<p><strong>ಡಿಸೆಂಬರ್ಗೆ ಪೋಡಿ ಇತ್ಯರ್ಥ</strong></p><p>ಸರ್ಕಾರದಿಂದ ಭೂಮಿ ಮಂಜೂರಾದ ಬಗ್ಗೆ ದಾಖಲೆಗಳು ಇರುವ ಆಸ್ತಿಗಳ ದರಖಾಸ್ತು ಪೋಡಿಯನ್ನು ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದ 5,70,116 ಅರ್ಜಿಗಳು ಬಾಕಿ ಇವೆ. ನಮ್ಮ ಸರ್ಕಾರ ಬಂದ ನಂತರ 2 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ ಪೋಡಿಗೆ ಆದೇಶವಾಗಿದೆ.</p><p>ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಎಲ್ಲ ಕಡೆ ಬಾಕಿ ಇರುವ ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡಲು ಕ್ರಮಕೈಗೊಂಡಿದ್ದೇವೆ. ಮಂಜೂರಾದ ದಾಖಲೆಗಳು ಇಲ್ಲದೆ ಇದ್ದರೆ, ಅಂತಹ ಪ್ರಕರಣಗಳನ್ನು ಯಾವ ರೀತಿ ಇತ್ಯರ್ಥ ಮಾಡಬೇಕು ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು</p><p><em><strong>ಕೃಷ್ಣ ಬೈರೇಗೌಡ, ಕಂದಾಯ ಸಚಿವ</strong></em></p><p><em><strong>ಪ್ರಶ್ನೆ: ಪ್ರತಾಪ್ ಸಿಂಹ ನಾಯಕ್ ಕೆ, ಬಿಜೆಪಿ</strong></em></p><p>**</p><p><strong>400 ಬಸ್ ಖರೀದಿಗೆ ಟೆಂಡರ್</strong></p><p>ಕಲ್ಯಾಣ ಕರ್ನಾಟಕ ಭಾಗಕ್ಕೆ 400 ಬಸ್ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ. ಇದರಲ್ಲಿ ಬಳ್ಳಾರಿ, ಹೊಸಪೇಟೆ ಭಾಗಕ್ಕೂ ಆದ್ಯತೆ ನೀಡಲಾಗುವುದು. ಇದಲ್ಲದೆ 56 ಪ್ರೀಮಿಯಂ ಬಸ್ಗಳನ್ನು ಖರೀದಿಸಲಾಗುವುದು. ಇದಾದ ಬಳಿಕ ಬಸ್ಗಳ ಕೊರತೆ ನೀಗಲಿದೆ. </p><p>ಇದಲ್ಲದೆ ಈ ಬಾರಿಯ ಬಜೆಟ್ನಲ್ಲಿ ಒಂದು ಸಾವಿರ ಬಸ್ಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಟ್ಟು 6,80 ಬಸ್ಗಳನ್ನು ಖರೀದಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ಬಸ್ಗಳನ್ನು ಖರೀದಿಸಿರಲಿಲ್ಲ. ಈಗ ಉಂಟಾಗಿರುವ ಸಮಸ್ಯೆಗೆ ಹಿಂದಿನ ಸರ್ಕಾರ ಕಾರಣ.</p><p><em><strong>ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ. </strong></em></p><p><em><strong>ಪ್ರಶ್ನೆ: ವೈ.ಎಂ.ಸತೀಶ್, ಬಿಜೆಪಿ</strong></em></p><p>**</p><p><strong>‘₹ 500 ಕೋಟಿ ಅನುದಾನ ಕೇಳಿದ್ದೇನೆ’</strong></p><p>ರಾಜ್ಯದಲ್ಲಿರುವ 2,866 ಕೊಳೆಗೇರಿಗಳ ಅಭಿವೃದ್ಧಿಗೆ ₹50 ಕೋಟಿ ಅನುದಾನ ಸಾಲದು. ಯಾವುದೇ ಸರ್ಕಾರ ಇದ್ದಾಗಲೂ ಕೊಳೆಗೇರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಪೂರಕ ಬಜೆಟ್ನಲ್ಲಿ ₹500 ಕೋಟಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಇದಲ್ಲದೆ ಸಿಎಸ್ಆರ್ ಯೋಜನೆಯಡಿ ವಿಪ್ರೊ, ಇನ್ಫೊಸಿಸ್ ಸಂಸ್ಥೆಗಳ ನೆರವು ಪಡೆಯಲು ಪ್ರಯತ್ನಿಸಲಾಗುತ್ತಿದೆ.</p><p><em><strong>ಜಮೀರ್ ಅಹಮದ್ ಖಾನ್, ವಸತಿ ಸಚಿವ<br>ಪ್ರಶ್ನೆ: ಕೆ.ಗೋವಿಂದರಾಜ್, ಜೆಡಿಎಸ್</strong></em></p><p>**</p><p><strong>ಖಾತೆ ಬದಲಾವಣೆ ಸ್ವಯಂಚಾಲಿತ</strong></p><p>ಶೇ 98ರಷ್ಟು ಪ್ರಕರಣಗಳಲ್ಲಿ ಖಾತೆ ಬದಲಾವಣೆ ಸ್ವಯಂಚಾಲಿತವಾಗಿ ಆಗುತ್ತಿದೆ. ಖಾಸಗಿ ವ್ಯಕ್ತಿಗಳ ತಕರಾರುಗಳಿಗೆ ಕಡಿವಾಣ ಹಾಕಲಾಗಿದೆ. ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಹಂತದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಎಂಟು ಮಂದಿ ವಿಶೇಷ ಜಿಲ್ಲಾಧಿಕಾರಿಗಳು, 72 ಮಂದಿ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ</p><p><em><strong>ಕೃಷ್ಣ ಬೈರೇಗೌಡ, ಕಂದಾಯ ಸಚಿವ<br>ಪ್ರಶ್ನೆ: ರಾಮೋಜಿಗೌಡ, ಕಾಂಗ್ರೆಸ್</strong></em></p><p>**</p><p><strong>1.41 ಲಕ್ಷ ಮಕ್ಕಳಿಗಿಲ್ಲ ಹಾಸ್ಟೆಲ್</strong></p><p>ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಮೂರು ವರ್ಷಗಳಲ್ಲಿ 250 ಹೊಸ ಹಾಸ್ಟೆಲ್ಗಳನ್ನು ಆರಂಭಿಸಲಾಗಿದೆ. ಆದರೂ 2024–25ನೇ ಸಾಲಿನಲ್ಲಿ 1.41 ಲಕ್ಷ ಮಕ್ಕಳಿಗೆ ಸೌಲಭ್ಯ ಸಿಕ್ಕಿಲ್ಲ. ಬೇಡಿಕೆ ಸಾಕಷ್ಟು ಇದೆ. ಶಾಸಕರ ಒತ್ತಡಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಹಾಸ್ಟೆಲ್ಗಳಿಗೆ ದಾಖಲು ಮಾಡಲಾಗುತ್ತಿದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಲಾಗುವುದು. ಮತ್ತೆ 50 ಹೊಸ ಹಾಸ್ಟೆಲ್ ತೆರೆಯಲಾಗುವುದು.</p><p><em><strong>ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ<br>ಪ್ರಶ್ನೆ: ದೊಡ್ಡನಗೌಡ ಪಾಟೀಲ, ಬಿಜೆಪಿ</strong></em></p><p>**</p><p><strong>994 ಪಿಡಿಒ ಹುದ್ದೆ ಖಾಲಿ</strong></p><p>ರಾಜ್ಯದಲ್ಲಿ 994 ಪಿಡಿಒ ಹುದ್ದೆಗಳು ಖಾಲಿ ಇದ್ದು 247 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗ ಈಗಾಗಲೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಕೆಲ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಲಾಗುವುದು. ಕೆಲವೆಡೆ ಪ್ರಭಾರ ವ್ಯವಸ್ಥೆ ಮೂಲಕ ಆಡಳಿತ ನಿರ್ವಹಣೆ ಮಾಡಲಾಗುತ್ತಿದೆ</p><p><em><strong>ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ. </strong></em></p><p><em><strong>ಪ್ರಶ್ನೆ:ಇ.ಅನ್ನಪೂರ್ಣ, ಕಾಂಗ್ರೆಸ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡಿಸೆಂಬರ್ಗೆ ಪೋಡಿ ಇತ್ಯರ್ಥ</strong></p><p>ಸರ್ಕಾರದಿಂದ ಭೂಮಿ ಮಂಜೂರಾದ ಬಗ್ಗೆ ದಾಖಲೆಗಳು ಇರುವ ಆಸ್ತಿಗಳ ದರಖಾಸ್ತು ಪೋಡಿಯನ್ನು ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದ 5,70,116 ಅರ್ಜಿಗಳು ಬಾಕಿ ಇವೆ. ನಮ್ಮ ಸರ್ಕಾರ ಬಂದ ನಂತರ 2 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ ಪೋಡಿಗೆ ಆದೇಶವಾಗಿದೆ.</p><p>ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಎಲ್ಲ ಕಡೆ ಬಾಕಿ ಇರುವ ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡಲು ಕ್ರಮಕೈಗೊಂಡಿದ್ದೇವೆ. ಮಂಜೂರಾದ ದಾಖಲೆಗಳು ಇಲ್ಲದೆ ಇದ್ದರೆ, ಅಂತಹ ಪ್ರಕರಣಗಳನ್ನು ಯಾವ ರೀತಿ ಇತ್ಯರ್ಥ ಮಾಡಬೇಕು ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು</p><p><em><strong>ಕೃಷ್ಣ ಬೈರೇಗೌಡ, ಕಂದಾಯ ಸಚಿವ</strong></em></p><p><em><strong>ಪ್ರಶ್ನೆ: ಪ್ರತಾಪ್ ಸಿಂಹ ನಾಯಕ್ ಕೆ, ಬಿಜೆಪಿ</strong></em></p><p>**</p><p><strong>400 ಬಸ್ ಖರೀದಿಗೆ ಟೆಂಡರ್</strong></p><p>ಕಲ್ಯಾಣ ಕರ್ನಾಟಕ ಭಾಗಕ್ಕೆ 400 ಬಸ್ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ. ಇದರಲ್ಲಿ ಬಳ್ಳಾರಿ, ಹೊಸಪೇಟೆ ಭಾಗಕ್ಕೂ ಆದ್ಯತೆ ನೀಡಲಾಗುವುದು. ಇದಲ್ಲದೆ 56 ಪ್ರೀಮಿಯಂ ಬಸ್ಗಳನ್ನು ಖರೀದಿಸಲಾಗುವುದು. ಇದಾದ ಬಳಿಕ ಬಸ್ಗಳ ಕೊರತೆ ನೀಗಲಿದೆ. </p><p>ಇದಲ್ಲದೆ ಈ ಬಾರಿಯ ಬಜೆಟ್ನಲ್ಲಿ ಒಂದು ಸಾವಿರ ಬಸ್ಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಟ್ಟು 6,80 ಬಸ್ಗಳನ್ನು ಖರೀದಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ಬಸ್ಗಳನ್ನು ಖರೀದಿಸಿರಲಿಲ್ಲ. ಈಗ ಉಂಟಾಗಿರುವ ಸಮಸ್ಯೆಗೆ ಹಿಂದಿನ ಸರ್ಕಾರ ಕಾರಣ.</p><p><em><strong>ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ. </strong></em></p><p><em><strong>ಪ್ರಶ್ನೆ: ವೈ.ಎಂ.ಸತೀಶ್, ಬಿಜೆಪಿ</strong></em></p><p>**</p><p><strong>‘₹ 500 ಕೋಟಿ ಅನುದಾನ ಕೇಳಿದ್ದೇನೆ’</strong></p><p>ರಾಜ್ಯದಲ್ಲಿರುವ 2,866 ಕೊಳೆಗೇರಿಗಳ ಅಭಿವೃದ್ಧಿಗೆ ₹50 ಕೋಟಿ ಅನುದಾನ ಸಾಲದು. ಯಾವುದೇ ಸರ್ಕಾರ ಇದ್ದಾಗಲೂ ಕೊಳೆಗೇರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಪೂರಕ ಬಜೆಟ್ನಲ್ಲಿ ₹500 ಕೋಟಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಇದಲ್ಲದೆ ಸಿಎಸ್ಆರ್ ಯೋಜನೆಯಡಿ ವಿಪ್ರೊ, ಇನ್ಫೊಸಿಸ್ ಸಂಸ್ಥೆಗಳ ನೆರವು ಪಡೆಯಲು ಪ್ರಯತ್ನಿಸಲಾಗುತ್ತಿದೆ.</p><p><em><strong>ಜಮೀರ್ ಅಹಮದ್ ಖಾನ್, ವಸತಿ ಸಚಿವ<br>ಪ್ರಶ್ನೆ: ಕೆ.ಗೋವಿಂದರಾಜ್, ಜೆಡಿಎಸ್</strong></em></p><p>**</p><p><strong>ಖಾತೆ ಬದಲಾವಣೆ ಸ್ವಯಂಚಾಲಿತ</strong></p><p>ಶೇ 98ರಷ್ಟು ಪ್ರಕರಣಗಳಲ್ಲಿ ಖಾತೆ ಬದಲಾವಣೆ ಸ್ವಯಂಚಾಲಿತವಾಗಿ ಆಗುತ್ತಿದೆ. ಖಾಸಗಿ ವ್ಯಕ್ತಿಗಳ ತಕರಾರುಗಳಿಗೆ ಕಡಿವಾಣ ಹಾಕಲಾಗಿದೆ. ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಹಂತದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಎಂಟು ಮಂದಿ ವಿಶೇಷ ಜಿಲ್ಲಾಧಿಕಾರಿಗಳು, 72 ಮಂದಿ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ</p><p><em><strong>ಕೃಷ್ಣ ಬೈರೇಗೌಡ, ಕಂದಾಯ ಸಚಿವ<br>ಪ್ರಶ್ನೆ: ರಾಮೋಜಿಗೌಡ, ಕಾಂಗ್ರೆಸ್</strong></em></p><p>**</p><p><strong>1.41 ಲಕ್ಷ ಮಕ್ಕಳಿಗಿಲ್ಲ ಹಾಸ್ಟೆಲ್</strong></p><p>ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಮೂರು ವರ್ಷಗಳಲ್ಲಿ 250 ಹೊಸ ಹಾಸ್ಟೆಲ್ಗಳನ್ನು ಆರಂಭಿಸಲಾಗಿದೆ. ಆದರೂ 2024–25ನೇ ಸಾಲಿನಲ್ಲಿ 1.41 ಲಕ್ಷ ಮಕ್ಕಳಿಗೆ ಸೌಲಭ್ಯ ಸಿಕ್ಕಿಲ್ಲ. ಬೇಡಿಕೆ ಸಾಕಷ್ಟು ಇದೆ. ಶಾಸಕರ ಒತ್ತಡಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಹಾಸ್ಟೆಲ್ಗಳಿಗೆ ದಾಖಲು ಮಾಡಲಾಗುತ್ತಿದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಲಾಗುವುದು. ಮತ್ತೆ 50 ಹೊಸ ಹಾಸ್ಟೆಲ್ ತೆರೆಯಲಾಗುವುದು.</p><p><em><strong>ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ<br>ಪ್ರಶ್ನೆ: ದೊಡ್ಡನಗೌಡ ಪಾಟೀಲ, ಬಿಜೆಪಿ</strong></em></p><p>**</p><p><strong>994 ಪಿಡಿಒ ಹುದ್ದೆ ಖಾಲಿ</strong></p><p>ರಾಜ್ಯದಲ್ಲಿ 994 ಪಿಡಿಒ ಹುದ್ದೆಗಳು ಖಾಲಿ ಇದ್ದು 247 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗ ಈಗಾಗಲೇ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಕೆಲ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಲಾಗುವುದು. ಕೆಲವೆಡೆ ಪ್ರಭಾರ ವ್ಯವಸ್ಥೆ ಮೂಲಕ ಆಡಳಿತ ನಿರ್ವಹಣೆ ಮಾಡಲಾಗುತ್ತಿದೆ</p><p><em><strong>ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ. </strong></em></p><p><em><strong>ಪ್ರಶ್ನೆ:ಇ.ಅನ್ನಪೂರ್ಣ, ಕಾಂಗ್ರೆಸ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>