇಕು ಎಂಬುದನ್ನು ಕೇಳಲು ನರೇಗಾದಲ್ಲಿ ಗ್ರಾಮಸ್ಥರಿಗೆ ಅವಕಾಶವಿತ್ತು. ಆದರೆ ವಿಬಿ–ಜಿರಾಮ್–ಜಿಯಲ್ಲಿ ಅಂತಹ ಅವಕಾಶವಿಲ್ಲ. ಇಡೀ ದೇಶವನ್ನು ಒಂದು ಘಟಕವನ್ನಾಗಿ ಈ ಯೋಜನೆ ನೋಡಲಿದೆ. ಈಶಾನ್ಯ ಭಾರತದ ಗ್ರಾಮಕ್ಕೂ, ಕರ್ನಾಟಕದ ಬಯಲು ಸೀಮೆಯ ಹಳ್ಳಿಗೂ ಒಂದೇ ಸ್ವರೂಪದ ಯೋಜನೆ ನೀಡಲಿದೆ. ಇದೊಂದು ವಿಫಲ ಮಾದರಿ’ ಎಂದರು.</p>.<p>‘ಕೃಷಿಯನ್ನು ಪ್ರಧಾನವಾಗಿ ಇರಿಸಿಕೊಂಡೇ ನರೇಗಾ ಅನುಷ್ಠಾನ ಮಾಡಲಾಗಿತ್ತು. ದೀರ್ಘಾವಧಿಯಲ್ಲಿ ಕೃಷಿಭೂಮಿಯ ಫಲವತ್ತತೆ ಹೆಚ್ಚಿಸುವ ಮತ್ತು ಕೃಷಿಯನ್ನು ಸುಸ್ಥಿರ ಔದ್ಯೋಗಿಕ ಕ್ಷೇತ್ರವನ್ನಾಗಿಸುವ ಗುರಿ ನರೇಗಾದಲ್ಲಿತ್ತು. ಆದರೆ ವಿಬಿ–ಜಿರಾಮ್–ಜಿ ಯೋಜನೆಯು ಇದಕ್ಕೆ ತದ್ವಿರುದ್ಧವಾಗಿ ತಕ್ಷಣದ ಫಲಿತಾಂಶಕ್ಕೆ ಮಾತ್ರವೇ ಒತ್ತು ನೀಡಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ‘ಅಧಿಕಾರ ವಿಕೇಂದ್ರೀಕರಣ ತತ್ವವನ್ನು ತಲೆಕೆಳಗು ಮಾಡುವ ಹುನ್ನಾರ ಇದು. ಜನರ ಉದ್ಯೋಗದ ಅವಕಾಶ ಮಾತ್ರವಲ್ಲದೆ, ಗ್ರಾಮ ಪಂಚಾಯತಿಗಳ ಅಧಿಕಾರವನ್ನೂ ಕೇಂದ್ರ ಸರ್ಕಾರವು ಕಸಿದುಕೊಳ್ಳುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸ್ಥಳೀಯ ಅಗತ್ಯಗಳ ಆಧಾರದಲ್ಲಿ ನರೇಗಾ ಯೋಜನೆ ಅಡಿ ಅನುದಾನ ಒದಗಿಸಲಾಗುತ್ತಿತ್ತು. ಆದರೆ ವಿಬಿ–ಜಿರಾಮ್–ಜಿ ಯೋಜನೆಯು ಸ್ಥಳೀಯ ಅಗತ್ಯಗಳನ್ನು ಪರಿಗಣಿಸುವುದೇ ಇಲ್ಲ’ ಎಂದು ಅರ್ಥಶಾಸ್ತ್ರಜ್ಞ ನರೇಂದ್ರ ಪಾಣಿ ಅಭಿಪ್ರಾಯಪಟ್ಟರು.</p>.<p>ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಬುಧವಾರ ಆಯೋಜಿಸಿದ್ದ ‘ನರೇಗಾ ವರ್ಸಸ್ ಜಿರಾಮ್–ಜಿ ಯೋಜನೆಯಲ್ಲಿ ಬದಲಾವಣೆ–ಸಾಧಕ ಬಾಧಕಗಳು’ ವಿಚಾರ ಸಂಕಿರಣದಲ್ಲಿ, ‘ಉದ್ಯೋಗ ಖಾತ್ರಿ ಯೋಜನೆ ಕಲಿಸಿದ ಪಾಠಗಳು–ಕರ್ನಾಟಕದ ಅನುಭವಗಳು’ ಕುರಿತು ಅವರು ಮಾತನಾಡಿದರು.</p>.<p>‘ನರೇಗಾ ಯೋಜನೆ ಜಾರಿಗೆ ತರುವಾಗ ದೇಶದ ಕಡುಬಡತನವನ್ನು ಹೋಗಲಾಡಿಸಬೇಕು, ಜನರ ಜೀವನಮಟ್ಟವನ್ನು ಸುಧಾರಿಸಬೇಕು ಹಾಗೂ ಆ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂಬ ಆಶಯ ಇತ್ತು. ಆ ಕಾರಣದಿಂದಲೇ ದೇಶದ ಪ್ರತಿ ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಗಳ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಯ ರೂಪುರೇಷ ಸಿದ್ಧಪಡಿಸಲಾಗುತ್ತಿತ್ತು’ ಎಂದು ವಿವರಿಸಿದರು.</p>.<p>‘ತಮ್ಮ ಗ್ರಾಮಕ್ಕೆ ಏನು ಬೇಕು ಎಂಬುದನ್ನು ಕೇಳಲು ನರೇಗಾದಲ್ಲಿ ಗ್ರಾಮಸ್ಥರಿಗೆ ಅವಕಾಶವಿತ್ತು. ಆದರೆ ವಿಬಿ–ಜಿರಾಮ್–ಜಿಯಲ್ಲಿ ಅಂತಹ ಅವಕಾಶವಿಲ್ಲ. ಇಡೀ ದೇಶವನ್ನು ಒಂದು ಘಟಕವನ್ನಾಗಿ ಈ ಯೋಜನೆ ನೋಡಲಿದೆ. ಈಶಾನ್ಯ ಭಾರತದ ಗ್ರಾಮಕ್ಕೂ, ಕರ್ನಾಟಕದ ಬಯಲು ಸೀಮೆಯ ಹಳ್ಳಿಗೂ ಒಂದೇ ಸ್ವರೂಪದ ಯೋಜನೆ ನೀಡಲಿದೆ. ಇದೊಂದು ವಿಫಲ ಮಾದರಿ’ ಎಂದರು.</p>.<p>‘ಕೃಷಿಯನ್ನು ಪ್ರಧಾನವಾಗಿ ಇರಿಸಿಕೊಂಡೇ ನರೇಗಾ ಅನುಷ್ಠಾನ ಮಾಡಲಾಗಿತ್ತು. ದೀರ್ಘಾವಧಿಯಲ್ಲಿ ಕೃಷಿಭೂಮಿಯ ಫಲವತ್ತತೆ ಹೆಚ್ಚಿಸುವ ಮತ್ತು ಕೃಷಿಯನ್ನು ಸುಸ್ಥಿರ ಔದ್ಯೋಗಿಕ ಕ್ಷೇತ್ರವನ್ನಾಗಿಸುವ ಗುರಿ ನರೇಗಾದಲ್ಲಿತ್ತು. ಆದರೆ ವಿಬಿ–ಜಿರಾಮ್–ಜಿ ಯೋಜನೆಯು ಇದಕ್ಕೆ ತದ್ವಿರುದ್ಧವಾಗಿ ತಕ್ಷಣದ ಫಲಿತಾಂಶಕ್ಕೆ ಮಾತ್ರವೇ ಒತ್ತು ನೀಡಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ‘ಅಧಿಕಾರ ವಿಕೇಂದ್ರೀಕರಣ ತತ್ವವನ್ನು ತಲೆಕೆಳಗು ಮಾಡುವ ಹುನ್ನಾರ ಇದು. ಜನರ ಉದ್ಯೋಗದ ಅವಕಾಶ ಮಾತ್ರವಲ್ಲದೆ, ಗ್ರಾಮ ಪಂಚಾಯತಿಗಳ ಅಧಿಕಾರವನ್ನೂ ಕೇಂದ್ರ ಸರ್ಕಾರವು ಕಸಿದುಕೊಳ್ಳುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>