<p><strong>ಬೆಂಗಳೂರು</strong>: ‘ಮದುವೆಗೂ ಮುಂಚೆ ನಡೆದ ಗಂಡು–ಹೆಣ್ಣಿನ ಮನೆಯವರ ಮಾತುಕತೆಯಲ್ಲಿ ಪ್ರಸ್ತಾಪಿಸಲಾದ ವರದಕ್ಷಿಣೆ ಹಾಗೂ ಮದುವೆಯ ಖರ್ಚುವೆಚ್ಚಗಳಿಗೆ ಸಂಬಂಧಿಸಿದ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಮದುವೆಯ ನಂತರ ಅತ್ತೆ–ಮಾವ, ನಾದಿನಿ ‘ಕ್ರೌರ್ಯ’ ಎಸಗಿದ್ದಾರೆ ಎಂಬ ನಿರಾಧಾರ ಆರೋಪಗಳನ್ನು ಕಾನೂನಿನ ಚೌಕಟ್ಟಿನಲ್ಲಿ ವರದಕ್ಷಿಣೆ ಕಿರುಕುಳವೆಂದು ವ್ಯಾಖ್ಯಾನಿಸಲು ಆಗದು’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ಪ್ರಕಟಿಸಿದೆ.</p><p>‘ನಮ್ಮ ವಿರುದ್ಧ ಬೆಂಗಳೂರಿನ 24ನೇ ಹೆಚ್ಚುವರಿ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿರುವ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಅತ್ತೆ–ಮಾವ ಮತ್ತು ನಾದಿನಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಿದೆ.</p><p>‘ಹಾಲಿ ಪ್ರಕರಣದ ದೂರಿನಲ್ಲಿರುವ ಅಂಶಗಳು, ಮದುವೆ ಸಮಾರಂಭಗಳಲ್ಲಿ ಮಾಡಿದ ಖರ್ಚಿನ ಬಗ್ಗೆ ಮಾತ್ರವೇ ವಿವರಿಸುತ್ತವೆ. ಇದರ ತಳಹದಿಯಲ್ಲಿ ಮದುವೆ ನಂತರ ಗಂಡನ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ವರದಕ್ಷಿಣೆ ಬೇಡಿಕೆ ಆರೋಪದಡಿ ಸಿಲುಕಿಸಲು 498ಎ ಕಲಂ ಅನ್ನು ಅಸ್ತ್ರವಾಗಿ ಬಳಸಲಾಗಿದೆ. ಹೀಗಾಗಿ, ಕೆಲವು ಸಾಮಾನ್ಯ ಜಗಳವನ್ನೇ ಊರುಗೋಲಾಗಿಸಿ ಪುರಾವೆಗಳಿಲ್ಲದ ಆರೋಪಗಳಡಿ ಅವರನ್ನು ವಿವೇಚನಾರಹಿತವಾಗಿ ವಿಚಾರಣೆಯ ಅಗ್ನಿಪರೀಕ್ಷೆಗೆ ಒಳಪಡಿಸುವುದು ಸಲ್ಲ’ ಎಂದು ಸ್ಪಷ್ಟಪಡಿಸಿದೆ.</p><p>‘ಹೆಣ್ಣಿನ ಮನೆಯವರು ಮದುವೆಗೆ ₹50 ಲಕ್ಷ ಖರ್ಚು ಮಾಡುತ್ತೇವೆ ಹಾಗೂ ಏನೆಲ್ಲಾ ವರೋಪಚಾರ ಮಾಡುತ್ತೇವೆ ಎಂಬುದರ ಮಾತಕತೆಗಳೇ ದೂರಿಗೆ ಆಧಾರ. ದೂರುದಾರ ಮಹಿಳೆ (ಪತ್ನಿ) ಗಂಡನ ಮನೆಯಲ್ಲಿ ಕೇವಲ 19 ದಿನಗಳ ಸಂಸಾರ ನಡೆಸಿದ್ದಾರೆ. ಈ ದಿನಗಳಲ್ಲಿ ಎಲ್ಲೂ ಕೂಡಾ ಅರ್ಜಿದಾರರ ವಿರುದ್ಧ ವರದಕ್ಷಿಣೆಗೆ ಬೇಡಿಕೆ ಇರಿಸಿದ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ’ ಎಂಬ ಸೂಕ್ಷ್ಮ ಅಂಶವನ್ನು ನ್ಯಾಯಪೀಠ ಎತ್ತಿಹಿಡಿದಿದೆ.</p><p>‘ಪತಿಯ ವಿರುದ್ಧದ ಖಟ್ಲೆಗಳಲ್ಲಿ ಕುಟುಂಬದ ಮುಗ್ಧ ಸದಸ್ಯರು ಅನಗತ್ಯ ಕಿರುಕುಳಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಈ ದಿಸೆಯಲ್ಲಿ ವಿಚಾರಣಾ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು. ವಯಸ್ಸಾದ ಸಂಬಂಧಿಕರ ವಿರುದ್ಧ ಕಲಂ 498-ಎ ಅನ್ನು ಅನ್ವಯಿಸುವುದು ಮತ್ತು ನಿರ್ದಿಷ್ಟವಲ್ಲದ ಆರೋಪಗಳ ಆಧಾರದಡಿ ಕ್ರಿಮಿನಲ್ ಕಾನೂನನ್ನು ಆಯುಧವಾಗಿ ಝಳಪಿಸುವುದು ತರವಲ್ಲ ಎಂದು ಸುಪ್ರೀ ಕೋರ್ಟ್ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ’ ಎಂಬ ಅಂಶಗಳನ್ನು ತೀರ್ಪಿನಲ್ಲಿ ಒತ್ತಿ ಹೇಳಲಾಗಿದೆ.</p><p><strong>ಪ್ರಕರಣವೇನು?:</strong> ಬೆಂಗಳೂರಿನ ವಧು ಮತ್ತು ಮೈಸೂರಿನ ವರನಿಗೆ 2018ರ ಏಪ್ರಿಲ್ 24ರಂದು ಮೈಸೂರಿನ ಲಲಿತ ಮಹಲ್ನಲ್ಲಿ ವಿಜೃಂಭಣೆಯ ಮದುವೆ ನೆರವೇರಿತ್ತು. 2018ರ ಮೇ 9ರಂದು ಪತಿ ಅಮೆರಿಕಕ್ಕೆ ತೆರಳಿದ್ದರು. ಪತ್ನಿ 19 ದಿನಗಳ ಕಾಲ ಅತ್ತೆ–ಮಾವನ ಮನೆಯಲ್ಲಿದ್ದು ನಂತರ ತವರು ಮನೆಗೆ ವಾಪಸಾಗಿದ್ದರು.</p><p>‘ಗಂಡನ ಮನೆಯಲ್ಲಿದ್ದ ಸಮಯದಲ್ಲಿ ನನಗೆ ಅತ್ತೆ, ಮಾವ ಮತ್ತು ನಾದಿನಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ನೀನು ದಪ್ಪಗಿದ್ದೀಯ ಎಂದು ಜರಿದಿದ್ದಾರೆ’ ಎಂದು ಆರೋಪಿಸಿ ಪತ್ನಿ ಆರು ತಿಂಗಳ ನಂತರ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p><p>ಇದರನ್ವಯ ಪೊಲೀಸರು ತನಿಖೆ ನಡೆಸಿ, ಭಾರತೀಯ ದಂಡ ಸಂಹಿತೆ–1860ರ ಕಲಂ 498ಎ (ವಿವಾಹಿತ ಮಹಿಳೆಯನ್ನು ಪತಿ ಅಥವಾ ಪತಿಯ ಸಂಬಂಧಿಕರು ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವರು ಸೇರಿ ಎಸಗುವ ಅಪರಾಧ) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ–1961ರ ಕಲಂ 3 (ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದು) ಮತ್ತು 4ರ (ವರದಕ್ಷಿಣೆ ಕೇಳುವುದು–Demand) ಅಡಿಯಲ್ಲಿ ಅರ್ಜಿದಾರರ (ಅತ್ತೆ, ಮಾವ ಮತ್ತು ನಾದಿನಿ) ವಿರುದ್ಧ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆ ಪೊಲೀಸರು 2021ರ ಆಗಸ್ಟ್ 12ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p><p>ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದ್ದರು.</p>.<ul><li><p>ನಿಶ್ಚಿತಾರ್ಥಕ್ಕೂ ಮೊದಲಿನ ಮಾತುಕತೆಗಳೇ ದೂರಿಗೆ ಆಧಾರ</p></li><li><p>ಕೇವಲ 19 ದಿನಗಳ ನಿಸ್ಸಾರ ಸಂಸಾರ..!</p></li></ul>.<div><blockquote>ವರದಕ್ಷಿಣೆ ಕಿರುಕುಳದ ಆರೋಪಗಳಿಗೆ ನಿರ್ದಿಷ್ಟತೆ ಇರಬೇಕು. ದೂರಿನ ಖಚಿತತೆಯನ್ನು ಮನವರಿಕೆ ಮಾಡಿಕೊಂಡೇ ಪ್ರಾಸಿಕ್ಯೂಷನ್ ಮುಂದುವರಿಯಬೇಕು. ವೃಥಾ ಆರೋಪಗಳಡಿ ವಿಚಾರಣೆ ನಡೆಸುವುದು ನಿಶ್ಚಿತವಾಗಿಯೂ ಕಾನೂನಿನ ದುರುಪಯೋಗ.</blockquote><span class="attribution">– ನ್ಯಾ.ಎಂ.ನಾಗಪ್ರಸನ್ನ</span></div>.<p><strong><ins>ಮೊಳಕೆಯಲ್ಲೇ ಚಿವುಟಬೇಕು...</ins></strong></p><p>‘ಕ್ರೌರ್ಯ ಎಂಬ ಪದವನ್ನು ನಿರ್ದಿಷ್ಟ ನಿದರ್ಶನಗಳಿಲ್ಲದೆ ಸರಳವಾಗಿ ಸ್ಥಾಪಿಸಲು ಸಾಧ್ಯವಿಲ್ಲ. ಆರೋಪ ಹೊರಿಸುವಾಗ ಕನಿಷ್ಠ ಪಕ್ಷ ಕ್ರೌರ್ಯ ನಡೆದಿದೆ ಎನ್ನುವುದರ ಕರಾರುವಾಕ್ಕು ಗಳಿಗೆ, ದಿನಾಂಕ ಅಥವಾ ಘಟನೆಗಳನ್ನು ಕ್ವಚಿತ್ತಾಗಿಯಾದರೂ ದೂರಿನಲ್ಲಿ ವಿವರಿಸಿರಬೇಕು. ಸುಖಾಸುಮ್ಮನೆ ಆರೋಪ ಹೊರಿಸುವ ಪ್ರವೃತ್ತಿಯು ದೂರುದಾರರ ಮೇಲೆ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ’ ಎಂಬ ಪೂರ್ವನಿದರ್ಶನಗಳನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.</p><p>ಈ ಸಂಬಂಧ ವಿವಿಧ ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಪ್ರಸ್ತಾಪಿಸಿ, ‘ವೈವಾಹಿಕ ವಿವಾದದಿಂದ ಉದ್ಭವಿಸುವ ಕ್ರಿಮಿನಲ್ ಪ್ರಕರಣಗಳಲ್ಲಿ ಮನೆಮಂದಿಯನ್ನೆಲ್ಲಾ ಸಿಲುಕಿಸಿ ಅವರನ್ನು ವಿಚಾರಣೆಯ ಕಟಕಟೆಗೆ ಎಳೆತರುವ ಪ್ರವೃತ್ತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು’ ಎಂಬುದನ್ನು ವಿಸ್ತೃತವಾಗಿ ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮದುವೆಗೂ ಮುಂಚೆ ನಡೆದ ಗಂಡು–ಹೆಣ್ಣಿನ ಮನೆಯವರ ಮಾತುಕತೆಯಲ್ಲಿ ಪ್ರಸ್ತಾಪಿಸಲಾದ ವರದಕ್ಷಿಣೆ ಹಾಗೂ ಮದುವೆಯ ಖರ್ಚುವೆಚ್ಚಗಳಿಗೆ ಸಂಬಂಧಿಸಿದ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಮದುವೆಯ ನಂತರ ಅತ್ತೆ–ಮಾವ, ನಾದಿನಿ ‘ಕ್ರೌರ್ಯ’ ಎಸಗಿದ್ದಾರೆ ಎಂಬ ನಿರಾಧಾರ ಆರೋಪಗಳನ್ನು ಕಾನೂನಿನ ಚೌಕಟ್ಟಿನಲ್ಲಿ ವರದಕ್ಷಿಣೆ ಕಿರುಕುಳವೆಂದು ವ್ಯಾಖ್ಯಾನಿಸಲು ಆಗದು’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ಪ್ರಕಟಿಸಿದೆ.</p><p>‘ನಮ್ಮ ವಿರುದ್ಧ ಬೆಂಗಳೂರಿನ 24ನೇ ಹೆಚ್ಚುವರಿ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿರುವ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಅತ್ತೆ–ಮಾವ ಮತ್ತು ನಾದಿನಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಿದೆ.</p><p>‘ಹಾಲಿ ಪ್ರಕರಣದ ದೂರಿನಲ್ಲಿರುವ ಅಂಶಗಳು, ಮದುವೆ ಸಮಾರಂಭಗಳಲ್ಲಿ ಮಾಡಿದ ಖರ್ಚಿನ ಬಗ್ಗೆ ಮಾತ್ರವೇ ವಿವರಿಸುತ್ತವೆ. ಇದರ ತಳಹದಿಯಲ್ಲಿ ಮದುವೆ ನಂತರ ಗಂಡನ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ವರದಕ್ಷಿಣೆ ಬೇಡಿಕೆ ಆರೋಪದಡಿ ಸಿಲುಕಿಸಲು 498ಎ ಕಲಂ ಅನ್ನು ಅಸ್ತ್ರವಾಗಿ ಬಳಸಲಾಗಿದೆ. ಹೀಗಾಗಿ, ಕೆಲವು ಸಾಮಾನ್ಯ ಜಗಳವನ್ನೇ ಊರುಗೋಲಾಗಿಸಿ ಪುರಾವೆಗಳಿಲ್ಲದ ಆರೋಪಗಳಡಿ ಅವರನ್ನು ವಿವೇಚನಾರಹಿತವಾಗಿ ವಿಚಾರಣೆಯ ಅಗ್ನಿಪರೀಕ್ಷೆಗೆ ಒಳಪಡಿಸುವುದು ಸಲ್ಲ’ ಎಂದು ಸ್ಪಷ್ಟಪಡಿಸಿದೆ.</p><p>‘ಹೆಣ್ಣಿನ ಮನೆಯವರು ಮದುವೆಗೆ ₹50 ಲಕ್ಷ ಖರ್ಚು ಮಾಡುತ್ತೇವೆ ಹಾಗೂ ಏನೆಲ್ಲಾ ವರೋಪಚಾರ ಮಾಡುತ್ತೇವೆ ಎಂಬುದರ ಮಾತಕತೆಗಳೇ ದೂರಿಗೆ ಆಧಾರ. ದೂರುದಾರ ಮಹಿಳೆ (ಪತ್ನಿ) ಗಂಡನ ಮನೆಯಲ್ಲಿ ಕೇವಲ 19 ದಿನಗಳ ಸಂಸಾರ ನಡೆಸಿದ್ದಾರೆ. ಈ ದಿನಗಳಲ್ಲಿ ಎಲ್ಲೂ ಕೂಡಾ ಅರ್ಜಿದಾರರ ವಿರುದ್ಧ ವರದಕ್ಷಿಣೆಗೆ ಬೇಡಿಕೆ ಇರಿಸಿದ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ’ ಎಂಬ ಸೂಕ್ಷ್ಮ ಅಂಶವನ್ನು ನ್ಯಾಯಪೀಠ ಎತ್ತಿಹಿಡಿದಿದೆ.</p><p>‘ಪತಿಯ ವಿರುದ್ಧದ ಖಟ್ಲೆಗಳಲ್ಲಿ ಕುಟುಂಬದ ಮುಗ್ಧ ಸದಸ್ಯರು ಅನಗತ್ಯ ಕಿರುಕುಳಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಈ ದಿಸೆಯಲ್ಲಿ ವಿಚಾರಣಾ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು. ವಯಸ್ಸಾದ ಸಂಬಂಧಿಕರ ವಿರುದ್ಧ ಕಲಂ 498-ಎ ಅನ್ನು ಅನ್ವಯಿಸುವುದು ಮತ್ತು ನಿರ್ದಿಷ್ಟವಲ್ಲದ ಆರೋಪಗಳ ಆಧಾರದಡಿ ಕ್ರಿಮಿನಲ್ ಕಾನೂನನ್ನು ಆಯುಧವಾಗಿ ಝಳಪಿಸುವುದು ತರವಲ್ಲ ಎಂದು ಸುಪ್ರೀ ಕೋರ್ಟ್ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ’ ಎಂಬ ಅಂಶಗಳನ್ನು ತೀರ್ಪಿನಲ್ಲಿ ಒತ್ತಿ ಹೇಳಲಾಗಿದೆ.</p><p><strong>ಪ್ರಕರಣವೇನು?:</strong> ಬೆಂಗಳೂರಿನ ವಧು ಮತ್ತು ಮೈಸೂರಿನ ವರನಿಗೆ 2018ರ ಏಪ್ರಿಲ್ 24ರಂದು ಮೈಸೂರಿನ ಲಲಿತ ಮಹಲ್ನಲ್ಲಿ ವಿಜೃಂಭಣೆಯ ಮದುವೆ ನೆರವೇರಿತ್ತು. 2018ರ ಮೇ 9ರಂದು ಪತಿ ಅಮೆರಿಕಕ್ಕೆ ತೆರಳಿದ್ದರು. ಪತ್ನಿ 19 ದಿನಗಳ ಕಾಲ ಅತ್ತೆ–ಮಾವನ ಮನೆಯಲ್ಲಿದ್ದು ನಂತರ ತವರು ಮನೆಗೆ ವಾಪಸಾಗಿದ್ದರು.</p><p>‘ಗಂಡನ ಮನೆಯಲ್ಲಿದ್ದ ಸಮಯದಲ್ಲಿ ನನಗೆ ಅತ್ತೆ, ಮಾವ ಮತ್ತು ನಾದಿನಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ನೀನು ದಪ್ಪಗಿದ್ದೀಯ ಎಂದು ಜರಿದಿದ್ದಾರೆ’ ಎಂದು ಆರೋಪಿಸಿ ಪತ್ನಿ ಆರು ತಿಂಗಳ ನಂತರ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p><p>ಇದರನ್ವಯ ಪೊಲೀಸರು ತನಿಖೆ ನಡೆಸಿ, ಭಾರತೀಯ ದಂಡ ಸಂಹಿತೆ–1860ರ ಕಲಂ 498ಎ (ವಿವಾಹಿತ ಮಹಿಳೆಯನ್ನು ಪತಿ ಅಥವಾ ಪತಿಯ ಸಂಬಂಧಿಕರು ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವರು ಸೇರಿ ಎಸಗುವ ಅಪರಾಧ) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ–1961ರ ಕಲಂ 3 (ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದು) ಮತ್ತು 4ರ (ವರದಕ್ಷಿಣೆ ಕೇಳುವುದು–Demand) ಅಡಿಯಲ್ಲಿ ಅರ್ಜಿದಾರರ (ಅತ್ತೆ, ಮಾವ ಮತ್ತು ನಾದಿನಿ) ವಿರುದ್ಧ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆ ಪೊಲೀಸರು 2021ರ ಆಗಸ್ಟ್ 12ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p><p>ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದ್ದರು.</p>.<ul><li><p>ನಿಶ್ಚಿತಾರ್ಥಕ್ಕೂ ಮೊದಲಿನ ಮಾತುಕತೆಗಳೇ ದೂರಿಗೆ ಆಧಾರ</p></li><li><p>ಕೇವಲ 19 ದಿನಗಳ ನಿಸ್ಸಾರ ಸಂಸಾರ..!</p></li></ul>.<div><blockquote>ವರದಕ್ಷಿಣೆ ಕಿರುಕುಳದ ಆರೋಪಗಳಿಗೆ ನಿರ್ದಿಷ್ಟತೆ ಇರಬೇಕು. ದೂರಿನ ಖಚಿತತೆಯನ್ನು ಮನವರಿಕೆ ಮಾಡಿಕೊಂಡೇ ಪ್ರಾಸಿಕ್ಯೂಷನ್ ಮುಂದುವರಿಯಬೇಕು. ವೃಥಾ ಆರೋಪಗಳಡಿ ವಿಚಾರಣೆ ನಡೆಸುವುದು ನಿಶ್ಚಿತವಾಗಿಯೂ ಕಾನೂನಿನ ದುರುಪಯೋಗ.</blockquote><span class="attribution">– ನ್ಯಾ.ಎಂ.ನಾಗಪ್ರಸನ್ನ</span></div>.<p><strong><ins>ಮೊಳಕೆಯಲ್ಲೇ ಚಿವುಟಬೇಕು...</ins></strong></p><p>‘ಕ್ರೌರ್ಯ ಎಂಬ ಪದವನ್ನು ನಿರ್ದಿಷ್ಟ ನಿದರ್ಶನಗಳಿಲ್ಲದೆ ಸರಳವಾಗಿ ಸ್ಥಾಪಿಸಲು ಸಾಧ್ಯವಿಲ್ಲ. ಆರೋಪ ಹೊರಿಸುವಾಗ ಕನಿಷ್ಠ ಪಕ್ಷ ಕ್ರೌರ್ಯ ನಡೆದಿದೆ ಎನ್ನುವುದರ ಕರಾರುವಾಕ್ಕು ಗಳಿಗೆ, ದಿನಾಂಕ ಅಥವಾ ಘಟನೆಗಳನ್ನು ಕ್ವಚಿತ್ತಾಗಿಯಾದರೂ ದೂರಿನಲ್ಲಿ ವಿವರಿಸಿರಬೇಕು. ಸುಖಾಸುಮ್ಮನೆ ಆರೋಪ ಹೊರಿಸುವ ಪ್ರವೃತ್ತಿಯು ದೂರುದಾರರ ಮೇಲೆ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ’ ಎಂಬ ಪೂರ್ವನಿದರ್ಶನಗಳನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.</p><p>ಈ ಸಂಬಂಧ ವಿವಿಧ ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಪ್ರಸ್ತಾಪಿಸಿ, ‘ವೈವಾಹಿಕ ವಿವಾದದಿಂದ ಉದ್ಭವಿಸುವ ಕ್ರಿಮಿನಲ್ ಪ್ರಕರಣಗಳಲ್ಲಿ ಮನೆಮಂದಿಯನ್ನೆಲ್ಲಾ ಸಿಲುಕಿಸಿ ಅವರನ್ನು ವಿಚಾರಣೆಯ ಕಟಕಟೆಗೆ ಎಳೆತರುವ ಪ್ರವೃತ್ತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು’ ಎಂಬುದನ್ನು ವಿಸ್ತೃತವಾಗಿ ವಿವರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>