<p><strong>ಬೆಂಗಳೂರು:</strong> ಗಣಿ ಗುತ್ತಿಗೆಯ ಅರಣ್ಯ ಪರವಾನಗಿ (ಎಫ್ಸಿ) ವಿಸ್ತರಣೆಗಾಗಿ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪ್ರಶ್ನಿಸಿ ‘ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ಸ್ ಲಿಮಿಟೆಡ್’ (ಸ್ಮಯೋರ್) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.</p>.<p>ಈ ಸಂಬಂಧ ‘ಸ್ಮಯೋರ್’ನ ಪ್ರತಿನಿಧಿ ನೇಹಾ ಥಾಮಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಕುರಿತಂತೆ ಆದೇಶಿಸಿದೆ. </p>.<p>ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್, ಕಿರಣ್ ವಿ. ರೋಣ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಸರ್ಕಾರ ನೀಡಿರುವ ಡಿಮ್ಯಾಂಡ್ ನೋಟಿಸ್ ಕಾನೂನು ಬದ್ಧವಾಗಿದೆ. ಹಾಗಾಗಿ, ಅರ್ಜಿದಾರರು ಕೋರಿರುವ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದು, ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವಿಧಿಸಲಾಗುವ ಶುಲ್ಕ ಮತ್ತು ಭೂಮಿ ಹಸ್ತಾಂತರ ಪ್ರಕ್ರಿಯೆಗೆ ಸಮ್ಮತಿ ಸೂಚಿಸಿದೆ. </p>.<p>ಈ ಆದೇಶದಿಂದಾಗಿ ಕಂಪನಿಯು, ಅರಣ್ಯ ಇಲಾಖೆಗೆ ₹131.25 ಕೋಟಿಯಷ್ಟು ಪರಿಹಾರಾತ್ಮಕ ಶುಲ್ಕ ಮತ್ತು ಪರ್ಯಾಯ ಭೂಮಿ ಒದಗಿಸಬೇಕಾದ ಅನಿವಾರ್ಯಕ್ಕೆ ಸಿಲುಕಿದಂತಾಗಿದೆ. ‘ಸ್ಮಯೋರ್’ ಪರ ಸುಪ್ರೀಂ ಕೋರ್ಟ್ನ ಪದಾಂಕಿತ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. </p>.<p>ಕೋರಿಕೆ ಏನಿತ್ತು?: ‘ಕೇಂದ್ರ ಅರಣ್ಯ ಸಚಿವಾಲಯ ಹೊರಡಿಸಿರುವ ಮಾರ್ಗದರ್ಶಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಬಳ್ಳಾರಿ ಡಿಸಿಎಫ್ 2025ರ ಜೂನ್ 20ರಂದು ನಮಗೆ ನೀಡಿರುವ ಸಂವಹನ ಪತ್ರವು ಸಂಪೂರ್ಣ ಏಕಪಕ್ಷೀಯ, ಕಾರಣರಹಿತ ಮತ್ತು ಕಾನೂನು ಬಾಹಿರವಾಗಿದೆ. ಆದ್ದರಿಂದ, ಇದನ್ನು ವಜಾಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.</p>.<p>ಪ್ರಕರಣ: ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಮತ್ತು ರಾಮಣಮಲೈ ಅರಣ್ಯ ಪ್ರದೇಶಗಳಲ್ಲಿನ ‘ಸ್ಮಯೋರ್’ ಸಂಸ್ಥೆಯ ಗಣಿ ಗುತ್ತಿಗೆಗಳ 2,678 (1615.64 ಹೆಕ್ಟೇರ್) ಮತ್ತು 2,679 (142.58 ಹೆಕ್ಟೇರ್) ರ ಅರಣ್ಯ ಪರವಾನಗಿ ಅವಧಿಯು 2026ರ ಡಿಸೆಂಬರ್ಗೆ ಮುಕ್ತಾಯಗೊಳ್ಳಲಿದೆ. ಆದರೆ, ಗಣಿ ಗುತ್ತಿಗೆ ಅವಧಿ 2033ರ ಡಿಸೆಂಬರ್ ವರೆಗೆ ಇರುವುದರಿಂದ, ಅಲ್ಲಿಯವರೆಗೂ ಅರಣ್ಯ ಪರವಾನಗಿ ವಿಸ್ತರಿಸಲು ಕಂಪನಿಯು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಮನವಿ ಮಾಡಿತ್ತು.</p>.<p>ಆದರೆ, 2025ರ ಜೂನ್ 20ರಂದು ‘ಸ್ಮಯೋರ್’ಗೆ ‘ಡಿಮ್ಯಾಂಡ್ ನೋಟಿಸ್’ ಜಾರಿ ಮಾಡಿದ್ದ ರಾಜ್ಯ ಸರ್ಕಾರ 714.90 ಹೆಕ್ಟೇರ್ ಪರ್ಯಾಯ ಅರಣ್ಯ ಭೂಮಿ ಮತ್ತು ₹131.25 ಕೋಟಿ ಪರಿಹಾರಾತ್ಮಕ ಅರಣ್ಯೀಕರಣ (ಸಿಎ) ಶುಲ್ಕ ಭರಿಸುವಂತೆ ಸೂಚಿಸಿತ್ತು.</p>.<p>ಈ ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ‘ಸ್ಮಯೋರ್’ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಪನಿ, ‘ನಮ್ಮ ಗಣಿಗಾರಿಕೆ ಪ್ರದೇಶದ 714.90 ಹೆಕ್ಟೇರ್ ಭೂಮಿಯು ಅರಣ್ಯ ಸಂರಕ್ಷಣೆ ಕಾಯ್ದೆ–1980 ಜಾರಿಯಾಗುವುದಕ್ಕೂ ಮೊದಲೇ ಬಳಕೆಯಲ್ಲಿತ್ತು. ಕೇಂದ್ರ ಸರ್ಕಾರದ 2015ರ ಮಾರ್ಗಸೂಚಿಗಳ ಪ್ರಕಾರ, 1980ಕ್ಕೂ ಮುನ್ನ ಬಳಕೆಯಲ್ಲಿದ್ದ ಭೂಮಿಗೆ ಪರ್ಯಾಯ ಅರಣ್ಯ ಭೂಮಿ ಅಥವಾ ಹೆಚ್ಚುವರಿ ಶುಲ್ಕ ನೀಡುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿತ್ತು. ಅಂತೆಯೇ, 2033ರ ವರೆಗೂ ಗುತ್ತಿಗೆ ವಿಸ್ತರಣೆಗೆ ಆದೇಶಿಸಬೇಕು ಎಂದು ಮನವಿ ಮಾಡಿತ್ತು.</p>.<p><strong>ತೀರ್ಪಿನ ಪರಿಣಾಮಗಳು</strong></p><p>l ಭೂಮಿ ಹಸ್ತಾಂತರ: 714.90 ಹೆಕ್ಟೇರ್ ವಿಸ್ತೀರ್ಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಒದಗಿಸಬೇಕಿದೆ.</p><p>l ಮುಂದೇನಾಗಬಹುದು?: ಷರತ್ತುಗಳನ್ನು ಪೂರೈಸದ ಹೊರತು 2026ರ ನಂತರ ಗಣಿಗಾರಿಕೆ ಮುಂದುವರಿಸಲು ಅರಣ್ಯ ಪರವಾನಗಿ ಲಭ್ಯವಾಗುವುದು ಕಷ್ಟಕರವಾಗಲಿದೆ. ಗಣಿ ಸ್ಥಗಿತಗೊಂಡರೆ, ಅದನ್ನು ಹರಾಜಿಗೆ ಹಾಕಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗಣಿ ಗುತ್ತಿಗೆಯ ಅರಣ್ಯ ಪರವಾನಗಿ (ಎಫ್ಸಿ) ವಿಸ್ತರಣೆಗಾಗಿ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪ್ರಶ್ನಿಸಿ ‘ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ಸ್ ಲಿಮಿಟೆಡ್’ (ಸ್ಮಯೋರ್) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.</p>.<p>ಈ ಸಂಬಂಧ ‘ಸ್ಮಯೋರ್’ನ ಪ್ರತಿನಿಧಿ ನೇಹಾ ಥಾಮಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಈ ಕುರಿತಂತೆ ಆದೇಶಿಸಿದೆ. </p>.<p>ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್, ಕಿರಣ್ ವಿ. ರೋಣ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಸರ್ಕಾರ ನೀಡಿರುವ ಡಿಮ್ಯಾಂಡ್ ನೋಟಿಸ್ ಕಾನೂನು ಬದ್ಧವಾಗಿದೆ. ಹಾಗಾಗಿ, ಅರ್ಜಿದಾರರು ಕೋರಿರುವ ಪರಿಹಾರಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದು, ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವಿಧಿಸಲಾಗುವ ಶುಲ್ಕ ಮತ್ತು ಭೂಮಿ ಹಸ್ತಾಂತರ ಪ್ರಕ್ರಿಯೆಗೆ ಸಮ್ಮತಿ ಸೂಚಿಸಿದೆ. </p>.<p>ಈ ಆದೇಶದಿಂದಾಗಿ ಕಂಪನಿಯು, ಅರಣ್ಯ ಇಲಾಖೆಗೆ ₹131.25 ಕೋಟಿಯಷ್ಟು ಪರಿಹಾರಾತ್ಮಕ ಶುಲ್ಕ ಮತ್ತು ಪರ್ಯಾಯ ಭೂಮಿ ಒದಗಿಸಬೇಕಾದ ಅನಿವಾರ್ಯಕ್ಕೆ ಸಿಲುಕಿದಂತಾಗಿದೆ. ‘ಸ್ಮಯೋರ್’ ಪರ ಸುಪ್ರೀಂ ಕೋರ್ಟ್ನ ಪದಾಂಕಿತ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. </p>.<p>ಕೋರಿಕೆ ಏನಿತ್ತು?: ‘ಕೇಂದ್ರ ಅರಣ್ಯ ಸಚಿವಾಲಯ ಹೊರಡಿಸಿರುವ ಮಾರ್ಗದರ್ಶಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಬಳ್ಳಾರಿ ಡಿಸಿಎಫ್ 2025ರ ಜೂನ್ 20ರಂದು ನಮಗೆ ನೀಡಿರುವ ಸಂವಹನ ಪತ್ರವು ಸಂಪೂರ್ಣ ಏಕಪಕ್ಷೀಯ, ಕಾರಣರಹಿತ ಮತ್ತು ಕಾನೂನು ಬಾಹಿರವಾಗಿದೆ. ಆದ್ದರಿಂದ, ಇದನ್ನು ವಜಾಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.</p>.<p>ಪ್ರಕರಣ: ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಮತ್ತು ರಾಮಣಮಲೈ ಅರಣ್ಯ ಪ್ರದೇಶಗಳಲ್ಲಿನ ‘ಸ್ಮಯೋರ್’ ಸಂಸ್ಥೆಯ ಗಣಿ ಗುತ್ತಿಗೆಗಳ 2,678 (1615.64 ಹೆಕ್ಟೇರ್) ಮತ್ತು 2,679 (142.58 ಹೆಕ್ಟೇರ್) ರ ಅರಣ್ಯ ಪರವಾನಗಿ ಅವಧಿಯು 2026ರ ಡಿಸೆಂಬರ್ಗೆ ಮುಕ್ತಾಯಗೊಳ್ಳಲಿದೆ. ಆದರೆ, ಗಣಿ ಗುತ್ತಿಗೆ ಅವಧಿ 2033ರ ಡಿಸೆಂಬರ್ ವರೆಗೆ ಇರುವುದರಿಂದ, ಅಲ್ಲಿಯವರೆಗೂ ಅರಣ್ಯ ಪರವಾನಗಿ ವಿಸ್ತರಿಸಲು ಕಂಪನಿಯು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಮನವಿ ಮಾಡಿತ್ತು.</p>.<p>ಆದರೆ, 2025ರ ಜೂನ್ 20ರಂದು ‘ಸ್ಮಯೋರ್’ಗೆ ‘ಡಿಮ್ಯಾಂಡ್ ನೋಟಿಸ್’ ಜಾರಿ ಮಾಡಿದ್ದ ರಾಜ್ಯ ಸರ್ಕಾರ 714.90 ಹೆಕ್ಟೇರ್ ಪರ್ಯಾಯ ಅರಣ್ಯ ಭೂಮಿ ಮತ್ತು ₹131.25 ಕೋಟಿ ಪರಿಹಾರಾತ್ಮಕ ಅರಣ್ಯೀಕರಣ (ಸಿಎ) ಶುಲ್ಕ ಭರಿಸುವಂತೆ ಸೂಚಿಸಿತ್ತು.</p>.<p>ಈ ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ‘ಸ್ಮಯೋರ್’ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಪನಿ, ‘ನಮ್ಮ ಗಣಿಗಾರಿಕೆ ಪ್ರದೇಶದ 714.90 ಹೆಕ್ಟೇರ್ ಭೂಮಿಯು ಅರಣ್ಯ ಸಂರಕ್ಷಣೆ ಕಾಯ್ದೆ–1980 ಜಾರಿಯಾಗುವುದಕ್ಕೂ ಮೊದಲೇ ಬಳಕೆಯಲ್ಲಿತ್ತು. ಕೇಂದ್ರ ಸರ್ಕಾರದ 2015ರ ಮಾರ್ಗಸೂಚಿಗಳ ಪ್ರಕಾರ, 1980ಕ್ಕೂ ಮುನ್ನ ಬಳಕೆಯಲ್ಲಿದ್ದ ಭೂಮಿಗೆ ಪರ್ಯಾಯ ಅರಣ್ಯ ಭೂಮಿ ಅಥವಾ ಹೆಚ್ಚುವರಿ ಶುಲ್ಕ ನೀಡುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿತ್ತು. ಅಂತೆಯೇ, 2033ರ ವರೆಗೂ ಗುತ್ತಿಗೆ ವಿಸ್ತರಣೆಗೆ ಆದೇಶಿಸಬೇಕು ಎಂದು ಮನವಿ ಮಾಡಿತ್ತು.</p>.<p><strong>ತೀರ್ಪಿನ ಪರಿಣಾಮಗಳು</strong></p><p>l ಭೂಮಿ ಹಸ್ತಾಂತರ: 714.90 ಹೆಕ್ಟೇರ್ ವಿಸ್ತೀರ್ಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಒದಗಿಸಬೇಕಿದೆ.</p><p>l ಮುಂದೇನಾಗಬಹುದು?: ಷರತ್ತುಗಳನ್ನು ಪೂರೈಸದ ಹೊರತು 2026ರ ನಂತರ ಗಣಿಗಾರಿಕೆ ಮುಂದುವರಿಸಲು ಅರಣ್ಯ ಪರವಾನಗಿ ಲಭ್ಯವಾಗುವುದು ಕಷ್ಟಕರವಾಗಲಿದೆ. ಗಣಿ ಸ್ಥಗಿತಗೊಂಡರೆ, ಅದನ್ನು ಹರಾಜಿಗೆ ಹಾಕಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>