<p><strong>ಬೆಂಗಳೂರು</strong>: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳು ಒಟ್ಟು ₹4,516 ಕೋಟಿ ನಷ್ಟದಲ್ಲಿವೆ. ಆದರೂ ಏಪ್ರಿಲ್ 1ರಿಂದ ಗೃಹ ಬಳಕೆಯ ವಿದ್ಯುತ್ ದರ ಹೆಚ್ಚಳ ಮಾಡುತ್ತಿಲ್ಲ ಎಂದು ಸಭಾನಾಯಕ ಎನ್.ಎಸ್.ಬೋಸರಾಜು ಹೇಳಿದರು. </p>.<p>ವಿಧಾನಪರಿಷತ್ನಲ್ಲಿ ಬಿಜೆಪಿಯ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಪರವಾಗಿ ಉತ್ತರ ನೀಡಿದ ಅವರು, ‘ಐದು ಎಸ್ಕಾಂಗಳು ನಷ್ಟದಲ್ಲಿದ್ದರೂ ನಾಗರಿಕ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2025ನೇ ಮಾರ್ಚ್ನಲ್ಲೇ 2027–28ನೇ ಸಾಲಿನವರೆಗೆ ಬಹು ವಾರ್ಷಿಕ ದರ ಪರಿಷ್ಕರಣೆ ಆದೇಶ ಹೊರಡಿಸಿತ್ತು. ಅದೇ ವರ್ಷದ ನವೆಂಬರ್ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಗೃಹ ಬಳಕೆ ವಿದ್ಯುತ್ ಶುಲ್ಕ ಹೆಚ್ಚಿಸುವ ಪ್ರಸ್ತಾವ ಸಲ್ಲಿಸಿಲ್ಲ ಎಂದು ಮಾಹಿತಿ ನೀಡಿದರು. </p>.<p>ನಷ್ಟದಲ್ಲಿರುವ ಕಂಪನಿಗಳಲ್ಲಿ ಬೆಸ್ಕಾಂ ಸಿಂಹಪಾಲು ಹೊಂದಿದೆ. ಆಯೋಗವು 2024–25ನೇ ಸಾಲಿನಲ್ಲಿ ವಿದ್ಯುತ್ ಬಳಕೆಯ ಸರಾಸರಿ ದರವನ್ನು ಪ್ರತಿ ಯೂನಿಟ್ಗೆ ₹9.54 ನಿಗದಿ ಮಾಡಿತ್ತು. ಆದರೆ, ಬೆಸ್ಕಾಂ ಗ್ರಾಹಕರಿಂದ ಪಡೆದಿದ್ದು ₹8.59 ಮಾತ್ರ. ನಿಗದಿ ಮಾಡಿದ ವಿದ್ಯುತ್ ಖರೀದಿ ದರ ₹27,190 ಕೋಟಿ. ಖರೀದಿಸಿದ ಮೊತ್ತ ₹27,895 ಕೋಟಿ. ಇದರಿಂದ ಕಂಪನಿಗೆ ₹1,678 ಕೋಟಿ ನಷ್ಟವಾಗಿದೆ. ₹38 ಕೋಟಿ ಕಾರ್ಯನಿರ್ವಹಣಾ ವೆಚ್ಚ, ₹57.48 ಕೋಟಿ ಬಡ್ಡಿ ಮತ್ತು ಹಣಕಾಸು ವೆಚ್ಚ, ₹91.47 ಕೋಟಿ ಇತರೆ ಆದಾಯ ಖೋತಾ ಸೇರಿ ಬೆಸ್ಕಾಂ ಒಂದೇ ₹2,802.80 ಕೋಟಿ ನಷ್ಟ ಅನುಭವಿಸಿದೆ ಎಂದು ವಿವರ ನೀಡಿದರು. </p>.<p>ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೂ ₹25,076 ಕೋಟಿ ಭರಿಸುವ ಮೂಲಕ ಜನರ ವಿದ್ಯುತ್ ಶುಲ್ಕ ಪಾವತಿ ಭಾರ ಕಡಿಮೆ ಮಾಡಿದೆ. ನೇಕಾರರ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಪೂರೈಸಲಾಗಿದೆ. ಗ್ರಾಮ ವ್ಯಾಪ್ತಿಯ ಕೈಗಾರಿಕೆಗಳಿಗೆ ಪ್ರತಿ ಯೂನಿಟ್ಗೆ 20 ಪೈಸೆ ರಿಯಾಯಿತಿ ನೀಡಲಾಗಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೇರಿ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳು ಒಟ್ಟು ₹4,516 ಕೋಟಿ ನಷ್ಟದಲ್ಲಿವೆ. ಆದರೂ ಏಪ್ರಿಲ್ 1ರಿಂದ ಗೃಹ ಬಳಕೆಯ ವಿದ್ಯುತ್ ದರ ಹೆಚ್ಚಳ ಮಾಡುತ್ತಿಲ್ಲ ಎಂದು ಸಭಾನಾಯಕ ಎನ್.ಎಸ್.ಬೋಸರಾಜು ಹೇಳಿದರು. </p>.<p>ವಿಧಾನಪರಿಷತ್ನಲ್ಲಿ ಬಿಜೆಪಿಯ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಪರವಾಗಿ ಉತ್ತರ ನೀಡಿದ ಅವರು, ‘ಐದು ಎಸ್ಕಾಂಗಳು ನಷ್ಟದಲ್ಲಿದ್ದರೂ ನಾಗರಿಕ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2025ನೇ ಮಾರ್ಚ್ನಲ್ಲೇ 2027–28ನೇ ಸಾಲಿನವರೆಗೆ ಬಹು ವಾರ್ಷಿಕ ದರ ಪರಿಷ್ಕರಣೆ ಆದೇಶ ಹೊರಡಿಸಿತ್ತು. ಅದೇ ವರ್ಷದ ನವೆಂಬರ್ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಗೃಹ ಬಳಕೆ ವಿದ್ಯುತ್ ಶುಲ್ಕ ಹೆಚ್ಚಿಸುವ ಪ್ರಸ್ತಾವ ಸಲ್ಲಿಸಿಲ್ಲ ಎಂದು ಮಾಹಿತಿ ನೀಡಿದರು. </p>.<p>ನಷ್ಟದಲ್ಲಿರುವ ಕಂಪನಿಗಳಲ್ಲಿ ಬೆಸ್ಕಾಂ ಸಿಂಹಪಾಲು ಹೊಂದಿದೆ. ಆಯೋಗವು 2024–25ನೇ ಸಾಲಿನಲ್ಲಿ ವಿದ್ಯುತ್ ಬಳಕೆಯ ಸರಾಸರಿ ದರವನ್ನು ಪ್ರತಿ ಯೂನಿಟ್ಗೆ ₹9.54 ನಿಗದಿ ಮಾಡಿತ್ತು. ಆದರೆ, ಬೆಸ್ಕಾಂ ಗ್ರಾಹಕರಿಂದ ಪಡೆದಿದ್ದು ₹8.59 ಮಾತ್ರ. ನಿಗದಿ ಮಾಡಿದ ವಿದ್ಯುತ್ ಖರೀದಿ ದರ ₹27,190 ಕೋಟಿ. ಖರೀದಿಸಿದ ಮೊತ್ತ ₹27,895 ಕೋಟಿ. ಇದರಿಂದ ಕಂಪನಿಗೆ ₹1,678 ಕೋಟಿ ನಷ್ಟವಾಗಿದೆ. ₹38 ಕೋಟಿ ಕಾರ್ಯನಿರ್ವಹಣಾ ವೆಚ್ಚ, ₹57.48 ಕೋಟಿ ಬಡ್ಡಿ ಮತ್ತು ಹಣಕಾಸು ವೆಚ್ಚ, ₹91.47 ಕೋಟಿ ಇತರೆ ಆದಾಯ ಖೋತಾ ಸೇರಿ ಬೆಸ್ಕಾಂ ಒಂದೇ ₹2,802.80 ಕೋಟಿ ನಷ್ಟ ಅನುಭವಿಸಿದೆ ಎಂದು ವಿವರ ನೀಡಿದರು. </p>.<p>ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೂ ₹25,076 ಕೋಟಿ ಭರಿಸುವ ಮೂಲಕ ಜನರ ವಿದ್ಯುತ್ ಶುಲ್ಕ ಪಾವತಿ ಭಾರ ಕಡಿಮೆ ಮಾಡಿದೆ. ನೇಕಾರರ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಪೂರೈಸಲಾಗಿದೆ. ಗ್ರಾಮ ವ್ಯಾಪ್ತಿಯ ಕೈಗಾರಿಕೆಗಳಿಗೆ ಪ್ರತಿ ಯೂನಿಟ್ಗೆ 20 ಪೈಸೆ ರಿಯಾಯಿತಿ ನೀಡಲಾಗಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>