<p><strong>ಗದಗ:</strong> ನಕಲಿ ಠರಾವು ಸೃಷ್ಟಿಸಿದ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಮಾಡಿ ಆದೇಶಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಧಾರವಾಡ ಹೈಕೋರ್ಟ್ನ ದ್ವಿಸದಸ್ಯ ಪೀಠ ರದ್ದುಪಡಿಸಿದೆ. ಬಿಜೆಪಿಯ ಉಷಾ ದಾಸರ, ಅನಿಲ್ ಅಬ್ಬಿಗೇರಿ ಹಾಗೂ ಮುತ್ತು ಮುಶಿಗೇರಿ ಅವರ ಸದಸ್ಯತ್ವವನ್ನು ಊರ್ಜಿತಗೊಳಿಸಿ ಬುಧವಾರ ಆದೇಶಿಸಿದೆ.</p>.<p>ಹೈಕೋರ್ಟ್ನ ದ್ವಿಸದಸ್ಯ ಪೀಠದ ಈ ಆದೇಶದೊಂದಿಗೆ ನಗರಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬಲಾಬಲ ಮತ್ತೇ ಅದಲು ಬದಲಾಗಿದ್ದು, ಮುಂದೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಬಿಜೆಪಿ ಸರಳ ಬಹುಮತದೊಂದಿಗೆ ಗದ್ದುಗೆ ಏರುವುದು ನಿಚ್ಚಳವಾಗಿದೆ.</p>.<p>ಪ್ರಕರಣದ ಹಿನ್ನಲೆ: ನಕಲಿ ಠರಾವು ಸೃಷ್ಟಿಸಿ, ಪೌರಾಯುಕ್ತರ ಸಹಿ ಪೋರ್ಜರಿ ಮಾಡಿದ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ್ ಅಬ್ಬಿಗೇರಿ ಹಾಗೂ ಮುತ್ತು ಮುಶಿಗೇರಿ ಅವರ ಸದಸ್ಯತ್ವವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು.</p>.<p>‘ಪ್ರಾದೇಶಿಕ ಆಯುಕ್ತರು ಸರಿಯಾಗಿ ತನಿಖೆ ನಡೆಸದೇ ಬಿಜೆಪಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ನಮಗೆ ಸದಸ್ಯತ್ವ ಮರಳಿಸಬೇಕು’ ಎಂದು ಬಿಜೆಪಿಗ ಸದಸ್ಯರು ಧಾರವಾಡ ಹೈಕೋರ್ಟ್ನ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಈ ಪ್ರಕರಣ ಇತ್ಯರ್ಥಗೊಳ್ಳದೇ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ನಿಂದ ತಡೆ ಆದೇಶ ತಂದಿದ್ದರು.</p>.<p>ಮುಂದಿನ ಸಾಧ್ಯತೆಗಳು ಏನು?: ಧಾರವಾಡ ಹೈಕೋರ್ಟ್ನ ದ್ವಿಸದಸ್ಯ ಪೀಠ ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಊರ್ಜಿತಗೊಳಿಸಿರುವುದರಿಂದ ಗದ್ದುಗೆ ಗುದ್ದಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ.</p>.<p>35 ಮಂದಿ ಸದಸ್ಯ ಬಲದ ಗದಗ ಬೆಟಗೇರಿ ನಗರಸಭೆಯಲ್ಲಿ ಪ್ರಸ್ತುತ 18 ಮಂದಿ ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಸೇರಿ 17 ಮಂದಿ ಕಾಂಗ್ರೆಸ್ ಸದಸ್ಯರು ಇದ್ದಾರೆ.</p>.<p>ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಡುವ ಶಾಸಕ, ಸಂಸದರಿಗೂ ಮತದಾನ ಹಕ್ಕು ಇರುತ್ತದೆ. ಅದರಂತೆ ಕಾಂಗ್ರೆಸ್ಗೆ 1, ಬಿಜೆಪಿಗೆ 1 ಹೆಚ್ಚುವರಿ ಮತ ಸಿಗಲಿದ್ದು, ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ.</p>.<p>‘ಧಾರವಾಡ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ದ್ವಿಸದಸ್ಯ ಪೀಠ, ಬಿಜೆಪಿಯ ಮೂರು ಮಂದಿ ಸದಸ್ಯತ್ವವನ್ನು ಮರಳಿಸಿದೆ. ಪ್ರಕರಣ ಇತ್ಯರ್ಥಗೊಳ್ಳದೇ ಚುನಾವಣೆ ನಡೆಸದಂತೆ ಸುಪ್ರೀಂ ಕೋರ್ಟ್ನಿಂದ ತಂದಿದ್ದ ಅರ್ಜಿ ವಾಪಸ್ ಪಡೆದರೆ ಮುಂದೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈಗ ನಗರಸಭೆಯಲ್ಲಿ ನಮ್ಮ ಸಂಖ್ಯಾಬಲ ಮೊದಲಿನಂತೆ ಹೆಚ್ಚಾಗಿದ್ದು, ಮತ್ತೇ ಬಿಜೆಪಿಯೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ’ ಎಂದು ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯ ಚಂದ್ರು ತಡಸದ ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ಧಾರವಾಡ ಹೈಕೋರ್ಟ್ನ ಕೋರ್ಟ್ ಹಾಲ್ ಸಂಖ್ಯೆ 2ರಲ್ಲಿ ಬುಧವಾರ ನ್ಯಾಯಾಧೀಶರಾದ ಬಿ.ಎಂ.ಶ್ಯಾಮಪ್ರಸಾದ್ ಹಾಗೂ ಶಿವಶಂಕರ ಅಮರಣ್ಣವರ ರಿಟ್ ಅರ್ಜಿಯ ವಿಚಾರಣೆ ನಡೆಸಿದರು. ಬಿಜೆಪಿ ಪರವಾಗಿ ವಕೀಲರಾದ ಪ್ರಭುಲಿಂಗ ನಾನದಗಿ, ಮೃತ್ಯುಂಜಯ ಹಳ್ಳಿಕೇರಿ ವಾದ ಮಂಡಿಸಿದರು. ಸದ್ಯ ಕಾಂಗ್ರೆಸ್ನವರಿಗೆ ಎಲ್ಲ ಕಡೆಯಿಂದಲೂ ಬಾಗಿಲು ಮುಚ್ಚಿದೆ. ಬಿಜೆಪಿಗೆ ಮುಂದೆ ಯಾವುದೇ ರೀತಿಯ ಕಾನೂನು ತೊಡಕುಗಳು ಎದುರಾಗದು’ ಎಂದು ಹೇಳಿದರು.ದೆ ಚಂದ್ರು ತಡಸದ, ನಗರಸಭೆಯ <br>ಬಿಜೆಪಿ ಸದಸ್ಯ</p>.<div><blockquote>ಸತ್ಯ ಗೆದ್ದಿದೆ. ನ್ಯಾಯ ನಮ್ಮ ಪರವಾಗಿದೆ. ಇಷ್ಟು ದಿನಗಳ ಕಾನೂನು ಹೋರಾಟ ಈಗ ಅಂತಿಮ ಹಂತ ತಲುಪಿದ್ದು, ಬಿಜೆಪಿ ಮತ್ತೇ ಗದಗ ಬೆಟಗೇರಿ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ</blockquote><span class="attribution"> ಚಂದ್ರು ತಡಸದ, ನಗರಸಭೆಯ ಬಿಜೆಪಿ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ನಕಲಿ ಠರಾವು ಸೃಷ್ಟಿಸಿದ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಮಾಡಿ ಆದೇಶಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಧಾರವಾಡ ಹೈಕೋರ್ಟ್ನ ದ್ವಿಸದಸ್ಯ ಪೀಠ ರದ್ದುಪಡಿಸಿದೆ. ಬಿಜೆಪಿಯ ಉಷಾ ದಾಸರ, ಅನಿಲ್ ಅಬ್ಬಿಗೇರಿ ಹಾಗೂ ಮುತ್ತು ಮುಶಿಗೇರಿ ಅವರ ಸದಸ್ಯತ್ವವನ್ನು ಊರ್ಜಿತಗೊಳಿಸಿ ಬುಧವಾರ ಆದೇಶಿಸಿದೆ.</p>.<p>ಹೈಕೋರ್ಟ್ನ ದ್ವಿಸದಸ್ಯ ಪೀಠದ ಈ ಆದೇಶದೊಂದಿಗೆ ನಗರಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬಲಾಬಲ ಮತ್ತೇ ಅದಲು ಬದಲಾಗಿದ್ದು, ಮುಂದೆ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಬಿಜೆಪಿ ಸರಳ ಬಹುಮತದೊಂದಿಗೆ ಗದ್ದುಗೆ ಏರುವುದು ನಿಚ್ಚಳವಾಗಿದೆ.</p>.<p>ಪ್ರಕರಣದ ಹಿನ್ನಲೆ: ನಕಲಿ ಠರಾವು ಸೃಷ್ಟಿಸಿ, ಪೌರಾಯುಕ್ತರ ಸಹಿ ಪೋರ್ಜರಿ ಮಾಡಿದ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ್ ಅಬ್ಬಿಗೇರಿ ಹಾಗೂ ಮುತ್ತು ಮುಶಿಗೇರಿ ಅವರ ಸದಸ್ಯತ್ವವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದರು.</p>.<p>‘ಪ್ರಾದೇಶಿಕ ಆಯುಕ್ತರು ಸರಿಯಾಗಿ ತನಿಖೆ ನಡೆಸದೇ ಬಿಜೆಪಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ನಮಗೆ ಸದಸ್ಯತ್ವ ಮರಳಿಸಬೇಕು’ ಎಂದು ಬಿಜೆಪಿಗ ಸದಸ್ಯರು ಧಾರವಾಡ ಹೈಕೋರ್ಟ್ನ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಈ ಪ್ರಕರಣ ಇತ್ಯರ್ಥಗೊಳ್ಳದೇ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ನಿಂದ ತಡೆ ಆದೇಶ ತಂದಿದ್ದರು.</p>.<p>ಮುಂದಿನ ಸಾಧ್ಯತೆಗಳು ಏನು?: ಧಾರವಾಡ ಹೈಕೋರ್ಟ್ನ ದ್ವಿಸದಸ್ಯ ಪೀಠ ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಊರ್ಜಿತಗೊಳಿಸಿರುವುದರಿಂದ ಗದ್ದುಗೆ ಗುದ್ದಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ.</p>.<p>35 ಮಂದಿ ಸದಸ್ಯ ಬಲದ ಗದಗ ಬೆಟಗೇರಿ ನಗರಸಭೆಯಲ್ಲಿ ಪ್ರಸ್ತುತ 18 ಮಂದಿ ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಸೇರಿ 17 ಮಂದಿ ಕಾಂಗ್ರೆಸ್ ಸದಸ್ಯರು ಇದ್ದಾರೆ.</p>.<p>ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಡುವ ಶಾಸಕ, ಸಂಸದರಿಗೂ ಮತದಾನ ಹಕ್ಕು ಇರುತ್ತದೆ. ಅದರಂತೆ ಕಾಂಗ್ರೆಸ್ಗೆ 1, ಬಿಜೆಪಿಗೆ 1 ಹೆಚ್ಚುವರಿ ಮತ ಸಿಗಲಿದ್ದು, ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ.</p>.<p>‘ಧಾರವಾಡ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ರದ್ದುಪಡಿಸಿರುವ ದ್ವಿಸದಸ್ಯ ಪೀಠ, ಬಿಜೆಪಿಯ ಮೂರು ಮಂದಿ ಸದಸ್ಯತ್ವವನ್ನು ಮರಳಿಸಿದೆ. ಪ್ರಕರಣ ಇತ್ಯರ್ಥಗೊಳ್ಳದೇ ಚುನಾವಣೆ ನಡೆಸದಂತೆ ಸುಪ್ರೀಂ ಕೋರ್ಟ್ನಿಂದ ತಂದಿದ್ದ ಅರ್ಜಿ ವಾಪಸ್ ಪಡೆದರೆ ಮುಂದೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈಗ ನಗರಸಭೆಯಲ್ಲಿ ನಮ್ಮ ಸಂಖ್ಯಾಬಲ ಮೊದಲಿನಂತೆ ಹೆಚ್ಚಾಗಿದ್ದು, ಮತ್ತೇ ಬಿಜೆಪಿಯೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ’ ಎಂದು ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯ ಚಂದ್ರು ತಡಸದ ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ಧಾರವಾಡ ಹೈಕೋರ್ಟ್ನ ಕೋರ್ಟ್ ಹಾಲ್ ಸಂಖ್ಯೆ 2ರಲ್ಲಿ ಬುಧವಾರ ನ್ಯಾಯಾಧೀಶರಾದ ಬಿ.ಎಂ.ಶ್ಯಾಮಪ್ರಸಾದ್ ಹಾಗೂ ಶಿವಶಂಕರ ಅಮರಣ್ಣವರ ರಿಟ್ ಅರ್ಜಿಯ ವಿಚಾರಣೆ ನಡೆಸಿದರು. ಬಿಜೆಪಿ ಪರವಾಗಿ ವಕೀಲರಾದ ಪ್ರಭುಲಿಂಗ ನಾನದಗಿ, ಮೃತ್ಯುಂಜಯ ಹಳ್ಳಿಕೇರಿ ವಾದ ಮಂಡಿಸಿದರು. ಸದ್ಯ ಕಾಂಗ್ರೆಸ್ನವರಿಗೆ ಎಲ್ಲ ಕಡೆಯಿಂದಲೂ ಬಾಗಿಲು ಮುಚ್ಚಿದೆ. ಬಿಜೆಪಿಗೆ ಮುಂದೆ ಯಾವುದೇ ರೀತಿಯ ಕಾನೂನು ತೊಡಕುಗಳು ಎದುರಾಗದು’ ಎಂದು ಹೇಳಿದರು.ದೆ ಚಂದ್ರು ತಡಸದ, ನಗರಸಭೆಯ <br>ಬಿಜೆಪಿ ಸದಸ್ಯ</p>.<div><blockquote>ಸತ್ಯ ಗೆದ್ದಿದೆ. ನ್ಯಾಯ ನಮ್ಮ ಪರವಾಗಿದೆ. ಇಷ್ಟು ದಿನಗಳ ಕಾನೂನು ಹೋರಾಟ ಈಗ ಅಂತಿಮ ಹಂತ ತಲುಪಿದ್ದು, ಬಿಜೆಪಿ ಮತ್ತೇ ಗದಗ ಬೆಟಗೇರಿ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ</blockquote><span class="attribution"> ಚಂದ್ರು ತಡಸದ, ನಗರಸಭೆಯ ಬಿಜೆಪಿ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>