ಗುರುವಾರ ವಿಚಾರಣೆಯ ವೇಳೆ ನ್ಯಾಯಮೂರ್ತಿ ವೀರಪ್ಪ, ‘ಸ್ಮಶಾನ ಭೂಮಿ ಇಲ್ಲದ ಕಡೆ ಗ್ರಾಮಸ್ಥರು ಮುಂದೆ ಬಂದು ಮನವಿ ಸಲ್ಲಿಸಲು ಕೋರಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಹಾಗಿದ್ದರೂ ಜನರು ಮುಂದೆ ಬಂದಿಲ್ಲ’ ಎಂದು ತೀವ್ರ ಬೇಸರ ಹೊರಹಾಕಿದರು. ‘ಜನ ಸ್ವಾರ್ಥಿಗಳಾಗುತ್ತಿದ್ದಾರೆ. ಹಣ ಪಡೆದು ಮತ ಹಾಕುತ್ತಿರುವಾಗ ನ್ಯಾಯಾಲಯಗಳು ಏನನ್ನೂ ಮಾಡಲಾಗದು’ ಪೀಠವು ಬೇಸರ
ವ್ಯಕ್ತಪಡಿಸಿತು.