<p><strong>ಬೆಂಗಳೂರು</strong>: ‘ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ನಿಯಮಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಚಟುವಟಿಕೆ ತೀವ್ರ ಹಿನ್ನಡೆ ಉಂಟಾಗಿದೆ’ ಎಂದು ಬಿಜೆಪಿಯ ಗುರುರಾಜ ಗಂಟಿಹೊಳೆ ಅವರು ವಿಧಾನಸಭೆಯಲ್ಲಿ ಗುರುವಾರ ಖಾಸಗಿ ನಿರ್ಣಯ ಮಂಡಿಸಿ, ‘ವಿಶಿಷ್ಟ ಅಧಿಕಾರ ಇರುವ ಮಂಡಳಿ ರಚಿಸಬೇಕು’ ಎಂದು ಆಗ್ರಹಿಸಿದರು.</p>.<p>ಅದಕ್ಕೆ ಪ್ರತಿಕ್ರಿಯಿಸಿದ ಯೋಜನಾ ಸಚಿವ ಡಿ. ಸುಧಾಕರ್, ‘ಈ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೆ ತರುತ್ತೇನೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಕರಾವಳಿ ಭಾಗದ ಜನಪ್ರತಿನಿಧಿಗಳ ಸಭೆ ನಡೆಸುತ್ತೇವೆ. ಅಲ್ಲಿ ಬರುವ ಸಲಹೆ-ಶಿಫಾರಸುಗಳ ಆಧಾರದಲ್ಲಿ ಪ್ರತ್ಯೇಕ ನೀತಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.</p>.<p>ನಿರ್ಣಯ ಮಂಡಿಸಿ ಮಾತನಾಡಿದ ಗಂಟಿಹೊಳೆ, ‘ಕರಾವಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬೇಡ. ಬದಲಿಗೆ ಅಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ನೀತಿ-ನಿರೂಪಣೆಗಳಲ್ಲಿ ಸಮಸ್ಯೆ ಆಗುತ್ತಿದೆ’ ಎಂದರು.</p>.<p>‘ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರತ್ಯೇಕ ಅಧಿಕಾರಯುತ ಮಂಡಳಿ ರಚಿಸಬೇಕು. ಇಲ್ಲದಿದ್ದರೆ ಸಿಆರ್ಝಡ್ ಹೊರತಾಗಿಯೂ ಆದೇಶ ಮಾಡುವಂತೆ ಅಧಿಕಾರ ಕಲ್ಪಿಸಲು ‘ಕರಾವಳಿ ಅಭಿವೃದ್ಧಿ ಮಂಡಳಿ ಕಾಯ್ದೆ 2023’ಕ್ಕೆ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿದರು.</p>.<p>‘ಅನ್ಯ ಭಾಗಕ್ಕೆ ಅನ್ವಯ ಆಗುವಂತಹ ಕನಿಷ್ಠ 100 ಸಮಸ್ಯೆಗಳನ್ನು ಕರಾವಳಿ ಭಾಗದಲ್ಲಿ ಗುರುತಿಸಬಹುದು. ಕಡಲು ಕೊರೆತ, ಅತಿವೃಷ್ಟಿ, ಅಪಾಯಕಾರಿ ಮೀನುಗಾರಿಕೆ ಸೇರಿದಂತೆ ವಿಭಿನ್ನ ಭೌಗೋಳಿಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ’ ಎಂದರು.</p>.<p>ದನಿಗೂಡಿಸಿದ ಕಾಂಗ್ರೆಸ್ನ ಅಶೋಕ್ ಕುಮಾರ್ ರೈ, ‘ರಾಜ್ಯದ ಕರಾವಳಿ ಭಾಗದಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಸಿಆರ್ಝಡ್ ನಿಯಮಗಳಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆ ಆಗುತ್ತಿದೆ. ಮುಂಬೈ ಮಾದರಿಯಲ್ಲಿ ಇಲ್ಲಿಯೂ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಅಗತ್ಯ ನೀತಿ-ನಿರೂಪಣೆ ಜತೆಗೆ ಅನುದಾನ ಒದಗಿಸಬೇಕು’ ಎಂದರು.</p>.<p>ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, ‘ಯಾವುದೇ ಆರ್ಥಿಕ ಅನುದಾನ ಕೇಳದೆ ನೀತಿ ಕೇಳುತ್ತಿದ್ದೀರಿ. ಇದನ್ನು ಸ್ವಾಗತಿಸುತ್ತೇನೆ. ಸರ್ಕಾರ ಈಗಾಗಲೇ ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ (ಲೀಪ್) ಜಾರಿ ಮಾಡುತ್ತಿದೆ. ಅದರಡಿ ಯಾವುದೇ ಸಲಹೆಗಳನ್ನು ಆ ಭಾಗದ ಶಾಸಕರು ನೀಡಬಹುದು. ಅದನ್ನು ಸರ್ಕಾರ ಮುಕ್ತವಾಗಿ ಸ್ವೀಕರಿಸಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ನಿಯಮಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಚಟುವಟಿಕೆ ತೀವ್ರ ಹಿನ್ನಡೆ ಉಂಟಾಗಿದೆ’ ಎಂದು ಬಿಜೆಪಿಯ ಗುರುರಾಜ ಗಂಟಿಹೊಳೆ ಅವರು ವಿಧಾನಸಭೆಯಲ್ಲಿ ಗುರುವಾರ ಖಾಸಗಿ ನಿರ್ಣಯ ಮಂಡಿಸಿ, ‘ವಿಶಿಷ್ಟ ಅಧಿಕಾರ ಇರುವ ಮಂಡಳಿ ರಚಿಸಬೇಕು’ ಎಂದು ಆಗ್ರಹಿಸಿದರು.</p>.<p>ಅದಕ್ಕೆ ಪ್ರತಿಕ್ರಿಯಿಸಿದ ಯೋಜನಾ ಸಚಿವ ಡಿ. ಸುಧಾಕರ್, ‘ಈ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೆ ತರುತ್ತೇನೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಕರಾವಳಿ ಭಾಗದ ಜನಪ್ರತಿನಿಧಿಗಳ ಸಭೆ ನಡೆಸುತ್ತೇವೆ. ಅಲ್ಲಿ ಬರುವ ಸಲಹೆ-ಶಿಫಾರಸುಗಳ ಆಧಾರದಲ್ಲಿ ಪ್ರತ್ಯೇಕ ನೀತಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.</p>.<p>ನಿರ್ಣಯ ಮಂಡಿಸಿ ಮಾತನಾಡಿದ ಗಂಟಿಹೊಳೆ, ‘ಕರಾವಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬೇಡ. ಬದಲಿಗೆ ಅಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ನೀತಿ-ನಿರೂಪಣೆಗಳಲ್ಲಿ ಸಮಸ್ಯೆ ಆಗುತ್ತಿದೆ’ ಎಂದರು.</p>.<p>‘ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರತ್ಯೇಕ ಅಧಿಕಾರಯುತ ಮಂಡಳಿ ರಚಿಸಬೇಕು. ಇಲ್ಲದಿದ್ದರೆ ಸಿಆರ್ಝಡ್ ಹೊರತಾಗಿಯೂ ಆದೇಶ ಮಾಡುವಂತೆ ಅಧಿಕಾರ ಕಲ್ಪಿಸಲು ‘ಕರಾವಳಿ ಅಭಿವೃದ್ಧಿ ಮಂಡಳಿ ಕಾಯ್ದೆ 2023’ಕ್ಕೆ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸಿದರು.</p>.<p>‘ಅನ್ಯ ಭಾಗಕ್ಕೆ ಅನ್ವಯ ಆಗುವಂತಹ ಕನಿಷ್ಠ 100 ಸಮಸ್ಯೆಗಳನ್ನು ಕರಾವಳಿ ಭಾಗದಲ್ಲಿ ಗುರುತಿಸಬಹುದು. ಕಡಲು ಕೊರೆತ, ಅತಿವೃಷ್ಟಿ, ಅಪಾಯಕಾರಿ ಮೀನುಗಾರಿಕೆ ಸೇರಿದಂತೆ ವಿಭಿನ್ನ ಭೌಗೋಳಿಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ’ ಎಂದರು.</p>.<p>ದನಿಗೂಡಿಸಿದ ಕಾಂಗ್ರೆಸ್ನ ಅಶೋಕ್ ಕುಮಾರ್ ರೈ, ‘ರಾಜ್ಯದ ಕರಾವಳಿ ಭಾಗದಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಸಿಆರ್ಝಡ್ ನಿಯಮಗಳಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆ ಆಗುತ್ತಿದೆ. ಮುಂಬೈ ಮಾದರಿಯಲ್ಲಿ ಇಲ್ಲಿಯೂ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಅಗತ್ಯ ನೀತಿ-ನಿರೂಪಣೆ ಜತೆಗೆ ಅನುದಾನ ಒದಗಿಸಬೇಕು’ ಎಂದರು.</p>.<p>ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, ‘ಯಾವುದೇ ಆರ್ಥಿಕ ಅನುದಾನ ಕೇಳದೆ ನೀತಿ ಕೇಳುತ್ತಿದ್ದೀರಿ. ಇದನ್ನು ಸ್ವಾಗತಿಸುತ್ತೇನೆ. ಸರ್ಕಾರ ಈಗಾಗಲೇ ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ (ಲೀಪ್) ಜಾರಿ ಮಾಡುತ್ತಿದೆ. ಅದರಡಿ ಯಾವುದೇ ಸಲಹೆಗಳನ್ನು ಆ ಭಾಗದ ಶಾಸಕರು ನೀಡಬಹುದು. ಅದನ್ನು ಸರ್ಕಾರ ಮುಕ್ತವಾಗಿ ಸ್ವೀಕರಿಸಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>