<p><strong>ಹುಬ್ಬಳ್ಳಿ:</strong> ಸಾಂಗಲಿ- ಬೆಳಗಾವಿ- ಹುಬ್ಬಳ್ಳಿ- ತುಮಕೂರು ಮಾರ್ಗದ ಮೂಲಕವೇ ಮುಂಬೈ- ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವಂತೆ ಮಾಡುವುದೊಂದಿಗೆ ಪ್ರಾದೇಶಿಕ ಅಸಮತೋಲನ ನಿವಾರಿಸಬೇಕು ಎಂದು ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ವಿನಂತಿಸಿದ್ದಾರೆ.</p>.<p>‘ಪುಣೆ- ಸಾಂಗಲಿ- ಬೆಳಗಾವಿ- ಹುಬ್ಬಳ್ಳಿ- ತುಮಕೂರು ಮಾರ್ಗವು ಈಚೆಗೆ ಡಬ್ಲಿಂಗ್ ಹಾಗೂ ವಿದ್ಯುದೀಕರಣಗೊಂಡಿದ್ದರೂ ಈ ಮಾರ್ಗದಲ್ಲಿ ದಿನಕ್ಕೆ ಕೇವಲ 15 ರೈಲುಗಳು ಸಂಚರಿಸುತ್ತಿವೆ. ಇನ್ನೊಂದೆಡೆ, ಸೋಲಾಪುರ- ಗುಂತಕಲ್- ಧರ್ಮಾವರಂ ಮಾರ್ಗದಲ್ಲಿ 150ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದು, ಹೊಸ ರೈಲು ಸೇವೆಗಳನ್ನೂ ಅದೇ ಮಾರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಮನವಿಯಲ್ಲಿ ಅವರು ತಿಳಿಸಿದ್ದಾರೆ.</p>.<p>‘ಸಾಂಗಲಿ, ಕಿರ್ಲೋಸ್ಕರವಾಡಿ, ಬೆಳಗಾವಿ, ಹುಬಳ್ಳಿ– ಧಾರವಾಡ, ಅರಸೀಕೆರೆ, ಶ್ರವಣಬೆಳಗೊಳ ಮತ್ತು ತುಮಕೂರು ಮುಂತಾದ ಪ್ರಮುಖ ಕೈಗಾರಿಕಾ ಹಾಗೂ ಆರ್ಥಿಕ ನಗರಗಳಿಗೆ ಪ್ರೀಮಿಯಂ ರೈಲು ಸಂಪರ್ಕದ ಅಗತ್ಯ ಹೆಚ್ಚಿದೆ. ಈ ನಗರಗಳಿಗೆ ವಂದೇ ಭಾರತ್ ಸೇವೆ ಲಭ್ಯವಿಲ್ಲದೇ ಇರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ಮನವರಿಕೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಸಾಂಗಲಿ- ಬೆಳಗಾವಿ- ಹುಬ್ಬಳ್ಳಿ- ತುಮಕೂರು ಮಾರ್ಗದ ಮೂಲಕವೇ ಮುಂಬೈ- ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವಂತೆ ಮಾಡುವುದೊಂದಿಗೆ ಪ್ರಾದೇಶಿಕ ಅಸಮತೋಲನ ನಿವಾರಿಸಬೇಕು ಎಂದು ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ವಿನಂತಿಸಿದ್ದಾರೆ.</p>.<p>‘ಪುಣೆ- ಸಾಂಗಲಿ- ಬೆಳಗಾವಿ- ಹುಬ್ಬಳ್ಳಿ- ತುಮಕೂರು ಮಾರ್ಗವು ಈಚೆಗೆ ಡಬ್ಲಿಂಗ್ ಹಾಗೂ ವಿದ್ಯುದೀಕರಣಗೊಂಡಿದ್ದರೂ ಈ ಮಾರ್ಗದಲ್ಲಿ ದಿನಕ್ಕೆ ಕೇವಲ 15 ರೈಲುಗಳು ಸಂಚರಿಸುತ್ತಿವೆ. ಇನ್ನೊಂದೆಡೆ, ಸೋಲಾಪುರ- ಗುಂತಕಲ್- ಧರ್ಮಾವರಂ ಮಾರ್ಗದಲ್ಲಿ 150ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದು, ಹೊಸ ರೈಲು ಸೇವೆಗಳನ್ನೂ ಅದೇ ಮಾರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬರೆದ ಮನವಿಯಲ್ಲಿ ಅವರು ತಿಳಿಸಿದ್ದಾರೆ.</p>.<p>‘ಸಾಂಗಲಿ, ಕಿರ್ಲೋಸ್ಕರವಾಡಿ, ಬೆಳಗಾವಿ, ಹುಬಳ್ಳಿ– ಧಾರವಾಡ, ಅರಸೀಕೆರೆ, ಶ್ರವಣಬೆಳಗೊಳ ಮತ್ತು ತುಮಕೂರು ಮುಂತಾದ ಪ್ರಮುಖ ಕೈಗಾರಿಕಾ ಹಾಗೂ ಆರ್ಥಿಕ ನಗರಗಳಿಗೆ ಪ್ರೀಮಿಯಂ ರೈಲು ಸಂಪರ್ಕದ ಅಗತ್ಯ ಹೆಚ್ಚಿದೆ. ಈ ನಗರಗಳಿಗೆ ವಂದೇ ಭಾರತ್ ಸೇವೆ ಲಭ್ಯವಿಲ್ಲದೇ ಇರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ಮನವರಿಕೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>