<p><strong>ಬೆಂಗಳೂರು:</strong> ಗೌನ್ ಧರಿಸದೇ ನ್ಯಾಯಪೀಠದ ಮುಂದೆ ಹಾಜರಾಗಿ ವಾದ ಮಂಡಿಸಲು ಮುಂದಾದ ಕಿರಿಯ ವಕೀಲೆಯೊಬ್ಬರನ್ನು ರಜಾಕಾಲದ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡಿತು.</p>.<p>ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯೊಂದನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿ ಕಿರಿಯ ವಕೀಲೆಯೊಬ್ಬರು ರಜಾಕಾಲದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠದ ಮುಂದೆ ಮೆಮೊ ಸಲ್ಲಿಸಲು ಮುಂದಾದರು.</p>.<p>ವಕೀಲೆ ಗೌನ್ ಧರಿಸದೇ ಇರುವುದನ್ನು ಗಮನಿಸಿದ ನ್ಯಾ.ಶ್ರೀಶಾನಂದ ಅವರು, ‘ನಿಮ್ಮ ಗೌನ್ ಎಲ್ಲಿ? ಗೌನ್ ಇಲ್ಲದೇ ನ್ಯಾಯಪೀಠದ ಎದುರು ಹಾಜರಾಗಲು ನಿಮಗೆಷ್ಟು ಧೈರ್ಯ?’ ಎಂದು ಕಿಡಿಕಾರಿದರು.</p>.<p>‘ಏನು ಗೌನ್ ಆಫೀಸಿನಲ್ಲೇ ಬಿಟ್ಟು ಬಂದ್ರಾ? ನಿಮ್ಮ ಹಿರಿಯ ವಕೀಲರು ಯಾರು? ನಿಮ್ಮ ಸನ್ನದು ಯಾವಾಗ ನೋಂದಣಿ ಆಗಿದೆ? ಕೋರ್ಟ್ ಅಂದರೆ ತಮಾಷೆ ಎಂದುಕೊಂಡಿದ್ದೀರಾ?’ ಎಂದು ಅಸಮಾಧಾನ ವ್ಯಕ್ತಪಡಿಸಿ, ‘ನೋಂದಣಿ ರದ್ದು ಮಾಡಲು ವಕೀಲರ ಪರಿಷತ್ಗೆ ತಿಳಿಸಿ’ ಎಂದು ಕೋರ್ಟ್ ಅಧಿಕಾರಿಗೆ ಸೂಚಿಸಿದರು.</p>.<p>ಕಡೆಗೆ ವಕೀಲೆಯ ಬೇಷರತ್ ಕ್ಷಮೆಯನ್ನು ಮನ್ನಿಸಿ ತುರ್ತು ವಿಚಾರಣೆಗೆ ಕೋರಿದ್ದ ಮೆಮೊವನ್ನು ಆಧರಿಸಿ ಅರ್ಜಿ ವಿಚಾರಣೆಯನ್ನು ಇದೇ 7ಕ್ಕೆ ನಿಗದಿಪಡಿಸಲು ನಿರ್ದೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗೌನ್ ಧರಿಸದೇ ನ್ಯಾಯಪೀಠದ ಮುಂದೆ ಹಾಜರಾಗಿ ವಾದ ಮಂಡಿಸಲು ಮುಂದಾದ ಕಿರಿಯ ವಕೀಲೆಯೊಬ್ಬರನ್ನು ರಜಾಕಾಲದ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡಿತು.</p>.<p>ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯೊಂದನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿ ಕಿರಿಯ ವಕೀಲೆಯೊಬ್ಬರು ರಜಾಕಾಲದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠದ ಮುಂದೆ ಮೆಮೊ ಸಲ್ಲಿಸಲು ಮುಂದಾದರು.</p>.<p>ವಕೀಲೆ ಗೌನ್ ಧರಿಸದೇ ಇರುವುದನ್ನು ಗಮನಿಸಿದ ನ್ಯಾ.ಶ್ರೀಶಾನಂದ ಅವರು, ‘ನಿಮ್ಮ ಗೌನ್ ಎಲ್ಲಿ? ಗೌನ್ ಇಲ್ಲದೇ ನ್ಯಾಯಪೀಠದ ಎದುರು ಹಾಜರಾಗಲು ನಿಮಗೆಷ್ಟು ಧೈರ್ಯ?’ ಎಂದು ಕಿಡಿಕಾರಿದರು.</p>.<p>‘ಏನು ಗೌನ್ ಆಫೀಸಿನಲ್ಲೇ ಬಿಟ್ಟು ಬಂದ್ರಾ? ನಿಮ್ಮ ಹಿರಿಯ ವಕೀಲರು ಯಾರು? ನಿಮ್ಮ ಸನ್ನದು ಯಾವಾಗ ನೋಂದಣಿ ಆಗಿದೆ? ಕೋರ್ಟ್ ಅಂದರೆ ತಮಾಷೆ ಎಂದುಕೊಂಡಿದ್ದೀರಾ?’ ಎಂದು ಅಸಮಾಧಾನ ವ್ಯಕ್ತಪಡಿಸಿ, ‘ನೋಂದಣಿ ರದ್ದು ಮಾಡಲು ವಕೀಲರ ಪರಿಷತ್ಗೆ ತಿಳಿಸಿ’ ಎಂದು ಕೋರ್ಟ್ ಅಧಿಕಾರಿಗೆ ಸೂಚಿಸಿದರು.</p>.<p>ಕಡೆಗೆ ವಕೀಲೆಯ ಬೇಷರತ್ ಕ್ಷಮೆಯನ್ನು ಮನ್ನಿಸಿ ತುರ್ತು ವಿಚಾರಣೆಗೆ ಕೋರಿದ್ದ ಮೆಮೊವನ್ನು ಆಧರಿಸಿ ಅರ್ಜಿ ವಿಚಾರಣೆಯನ್ನು ಇದೇ 7ಕ್ಕೆ ನಿಗದಿಪಡಿಸಲು ನಿರ್ದೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>