<p>ಗದಗ: ‘ಕಾರ್ಲ್ಮಾರ್ಕ್ಸ್ನ ಮರಿಗಳಾದ ಕಮ್ಯುನಿಸ್ಟರು 10 ಕೋಟಿ ಜನರ ಕಗ್ಗೊಲೆ ಮಾಡಿದರು. ಧರ್ಮ, ಸಂಸ್ಕೃತಿ ಹಾಳು ಮಾಡಿದರು. ಇಂತಹವರು ಬಸವಣ್ಣನ ಧ್ವಜದ ಕೆಳಗೆ ಬರಲು ಯತ್ನಿಸುತ್ತಿದ್ದಾರೆ’ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.</p>.<p>ನಗರದಲ್ಲಿ ಹಿಂದೂ ಸರ್ವ ಸಮಾಜಗಳ ಒಕ್ಕೂಟದಿಂದ ಭಾನುವಾರ ಸಂಜೆ ನಡೆದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.</p>.<p>‘ಇತಿಹಾಸದಲ್ಲಿ ದೇಶಗಳನ್ನೇ ಬಿಕಾರಿ ಮಾಡಿದ ಇವರು, ಭಾರತದ ಸಂಸ್ಕೃತಿ ಛಿದ್ರ ಮಾಡುವಂತಹ ಕೆಟ್ಟ ಆಲೋಚನೆ ಮಾಡುತ್ತಿ ದ್ದಾರೆ. ಎಲ್ಲರನ್ನೂ ಒಗ್ಗೂಡಿಸಿದವರು ಬಸವಣ್ಣ. ಅವರ ಹೆಸರು ಹೇಳಿಕೊಂಡು ಈ ಅತೃಪ್ತ ಆತ್ಮಗಳು ತಾರತಮ್ಯ ಮಾಡುತ್ತಿವೆ’ ಎಂದು ಆರೋಪಿಸಿದರು.</p>.<p>‘ಬಸವಣ್ಣನರನ್ನು ಜಾತಿ, ಪ್ರದೇಶಕ್ಕೆ ಕಟ್ಟಿಹಾಕಲು ಯತ್ನಿಸುತ್ತಿದ್ದಾರೆ. ಶುದ್ಧ ಹಿಂದೂ ಧರ್ಮ ನೀಡಿದವರು ಬಸವಣ್ಣ. ಅವರ ಹೆಸರು ಹೇಳಿಕೊಂಡು ದೇಶಕ್ಕೆ ಹಾನಿ ಮಾಡುತ್ತಿದ್ದಾರೆ. ಈ ಮುಖವಾಡದೊಳಗೆ ಧರ್ಮ ಒಡೆಯುವ ಹುನ್ನಾರವಿದೆ’ ಎಂದರು.</p>.<p>‘ಬಸವಣ್ಣನ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರ ನಡೆ- ನುಡಿ ಬೇರೆಯೇ ಇದೆ. ಈ ಕ್ಷುದ್ರ ಶಕ್ತಿಯನ್ನು ಕ್ಷೀಣಗೊಳಿಸಬೇಕಿದೆ. ದೇಶ ಹಾಳಾಗಲು ಸಜ್ಜನರ ನಿಷ್ಕ್ರಿಯತೆ ಕಾರಣ’ ಎಂದರು.</p>.<p>‘ಲಿಂಗಾಯತರು ಹಿಂದೂಗಳಲ್ಲ ಎನ್ನುವ ಕಮ್ಯುನಿಸ್ಟರು ಒಂದು ಸುಳ್ಳನ್ನು ನೂರು ಬಾರಿ ಹೇಳಿ, ಸತ್ಯವಾಗಿಸಲು ಯತ್ನಿಸುತ್ತಾರೆ. ಬಸವಣ್ಣನವರನ್ನು ಕಾರ್ಲ್ ಮಾರ್ಕ್ಸ್ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ‘ ಎಂದರು.</p>.<p>‘ಈ ಸಮಾವೇಶವನ್ನು ಹಲವರು ವಿರೋಧಿಸಿದರು. ಬಸವಾದಿ ಶರಣರ ಹೆಸರಿಟ್ಟಿದ್ದು ಅವರ ಹೊಟ್ಟೆಯೊಳಗೆ ಖಾರ ಕಲಿಸಿದಂತಾಯಿತು. ಅವರು ಬಸವಣ್ಣನ ಹೆಸರಿನ ಗುತ್ತಿಗೆ ಹಿಡಿದವರೆಂದು ಅಂದುಕೊಂಡಿದ್ದಾರೆ’ ಎಂದರು.</p>.<p>‘ಧರ್ಮ ಒಡೆಯುವುದನ್ನು ತಡೆಯಲು ಒಗ್ಗಟ್ಟಾಗಿರಬೇಕು. ಶರಣರ ಶಿವ ಬೇರೆ, ಬಸವಣ್ಣನವರು ವೇದ, ಉಪನಿಷತ್ ತಿರಸ್ಕರಿದ್ದಾರೆ ಎಂಬ ಹೇಳಿಕೆಯಲ್ಲಿ ದೇಶದ ಮೂಲವನ್ನು ಭಸ್ಮಗೊಳಿಸುವ ಹುನ್ನಾರವಿದೆ. ಶರಣರ ವಚನಗಳಲ್ಲಿ ವೇದ, ಉಪನಿಷತ್, ಶಾಸ್ತ್ರ, ಉಗಮ ಪ್ರತಿಪಾದಿಸಲಾಗಿದೆ‘ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-20-1418612671</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗದಗ: ‘ಕಾರ್ಲ್ಮಾರ್ಕ್ಸ್ನ ಮರಿಗಳಾದ ಕಮ್ಯುನಿಸ್ಟರು 10 ಕೋಟಿ ಜನರ ಕಗ್ಗೊಲೆ ಮಾಡಿದರು. ಧರ್ಮ, ಸಂಸ್ಕೃತಿ ಹಾಳು ಮಾಡಿದರು. ಇಂತಹವರು ಬಸವಣ್ಣನ ಧ್ವಜದ ಕೆಳಗೆ ಬರಲು ಯತ್ನಿಸುತ್ತಿದ್ದಾರೆ’ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.</p>.<p>ನಗರದಲ್ಲಿ ಹಿಂದೂ ಸರ್ವ ಸಮಾಜಗಳ ಒಕ್ಕೂಟದಿಂದ ಭಾನುವಾರ ಸಂಜೆ ನಡೆದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.</p>.<p>‘ಇತಿಹಾಸದಲ್ಲಿ ದೇಶಗಳನ್ನೇ ಬಿಕಾರಿ ಮಾಡಿದ ಇವರು, ಭಾರತದ ಸಂಸ್ಕೃತಿ ಛಿದ್ರ ಮಾಡುವಂತಹ ಕೆಟ್ಟ ಆಲೋಚನೆ ಮಾಡುತ್ತಿ ದ್ದಾರೆ. ಎಲ್ಲರನ್ನೂ ಒಗ್ಗೂಡಿಸಿದವರು ಬಸವಣ್ಣ. ಅವರ ಹೆಸರು ಹೇಳಿಕೊಂಡು ಈ ಅತೃಪ್ತ ಆತ್ಮಗಳು ತಾರತಮ್ಯ ಮಾಡುತ್ತಿವೆ’ ಎಂದು ಆರೋಪಿಸಿದರು.</p>.<p>‘ಬಸವಣ್ಣನರನ್ನು ಜಾತಿ, ಪ್ರದೇಶಕ್ಕೆ ಕಟ್ಟಿಹಾಕಲು ಯತ್ನಿಸುತ್ತಿದ್ದಾರೆ. ಶುದ್ಧ ಹಿಂದೂ ಧರ್ಮ ನೀಡಿದವರು ಬಸವಣ್ಣ. ಅವರ ಹೆಸರು ಹೇಳಿಕೊಂಡು ದೇಶಕ್ಕೆ ಹಾನಿ ಮಾಡುತ್ತಿದ್ದಾರೆ. ಈ ಮುಖವಾಡದೊಳಗೆ ಧರ್ಮ ಒಡೆಯುವ ಹುನ್ನಾರವಿದೆ’ ಎಂದರು.</p>.<p>‘ಬಸವಣ್ಣನ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರ ನಡೆ- ನುಡಿ ಬೇರೆಯೇ ಇದೆ. ಈ ಕ್ಷುದ್ರ ಶಕ್ತಿಯನ್ನು ಕ್ಷೀಣಗೊಳಿಸಬೇಕಿದೆ. ದೇಶ ಹಾಳಾಗಲು ಸಜ್ಜನರ ನಿಷ್ಕ್ರಿಯತೆ ಕಾರಣ’ ಎಂದರು.</p>.<p>‘ಲಿಂಗಾಯತರು ಹಿಂದೂಗಳಲ್ಲ ಎನ್ನುವ ಕಮ್ಯುನಿಸ್ಟರು ಒಂದು ಸುಳ್ಳನ್ನು ನೂರು ಬಾರಿ ಹೇಳಿ, ಸತ್ಯವಾಗಿಸಲು ಯತ್ನಿಸುತ್ತಾರೆ. ಬಸವಣ್ಣನವರನ್ನು ಕಾರ್ಲ್ ಮಾರ್ಕ್ಸ್ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ‘ ಎಂದರು.</p>.<p>‘ಈ ಸಮಾವೇಶವನ್ನು ಹಲವರು ವಿರೋಧಿಸಿದರು. ಬಸವಾದಿ ಶರಣರ ಹೆಸರಿಟ್ಟಿದ್ದು ಅವರ ಹೊಟ್ಟೆಯೊಳಗೆ ಖಾರ ಕಲಿಸಿದಂತಾಯಿತು. ಅವರು ಬಸವಣ್ಣನ ಹೆಸರಿನ ಗುತ್ತಿಗೆ ಹಿಡಿದವರೆಂದು ಅಂದುಕೊಂಡಿದ್ದಾರೆ’ ಎಂದರು.</p>.<p>‘ಧರ್ಮ ಒಡೆಯುವುದನ್ನು ತಡೆಯಲು ಒಗ್ಗಟ್ಟಾಗಿರಬೇಕು. ಶರಣರ ಶಿವ ಬೇರೆ, ಬಸವಣ್ಣನವರು ವೇದ, ಉಪನಿಷತ್ ತಿರಸ್ಕರಿದ್ದಾರೆ ಎಂಬ ಹೇಳಿಕೆಯಲ್ಲಿ ದೇಶದ ಮೂಲವನ್ನು ಭಸ್ಮಗೊಳಿಸುವ ಹುನ್ನಾರವಿದೆ. ಶರಣರ ವಚನಗಳಲ್ಲಿ ವೇದ, ಉಪನಿಷತ್, ಶಾಸ್ತ್ರ, ಉಗಮ ಪ್ರತಿಪಾದಿಸಲಾಗಿದೆ‘ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-20-1418612671</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>