ಸಾಹಿತ್ಯ ಈ ಕಾಲಕ್ಕೆ ಅಪ್ರಸ್ತುತ ಸಾಹಿತ್ಯದಿಂದ ಯುವ ತಲೆಮಾರು ದೂರ ಸರಿಯುತ್ತಿದೆ ಎನ್ನುವ ದೂರು–ಆತಂಕದ ಸಂದರ್ಭದಲ್ಲಿ ‘ನಿಚ್ಚಂ ಪೊಸತು’ ಅಪಾರ ಮಹತ್ವದ ಮಾಲಿಕೆ. ಆಯಾ ಕಾಲದ ಮಾಧ್ಯಮವನ್ನು ಬಳಸಿಕೊಂಡೇ ಸಾಹಿತ್ಯವನ್ನು ಸಮುದಾಯಕ್ಕೆ ತಲಪಿಸಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿಯೂ ಈ ಸರಣಿಗೆ ಮಹತ್ವವಿದೆ.