<p><strong>ಬೆಂಗಳೂರು:</strong> ನಾಯಕತ್ವ ಬದಲಾವಣೆ ಕುರಿತು ಆಡಳಿತ ಪಕ್ಷದ ಸದಸ್ಯರೇ ಪರ–ವಿರೋಧ ಹೇಳಿಕೆ ನೀಡಿದ್ದಾರೆ. ಈ ಗೊಂದಲ ಬಜೆಟ್ ಮೇಲೂ ಪರಿಣಾಮ ಬೀರಿದೆ ಎಂದು ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಹೇಳಿದರು.</p>.<p>ವಿಧಾನಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬೆಳಗಾವಿ ಅಧಿವೇಶನದಲ್ಲೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪ ಮಾಡಲಾಗಿತ್ತು. ಇದು ನಾಯಕತ್ವ ಬದಲಾವಣೆಯ ಒಪ್ಪಂದದ ಫಲ. ಈ ಬೆಳವಣಿಗೆ ನಂತರ ಮುಖ್ಯಮಂತ್ರಿಯವರು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ’ ಎಂದರು.</p>.<p>ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ‘ಮುಖ್ಯಮಂತ್ರಿ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎನಿಸಿದರೆ ಅವಿಶ್ವಾಸ ನಿರ್ಣಯ ಮಂಡಿಸಿ, ಆಗ ಬಿಜೆಪಿಗೆ ವಾಸ್ತವದ ಅರಿವಾಗುತ್ತದೆ’ ಎಂದು ಸವಾಲು ಹಾಕಿದರು. </p>.<p>ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ‘ಒಪ್ಪಂದದ ಬಗ್ಗೆ ಕಾಂಗ್ರಸ್ ಹೈಕಮಾಂಡ್ ನಿಮಗೆ ಹೇಳಿದೆಯಾ’ ಎಂದು ಪ್ರಶ್ನಿಸಿದರು. ಈ ವಿಚಾರ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು. </p>.<p>ಮಾತು ಮುಂದುವರಿಸಿದ ಪ್ರತಾಪ್ಸಿಂಹ ನಾಯಕ್, ‘ಆಡಳಿತ ಪಕ್ಷದ ಗೊಂದಲ, ಕಿತ್ತಾಟ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಬಜೆಟ್ ಮಂಡಿಸುವಾಗ ಮುಖ್ಯಮಂತ್ರಿ ಅವರಲ್ಲಿ ಉತ್ಸಾಹವೇ ಇರಲಿಲ್ಲ. ಕಾಂಗ್ರೆಸ್ ಶಾಸಕರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ’ ಎಂದರು.</p>.<p>ಕಾಂಗ್ರೆಸ್ನ ಕೆ.ಶಿವಕುಮಾರ್, ಉಮಾಶ್ರೀ, ಡಿ.ಟಿ.ಶ್ರೀನಿವಾಸ್, ಬಿಜೆಪಿಯ ಕಿಶೋರ್ಕುಮಾರ್ ಪುತ್ತೂರು ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.</p>.<p><strong>ಸದಸ್ಯರು ಕಿಮ್ಮತ್ತು ನೀಡುವುದಿಲ್ಲ: ಹೊರಟ್ಟಿ</strong></p><p>ನಿಗದಿತ ಸಮಯದ ಒಳಗೆ ಮಾತು ಮುಗಿಸಲು, ಒಬ್ಬರು ಮಾತನಾಡುವಾಗ ಅನಗತ್ಯವಾಗಿ ಎದ್ದು ನಿಲ್ಲುವವರನ್ನು ಎಚ್ಚರಿಸಲು ಬೆಲ್ ಹೊಡೆದರೂ ಸದಸ್ಯರು ಕಿಮ್ಮತ್ತು ನೀಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.</p><p>ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಮಾತನಾಡುವಾಗ ಕಾಂಗ್ರೆಸ್ನ ಐವನ್ ಡಿಸೋಜ ಸೇರಿದಂತೆ ಕೆಲ ಸದಸ್ಯರು ಪದೇಪದೇ ಎದ್ದು ನಿಂತು ಅಡ್ಡಿಪಡಿಸಿದಾಗ ಕೋಪಗೊಂಡ ಸಭಾಪತಿ, ‘ನಿಮಗೆ ತಿಳಿದಂತೆ ಮಾಡಿ, ನಿಯಮಗಳನ್ನು ಪಾಲನೆ ಮಾಡುವುದು ತಿಳಿಯದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.</p>.<p><strong>ಮೂರು ಗಂಟೆಯೂ ವಿದ್ಯುತ್ ಇಲ್ಲ’</strong></p><p>ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಮೂರು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ ಎಂದು ಬಿಜೆಪಿಯ ಸಿ.ಟಿ.ರವಿ ದೂರಿದರು.</p><p>ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ನ ಗೋವಿಂದ ರಾಜು, ‘ಇದು ಸಾಲದ ಸರ್ಕಾರ. ವಿದ್ಯುತ್ ಇಲಾಖೆ ಕೂಡ ಸಾಲದಲ್ಲೇ ನಡೆಯುತ್ತಿದೆ’ ಎಂದರು.</p><p>ಇಂಧನ ಸಚಿವ ಕೆ.ಜೆ. ಜಾರ್ಜ್, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ವಿದ್ಯುತ್ ಇಲಾಖೆಗಳು ಸಾಲದಲ್ಲಿವೆ. ಕಡಿಮೆ ಶುಲ್ಕ ಪಡೆದು ವಿದ್ಯುತ್ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿದ್ಯುತ್ ಶುಲ್ಕ ಕಡಿಮೆ ಇದೆ ಎಂದು ಸಮಜಾಯಿಷಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾಯಕತ್ವ ಬದಲಾವಣೆ ಕುರಿತು ಆಡಳಿತ ಪಕ್ಷದ ಸದಸ್ಯರೇ ಪರ–ವಿರೋಧ ಹೇಳಿಕೆ ನೀಡಿದ್ದಾರೆ. ಈ ಗೊಂದಲ ಬಜೆಟ್ ಮೇಲೂ ಪರಿಣಾಮ ಬೀರಿದೆ ಎಂದು ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಹೇಳಿದರು.</p>.<p>ವಿಧಾನಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬೆಳಗಾವಿ ಅಧಿವೇಶನದಲ್ಲೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪ ಮಾಡಲಾಗಿತ್ತು. ಇದು ನಾಯಕತ್ವ ಬದಲಾವಣೆಯ ಒಪ್ಪಂದದ ಫಲ. ಈ ಬೆಳವಣಿಗೆ ನಂತರ ಮುಖ್ಯಮಂತ್ರಿಯವರು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ’ ಎಂದರು.</p>.<p>ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ‘ಮುಖ್ಯಮಂತ್ರಿ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎನಿಸಿದರೆ ಅವಿಶ್ವಾಸ ನಿರ್ಣಯ ಮಂಡಿಸಿ, ಆಗ ಬಿಜೆಪಿಗೆ ವಾಸ್ತವದ ಅರಿವಾಗುತ್ತದೆ’ ಎಂದು ಸವಾಲು ಹಾಕಿದರು. </p>.<p>ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ‘ಒಪ್ಪಂದದ ಬಗ್ಗೆ ಕಾಂಗ್ರಸ್ ಹೈಕಮಾಂಡ್ ನಿಮಗೆ ಹೇಳಿದೆಯಾ’ ಎಂದು ಪ್ರಶ್ನಿಸಿದರು. ಈ ವಿಚಾರ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು. </p>.<p>ಮಾತು ಮುಂದುವರಿಸಿದ ಪ್ರತಾಪ್ಸಿಂಹ ನಾಯಕ್, ‘ಆಡಳಿತ ಪಕ್ಷದ ಗೊಂದಲ, ಕಿತ್ತಾಟ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಬಜೆಟ್ ಮಂಡಿಸುವಾಗ ಮುಖ್ಯಮಂತ್ರಿ ಅವರಲ್ಲಿ ಉತ್ಸಾಹವೇ ಇರಲಿಲ್ಲ. ಕಾಂಗ್ರೆಸ್ ಶಾಸಕರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ’ ಎಂದರು.</p>.<p>ಕಾಂಗ್ರೆಸ್ನ ಕೆ.ಶಿವಕುಮಾರ್, ಉಮಾಶ್ರೀ, ಡಿ.ಟಿ.ಶ್ರೀನಿವಾಸ್, ಬಿಜೆಪಿಯ ಕಿಶೋರ್ಕುಮಾರ್ ಪುತ್ತೂರು ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.</p>.<p><strong>ಸದಸ್ಯರು ಕಿಮ್ಮತ್ತು ನೀಡುವುದಿಲ್ಲ: ಹೊರಟ್ಟಿ</strong></p><p>ನಿಗದಿತ ಸಮಯದ ಒಳಗೆ ಮಾತು ಮುಗಿಸಲು, ಒಬ್ಬರು ಮಾತನಾಡುವಾಗ ಅನಗತ್ಯವಾಗಿ ಎದ್ದು ನಿಲ್ಲುವವರನ್ನು ಎಚ್ಚರಿಸಲು ಬೆಲ್ ಹೊಡೆದರೂ ಸದಸ್ಯರು ಕಿಮ್ಮತ್ತು ನೀಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.</p><p>ಬಿಜೆಪಿಯ ಪ್ರತಾಪ್ಸಿಂಹ ನಾಯಕ್ ಮಾತನಾಡುವಾಗ ಕಾಂಗ್ರೆಸ್ನ ಐವನ್ ಡಿಸೋಜ ಸೇರಿದಂತೆ ಕೆಲ ಸದಸ್ಯರು ಪದೇಪದೇ ಎದ್ದು ನಿಂತು ಅಡ್ಡಿಪಡಿಸಿದಾಗ ಕೋಪಗೊಂಡ ಸಭಾಪತಿ, ‘ನಿಮಗೆ ತಿಳಿದಂತೆ ಮಾಡಿ, ನಿಯಮಗಳನ್ನು ಪಾಲನೆ ಮಾಡುವುದು ತಿಳಿಯದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.</p>.<p><strong>ಮೂರು ಗಂಟೆಯೂ ವಿದ್ಯುತ್ ಇಲ್ಲ’</strong></p><p>ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಮೂರು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ ಎಂದು ಬಿಜೆಪಿಯ ಸಿ.ಟಿ.ರವಿ ದೂರಿದರು.</p><p>ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ನ ಗೋವಿಂದ ರಾಜು, ‘ಇದು ಸಾಲದ ಸರ್ಕಾರ. ವಿದ್ಯುತ್ ಇಲಾಖೆ ಕೂಡ ಸಾಲದಲ್ಲೇ ನಡೆಯುತ್ತಿದೆ’ ಎಂದರು.</p><p>ಇಂಧನ ಸಚಿವ ಕೆ.ಜೆ. ಜಾರ್ಜ್, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ವಿದ್ಯುತ್ ಇಲಾಖೆಗಳು ಸಾಲದಲ್ಲಿವೆ. ಕಡಿಮೆ ಶುಲ್ಕ ಪಡೆದು ವಿದ್ಯುತ್ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿದ್ಯುತ್ ಶುಲ್ಕ ಕಡಿಮೆ ಇದೆ ಎಂದು ಸಮಜಾಯಿಷಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>