<p><strong>ಹುಬ್ಬಳ್ಳಿ:</strong> ‘ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇದ್ದರೂ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆ ವರ್ಗಕ್ಕೆ ಕೊಟ್ಟ ಭರವಸೆ ಈಡೇರಿಸಲು ನಮ್ಮವರೇ ತೊಡಕಾಗಿದ್ದಾರೆ’ ಎಂದು ಲೋಕೋಪಯೋಗಿ ಸಚಿವ, ಅಹಿಂದ ಮುಖಂಡ ಸತೀಶ ಜಾರಕಿಹೊಳಿ ಇಲ್ಲಿ ಬೇಸರ ವ್ಯಕ್ತಪಡಿಸಿದರು.</p>.<p>ಭಾನುವಾರ ಇಲ್ಲಿ ‘ಅಹಿಂದ 25 ವರ್ಷಗಳ ಹೋರಾಟ, ಸಾಧನೆ, ಸಂಕಲ್ಪ–ರಾಜ್ಯಮಟ್ಟದ ವಿಚಾರ ಸಂಕಿರಣ’ ಉದ್ಘಾಟಿಸಿದ ಅವರು, ‘25 ವರ್ಷಗಳ ಸುದೀರ್ಘ ಅವಧಿಯಲ್ಲಿ ಅಹಿಂದ ವರ್ಗ ಸಾಕಷ್ಟು ಪಾಠ ಕಲಿತಿದೆ’ ಎಂದರು.</p>.<p>‘ಬೃಹತ್ ಸಮಾವೇಶ, ಸಭೆಗಳನ್ನು ನಡೆಸಿದರೂ ನಿರೀಕ್ಷಿತ ಬದಲಾವಣೆ ಆಗಿಲ್ಲ. ಅನಿವಾರ್ಯವಾಗಿ ಈಗ ಹೋರಾಟದ ಸ್ವರೂಪ ಬದಲಿಸಬೇಕಿದೆ. ನಮ್ಮ ರಕ್ಷಣೆ, ಸೌಲಭ್ಯಕ್ಕಾಗಿ ಹೊಸ ದಾರಿಯನ್ನು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎರಡನೇ ಹಂತದ ಹೋರಾಟ ಇದೀಗ ಆರಂಭವಾಗಿದ್ದು, 2028ರ ಮೇ ತಿಂಗಳವರೆಗೆ ನಡೆಯಲಿದೆ. ಇದು ರಾಜ್ಯದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ’ ಎಂದರು.</p>.<p>‘ಅಹಿಂದ ಸಂಘಟನೆ ರಾಜಕೀಯದ ಹೊರತಾಗಿ ಇರಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು ಸಕ್ರಿಯರಾಗಿ ಕೆಲಸ ಮಾಡುತ್ತ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಗುಡಿಸಲು, ಟೆಂಟ್ ವಾಸಿಗಳನ್ನು ಗುರುತಿಸಿ, ಅವರ ಏಳಿಗೆಗೆ ಶ್ರಮಿಸಬೇಕು. ರಾಜಕೀಯ ಮುಖಂಡರನ್ನು ಹೊರಗಿಟ್ಟು ವರ್ಷಪೂರ್ತಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾವೇಶ ನಡೆಸಿ, ಅಹಿಂದ ಸಮುದಾಯಗಳನ್ನು ಒಗ್ಗೂಡಿಸಬೇಕು’ ಎಂದರು.</p>.<p>ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರು, ‘ಸಂವಿಧಾನದಲ್ಲಿ ಇರುವ ಹಲವು ಅನುಚ್ಛೇದಗಳು ಅಪ್ರಸ್ತುತ ಎಂದು ಹೇಳಿ, ಸಾಮಾಜಿಕ ನ್ಯಾಯವನ್ನು ಅಪ ವ್ಯಾಖ್ಯಾನ ಮಾಡಲಾಗುತ್ತಿದೆ’ ಎಂದರು.</p>.<p>‘ನಮ್ಮ ಪಕ್ಕದಲ್ಲೇ ಇರುವ ಶತ್ರುಗಳನ್ನು ಸಮರ್ಥವಾಗಿ ಎದುರಿಸಿ ಸಂವಿಧಾನ ರಕ್ಷಿಸಬೇಕಿದೆ. ಹೋರಾಟದ ಸ್ವರೂಪ ಬದಲಿಸಬೇಕು. ಎಲ್ಲರ ಹಿತರಕ್ಷಣೆಯೇ ಅಹಿಂದ ಉದ್ದೇಶವಾಗ ಬೇಕು’ ಎಂದು ಸಲಹೆ ಮಾಡಿದರು.</p>.<div><blockquote>ರಾಜಕೀಯ ಲಾಭಕ್ಕಾಗಿ ಅಹಿಂದ ಸಮಾವೇಶ ಮಾಡುತ್ತಿಲ್ಲ. ಸಮಾಜದ ಜಾಗೃತಿಗೆ ಸಮಾವೇಶ ನಡೆಸುತ್ತಿದ್ದು, ಸರ್ಕಾರ ಮತ್ತು ಅಹಿಂದ ಸೇತುವೆಯಾಗಿ ಪದಾಧಿಕಾರಿಗಳು ಕೆಲಸ ಮಾಡಬೇಕು </blockquote><span class="attribution">ಸತೀಶ ಜಾರಕಿಹೊಳಿ, ಸಚಿವ</span></div>.<div><blockquote>ದೇಶದಲ್ಲಿನ ಸಮಸ್ಯೆ, ಸವಾಲುಗಳಿಗೆ ಸಂವಿಧಾನ ಕಾರಣ ಎನ್ನುತ್ತ ಅದನ್ನು ಬದಲಿಸಲು ಒಂದು ವರ್ಗ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸುತ್ತಿದೆ. ಸಂವಿಧಾನ ರಕ್ಷಣೆಗೆ ಆದ್ಯತೆ ನೀಡಬೇಕಿದೆ </blockquote><span class="attribution">ಎಚ್.ಎನ್. ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇದ್ದರೂ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆ ವರ್ಗಕ್ಕೆ ಕೊಟ್ಟ ಭರವಸೆ ಈಡೇರಿಸಲು ನಮ್ಮವರೇ ತೊಡಕಾಗಿದ್ದಾರೆ’ ಎಂದು ಲೋಕೋಪಯೋಗಿ ಸಚಿವ, ಅಹಿಂದ ಮುಖಂಡ ಸತೀಶ ಜಾರಕಿಹೊಳಿ ಇಲ್ಲಿ ಬೇಸರ ವ್ಯಕ್ತಪಡಿಸಿದರು.</p>.<p>ಭಾನುವಾರ ಇಲ್ಲಿ ‘ಅಹಿಂದ 25 ವರ್ಷಗಳ ಹೋರಾಟ, ಸಾಧನೆ, ಸಂಕಲ್ಪ–ರಾಜ್ಯಮಟ್ಟದ ವಿಚಾರ ಸಂಕಿರಣ’ ಉದ್ಘಾಟಿಸಿದ ಅವರು, ‘25 ವರ್ಷಗಳ ಸುದೀರ್ಘ ಅವಧಿಯಲ್ಲಿ ಅಹಿಂದ ವರ್ಗ ಸಾಕಷ್ಟು ಪಾಠ ಕಲಿತಿದೆ’ ಎಂದರು.</p>.<p>‘ಬೃಹತ್ ಸಮಾವೇಶ, ಸಭೆಗಳನ್ನು ನಡೆಸಿದರೂ ನಿರೀಕ್ಷಿತ ಬದಲಾವಣೆ ಆಗಿಲ್ಲ. ಅನಿವಾರ್ಯವಾಗಿ ಈಗ ಹೋರಾಟದ ಸ್ವರೂಪ ಬದಲಿಸಬೇಕಿದೆ. ನಮ್ಮ ರಕ್ಷಣೆ, ಸೌಲಭ್ಯಕ್ಕಾಗಿ ಹೊಸ ದಾರಿಯನ್ನು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎರಡನೇ ಹಂತದ ಹೋರಾಟ ಇದೀಗ ಆರಂಭವಾಗಿದ್ದು, 2028ರ ಮೇ ತಿಂಗಳವರೆಗೆ ನಡೆಯಲಿದೆ. ಇದು ರಾಜ್ಯದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ’ ಎಂದರು.</p>.<p>‘ಅಹಿಂದ ಸಂಘಟನೆ ರಾಜಕೀಯದ ಹೊರತಾಗಿ ಇರಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು ಸಕ್ರಿಯರಾಗಿ ಕೆಲಸ ಮಾಡುತ್ತ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಗುಡಿಸಲು, ಟೆಂಟ್ ವಾಸಿಗಳನ್ನು ಗುರುತಿಸಿ, ಅವರ ಏಳಿಗೆಗೆ ಶ್ರಮಿಸಬೇಕು. ರಾಜಕೀಯ ಮುಖಂಡರನ್ನು ಹೊರಗಿಟ್ಟು ವರ್ಷಪೂರ್ತಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾವೇಶ ನಡೆಸಿ, ಅಹಿಂದ ಸಮುದಾಯಗಳನ್ನು ಒಗ್ಗೂಡಿಸಬೇಕು’ ಎಂದರು.</p>.<p>ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರು, ‘ಸಂವಿಧಾನದಲ್ಲಿ ಇರುವ ಹಲವು ಅನುಚ್ಛೇದಗಳು ಅಪ್ರಸ್ತುತ ಎಂದು ಹೇಳಿ, ಸಾಮಾಜಿಕ ನ್ಯಾಯವನ್ನು ಅಪ ವ್ಯಾಖ್ಯಾನ ಮಾಡಲಾಗುತ್ತಿದೆ’ ಎಂದರು.</p>.<p>‘ನಮ್ಮ ಪಕ್ಕದಲ್ಲೇ ಇರುವ ಶತ್ರುಗಳನ್ನು ಸಮರ್ಥವಾಗಿ ಎದುರಿಸಿ ಸಂವಿಧಾನ ರಕ್ಷಿಸಬೇಕಿದೆ. ಹೋರಾಟದ ಸ್ವರೂಪ ಬದಲಿಸಬೇಕು. ಎಲ್ಲರ ಹಿತರಕ್ಷಣೆಯೇ ಅಹಿಂದ ಉದ್ದೇಶವಾಗ ಬೇಕು’ ಎಂದು ಸಲಹೆ ಮಾಡಿದರು.</p>.<div><blockquote>ರಾಜಕೀಯ ಲಾಭಕ್ಕಾಗಿ ಅಹಿಂದ ಸಮಾವೇಶ ಮಾಡುತ್ತಿಲ್ಲ. ಸಮಾಜದ ಜಾಗೃತಿಗೆ ಸಮಾವೇಶ ನಡೆಸುತ್ತಿದ್ದು, ಸರ್ಕಾರ ಮತ್ತು ಅಹಿಂದ ಸೇತುವೆಯಾಗಿ ಪದಾಧಿಕಾರಿಗಳು ಕೆಲಸ ಮಾಡಬೇಕು </blockquote><span class="attribution">ಸತೀಶ ಜಾರಕಿಹೊಳಿ, ಸಚಿವ</span></div>.<div><blockquote>ದೇಶದಲ್ಲಿನ ಸಮಸ್ಯೆ, ಸವಾಲುಗಳಿಗೆ ಸಂವಿಧಾನ ಕಾರಣ ಎನ್ನುತ್ತ ಅದನ್ನು ಬದಲಿಸಲು ಒಂದು ವರ್ಗ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸುತ್ತಿದೆ. ಸಂವಿಧಾನ ರಕ್ಷಣೆಗೆ ಆದ್ಯತೆ ನೀಡಬೇಕಿದೆ </blockquote><span class="attribution">ಎಚ್.ಎನ್. ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>