ಮೇ 18 ದೇವೇಗೌಡರ ಜನ್ಮದಿನ. ಅಂದೇ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಸೋಮವಾರ ಜೆಡಿಎಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಎಲ್ಲ ಜನವಿರೋಧಿ ಕಾರ್ಯಕ್ರಮವನ್ನೂ ರದ್ದುಪಡಿಸಲಾಗುವುದು. ಮುಖ್ಯಮಂತ್ರಿ ಆದರೂ ಬೆಂಗಳೂರಿನ ಸರ್ಕಾರಿ ಬಂಗಲೆ, ಹೋಟೆಲ್ಗಳಲ್ಲಿ ಇರುವುದಿಲ್ಲ. ಬಿಡದಿಯ ಕೇತಗಾನಹಳ್ಳಿಯ ಮನೆಯಲ್ಲಿಯೇ ಇರುತ್ತೇನೆ. ಯಾರು ಬೇಕಾದರೂ ಬಂದು ನನ್ನಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಬಹುದು’ ಎಂದರು.