<p><strong>ಕಲಘಟಗಿ</strong>: ತಾಲ್ಲೂಕಿನ ಹುಲ್ಲಂಬಿ ಗ್ರಾಮದ ರೈತರ ಕೃಷಿ ಜಮೀನುಗಳ ವಿಸ್ತೀರ್ಣ ನಿಗದಿಪಡಿಸಿ ಪೋಡಿ ಮಾಡಿಕೊಡುವಂತೆ ಒತ್ತಾಯಿಸಿ ಏ. 20ರಿಂದ ಬೆಂಗಳೂರಿನ ವಿಧಾನಸೌಧ ಮುಂದೆ ಗ್ರಾಮದ ರೈತರೊಂದಿಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರಾದ ಸುಭಾಸ ಸುಣಗಾರ ಹೇಳಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲ್ಲಂಬಿ ಗ್ರಾಮದ ರಿ.ಸ.ನಂ 23 ರ ಕ್ಷೇತ್ರ 59 ಎಕ್ಕರೆ 27 ಗುಂಟೆ ಹಾಗೂ 145 ರ 121 ಎಕ್ಕರೆ 32 ಗುಂಟೆ ಜಮೀನಿಗೆ ಆಕಾರ ನಿಗದಿ ಪಡಿಸಿ ಪೋಡಿ ಮಾಡಿಕೊಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ 3 ವರ್ಷ ಮುಗಿಯುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರು.</p>.<p>ಪೂರ್ವಜರ ಕಾಲದಿಂದ ಜಮೀನು ಉಳುಮೆ ಮಾಡುತ್ತಿದ್ದು ಅವರು ಕೂಡಾ ಅಲೆದಾಡಿ ಸುಸ್ತಾಗಿ 3 ವರ್ಷಗಳ ಹಿಂದೆ ಮಕ್ಕಳು ಕೂಡಾ ಅರ್ಜಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ. ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ನೀಡಿದ್ದು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದರು ಗಮನಹರಿಸುತ್ತಿಲ್ಲ ಎಂದರು.</p>.<p>ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು 2025ರ ಡಿಸೆಂಬರ್ನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಭರವಸೆ ನೀಡಿದ್ದರು. ಇದರಿಂದ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಇದುವರೆಗೂ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.</p>.<p>ರಾಜ್ಯ ಸರ್ಕಾರವಾದರೂ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಬೆಂಗಳೂರು ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಲು ಗ್ರಾಮದ ರೈತರೊಂದಿಗೆ ತೆರಳುತ್ತಿದ್ದೇವೆ ಎಂದರು.</p>.<p>ಗ್ರಾಮದ ರೈತರಾದ ಬಸಪ್ಪ ಬಿಸರಳ್ಳಿ, ಸಾದೇವಪ್ಪ ಹೊನ್ನಳಿ, ಶಿವಪ್ಪ ಮಲ್ನಾಡದ, ಸಿದ್ದಯ್ಯ ತಂಬೂರ, ರಾಚಪ್ಪ ಬಿಸರಳ್ಳಿ, ಶಂಕ್ರಪ್ಪ ಸಾಗರ, ನಾಗಪ್ಪ ಶಿಗ್ಗಟ್ಟಿ, ಶಂಕ್ರಪ್ಪ ನಡುವಿನಮನಿ, ಪುಷ್ಪಾ ಬಡಿಗೇರ, ಪಕ್ಕೀರಪ್ಪ ಬಿಸರಳ್ಳಿ,ಮಾದೇವಪ್ಪ ಬಿಸರಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ</strong>: ತಾಲ್ಲೂಕಿನ ಹುಲ್ಲಂಬಿ ಗ್ರಾಮದ ರೈತರ ಕೃಷಿ ಜಮೀನುಗಳ ವಿಸ್ತೀರ್ಣ ನಿಗದಿಪಡಿಸಿ ಪೋಡಿ ಮಾಡಿಕೊಡುವಂತೆ ಒತ್ತಾಯಿಸಿ ಏ. 20ರಿಂದ ಬೆಂಗಳೂರಿನ ವಿಧಾನಸೌಧ ಮುಂದೆ ಗ್ರಾಮದ ರೈತರೊಂದಿಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರಾದ ಸುಭಾಸ ಸುಣಗಾರ ಹೇಳಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲ್ಲಂಬಿ ಗ್ರಾಮದ ರಿ.ಸ.ನಂ 23 ರ ಕ್ಷೇತ್ರ 59 ಎಕ್ಕರೆ 27 ಗುಂಟೆ ಹಾಗೂ 145 ರ 121 ಎಕ್ಕರೆ 32 ಗುಂಟೆ ಜಮೀನಿಗೆ ಆಕಾರ ನಿಗದಿ ಪಡಿಸಿ ಪೋಡಿ ಮಾಡಿಕೊಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ 3 ವರ್ಷ ಮುಗಿಯುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರು.</p>.<p>ಪೂರ್ವಜರ ಕಾಲದಿಂದ ಜಮೀನು ಉಳುಮೆ ಮಾಡುತ್ತಿದ್ದು ಅವರು ಕೂಡಾ ಅಲೆದಾಡಿ ಸುಸ್ತಾಗಿ 3 ವರ್ಷಗಳ ಹಿಂದೆ ಮಕ್ಕಳು ಕೂಡಾ ಅರ್ಜಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ. ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ನೀಡಿದ್ದು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದರು ಗಮನಹರಿಸುತ್ತಿಲ್ಲ ಎಂದರು.</p>.<p>ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು 2025ರ ಡಿಸೆಂಬರ್ನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಭರವಸೆ ನೀಡಿದ್ದರು. ಇದರಿಂದ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಇದುವರೆಗೂ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.</p>.<p>ರಾಜ್ಯ ಸರ್ಕಾರವಾದರೂ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಬೆಂಗಳೂರು ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಲು ಗ್ರಾಮದ ರೈತರೊಂದಿಗೆ ತೆರಳುತ್ತಿದ್ದೇವೆ ಎಂದರು.</p>.<p>ಗ್ರಾಮದ ರೈತರಾದ ಬಸಪ್ಪ ಬಿಸರಳ್ಳಿ, ಸಾದೇವಪ್ಪ ಹೊನ್ನಳಿ, ಶಿವಪ್ಪ ಮಲ್ನಾಡದ, ಸಿದ್ದಯ್ಯ ತಂಬೂರ, ರಾಚಪ್ಪ ಬಿಸರಳ್ಳಿ, ಶಂಕ್ರಪ್ಪ ಸಾಗರ, ನಾಗಪ್ಪ ಶಿಗ್ಗಟ್ಟಿ, ಶಂಕ್ರಪ್ಪ ನಡುವಿನಮನಿ, ಪುಷ್ಪಾ ಬಡಿಗೇರ, ಪಕ್ಕೀರಪ್ಪ ಬಿಸರಳ್ಳಿ,ಮಾದೇವಪ್ಪ ಬಿಸರಳ್ಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>