<p><strong>ಬೆಂಗಳೂರು</strong>: ‘ರಾಜ್ಯವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿಲ್ಲ. ಇತರ ಪ್ರಗತಿಶೀಲ ರಾಜ್ಯಗಳು ಮತ್ತು ಕೇಂದ್ರಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇರುವುದರಿಂದಲೇ ರಾಜ್ಯದ ಬೆಳವಣಿಗೆ ದರ ಶೇ 9.4ರಷ್ಟಿದೆ. ನಾಡಿನ ಆರ್ಥಿಕತೆಯನ್ನು ದೇಶದಲ್ಲಿಯೇ ನಂಬರ್ 1 ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.</p>.<p>ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಬುಧವಾರ ಐದು ತಾಸಿಗೂ ಹೆಚ್ಚು ಹೊತ್ತು ಉತ್ತರ ನೀಡಿದ ಅವರು, ‘ವಿತ್ತೀಯ ಬೆಳವಣಿಗೆ ದರ ದೇಶದ ಬೆಳವಣಿಗೆ ದರವನ್ನೂ ಹಿಂದಿಕ್ಕಿದೆ. ಬಿಕ್ಕಟ್ಟು ಇದ್ದರೆ ಇದು ಸಾಧ್ಯವಾಗುತ್ತಿತ್ತೇ’ ಎಂದು ವಿರೋಧ ಪಕ್ಷದ ಸದಸ್ಯರನ್ನು ಪ್ರಶ್ನಿಸಿದರು.</p>.<p>ಮುಖ್ಯಮಂತ್ರಿಯವರು ನೀಡಿದ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷದ ಬಿಜೆಪಿಯ ಸದಸ್ಯರು, ‘ಈ ಬಜೆಟ್ ಅಭಿವೃದ್ಧಿ ವಿರೋಧಿ’ ಎಂದು ಘೋಷಣೆ ಕೂಗುತ್ತಾ ಆರ್. ಅಶೋಕ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.</p>.<p>ಅದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯ, ‘2026–27ರ ಬಜೆಟ್ ಗಾತ್ರ ₹4.48 ಲಕ್ಷ ಕೋಟಿ. 2025–26ರಲ್ಲಿ ಬಜೆಟ್ ಗಾತ್ರ ₹4.09 ಲಕ್ಷ ಕೋಟಿ ಇತ್ತು. ಕಳೆದ ವರ್ಷಕ್ಕಿಂತ ಈ ಬಾರಿಯ ಬಜೆಟ್ ಗಾತ್ರ ₹38,455 ಕೋಟಿ ಹೆಚ್ಚಾಗಿದೆ. ಕೇಂದ್ರದ ಬಜೆಟ್ ಗಾತ್ರ ಈ ಬಾರಿ ₹53.47 ಲಕ್ಷ ಕೋಟಿ ಇದೆ. ಆರ್ಥಿಕ ಬೆಳವಣಿಗೆ ದರ ಶೇ 5.6ರಷ್ಟಿದೆ. ಕರ್ನಾಟಕದ ಜಿಡಿಪಿಯು (ಒಟ್ಟು ದೇಶೀಯ ಉತ್ಪನ್ನ) 2026–27ಕ್ಕೆ ₹33,05,500 ಕೋಟಿ, ಅಂದರೆ ಜಿಡಿಪಿ ಬೆಳವಣಿಗೆ ಶೇ 8.1 ಇದೆ. ಆದರೆ, ದೇಶದ ಜಿಡಿಪಿ ಬೆಳವಣಿಗೆ ಶೇ 7.4 ಮಾತ್ರ ಇದೆ. ದೇಶದ ಆರ್ಥಿಕ ಬೆಳವಣಿಗೆಗಿಂತ, ರಾಜ್ಯದ ಆರ್ಥಿಕ ಬೆಳವಣಿಗೆ ಹೆಚ್ಚು’ ಎಂದು ಬಲವಾಗಿ ಪ್ರತಿಪಾದಿಸಿದರು.</p>.<p>‘ನಮ್ಮ ಸರ್ಕಾರ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ಇಷ್ಟೆಲ್ಲದರ ನಡುವೆ ನಮ್ಮ ವಿತ್ತೀಯ ಶಿಸ್ತು ಹಾಳು ಮಾಡಿಲ್ಲ. ವಿತ್ತೀಯ ಕೊರತೆ ಶೇ 3ರೊಳಗಿರಬೇಕು. ಇದು ಶೇ 2.95ರ ಮಿತಿಯೊಳಗೆ ಇರಲಿದೆ’ ಎಂದು ತಿಳಿಸಿದರು.</p>.<p>‘ಒಟ್ಟು ಸಾಲ ಜಿಡಿಪಿಯ ಶೇ 25ರಷ್ಟನ್ನು ಮೀರಬಾರದು ಎಂಬ ಆರ್ಥಿಕ ಶಿಸ್ತನ್ನು ತರಲು ಇರುವ ಮಾನದಂಡಗಳನ್ನು ರಾಜ್ಯ ಸರ್ಕಾರ ಪೂರೈಸಿದೆ. ಸಾಲದ ಮೊತ್ತ ಶೇ 24.94ರಷ್ಟಿದೆ. ಮಿಗತೆ ಬಜೆಟ್ ಆಗದೇ ವಿತ್ತೀಯ ಕೊರತೆ ಆಗಿದೆ. ಇದಕ್ಕೆ ಕಾರಣಗಳಿವೆ’ ಎಂದರು.</p>.<p>‘ದಕ್ಷಿಣ ಭಾರತದ ನಮ್ಮ ಸುತ್ತಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗದಿತ ಮಟ್ಟದ ಒಳಗೇ ಇದೆ. ಮಹಾರಾಷ್ಟ್ರ ಶೇ 3.0, ಆಂಧ್ರ ಶೇ 4.5, ಕೇರಳ ಶೇ 3.8, ತಮಿಳುನಾಡು ಶೇ 3.5 ಇದೆ’ ಎಂದು ವಿವರ ನೀಡಿದರು.</p>.<p>‘ರಾಜಸ್ವ ಸಂಗ್ರಹದ ವಿಷಯಕ್ಕೆ ಬಂದರೆ, ಕಳೆದ ವರ್ಷದ ಬಜೆಟ್ಗಿಂತ ಸುಮಾರು ₹22,573 ಕೋಟಿ ಹೆಚ್ಚು ಸಂಗ್ರಹ ಆಗಬಹುದು. ₹2.92 ಲಕ್ಷ ಕೋಟಿಗಳಿದ್ದ ಕಳೆದ ವರ್ಷದ ಅಂದಾಜು ಈ ವರ್ಷ ₹3.15 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದ್ದೇವೆ’ ಎಂದು ಸಿದ್ದರಾಮಯ್ಯ ವಿವರಿಸಿದರು.</p>.<p>‘ಕೇಂದ್ರ ಸರ್ಕಾರ ಮಾಡಿದ ದ್ರೋಹದಿಂದ, ಜಿಎಸ್ಟಿ ಪರಿಹಾರ ಸಿಗದ ಕಾರಣ ಸುಮಾರು ₹2 ಲಕ್ಷ ಕೋಟಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಆಗಿದೆ. ಪರಿಸ್ಥಿತಿ ಹೀಗಾದರೆ ರಾಜ್ಯಗಳ ಆರ್ಥಿಕತೆ ಹೇಗೆ ಉಳಿಯುತ್ತದೆ? ಇಷ್ಟೆಲ್ಲದರ ನಡುವೆಯೂ ರಾಜ್ಯವನ್ನು ಸಶಕ್ತವಾಗಿ ಮುನ್ನಡೆಸುತ್ತಿದ್ದೇವೆ. ಗ್ಯಾರಂಟಿಯಂತಹ ಕಲ್ಯಾಣ ಯೋಜನೆಗಳಿಗೆ ನಯಾಪೈಸೆ ಖರ್ಚು ಮಾಡದ ಗುಜರಾತ್ ಈ ಬಾರಿ ₹1 ಲಕ್ಷ ಕೋಟಿ ಸಾಲ ಮಾಡುತ್ತಿದೆ’ ಎಂದರು.</p>.<p>‘ನಾವು ಸಮಾಜದ ಎಲ್ಲ ಅಶಕ್ತರಿಗೆ ಶಕ್ತಿ ತುಂಬುತ್ತಿದ್ದೇವೆ. ಬಿಜೆಪಿಯು ‘ಟಿಕಲ್ ಡೌನ್ ಎಕಾನಮಿ’ಯಲ್ಲಿ ನಂಬಿಕೆ ಇರಿಸಿದೆ. ನಮ್ಮದು ‘ಯೂನಿವರ್ಸಲ್ ಬೇಸಿಕ್ ಇನ್ಕಂ’ ಹಾಗೂ ಬೇಡಿಕೆಯ ಆರ್ಥಿಕ ತತ್ವ ಆಧರಿಸಿದೆ. ಬುದ್ಧನ ಕರುಣೆ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ನಮ್ಮ ಬಜೆಟ್ ಆಧರಿಸಿದೆ’ ಎಂದು ಹೇಳಿದರು.</p>.<p>‘ನಮ್ಮ ಬಜೆಟ್ ಕುರಿತು ‘ಪ್ರಜಾವಾಣಿ’ ಸಂಪಾದಕೀಯ ಸೇರಿ ಹಲವು ಪತ್ರಿಕೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಿರಣ್ ಮಜುಂದಾರ್ ಸೇರಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ ಸಿದ್ದರಾಮಯ್ಯ, ಅವರ ಮಾತುಗಳನ್ನು ಸದನದಲ್ಲಿ ಉಲ್ಲೇಖಿಸಿದರು.</p>.<p><strong>ಸಿಎಂ ಸ್ಥಾನ: ಡಿಕೆಶಿ ಹೆಸರೆತ್ತದ ಸಿದ್ದರಾಮಯ್ಯ</strong></p><p> ‘ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ಖುಷಿ ಪಡುತ್ತೇನೆ. ಪರಮೇಶ್ವರ ಮುನಿಯಪ್ಪ ಎಚ್.ಕೆ. ಪಾಟೀಲ ಎಂ.ಬಿ.ಪಾಟೀಲ ಎಚ್.ಸಿ.ಮಹದೇವಪ್ಪ ಶಿವಾನಂದ ಪಾಟೀಲ ಈಶ್ವರ ಖಂಡ್ರೆ ಕೋನರಡ್ಡಿ... ಎಲ್ಲರಿಗೂ ಯೋಗ್ಯತೆ ಇದೆ. ಅವಕಾಶ ಸಿಕ್ಕಿಲ್ಲ ಅಷ್ಟೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. </p><p>ಪಕ್ಷದ ಹಲವು ಪ್ರಮುಖ ನಾಯಕರ ಹೆಸರು ಹೇಳಿ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೇ ಇರುವುದನ್ನು ವಿರೋಧ ಪಕ್ಷಗಳ ನಾಯಕರು ಪದೇ ಪದೇ ಪ್ರಸ್ತಾಪಿಸಿದರು. ಆಗಲೂ ಸಿದ್ದರಾಮಯ್ಯ ಅವರು ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲೇ ಇಲ್ಲ. ಈ ವೇಳೆಯಲ್ಲಿ ಶಿವಕುಮಾರ್ ಸದನದಲ್ಲಿ ಇರಲಿಲ್ಲ. </p><p><strong>ಚರ್ಚೆ ಆರಂಭ ಹೀಗೆ:</strong></p><p>‘ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇವತ್ತು ಫೋಟೊ ಶೂಟ್ ಮಾಡಿಸಿದ್ದಾರೆ. ನನಗೆ ಅವರ ಬಗ್ಗೆ ಸಂದೇಹ ಆಗುತ್ತಿದೆ. ಐದು ವರ್ಷಕ್ಕೊಮ್ಮೆ ಫೋಟೋ ಶೂಟ್ ಮಾಡಲಾಗುತ್ತದೆ. ಅವರು ಇವತ್ತೇ ಹೊಸ ಬಟ್ಟೆ ತೊಟ್ಟು ರೆಡಿ ಆಗಿದ್ದಾರೆ. ಹೊಸ ಬಾಗಿಲು ಕಿಟಕಿ ಮಾಡಿಸುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಖಾದರ್ ಅವರನ್ನು ಕಿಚಾಯಿಸಿದರು.</p><p> ಆಗ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ‘ಖಾದರ್ ಎಲ್ಲೂ ಹೋಗಲ್ಲ. 2028ಕ್ಕೂ ಗೆಲ್ಲುತ್ತಾರೆ. ಎಲ್ಲಿಯವರೆಗೆ ಚುನಾವಣೆಗೆ ಸ್ಪರ್ಧಿಸಿದರೂ ಗೆಲ್ಲುತ್ತಲೇ ಇರುತ್ತಾರೆ’ ಎಂದರು. </p><p>‘ಹಾಗಿದ್ದರೆ ಎಲ್ಲಿಯವರೆಗೆ ಸಭಾಧ್ಯಕ್ಷ ಆಗಿರುತ್ತಾರೆ’ ಎಂದು ಅಶೋಕ ಪ್ರಶ್ನಿಸಿದಾಗ ‘ಹೈಕಮಾಂಡ್ ತೀರ್ಮಾನ ಮಾಡುವವರೆಗೆ ಇರುತ್ತಾರೆ. ನೀವು ಏನೇ ಕಿತಾಪತಿ ಮಾಡಿದರೂ ಜಾಕ್ ಹಾಕಿ ಎತ್ತಿದರೂ ಅವರು ಏಳಲ್ಲ. ಕಿತಾಪತಿಗೆ ಮನ್ನಣೆ ಕೊಡಲ್ಲ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.</p><p> ‘ಅವರಿಗೂ ಕನಸಿರುವುದಿಲ್ಲವೇ’ ಎಂದು ಅಶೋಕ ಪ್ರಶ್ನಿಸಿದರು. ‘ನಿನಗೂ ಸಿಎಂ ಆಗಬೇಕು ಅಂತ ಕನಸಿಲ್ವೇನಯ್ಯಾ? ನೀನು ಸಿಎಂ ಆದರೂ ಅರವಿಂದ ಬೆಲ್ಲದ ಆದರೂ ಸಂತೋಷ ಪಡುತ್ತೇನೆ. ನೋಡಿ ಅಲ್ಲಿ ಹಿಂದೆ ವಿಜಯೇಂದ್ರ ಕಾಯುತ್ತಾ ಕೂತಿದ್ದಾರೆ. ವಿಜಯೇಂದ್ರ ಯಾರಿಗೂ ಆಗಲು ಬಿಡಲ್ಲ’ ಎಂದು ಸಿದ್ದರಾಮಯ್ಯ ನಗುತ್ತಲೇ ಕಾಲೆಳೆದರು. </p><p>ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಸುನಿಲ್ಕುಮಾರ್ ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೂ ಖುಷಿ ಪಡುತ್ತೇನೆ ಎಂದು ಹೇಳಿ. ನಮ್ಮದು ಮಾತ್ರ ಏಕೆ ಹೇಳುತ್ತಿದ್ದೀರಿ’ ಎಂದರು. </p><p>ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ‘ನಮ್ಮ ಪಕ್ಷದ ಎಲ್ಲ ನಾಯಕರಿಗೂ ಎಲ್ಲ ಶಾಸಕರಿಗೂ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ’ ಎಂದರು. ಆಗಲೂ ಶಿವಕುಮಾರ್ ಹೆಸರು ಪ್ರಸ್ತಾಪಿಸಲಿಲ್ಲ. </p><p>‘ಹೈಕಮಾಂಡ್ ಎಲ್ಲಿಯವರೆಗೆ ತೀರ್ಮಾನ ಮಾಡುತ್ತದೆಯೋ ಅಲ್ಲಿಯವರೆಗೆ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ’ ಎಂದು ಹೇಳಿದರು.</p><p> ‘ಹಸು– ಕರುಗಳಿಗೆ ನೀರು ಕುಡಿಸುವುದನ್ನು ನಿಮ್ಮ ತಂದೆ ನಿಮಗೆ ಕಲಿಸಿದ್ದಾರೆ. ಆದರೆ ನೀವು ಶಿವಕುಮಾರ್ ಪರಮೇಶ್ವರ್ ಸೇರಿ ಎಲ್ಲರಿಗೂ ನೀರು ಕುಡಿಸುತ್ತಿದ್ದೀರಿ. ನಮಗೂ ನೀರು ಕುಡಿಸುತ್ತಿದ್ದೀರಿ’ ಎಂದು ಅಶೋಕ ಅವರು ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾಜ್ಯವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿಲ್ಲ. ಇತರ ಪ್ರಗತಿಶೀಲ ರಾಜ್ಯಗಳು ಮತ್ತು ಕೇಂದ್ರಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇರುವುದರಿಂದಲೇ ರಾಜ್ಯದ ಬೆಳವಣಿಗೆ ದರ ಶೇ 9.4ರಷ್ಟಿದೆ. ನಾಡಿನ ಆರ್ಥಿಕತೆಯನ್ನು ದೇಶದಲ್ಲಿಯೇ ನಂಬರ್ 1 ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.</p>.<p>ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಬುಧವಾರ ಐದು ತಾಸಿಗೂ ಹೆಚ್ಚು ಹೊತ್ತು ಉತ್ತರ ನೀಡಿದ ಅವರು, ‘ವಿತ್ತೀಯ ಬೆಳವಣಿಗೆ ದರ ದೇಶದ ಬೆಳವಣಿಗೆ ದರವನ್ನೂ ಹಿಂದಿಕ್ಕಿದೆ. ಬಿಕ್ಕಟ್ಟು ಇದ್ದರೆ ಇದು ಸಾಧ್ಯವಾಗುತ್ತಿತ್ತೇ’ ಎಂದು ವಿರೋಧ ಪಕ್ಷದ ಸದಸ್ಯರನ್ನು ಪ್ರಶ್ನಿಸಿದರು.</p>.<p>ಮುಖ್ಯಮಂತ್ರಿಯವರು ನೀಡಿದ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷದ ಬಿಜೆಪಿಯ ಸದಸ್ಯರು, ‘ಈ ಬಜೆಟ್ ಅಭಿವೃದ್ಧಿ ವಿರೋಧಿ’ ಎಂದು ಘೋಷಣೆ ಕೂಗುತ್ತಾ ಆರ್. ಅಶೋಕ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.</p>.<p>ಅದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯ, ‘2026–27ರ ಬಜೆಟ್ ಗಾತ್ರ ₹4.48 ಲಕ್ಷ ಕೋಟಿ. 2025–26ರಲ್ಲಿ ಬಜೆಟ್ ಗಾತ್ರ ₹4.09 ಲಕ್ಷ ಕೋಟಿ ಇತ್ತು. ಕಳೆದ ವರ್ಷಕ್ಕಿಂತ ಈ ಬಾರಿಯ ಬಜೆಟ್ ಗಾತ್ರ ₹38,455 ಕೋಟಿ ಹೆಚ್ಚಾಗಿದೆ. ಕೇಂದ್ರದ ಬಜೆಟ್ ಗಾತ್ರ ಈ ಬಾರಿ ₹53.47 ಲಕ್ಷ ಕೋಟಿ ಇದೆ. ಆರ್ಥಿಕ ಬೆಳವಣಿಗೆ ದರ ಶೇ 5.6ರಷ್ಟಿದೆ. ಕರ್ನಾಟಕದ ಜಿಡಿಪಿಯು (ಒಟ್ಟು ದೇಶೀಯ ಉತ್ಪನ್ನ) 2026–27ಕ್ಕೆ ₹33,05,500 ಕೋಟಿ, ಅಂದರೆ ಜಿಡಿಪಿ ಬೆಳವಣಿಗೆ ಶೇ 8.1 ಇದೆ. ಆದರೆ, ದೇಶದ ಜಿಡಿಪಿ ಬೆಳವಣಿಗೆ ಶೇ 7.4 ಮಾತ್ರ ಇದೆ. ದೇಶದ ಆರ್ಥಿಕ ಬೆಳವಣಿಗೆಗಿಂತ, ರಾಜ್ಯದ ಆರ್ಥಿಕ ಬೆಳವಣಿಗೆ ಹೆಚ್ಚು’ ಎಂದು ಬಲವಾಗಿ ಪ್ರತಿಪಾದಿಸಿದರು.</p>.<p>‘ನಮ್ಮ ಸರ್ಕಾರ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ಇಷ್ಟೆಲ್ಲದರ ನಡುವೆ ನಮ್ಮ ವಿತ್ತೀಯ ಶಿಸ್ತು ಹಾಳು ಮಾಡಿಲ್ಲ. ವಿತ್ತೀಯ ಕೊರತೆ ಶೇ 3ರೊಳಗಿರಬೇಕು. ಇದು ಶೇ 2.95ರ ಮಿತಿಯೊಳಗೆ ಇರಲಿದೆ’ ಎಂದು ತಿಳಿಸಿದರು.</p>.<p>‘ಒಟ್ಟು ಸಾಲ ಜಿಡಿಪಿಯ ಶೇ 25ರಷ್ಟನ್ನು ಮೀರಬಾರದು ಎಂಬ ಆರ್ಥಿಕ ಶಿಸ್ತನ್ನು ತರಲು ಇರುವ ಮಾನದಂಡಗಳನ್ನು ರಾಜ್ಯ ಸರ್ಕಾರ ಪೂರೈಸಿದೆ. ಸಾಲದ ಮೊತ್ತ ಶೇ 24.94ರಷ್ಟಿದೆ. ಮಿಗತೆ ಬಜೆಟ್ ಆಗದೇ ವಿತ್ತೀಯ ಕೊರತೆ ಆಗಿದೆ. ಇದಕ್ಕೆ ಕಾರಣಗಳಿವೆ’ ಎಂದರು.</p>.<p>‘ದಕ್ಷಿಣ ಭಾರತದ ನಮ್ಮ ಸುತ್ತಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗದಿತ ಮಟ್ಟದ ಒಳಗೇ ಇದೆ. ಮಹಾರಾಷ್ಟ್ರ ಶೇ 3.0, ಆಂಧ್ರ ಶೇ 4.5, ಕೇರಳ ಶೇ 3.8, ತಮಿಳುನಾಡು ಶೇ 3.5 ಇದೆ’ ಎಂದು ವಿವರ ನೀಡಿದರು.</p>.<p>‘ರಾಜಸ್ವ ಸಂಗ್ರಹದ ವಿಷಯಕ್ಕೆ ಬಂದರೆ, ಕಳೆದ ವರ್ಷದ ಬಜೆಟ್ಗಿಂತ ಸುಮಾರು ₹22,573 ಕೋಟಿ ಹೆಚ್ಚು ಸಂಗ್ರಹ ಆಗಬಹುದು. ₹2.92 ಲಕ್ಷ ಕೋಟಿಗಳಿದ್ದ ಕಳೆದ ವರ್ಷದ ಅಂದಾಜು ಈ ವರ್ಷ ₹3.15 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದ್ದೇವೆ’ ಎಂದು ಸಿದ್ದರಾಮಯ್ಯ ವಿವರಿಸಿದರು.</p>.<p>‘ಕೇಂದ್ರ ಸರ್ಕಾರ ಮಾಡಿದ ದ್ರೋಹದಿಂದ, ಜಿಎಸ್ಟಿ ಪರಿಹಾರ ಸಿಗದ ಕಾರಣ ಸುಮಾರು ₹2 ಲಕ್ಷ ಕೋಟಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಆಗಿದೆ. ಪರಿಸ್ಥಿತಿ ಹೀಗಾದರೆ ರಾಜ್ಯಗಳ ಆರ್ಥಿಕತೆ ಹೇಗೆ ಉಳಿಯುತ್ತದೆ? ಇಷ್ಟೆಲ್ಲದರ ನಡುವೆಯೂ ರಾಜ್ಯವನ್ನು ಸಶಕ್ತವಾಗಿ ಮುನ್ನಡೆಸುತ್ತಿದ್ದೇವೆ. ಗ್ಯಾರಂಟಿಯಂತಹ ಕಲ್ಯಾಣ ಯೋಜನೆಗಳಿಗೆ ನಯಾಪೈಸೆ ಖರ್ಚು ಮಾಡದ ಗುಜರಾತ್ ಈ ಬಾರಿ ₹1 ಲಕ್ಷ ಕೋಟಿ ಸಾಲ ಮಾಡುತ್ತಿದೆ’ ಎಂದರು.</p>.<p>‘ನಾವು ಸಮಾಜದ ಎಲ್ಲ ಅಶಕ್ತರಿಗೆ ಶಕ್ತಿ ತುಂಬುತ್ತಿದ್ದೇವೆ. ಬಿಜೆಪಿಯು ‘ಟಿಕಲ್ ಡೌನ್ ಎಕಾನಮಿ’ಯಲ್ಲಿ ನಂಬಿಕೆ ಇರಿಸಿದೆ. ನಮ್ಮದು ‘ಯೂನಿವರ್ಸಲ್ ಬೇಸಿಕ್ ಇನ್ಕಂ’ ಹಾಗೂ ಬೇಡಿಕೆಯ ಆರ್ಥಿಕ ತತ್ವ ಆಧರಿಸಿದೆ. ಬುದ್ಧನ ಕರುಣೆ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ನಮ್ಮ ಬಜೆಟ್ ಆಧರಿಸಿದೆ’ ಎಂದು ಹೇಳಿದರು.</p>.<p>‘ನಮ್ಮ ಬಜೆಟ್ ಕುರಿತು ‘ಪ್ರಜಾವಾಣಿ’ ಸಂಪಾದಕೀಯ ಸೇರಿ ಹಲವು ಪತ್ರಿಕೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಿರಣ್ ಮಜುಂದಾರ್ ಸೇರಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ ಸಿದ್ದರಾಮಯ್ಯ, ಅವರ ಮಾತುಗಳನ್ನು ಸದನದಲ್ಲಿ ಉಲ್ಲೇಖಿಸಿದರು.</p>.<p><strong>ಸಿಎಂ ಸ್ಥಾನ: ಡಿಕೆಶಿ ಹೆಸರೆತ್ತದ ಸಿದ್ದರಾಮಯ್ಯ</strong></p><p> ‘ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ಖುಷಿ ಪಡುತ್ತೇನೆ. ಪರಮೇಶ್ವರ ಮುನಿಯಪ್ಪ ಎಚ್.ಕೆ. ಪಾಟೀಲ ಎಂ.ಬಿ.ಪಾಟೀಲ ಎಚ್.ಸಿ.ಮಹದೇವಪ್ಪ ಶಿವಾನಂದ ಪಾಟೀಲ ಈಶ್ವರ ಖಂಡ್ರೆ ಕೋನರಡ್ಡಿ... ಎಲ್ಲರಿಗೂ ಯೋಗ್ಯತೆ ಇದೆ. ಅವಕಾಶ ಸಿಕ್ಕಿಲ್ಲ ಅಷ್ಟೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. </p><p>ಪಕ್ಷದ ಹಲವು ಪ್ರಮುಖ ನಾಯಕರ ಹೆಸರು ಹೇಳಿ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೇ ಇರುವುದನ್ನು ವಿರೋಧ ಪಕ್ಷಗಳ ನಾಯಕರು ಪದೇ ಪದೇ ಪ್ರಸ್ತಾಪಿಸಿದರು. ಆಗಲೂ ಸಿದ್ದರಾಮಯ್ಯ ಅವರು ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲೇ ಇಲ್ಲ. ಈ ವೇಳೆಯಲ್ಲಿ ಶಿವಕುಮಾರ್ ಸದನದಲ್ಲಿ ಇರಲಿಲ್ಲ. </p><p><strong>ಚರ್ಚೆ ಆರಂಭ ಹೀಗೆ:</strong></p><p>‘ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇವತ್ತು ಫೋಟೊ ಶೂಟ್ ಮಾಡಿಸಿದ್ದಾರೆ. ನನಗೆ ಅವರ ಬಗ್ಗೆ ಸಂದೇಹ ಆಗುತ್ತಿದೆ. ಐದು ವರ್ಷಕ್ಕೊಮ್ಮೆ ಫೋಟೋ ಶೂಟ್ ಮಾಡಲಾಗುತ್ತದೆ. ಅವರು ಇವತ್ತೇ ಹೊಸ ಬಟ್ಟೆ ತೊಟ್ಟು ರೆಡಿ ಆಗಿದ್ದಾರೆ. ಹೊಸ ಬಾಗಿಲು ಕಿಟಕಿ ಮಾಡಿಸುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಖಾದರ್ ಅವರನ್ನು ಕಿಚಾಯಿಸಿದರು.</p><p> ಆಗ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ‘ಖಾದರ್ ಎಲ್ಲೂ ಹೋಗಲ್ಲ. 2028ಕ್ಕೂ ಗೆಲ್ಲುತ್ತಾರೆ. ಎಲ್ಲಿಯವರೆಗೆ ಚುನಾವಣೆಗೆ ಸ್ಪರ್ಧಿಸಿದರೂ ಗೆಲ್ಲುತ್ತಲೇ ಇರುತ್ತಾರೆ’ ಎಂದರು. </p><p>‘ಹಾಗಿದ್ದರೆ ಎಲ್ಲಿಯವರೆಗೆ ಸಭಾಧ್ಯಕ್ಷ ಆಗಿರುತ್ತಾರೆ’ ಎಂದು ಅಶೋಕ ಪ್ರಶ್ನಿಸಿದಾಗ ‘ಹೈಕಮಾಂಡ್ ತೀರ್ಮಾನ ಮಾಡುವವರೆಗೆ ಇರುತ್ತಾರೆ. ನೀವು ಏನೇ ಕಿತಾಪತಿ ಮಾಡಿದರೂ ಜಾಕ್ ಹಾಕಿ ಎತ್ತಿದರೂ ಅವರು ಏಳಲ್ಲ. ಕಿತಾಪತಿಗೆ ಮನ್ನಣೆ ಕೊಡಲ್ಲ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.</p><p> ‘ಅವರಿಗೂ ಕನಸಿರುವುದಿಲ್ಲವೇ’ ಎಂದು ಅಶೋಕ ಪ್ರಶ್ನಿಸಿದರು. ‘ನಿನಗೂ ಸಿಎಂ ಆಗಬೇಕು ಅಂತ ಕನಸಿಲ್ವೇನಯ್ಯಾ? ನೀನು ಸಿಎಂ ಆದರೂ ಅರವಿಂದ ಬೆಲ್ಲದ ಆದರೂ ಸಂತೋಷ ಪಡುತ್ತೇನೆ. ನೋಡಿ ಅಲ್ಲಿ ಹಿಂದೆ ವಿಜಯೇಂದ್ರ ಕಾಯುತ್ತಾ ಕೂತಿದ್ದಾರೆ. ವಿಜಯೇಂದ್ರ ಯಾರಿಗೂ ಆಗಲು ಬಿಡಲ್ಲ’ ಎಂದು ಸಿದ್ದರಾಮಯ್ಯ ನಗುತ್ತಲೇ ಕಾಲೆಳೆದರು. </p><p>ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಸುನಿಲ್ಕುಮಾರ್ ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೂ ಖುಷಿ ಪಡುತ್ತೇನೆ ಎಂದು ಹೇಳಿ. ನಮ್ಮದು ಮಾತ್ರ ಏಕೆ ಹೇಳುತ್ತಿದ್ದೀರಿ’ ಎಂದರು. </p><p>ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ‘ನಮ್ಮ ಪಕ್ಷದ ಎಲ್ಲ ನಾಯಕರಿಗೂ ಎಲ್ಲ ಶಾಸಕರಿಗೂ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ’ ಎಂದರು. ಆಗಲೂ ಶಿವಕುಮಾರ್ ಹೆಸರು ಪ್ರಸ್ತಾಪಿಸಲಿಲ್ಲ. </p><p>‘ಹೈಕಮಾಂಡ್ ಎಲ್ಲಿಯವರೆಗೆ ತೀರ್ಮಾನ ಮಾಡುತ್ತದೆಯೋ ಅಲ್ಲಿಯವರೆಗೆ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ’ ಎಂದು ಹೇಳಿದರು.</p><p> ‘ಹಸು– ಕರುಗಳಿಗೆ ನೀರು ಕುಡಿಸುವುದನ್ನು ನಿಮ್ಮ ತಂದೆ ನಿಮಗೆ ಕಲಿಸಿದ್ದಾರೆ. ಆದರೆ ನೀವು ಶಿವಕುಮಾರ್ ಪರಮೇಶ್ವರ್ ಸೇರಿ ಎಲ್ಲರಿಗೂ ನೀರು ಕುಡಿಸುತ್ತಿದ್ದೀರಿ. ನಮಗೂ ನೀರು ಕುಡಿಸುತ್ತಿದ್ದೀರಿ’ ಎಂದು ಅಶೋಕ ಅವರು ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>