<p><strong>ಬೆಂಗಳೂರು</strong>: ‘ಮುಂದಿನ ಪೀಳಿಗೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಜತೆಗೆ ಹೈಡ್ರೋಜನ್ ಮೊಬಿಲಿಟಿ, ಇಂಧನ ಆಧರಿತ ಸ್ಮಾರ್ಟ್ ಸಾರಿಗೆ ವಲಯಲ್ಲಿ ಭಾರತ ಹಾಗೂ ಜಪಾನ್ ದೇಶಗಳು ಬಾಂಧವ್ಯ ವೃದ್ದಿಗೆ ಒತ್ತು ನೀಡುತ್ತಿವೆ’ ಎಂದು ಕೇಂದ್ರ ನೀತಿ ಆಯೋಗ ಸದಸ್ಯ ವಿ.ಕೆ.ಸಾರಸ್ವತ್ ತಿಳಿಸಿದರು.</p>.<p>ನೀತಿ ಆಯೋಗ ಹಾಗೂ ಜಪಾನ್ ಹಣಕಾಸು, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ನಗರದಲ್ಲಿ ಗುರುವಾರ ಆಯೋಜಿಸಿದ್ದ ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ-2026 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಉಭಯ ದೇಶಗಳು ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯ ಮುಂದುವರೆಸಿಕೊಂಡು ಬಂದಿವೆ. ಆದರೆ, ಹೊಸ ತಲೆಮಾರಿನ ಆಶೋತ್ತರಗಳಿಗೆ ಪೂರಕವಾಗಿ ಯೋಜನೆ ರೂಪಿಸಲಾಗುತ್ತಿದೆ. ಭಾರತವು ಜಪಾನ್ಗೆ ಸಾಫ್ಟ್ವೇರ್ ಹಾಗೂ ಎಐ ವಲಯದಲ್ಲಿನ ಮಾರುಕಟ್ಟೆ ವಿಸ್ತರಣೆಗೆ ನೆರವಾದರೆ, ಜಪಾನ್ ಶುದ್ದ ಇಂಧನ, ಮೊಬಿಲಿಟಿ ವಲಯದಲ್ಲಿ ಬಾಂಧವ್ಯ ವೃದ್ದಿಗೆ ಒತ್ತು ನೀಡಲಿದೆ’ ಎಂದು ಹೇಳಿದರು.</p>.<p>‘ಸಾರಿಗೆ ರೂಪಾಂತರವು ಕೇವಲ ಒಂದು ವಲಯದ ಸುಧಾರಣೆಯಲ್ಲ; ಇದು ಇಂಧನ, ಮೂಲಸೌಕರ್ಯ, ದತ್ತಾಂಶ ಮತ್ತು ಉದ್ಯಮದ ರಚನಾತ್ಮಕ ಮರುವಿನ್ಯಾಸವಾಗಿದೆ. ಈಗ ಹೈಡ್ರೋಜನ್ ಮೊಬಿಲಿಟಿ ಬಳಸಿಕೊಂಡು ಶುದ್ದ ಇಂಧನದ ಮೂಲಕ ಸ್ಮಾರ್ಟ್ ಸಾರಿಗೆ ವ್ಯವಸ್ಥೆ ಕಡೆಗೆ ಮುಂದಡಿ ಇಡುತ್ತಿದ್ದೇವೆ. ಭವಿಷ್ಯದ ಸುಧಾರಿತ ವಾಹನಗಳನ್ನು ಭಾರತಕ್ಕೆ ಜಪಾನ್ ಒದಗಿಸಲು ಸಿದ್ದವಿದೆ. ಸಮಗ್ರ ಮೊಬಿಟಿಲಿ ವೇದಿಕೆಯನ್ನು ಭಾರತ ಸಿದ್ದಪಡಿಸಿಕೊಳ್ಳಲು ಇದು ನೆರವಾಗಲಿದೆ’ ಎಂದು ತಿಳಿಸಿದರು.</p>.<p>ಜಪಾನ್ನ ಆಟೋಮೊಟಿವ್ ಇಂಟರ್ನ್ಯಾಷನಲ್ ಟ್ರೇಡ್ ಪಾಲಿಸಿ ನಿರ್ದೇಶಕ ಕೀಸುಕೆ ಹೊಸೊನುಮಾ ಮಾತನಾಡಿ, ‘ಸಾರಿಗೆ ಕ್ಷೇತ್ರದಲ್ಲಿ ಇಂಗಾಲದ ತಟಸ್ಥತೆಯ ಬದಲಾವಣೆಯು ಹಾದಿಯಷ್ಟೇ ಅಲ್ಲ. ಆಯಾ ಮಾರುಕಟ್ಟೆ ಆರ್ಥಿಕ ವಾಸ್ತವ, ನೀತಿ ಮತ್ತು ಗ್ರಾಹಕರ ಆದ್ಯತೆಗಳ ಆಧಾರದ ಮೇಲೆ ವಿಭಿನ್ನ ಪರಿಹಾರಗಳ ಅಗತ್ಯವಿರುತ್ತದೆ. ಈ ಪ್ರಯಾಣದಲ್ಲಿ ಭಾರತವು ನಿರ್ಣಾಯಕ ಪಾಲುದಾರನಾಗಿದ್ದು, ನಾವೀನ್ಯತೆ, ವಿಸ್ತರಣೆ ಮತ್ತು ಸುಸ್ಥಿರ ಸಾರಿಗೆ ಅಭಿವೃದ್ಧಿಗೆ ಅವಕಾಶ ನೀಡುತ್ತದೆ ’ ಎಂದು ತಿಳಿಸಿದರು.</p>.<p>ಜಪಾನ್ ಆರ್ಥಿಕ, ವ್ಯಾಪಾರ ಹಾಗೂ ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿ ನರಿತೋಶಿ ಟಕಾಯಾಮಾ. ಟೊಯೊಟಾ ಕಂಪೆನಿಯ ಗೀತಾಂಜಲಿ ಕಿರ್ಲೋಸ್ಕರ್, ಜಪಾನ್ ದೂತವಾಸ ಅಧಿಕಾರಿ ಯಮಝಕಿ ಉಪಸ್ಥಿತರಿದ್ದರು.</p>.<p>ಜಪಾನ್ ಭಾರತ ಮೊಬಿಲಿಟಿ ಶೃಂಗಸಭೆಯಲ್ಲಿ ಶುದ್ದ ಇಂಧನ, ಎಲೆಕ್ಟ್ರಿಕ್ ವಾಹನ, ಜೈವಿಕ ಇಂಧನ, ಜಸಿರು ಹೈಡ್ರೋಜನ್ವ ಡಿಜಿಟಲ್ ತಂತ್ರಜ್ಞಾನ, ನಾವಿನ್ಯತೆ ಕುರಿತು ತಜ್ಞರು, ಉದ್ಯಮ ಕ್ಷೇತ್ರದವರು, ನೀತಿ ನಿರೂಪಕರು, ತಂತ್ರಜ್ಞಾನ ವಲಯದ 200 ಪ್ರಮುಖರು ವಿಸ್ತೃತವಾಗಿ ಚರ್ಚಿಸಿದರು.</p>.<h2>₹50 ಸಾವಿರ ಕೋಟಿ ಹೂಡಿಕೆ ಆಕರ್ಷಣೆ’: ಸೆಲ್ವಕುಮಾರ್</h2><p>ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮಾತನಾಡಿ, ‘ಕರ್ನಾಟಕ ಸರ್ಕಾರವು ರೂಪಿಸಿರುವ ಕ್ಲೀನ್ ಮೊಬಿಲಿಟಿ ನೀತಿ 2025–30ರ ಅಡಿಯಲ್ಲಿ ₹50 ಸಾವಿರ ಕೋಟಿ ಹೂಡಿಕೆ ಆಕರ್ಷಣೆ, 1 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದೆ’ ಎಂದು ತಿಳಿಸಿದರು.</p>.<p>‘ಜಪಾನ್ನ ಉದ್ಯಮ ವಲಯದೊಂದಿಗೆ ಕರ್ನಾಟಕದ ಸಂಬಂಧ ನಾಲ್ಕು ದಶಕಕ್ಕೂ ಹಿಂದಿನಿಂದ ಇದೆ. ಪ್ರಮುಖ ಕಂಪೆನಿಗಳು ಬೆಂಗಳೂರಿನಲ್ಲಿ ಘಟಕಗಳನ್ನು ಹೊಂದಿವೆ. ಶುದ್ದ ಇಂಧನ, ಬ್ಯಾಟರಿ ತಂತ್ರಜ್ಞಾನ, ಸಾಫ್ಟ್ವೇರ್ ನಿರೂಪಿತ ವಾಹನಗಳು, ಬಹುಮಾರ್ಗದ ಮೊಬಿಲಿಟಿ ಮುಂದಿನ ಹೆಜ್ಜೆ. ಜಪಾನ್ನೊಂದಿಗೆ ಈ ನಿಟ್ಟಿನಲ್ಲಿ ಸಹಯೋಗ ಪಡೆಯಲು ಕರ್ನಾಟಕ ಸದಾ ಸಿದ್ದವಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮುಂದಿನ ಪೀಳಿಗೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಜತೆಗೆ ಹೈಡ್ರೋಜನ್ ಮೊಬಿಲಿಟಿ, ಇಂಧನ ಆಧರಿತ ಸ್ಮಾರ್ಟ್ ಸಾರಿಗೆ ವಲಯಲ್ಲಿ ಭಾರತ ಹಾಗೂ ಜಪಾನ್ ದೇಶಗಳು ಬಾಂಧವ್ಯ ವೃದ್ದಿಗೆ ಒತ್ತು ನೀಡುತ್ತಿವೆ’ ಎಂದು ಕೇಂದ್ರ ನೀತಿ ಆಯೋಗ ಸದಸ್ಯ ವಿ.ಕೆ.ಸಾರಸ್ವತ್ ತಿಳಿಸಿದರು.</p>.<p>ನೀತಿ ಆಯೋಗ ಹಾಗೂ ಜಪಾನ್ ಹಣಕಾಸು, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ನಗರದಲ್ಲಿ ಗುರುವಾರ ಆಯೋಜಿಸಿದ್ದ ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ-2026 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಉಭಯ ದೇಶಗಳು ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯ ಮುಂದುವರೆಸಿಕೊಂಡು ಬಂದಿವೆ. ಆದರೆ, ಹೊಸ ತಲೆಮಾರಿನ ಆಶೋತ್ತರಗಳಿಗೆ ಪೂರಕವಾಗಿ ಯೋಜನೆ ರೂಪಿಸಲಾಗುತ್ತಿದೆ. ಭಾರತವು ಜಪಾನ್ಗೆ ಸಾಫ್ಟ್ವೇರ್ ಹಾಗೂ ಎಐ ವಲಯದಲ್ಲಿನ ಮಾರುಕಟ್ಟೆ ವಿಸ್ತರಣೆಗೆ ನೆರವಾದರೆ, ಜಪಾನ್ ಶುದ್ದ ಇಂಧನ, ಮೊಬಿಲಿಟಿ ವಲಯದಲ್ಲಿ ಬಾಂಧವ್ಯ ವೃದ್ದಿಗೆ ಒತ್ತು ನೀಡಲಿದೆ’ ಎಂದು ಹೇಳಿದರು.</p>.<p>‘ಸಾರಿಗೆ ರೂಪಾಂತರವು ಕೇವಲ ಒಂದು ವಲಯದ ಸುಧಾರಣೆಯಲ್ಲ; ಇದು ಇಂಧನ, ಮೂಲಸೌಕರ್ಯ, ದತ್ತಾಂಶ ಮತ್ತು ಉದ್ಯಮದ ರಚನಾತ್ಮಕ ಮರುವಿನ್ಯಾಸವಾಗಿದೆ. ಈಗ ಹೈಡ್ರೋಜನ್ ಮೊಬಿಲಿಟಿ ಬಳಸಿಕೊಂಡು ಶುದ್ದ ಇಂಧನದ ಮೂಲಕ ಸ್ಮಾರ್ಟ್ ಸಾರಿಗೆ ವ್ಯವಸ್ಥೆ ಕಡೆಗೆ ಮುಂದಡಿ ಇಡುತ್ತಿದ್ದೇವೆ. ಭವಿಷ್ಯದ ಸುಧಾರಿತ ವಾಹನಗಳನ್ನು ಭಾರತಕ್ಕೆ ಜಪಾನ್ ಒದಗಿಸಲು ಸಿದ್ದವಿದೆ. ಸಮಗ್ರ ಮೊಬಿಟಿಲಿ ವೇದಿಕೆಯನ್ನು ಭಾರತ ಸಿದ್ದಪಡಿಸಿಕೊಳ್ಳಲು ಇದು ನೆರವಾಗಲಿದೆ’ ಎಂದು ತಿಳಿಸಿದರು.</p>.<p>ಜಪಾನ್ನ ಆಟೋಮೊಟಿವ್ ಇಂಟರ್ನ್ಯಾಷನಲ್ ಟ್ರೇಡ್ ಪಾಲಿಸಿ ನಿರ್ದೇಶಕ ಕೀಸುಕೆ ಹೊಸೊನುಮಾ ಮಾತನಾಡಿ, ‘ಸಾರಿಗೆ ಕ್ಷೇತ್ರದಲ್ಲಿ ಇಂಗಾಲದ ತಟಸ್ಥತೆಯ ಬದಲಾವಣೆಯು ಹಾದಿಯಷ್ಟೇ ಅಲ್ಲ. ಆಯಾ ಮಾರುಕಟ್ಟೆ ಆರ್ಥಿಕ ವಾಸ್ತವ, ನೀತಿ ಮತ್ತು ಗ್ರಾಹಕರ ಆದ್ಯತೆಗಳ ಆಧಾರದ ಮೇಲೆ ವಿಭಿನ್ನ ಪರಿಹಾರಗಳ ಅಗತ್ಯವಿರುತ್ತದೆ. ಈ ಪ್ರಯಾಣದಲ್ಲಿ ಭಾರತವು ನಿರ್ಣಾಯಕ ಪಾಲುದಾರನಾಗಿದ್ದು, ನಾವೀನ್ಯತೆ, ವಿಸ್ತರಣೆ ಮತ್ತು ಸುಸ್ಥಿರ ಸಾರಿಗೆ ಅಭಿವೃದ್ಧಿಗೆ ಅವಕಾಶ ನೀಡುತ್ತದೆ ’ ಎಂದು ತಿಳಿಸಿದರು.</p>.<p>ಜಪಾನ್ ಆರ್ಥಿಕ, ವ್ಯಾಪಾರ ಹಾಗೂ ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿ ನರಿತೋಶಿ ಟಕಾಯಾಮಾ. ಟೊಯೊಟಾ ಕಂಪೆನಿಯ ಗೀತಾಂಜಲಿ ಕಿರ್ಲೋಸ್ಕರ್, ಜಪಾನ್ ದೂತವಾಸ ಅಧಿಕಾರಿ ಯಮಝಕಿ ಉಪಸ್ಥಿತರಿದ್ದರು.</p>.<p>ಜಪಾನ್ ಭಾರತ ಮೊಬಿಲಿಟಿ ಶೃಂಗಸಭೆಯಲ್ಲಿ ಶುದ್ದ ಇಂಧನ, ಎಲೆಕ್ಟ್ರಿಕ್ ವಾಹನ, ಜೈವಿಕ ಇಂಧನ, ಜಸಿರು ಹೈಡ್ರೋಜನ್ವ ಡಿಜಿಟಲ್ ತಂತ್ರಜ್ಞಾನ, ನಾವಿನ್ಯತೆ ಕುರಿತು ತಜ್ಞರು, ಉದ್ಯಮ ಕ್ಷೇತ್ರದವರು, ನೀತಿ ನಿರೂಪಕರು, ತಂತ್ರಜ್ಞಾನ ವಲಯದ 200 ಪ್ರಮುಖರು ವಿಸ್ತೃತವಾಗಿ ಚರ್ಚಿಸಿದರು.</p>.<h2>₹50 ಸಾವಿರ ಕೋಟಿ ಹೂಡಿಕೆ ಆಕರ್ಷಣೆ’: ಸೆಲ್ವಕುಮಾರ್</h2><p>ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮಾತನಾಡಿ, ‘ಕರ್ನಾಟಕ ಸರ್ಕಾರವು ರೂಪಿಸಿರುವ ಕ್ಲೀನ್ ಮೊಬಿಲಿಟಿ ನೀತಿ 2025–30ರ ಅಡಿಯಲ್ಲಿ ₹50 ಸಾವಿರ ಕೋಟಿ ಹೂಡಿಕೆ ಆಕರ್ಷಣೆ, 1 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದೆ’ ಎಂದು ತಿಳಿಸಿದರು.</p>.<p>‘ಜಪಾನ್ನ ಉದ್ಯಮ ವಲಯದೊಂದಿಗೆ ಕರ್ನಾಟಕದ ಸಂಬಂಧ ನಾಲ್ಕು ದಶಕಕ್ಕೂ ಹಿಂದಿನಿಂದ ಇದೆ. ಪ್ರಮುಖ ಕಂಪೆನಿಗಳು ಬೆಂಗಳೂರಿನಲ್ಲಿ ಘಟಕಗಳನ್ನು ಹೊಂದಿವೆ. ಶುದ್ದ ಇಂಧನ, ಬ್ಯಾಟರಿ ತಂತ್ರಜ್ಞಾನ, ಸಾಫ್ಟ್ವೇರ್ ನಿರೂಪಿತ ವಾಹನಗಳು, ಬಹುಮಾರ್ಗದ ಮೊಬಿಲಿಟಿ ಮುಂದಿನ ಹೆಜ್ಜೆ. ಜಪಾನ್ನೊಂದಿಗೆ ಈ ನಿಟ್ಟಿನಲ್ಲಿ ಸಹಯೋಗ ಪಡೆಯಲು ಕರ್ನಾಟಕ ಸದಾ ಸಿದ್ದವಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>