<p>ಅತ್ತಿಬೆಲೆ(ಆನೇಕಲ್): ಅಧಿಕಾರಕ್ಕಾಗಿ ದಲಿತರನ್ನು ವಿಭಜನೆ ಮಾಡಲಾಗುತ್ತಿದ್ದು, ಬಲಗೈ, ಎಡಗೈ ಎಂದು ವಿಂಗಡಿಸಲಾಗಿದೆ. ಕರ್ನಾಟಕದಲ್ಲಿ 1 ಕೋಟಿಗೂ ಹೆಚ್ಚು ದಲಿತರಿದ್ದರೂ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಇನ್ನೂ ಕನಸಾಗಿ ಉಳಿದಿದೆ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಹೇಳಿದರು.</p>.<p>ತಾಲ್ಲೂಕಿನ ಅತ್ತಿಬೆಲೆ ಕೈಗಾರಿಕ ಪ್ರದೇಶ ವ್ಯಾಪ್ತಿಯ ಗುಡ್ಡಹಟ್ಟಿಯಲ್ಲಿ ಅಂಬೇಡ್ಕರ್ ಗೆಳೆಯರ ಬಳಗದಿಂದ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.</p>.<p>ನೆಹರು, ಗಾಂಧೀ ಅವರ ವಿಚಾರೆಧಾರೆಗಳಲ್ಲಿ ಜಾತಿ ಪರಿಗಣಿಸುವುದಿಲ್ಲ. ಆದರೆ ಅಂಬೇಡ್ಕರ್ ಅವರ ವಿಚಾರಧಾರೆಗಳಲ್ಲಿ ಜಾತಿಯ ಬಣ್ಣ ಕಟ್ಟುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಬೇಸರಿಸಿದರು.</p>.<p>ಅಂಬೇಡ್ಕರ್ ಅವರ ಜ್ಞಾನದ ಪ್ರತೀಕ. ಅವರ ಗ್ರಂಥಾಲಯದಲ್ಲಿ 50ಸಾವಿರ ಪುಸ್ತಕಗಳಿದ್ದವು ಮತ್ತು ಅವರು 25 ಸಾವಿರ ಪುಟಗಳಷ್ಟು ಕೈಬರಹದಲ್ಲಿ ಪುಸ್ತಕಗಳನ್ನು ಬರೆದ ಮಹಾಜ್ಞಾನಿಯಾಗಿದ್ದರು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.</p>.<p>ಮತಗಳನ್ನು ಮಾರಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣ ಆಗುವುದಿಲ್ಲ. ಅಂಬೇಡ್ಕರ್ ಅವರು ತಮ್ಮ ವಿಚಾರಧಾರೆಗಳಲ್ಲಿ ತಿಳಿಸಿರುವಂತೆ ಮತಗಳನ್ನು ಮಾರಿಕೊಳ್ಳುವುದು ಮಗಳನ್ನು ಮಾರಿದಷ್ಟೇ ತಪ್ಪಾಗುತ್ತದೆ ಎಂದು ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಸಿಂಗೇನಅಗ್ರಹಾರ ಎಸ್.ಕೆ.ಗೌರೀಶ್ ಹೇಳಿದರು.</p>.<p>ಅಂಬೇಡ್ಕರ್ ಅವರ ಜಾತೀಯತೆ ವಿರುದ್ಧ ಮತ್ತು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಧ್ವನಿ ಇಲ್ಲದವರಿಗೆ ದನಿ ಆಗಬೇಕಾದರೆ ಅಂಬೇಡ್ಕರ್ ವಿಚಾರಧಾರೆಗಳ ಅವಶ್ಯಕ. ಶೋಷಿತ ಸಮುದಾಯಗಳ ಹಕ್ಕುಗಳನ್ನು ಸಂರಕ್ಷಿಸಲು ಯುವಕರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದರು.</p>.<p>ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟಾಪಟ್ ರವಿ, ಶ್ರೀನಿವಾಸ್, ಅಶೋಕ್, ರಾಮಸ್ವಾಮಿ, ಶ್ರೀಧರ್, ನಾಗರಾಜು ಮೌರ್ಯ, ನವೀನ್, ಕನ್ನಡ ಸೋಮು, ರಾಮಣ್ಣ, ನಾಗರಾಜು, ಮಂಜು, ಜಯಣ್ಣ, ವೆಂಕಟಸ್ವಾಮಿ, ವೆಂಕಟೇಶ್, ಬಳಗಾರನಹಳ್ಳಿ ಕುಮಾರ್, ಮಂಜು, ಗಣೇಶ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-15-939532618</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅತ್ತಿಬೆಲೆ(ಆನೇಕಲ್): ಅಧಿಕಾರಕ್ಕಾಗಿ ದಲಿತರನ್ನು ವಿಭಜನೆ ಮಾಡಲಾಗುತ್ತಿದ್ದು, ಬಲಗೈ, ಎಡಗೈ ಎಂದು ವಿಂಗಡಿಸಲಾಗಿದೆ. ಕರ್ನಾಟಕದಲ್ಲಿ 1 ಕೋಟಿಗೂ ಹೆಚ್ಚು ದಲಿತರಿದ್ದರೂ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಇನ್ನೂ ಕನಸಾಗಿ ಉಳಿದಿದೆ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ ಹೇಳಿದರು.</p>.<p>ತಾಲ್ಲೂಕಿನ ಅತ್ತಿಬೆಲೆ ಕೈಗಾರಿಕ ಪ್ರದೇಶ ವ್ಯಾಪ್ತಿಯ ಗುಡ್ಡಹಟ್ಟಿಯಲ್ಲಿ ಅಂಬೇಡ್ಕರ್ ಗೆಳೆಯರ ಬಳಗದಿಂದ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.</p>.<p>ನೆಹರು, ಗಾಂಧೀ ಅವರ ವಿಚಾರೆಧಾರೆಗಳಲ್ಲಿ ಜಾತಿ ಪರಿಗಣಿಸುವುದಿಲ್ಲ. ಆದರೆ ಅಂಬೇಡ್ಕರ್ ಅವರ ವಿಚಾರಧಾರೆಗಳಲ್ಲಿ ಜಾತಿಯ ಬಣ್ಣ ಕಟ್ಟುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಬೇಸರಿಸಿದರು.</p>.<p>ಅಂಬೇಡ್ಕರ್ ಅವರ ಜ್ಞಾನದ ಪ್ರತೀಕ. ಅವರ ಗ್ರಂಥಾಲಯದಲ್ಲಿ 50ಸಾವಿರ ಪುಸ್ತಕಗಳಿದ್ದವು ಮತ್ತು ಅವರು 25 ಸಾವಿರ ಪುಟಗಳಷ್ಟು ಕೈಬರಹದಲ್ಲಿ ಪುಸ್ತಕಗಳನ್ನು ಬರೆದ ಮಹಾಜ್ಞಾನಿಯಾಗಿದ್ದರು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.</p>.<p>ಮತಗಳನ್ನು ಮಾರಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣ ಆಗುವುದಿಲ್ಲ. ಅಂಬೇಡ್ಕರ್ ಅವರು ತಮ್ಮ ವಿಚಾರಧಾರೆಗಳಲ್ಲಿ ತಿಳಿಸಿರುವಂತೆ ಮತಗಳನ್ನು ಮಾರಿಕೊಳ್ಳುವುದು ಮಗಳನ್ನು ಮಾರಿದಷ್ಟೇ ತಪ್ಪಾಗುತ್ತದೆ ಎಂದು ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಸಿಂಗೇನಅಗ್ರಹಾರ ಎಸ್.ಕೆ.ಗೌರೀಶ್ ಹೇಳಿದರು.</p>.<p>ಅಂಬೇಡ್ಕರ್ ಅವರ ಜಾತೀಯತೆ ವಿರುದ್ಧ ಮತ್ತು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಧ್ವನಿ ಇಲ್ಲದವರಿಗೆ ದನಿ ಆಗಬೇಕಾದರೆ ಅಂಬೇಡ್ಕರ್ ವಿಚಾರಧಾರೆಗಳ ಅವಶ್ಯಕ. ಶೋಷಿತ ಸಮುದಾಯಗಳ ಹಕ್ಕುಗಳನ್ನು ಸಂರಕ್ಷಿಸಲು ಯುವಕರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದರು.</p>.<p>ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟಾಪಟ್ ರವಿ, ಶ್ರೀನಿವಾಸ್, ಅಶೋಕ್, ರಾಮಸ್ವಾಮಿ, ಶ್ರೀಧರ್, ನಾಗರಾಜು ಮೌರ್ಯ, ನವೀನ್, ಕನ್ನಡ ಸೋಮು, ರಾಮಣ್ಣ, ನಾಗರಾಜು, ಮಂಜು, ಜಯಣ್ಣ, ವೆಂಕಟಸ್ವಾಮಿ, ವೆಂಕಟೇಶ್, ಬಳಗಾರನಹಳ್ಳಿ ಕುಮಾರ್, ಮಂಜು, ಗಣೇಶ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-15-939532618</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>