<p><strong>ಬೆಂಗಳೂರು:</strong> ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಏಳು ಸದಸ್ಯರ ಅವಧಿ ಜೂನ್ 30ಕ್ಕೆ ಮುಗಿಯಲಿದ್ದು, ಆ ಸ್ಥಾನಗಳಿಗೆ ಜೂನ್ 18ಕ್ಕೆ ಚುನಾವಣೆ ನಡೆಯಲಿದೆ.</p>.<p>ಚುನಾವಣಾ ಆಯೋಗವು ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ. ಜೂನ್ 1ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು 8ರಂದು ಕೊನೆಯ ದಿನಾಂಕ. 9ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು 11 ಕೊನೆಯ ದಿನಾಂಕ. ಜೂನ್ 18ರ ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ಮತದಾನ ಮತ್ತು ಮತ ಎಣಿಕೆಗೆ ದಿನಾಂಕ ನಿಗದಿ ಮಾಡಲಾಗಿದೆ. ಜೂನ್ 20ರ ಒಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.</p>.<p>30ಕ್ಕೆ ನಿವೃತ್ತಿ ಆಗಲಿರುವ ಸದಸ್ಯರ ಪೈಕಿ ಕಾಂಗ್ರೆಸ್ನ ಮೂವರು, ಬಿಜೆಪಿಯ ಮೂವರು ಮತ್ತು ಜೆಡಿಎಸ್ನ ಒಬ್ಬರು ಇದ್ದಾರೆ. ವಿಧಾನಸಭೆಯ ಈಗಿನ ಬಲ 222 ಇದ್ದು, ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ನಿಂದ ನಾಲ್ವರು ಮತ್ತು ಬಿಜೆಪಿಯಿಂದ ಇಬ್ಬರು ಸದಸ್ಯರು ಚುನಾಯಿತರಾಗುವುದು ಖಚಿತವಾಗಿದೆ.</p>.<p>ಉಳಿದ ಒಂದು ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ಚುನಾಯಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಸ್ವತಂತ್ರ ಬಲವಿಲ್ಲ. ಕಾಂಗ್ರೆಸ್ನಿಂದ ನಾಲ್ಕನೇ ಅಭ್ಯರ್ಥಿ ಸ್ಪರ್ಧಿಸಿದರೆ ಜೆಡಿಎಸ್ನ ಮತ ಸೆಳೆಯಬೇಕಾಗುತ್ತದೆ ಅಥವಾ ಜೆಡಿಎಸ್ ಅಭ್ಯರ್ಥಿ ಹಾಕಿದರೆ ಕಾಂಗ್ರೆಸ್ನ ಮತಕ್ಕೆ ಕೈ ಹಾಕಬೇಕಾಗುತ್ತದೆ.</p>.<p><strong>ದೆಹಲಿಯಲ್ಲಿ ಲಾಬಿ</strong>: ಕರ್ನಾಟಕ ಸರ್ಕಾರದ ನಾಯಕತ್ವ ಬದಲಾವಣೆಗಾಗಿ ಮಂಗಳವಾರ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರ ಸಭೆ ನಡೆಯಿತು. ಪರಿಷತ್ಗೆ ಪ್ರವೇಶಿಸಲು ಬಯಸಿರುವ ಅನೇಕ ಆಕಾಂಕ್ಷಿಗಳು ಇದೇ ವೇಳೆ ದೆಹಲಿಗೆ ದೌಡಾಯಿಸಿದ್ದರು. ತಮ್ಮ ಹಿತೈಷಿಗಳ ಮೂಲಕ ಪಕ್ಷದ ನಾಯಕರನ್ನು ಭೇಟಿ ಮಾಡಿ, ತಮ್ಮನ್ನು ಅಭ್ಯರ್ಥಿಯಾಗಿಸುವಂತೆ ದೊಡ್ಡ ಮಟ್ಟದ ಲಾಬಿ ನಡೆಸಿದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾರ ಹೆಸರನ್ನೂ ಈವರೆಗೆ ಆಖೈರುಗೊಳಿಸಿಲ್ಲ.</p>.<p><strong>ಬಿಜೆಪಿಯಲ್ಲಿ ಆರಂಭವಾಗದ ಕಸರತ್ತು:</strong> ತನ್ನ ಪಾಲಿನ ಎರಡು ಸ್ಥಾನಗಳಿಗೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿಲ್ಲ. ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಈಚೆಗೆ ಪಕ್ಷದ ಪ್ರಮುಖ ನಾಯಕರ ಸಭೆ ನಡೆಸಿದಾಗಲೂ ಈ ವಿಷಯ ಚರ್ಚೆಗೆ ಬರಲಿಲ್ಲ’ ಎಂದು ಮೂಲಗಳು ತಿಳಿಸಿವೆ.</p>.<p>ಇನ್ನೂ ಸಾಕಷ್ಟು ದಿನಗಳು ಇರುವುದರಿಂದ, ಆಕಾಂಕ್ಷಿಗಳ ಪಟ್ಟಿಯೊಂದನ್ನು ದೆಹಲಿಗೆ ಕಳುಹಿಸಲಾಗುವುದು ಎಂದೂ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಏಳು ಸದಸ್ಯರ ಅವಧಿ ಜೂನ್ 30ಕ್ಕೆ ಮುಗಿಯಲಿದ್ದು, ಆ ಸ್ಥಾನಗಳಿಗೆ ಜೂನ್ 18ಕ್ಕೆ ಚುನಾವಣೆ ನಡೆಯಲಿದೆ.</p>.<p>ಚುನಾವಣಾ ಆಯೋಗವು ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ. ಜೂನ್ 1ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು 8ರಂದು ಕೊನೆಯ ದಿನಾಂಕ. 9ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು 11 ಕೊನೆಯ ದಿನಾಂಕ. ಜೂನ್ 18ರ ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ಮತದಾನ ಮತ್ತು ಮತ ಎಣಿಕೆಗೆ ದಿನಾಂಕ ನಿಗದಿ ಮಾಡಲಾಗಿದೆ. ಜೂನ್ 20ರ ಒಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.</p>.<p>30ಕ್ಕೆ ನಿವೃತ್ತಿ ಆಗಲಿರುವ ಸದಸ್ಯರ ಪೈಕಿ ಕಾಂಗ್ರೆಸ್ನ ಮೂವರು, ಬಿಜೆಪಿಯ ಮೂವರು ಮತ್ತು ಜೆಡಿಎಸ್ನ ಒಬ್ಬರು ಇದ್ದಾರೆ. ವಿಧಾನಸಭೆಯ ಈಗಿನ ಬಲ 222 ಇದ್ದು, ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ನಿಂದ ನಾಲ್ವರು ಮತ್ತು ಬಿಜೆಪಿಯಿಂದ ಇಬ್ಬರು ಸದಸ್ಯರು ಚುನಾಯಿತರಾಗುವುದು ಖಚಿತವಾಗಿದೆ.</p>.<p>ಉಳಿದ ಒಂದು ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ಚುನಾಯಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಸ್ವತಂತ್ರ ಬಲವಿಲ್ಲ. ಕಾಂಗ್ರೆಸ್ನಿಂದ ನಾಲ್ಕನೇ ಅಭ್ಯರ್ಥಿ ಸ್ಪರ್ಧಿಸಿದರೆ ಜೆಡಿಎಸ್ನ ಮತ ಸೆಳೆಯಬೇಕಾಗುತ್ತದೆ ಅಥವಾ ಜೆಡಿಎಸ್ ಅಭ್ಯರ್ಥಿ ಹಾಕಿದರೆ ಕಾಂಗ್ರೆಸ್ನ ಮತಕ್ಕೆ ಕೈ ಹಾಕಬೇಕಾಗುತ್ತದೆ.</p>.<p><strong>ದೆಹಲಿಯಲ್ಲಿ ಲಾಬಿ</strong>: ಕರ್ನಾಟಕ ಸರ್ಕಾರದ ನಾಯಕತ್ವ ಬದಲಾವಣೆಗಾಗಿ ಮಂಗಳವಾರ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರ ಸಭೆ ನಡೆಯಿತು. ಪರಿಷತ್ಗೆ ಪ್ರವೇಶಿಸಲು ಬಯಸಿರುವ ಅನೇಕ ಆಕಾಂಕ್ಷಿಗಳು ಇದೇ ವೇಳೆ ದೆಹಲಿಗೆ ದೌಡಾಯಿಸಿದ್ದರು. ತಮ್ಮ ಹಿತೈಷಿಗಳ ಮೂಲಕ ಪಕ್ಷದ ನಾಯಕರನ್ನು ಭೇಟಿ ಮಾಡಿ, ತಮ್ಮನ್ನು ಅಭ್ಯರ್ಥಿಯಾಗಿಸುವಂತೆ ದೊಡ್ಡ ಮಟ್ಟದ ಲಾಬಿ ನಡೆಸಿದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾರ ಹೆಸರನ್ನೂ ಈವರೆಗೆ ಆಖೈರುಗೊಳಿಸಿಲ್ಲ.</p>.<p><strong>ಬಿಜೆಪಿಯಲ್ಲಿ ಆರಂಭವಾಗದ ಕಸರತ್ತು:</strong> ತನ್ನ ಪಾಲಿನ ಎರಡು ಸ್ಥಾನಗಳಿಗೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿಲ್ಲ. ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಈಚೆಗೆ ಪಕ್ಷದ ಪ್ರಮುಖ ನಾಯಕರ ಸಭೆ ನಡೆಸಿದಾಗಲೂ ಈ ವಿಷಯ ಚರ್ಚೆಗೆ ಬರಲಿಲ್ಲ’ ಎಂದು ಮೂಲಗಳು ತಿಳಿಸಿವೆ.</p>.<p>ಇನ್ನೂ ಸಾಕಷ್ಟು ದಿನಗಳು ಇರುವುದರಿಂದ, ಆಕಾಂಕ್ಷಿಗಳ ಪಟ್ಟಿಯೊಂದನ್ನು ದೆಹಲಿಗೆ ಕಳುಹಿಸಲಾಗುವುದು ಎಂದೂ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>