<p><strong>ಹರಿಹರ</strong>: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ (ಪೋಕ್ಸೊ) ಆರೋಪ ಎದುರಿಸುತ್ತಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪದಚ್ಯುತ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರನ್ನು ಪೊಲೀಸರು ಗುರುವಾರ ಸುದೀರ್ಘ ವಿಚಾರಣೆ ನಡೆಸಿದರು.</p>.<p>ಭಕ್ತರ ಕಾರಿನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಗೆ ಬೆಳಿಗ್ಗೆ 9ಕ್ಕೆ ಹಾಜರಾದ ಸ್ವಾಮೀಜಿ ಅವರನ್ನು ಮಧ್ಯಾಹ್ನ 2.50 ರವರೆಗೆ ಡಿವೈಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದ ಪೊಲೀಸರ ತಂಡ ವಿಚಾರಣೆಗೆ ಒಳಪಡಿಸಿತು.</p>.<p>ಬಳಿಕ ಪೊಲೀಸರ ಸೂಚನೆಯಂತೆ ಸ್ವಾಮೀಜಿ ನೇರವಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ತೆರಳಿದರು. ಅವರಿಗೆ ‘ಪೋಕ್ಸೊ’ ಪ್ರಕರಣದ ಆರೋಪಿಗಳಿಗೆ ನಡೆಸುವ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ತನಿಖಾ ತಂಡ, ಸ್ವಾಮೀಜಿಗೆ ಮಠಕ್ಕೆ ಮರಳಲು ಅವಕಾಶ ನೀಡಿತು.</p>.<p>ಆಸ್ಪತ್ರೆಯಿಂದ ಹೊರಬಂದ ಸ್ವಾಮೀಜಿ, ‘ಕಾನೂನು ಗೌರವಿಸುತ್ತೇನೆ; ಕಾನೂನು ಪರಿಪಾಲಿಸುತ್ತೇನೆ’ ಎಂದಷ್ಟೇ ಪ್ರತಿಕ್ರಿಯಿಸಿದರು. ಬಂದ ಕಾರಿನಲ್ಲೇ ಮಠಕ್ಕೆ ಮರಳಿದರು.</p>.<p>‘ಮಠದ ವಸತಿ ನಿಲಯದಲ್ಲಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಡಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ‘ಪೋಕ್ಸೊ’ ಪ್ರಕರಣ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ವಚನಾನಂದ ಸ್ವಾಮೀಜಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.</p>.<p><strong>ಪುರುಷತ್ವ ಪರೀಕ್ಷೆಗೆ ಮಾದರಿ ಸಂಗ್ರಹ</strong></p><p>ವಚನಾನಂದ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆಗೆ ಅಗತ್ಯವಿರುವ ಮಾದರಿಗಳನ್ನು ವೈದ್ಯರು ಸಂಗ್ರಹಿಸಿದರು. ತಜ್ಞ ವೈದ್ಯ ಡಾ.ರಾಘವೇಂದ್ರ ದುರ್ಗೋಜಿ ನೇತೃತ್ವದ ವೈದ್ಯರ ತಂಡ ಸ್ವಾಮೀಜಿ ಅವರ ಆರೋಗ್ಯ ತಪಾಸಣೆ ಮಾಡಿತು. ರಕ್ತದೊತ್ತಡ, ನಾಡಿ ಮಿಡಿತ ಪರೀಕ್ಷಿಸಿತು.</p><p>‘ವಚನಾನಂದ ಸ್ವಾಮೀಜಿ ಅವರ ರಕ್ತದ ಮಾದರಿ, ಉಗುರು ಹಾಗೂ ರೋಮಗಳನ್ನು ಸಂಗ್ರಹಿಸಲಾಗಿದೆ. ಒಳ ಉಡುಪು ಸೇರಿದಂತೆ ಅವರು ತೊಟ್ಟಿದ್ದ ಬಟ್ಟೆಗಳನ್ನು ಪಡೆಯಲಾಗಿದೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ<br>ರವಾನಿಸಿ ವರದಿ ಪಡೆಯಲಾಗುತ್ತದೆ. ಲೈಂಗಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ವೈದ್ಯ ಡಾ.ರಾಘವೇಂದ್ರ ದುರ್ಗೋಜಿ ತಿಳಿಸಿದ್ದಾರೆ.</p><p>‘ಆರೋಪಿಯ ಮಾನಸಿಕ ಸ್ಥಿತಿ, ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲಾಗುತ್ತದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಅಭಿಪ್ರಾಯ ನೀಡಲಾಗುವುದು’ ಎಂದು ವೈದ್ಯರು ಪ್ರತಿಕ್ರಿಯಿಸಿದರು.</p>.<div><blockquote>ವಚನಾನಂದ ಸ್ವಾಮೀಜಿ ಹೇಳಿಕೆ ದಾಖಲಿಸಿಕೊಂಡು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಬಂಧಿಸಿಲ್ಲ </blockquote><span class="attribution">ಡಾ.ಎಚ್.ಟಿ.ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-51-1502021353</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ (ಪೋಕ್ಸೊ) ಆರೋಪ ಎದುರಿಸುತ್ತಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪದಚ್ಯುತ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರನ್ನು ಪೊಲೀಸರು ಗುರುವಾರ ಸುದೀರ್ಘ ವಿಚಾರಣೆ ನಡೆಸಿದರು.</p>.<p>ಭಕ್ತರ ಕಾರಿನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಗೆ ಬೆಳಿಗ್ಗೆ 9ಕ್ಕೆ ಹಾಜರಾದ ಸ್ವಾಮೀಜಿ ಅವರನ್ನು ಮಧ್ಯಾಹ್ನ 2.50 ರವರೆಗೆ ಡಿವೈಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದ ಪೊಲೀಸರ ತಂಡ ವಿಚಾರಣೆಗೆ ಒಳಪಡಿಸಿತು.</p>.<p>ಬಳಿಕ ಪೊಲೀಸರ ಸೂಚನೆಯಂತೆ ಸ್ವಾಮೀಜಿ ನೇರವಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ತೆರಳಿದರು. ಅವರಿಗೆ ‘ಪೋಕ್ಸೊ’ ಪ್ರಕರಣದ ಆರೋಪಿಗಳಿಗೆ ನಡೆಸುವ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ತನಿಖಾ ತಂಡ, ಸ್ವಾಮೀಜಿಗೆ ಮಠಕ್ಕೆ ಮರಳಲು ಅವಕಾಶ ನೀಡಿತು.</p>.<p>ಆಸ್ಪತ್ರೆಯಿಂದ ಹೊರಬಂದ ಸ್ವಾಮೀಜಿ, ‘ಕಾನೂನು ಗೌರವಿಸುತ್ತೇನೆ; ಕಾನೂನು ಪರಿಪಾಲಿಸುತ್ತೇನೆ’ ಎಂದಷ್ಟೇ ಪ್ರತಿಕ್ರಿಯಿಸಿದರು. ಬಂದ ಕಾರಿನಲ್ಲೇ ಮಠಕ್ಕೆ ಮರಳಿದರು.</p>.<p>‘ಮಠದ ವಸತಿ ನಿಲಯದಲ್ಲಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಡಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ‘ಪೋಕ್ಸೊ’ ಪ್ರಕರಣ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ವಚನಾನಂದ ಸ್ವಾಮೀಜಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.</p>.<p><strong>ಪುರುಷತ್ವ ಪರೀಕ್ಷೆಗೆ ಮಾದರಿ ಸಂಗ್ರಹ</strong></p><p>ವಚನಾನಂದ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆಗೆ ಅಗತ್ಯವಿರುವ ಮಾದರಿಗಳನ್ನು ವೈದ್ಯರು ಸಂಗ್ರಹಿಸಿದರು. ತಜ್ಞ ವೈದ್ಯ ಡಾ.ರಾಘವೇಂದ್ರ ದುರ್ಗೋಜಿ ನೇತೃತ್ವದ ವೈದ್ಯರ ತಂಡ ಸ್ವಾಮೀಜಿ ಅವರ ಆರೋಗ್ಯ ತಪಾಸಣೆ ಮಾಡಿತು. ರಕ್ತದೊತ್ತಡ, ನಾಡಿ ಮಿಡಿತ ಪರೀಕ್ಷಿಸಿತು.</p><p>‘ವಚನಾನಂದ ಸ್ವಾಮೀಜಿ ಅವರ ರಕ್ತದ ಮಾದರಿ, ಉಗುರು ಹಾಗೂ ರೋಮಗಳನ್ನು ಸಂಗ್ರಹಿಸಲಾಗಿದೆ. ಒಳ ಉಡುಪು ಸೇರಿದಂತೆ ಅವರು ತೊಟ್ಟಿದ್ದ ಬಟ್ಟೆಗಳನ್ನು ಪಡೆಯಲಾಗಿದೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ<br>ರವಾನಿಸಿ ವರದಿ ಪಡೆಯಲಾಗುತ್ತದೆ. ಲೈಂಗಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ವೈದ್ಯ ಡಾ.ರಾಘವೇಂದ್ರ ದುರ್ಗೋಜಿ ತಿಳಿಸಿದ್ದಾರೆ.</p><p>‘ಆರೋಪಿಯ ಮಾನಸಿಕ ಸ್ಥಿತಿ, ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲಾಗುತ್ತದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಅಭಿಪ್ರಾಯ ನೀಡಲಾಗುವುದು’ ಎಂದು ವೈದ್ಯರು ಪ್ರತಿಕ್ರಿಯಿಸಿದರು.</p>.<div><blockquote>ವಚನಾನಂದ ಸ್ವಾಮೀಜಿ ಹೇಳಿಕೆ ದಾಖಲಿಸಿಕೊಂಡು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಬಂಧಿಸಿಲ್ಲ </blockquote><span class="attribution">ಡಾ.ಎಚ್.ಟಿ.ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-51-1502021353</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>