ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದೆ. 2020ನೇ ಸಾಲಿಗೆ ಮಂಡ್ಯದ ಲಾವಣಿ ಪದ ಕಲಾವಿದ ಆರ್.ಕೆ. ಸ್ವಾಮಿ, ಚನ್ನಪಟ್ಟಣದ ಡೊಳ್ಳುಕುಣಿತ ಕಲಾವಿದೆ ಲಕ್ಷ್ಮಿ ಶ್ರೀನಿವಾಸ್ ಹಾಗೂ ಶ್ರೀರಂಗಪಟ್ಟಣದ ನೀಲಗಾರರ ಪದ ಹಾಡುವ ಕಲಾವಿದ ಮಂಟೆ ಲಿಂಗಯ್ಯ ಆಯ್ಕೆಯಾಗಿದ್ದಾರೆ.