<p><strong>ಬೆಂಗಳೂರು:</strong> ಬಹುರಾಷ್ಟ್ರೀಯ ಕಂಪನಿಗಳ ಬಿತ್ತನೆ ಬೀಜಗಳಿಗೆ ಸಡ್ಡು ಹೊಡೆದಿರುವ ರೈತರು, ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬಂದಿದ್ದ ಸಾಂಪ್ರದಾಯಿಕ ತಳಿಗಳ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.</p>.<p>ಬಹುರಾಷ್ಟ್ರೀಯ ಕಂಪನಿಗಳು, ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಬಿತ್ತನೆ ಬೀಜಗಳ ನಿರಂತರ ವೈಫಲ್ಯ, ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳದೆ ಪ್ರಕೃತಿ ವಿಕೋಪಕ್ಕೆ ಬಹುಬೇಗ ತುತ್ತಾಗುತ್ತಿದ್ದರಿಂದ, ಬೆಳೆ ಹಾಗೂ ಆರ್ಥಿಕ ನಷ್ಟವನ್ನು ಪದೇ ಪದೇ ಅನುಭವಿಸಬೇಕಾಗುತ್ತಿತ್ತು. ರೈತರ ನೆರವಿಗೆ ನಿಲ್ಲಲು ನಿರ್ಧರಿಸಿದ್ದ ಕೃಷಿ ಇಲಾಖೆ, ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿತ್ತು. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಅಧಿಕ ಇಳುವರಿ ನೀಡುವ ದೇಸಿ ತಳಿಗಳ ಬೀಜಗಳನ್ನು ಸಂರಕ್ಷಿಸಿಕೊಂಡು ಬಂದಿದ್ದ ರಾಜ್ಯದ ರೈತರನ್ನು ಆಹ್ವಾನಿಸಿ, ಚರ್ಚಿಸಿತ್ತು.</p>.<p>ಮೊದಲ ಹಂತದಲ್ಲಿ 1,000ಕ್ಕೂ ಹೆಚ್ಚು ದೇಸಿ ತಳಿಗಳನ್ನು ಕಲೆ ಹಾಕಲಾಗಿತ್ತು. ನಂತರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಬೆಳೆ ಪ್ರಾತ್ಯಕ್ಷಿಕೆ ನಡೆಸಿತ್ತು. ದೇಸಿ ತಳಿಗಳ ಪ್ರಾತ್ಯಕ್ಷಿಕೆಯಲ್ಲಿ ಬಂದ ಇಳುವರಿ ಕಂಡು ಕೃಷಿ ವಿಶ್ವವಿದ್ಯಾಲಯಗಳೇ ಬೆರಗಾಗಿವೆ. ಹಲವು ತಳಿಗಳು ರೋಗ ಬಾಧೆಗೂ ಸಿಲುಕದೆ, ಪ್ರಕೃತಿ ವಿಕೋಪಗಳನ್ನು ಮೆಟ್ಟಿನಿಂತು ರೈತರಿಗೆ ಆಶಾಕಿರಣವಾಗಿ ಪರಿಣಮಿಸಿವೆ. ಅವುಗಳಲ್ಲಿ ಭತ್ತ, ರಾಗಿ, ಜೋಳ, ಎಣ್ಣೆಕಾಳು, ದ್ವಿದಳ ಧಾನ್ಯ, ಸಿರಿಧಾನ್ಯ ಸೇರಿದಂತೆ 30ಕ್ಕೂ ಹೆಚ್ಚು ಬೆಳೆಗಳ 490 ತಳಿಗಳನ್ನು ಆಯ್ಕೆ ಮಾಡಲಾಗಿದೆ. </p>.<p>ಕರ್ನಾಟಕದ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ, ಕಡಿಮೆ ನೀರು ಹಾಗೂ ಗೊಬ್ಬರಕ್ಕೆ ಹುಲುಸಾಗಿ ಬೆಳೆಯುವ ಉತ್ತಮ ಪೌಷ್ಟಿಕತೆ ಮತ್ತು ಔಷಧೀಯ ಗುಣಗಳನ್ನು ಒಳಗೊಂಡ ತಳಿಗಳ ಬೀಜಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳನ್ನು ವೈಜ್ಞಾನಿಕ ದೃಢೀಕರಣಕ್ಕೆ ಒಳಪಡಿಸಿದ ನಂತರ ಆಯ್ಕೆಯಾದ ತಳಿಗಳನ್ನು ಮಾರಾಟ ಮಾಡಲು ರೈತರಿಗೆ ಪರವಾನಗಿ ನೀಡಲಾಗಿದೆ.</p>.<p>ಕಠಿಣ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾದ ಎಲ್ಲ ತಳಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆಯಾ ರೈತರಿಗೆ ಅನುಕೂಲವಾಗುವಂತೆ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ತಳಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆರ್ಥಿಕ ಸಹಾಯ ನೀಡಲಾಗಿದೆ. ಕೃಷಿ ವಿಜ್ಞಾನಿಗಳ ನೆರವಿನ ಹಸ್ತ ಕಲ್ಪಿಸಲಾಗಿದೆ. ಕರ್ನಾಟಕದ ಆಚೆಗೂ ಮಾರುಕಟ್ಟೆ ವಿಸ್ತರಿಸಲು ರಾಷ್ಟ್ರಮಟ್ಟದಲ್ಲಿ ನೋಂದಣಿ ಮಾಡಿಸಿ (ಜಿಐ ಟ್ಯಾಗ್), ಡಿಜಿಟಲ್ ವೇದಿಕೆ ಮತ್ತು ಮಾರುಕಟ್ಟೆ ಸಂಪರ್ಕಗಳ ಸೌಲಭ್ಯವನ್ನೂ ಕಲ್ಪಿಸಲಾಗಿದೆ.</p>.<div><blockquote>ಗತಿಪರ ರೈತರನ್ನು ಭೇಟಿ ಮಾಡಿದಾಗ ದೇಸಿ ತಳಿಗಳನ್ನು ಸಂರಕ್ಷಣೆ ಮಾಡಿರುವುದು ಗೊತ್ತಾಯಿತು. ತಕ್ಷಣ ಅವುಗಳನ್ನು ಪ್ರಯೋಗಕ್ಕೆ ಒಳಪಡಿಸಲು ವಿಜ್ಞಾನಿಗಳಿಗೆ ಸೂಚಿಸಲಾಗಿತ್ತು. ಇಂತಹ ಪ್ರಯತ್ನ ದೇಶದಲ್ಲೇ ಮೊದಲು </blockquote><span class="attribution">ಎನ್.ಚಲುವರಾಯಸ್ವಾಮಿ ಕೃಷಿ ಸಚಿವ</span></div>.<h2> ₹1.30 ಕೋಟಿ ಪ್ರೋತ್ಸಾಹ ಧನ </h2>.<p>ಕಠಿಣ ಪ್ರಯೋಗಗಳ ಮೂಲಕ ರಾಜ್ಯದ ಕೃಷಿ ವಿಜ್ಞಾನಿಗಳು ಆಯ್ಕೆ ಮಾಡಿರುವ ಸ್ಥಳೀಯ ತಳಿಗಳ ಬೀಜಗಳು ಭಾರತದ ಕೃಷಿ ಪರಂಪರೆಯ ಪ್ರಮುಖ ಅಂಗವಾಗಿದ್ದು ಇಂತಹ ತಳಿಗಳನ್ನು ತಲೆಮಾರುಗಳಿಂದ ಸಂರಕ್ಷಸಿಕೊಂಡು ಬಂದಿದ್ದ ರೈತರಿಗೆ ಕೃಷಿ ಇಲಾಖೆ ಮೊದಲ ಹಂತದಲ್ಲಿ ₹1.30 ಕೋಟಿ ಪ್ರೋತ್ಸಾಹಧನ ನೀಡಿ ಗೌರವಿಸಿದೆ. ಉತ್ತರ ಕನ್ನಡ ಬೆಳಗಾವಿ ಬೀದರ್ ಮಂಡ್ಯ ಶಿವಮೊಗ್ಗ ಚಾಮರಾಜನಗರ ಜಿಲ್ಲೆಯ ರೈತರು ಸಂರಕ್ಷಿಸಿದ ಬಹುತೇಕ ತಳಿಗಳು ಹವಾಮಾನ ವೈಪರೀತ್ಯದಲ್ಲೂ ಅಧಿಕ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಇಂತಹ ತಳಿಗಳನ್ನು ರಾಜ್ಯದ ಕೃಷಿ ಕ್ಷೇತ್ರಕ್ಕೆ ನೀಡಿದ ಹಲವರಲ್ಲಿ ಮಂಡ್ಯದ ಸಯ್ಯದ್ ಘನಿ ಖಾನ್ ದಕ್ಷಿಣ ಕನ್ನಡದ ಬಿ.ಕೆ.ದೇವರಾವ್ ಬೆಳಗಾವಿಯ ಶಂಕರ ಲಾಂಗ್ಟಿ ಉತ್ತರ ಕನ್ನಡದ ರಾಮಕೃಷ್ಣ ಭಟ್ ಅವರು ಮುಂಚೂಣಿಯಲ್ಲಿದ್ದಾರೆ. ಪ್ರತಿಯೊಬ್ಬರು ₹3 ಲಕ್ಷದಿಂದ ಸುಮಾರು ₹10 ಲಕ್ಷದವರೆಗೂ ಬಹುಮಾನ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಹುರಾಷ್ಟ್ರೀಯ ಕಂಪನಿಗಳ ಬಿತ್ತನೆ ಬೀಜಗಳಿಗೆ ಸಡ್ಡು ಹೊಡೆದಿರುವ ರೈತರು, ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬಂದಿದ್ದ ಸಾಂಪ್ರದಾಯಿಕ ತಳಿಗಳ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.</p>.<p>ಬಹುರಾಷ್ಟ್ರೀಯ ಕಂಪನಿಗಳು, ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಬಿತ್ತನೆ ಬೀಜಗಳ ನಿರಂತರ ವೈಫಲ್ಯ, ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳದೆ ಪ್ರಕೃತಿ ವಿಕೋಪಕ್ಕೆ ಬಹುಬೇಗ ತುತ್ತಾಗುತ್ತಿದ್ದರಿಂದ, ಬೆಳೆ ಹಾಗೂ ಆರ್ಥಿಕ ನಷ್ಟವನ್ನು ಪದೇ ಪದೇ ಅನುಭವಿಸಬೇಕಾಗುತ್ತಿತ್ತು. ರೈತರ ನೆರವಿಗೆ ನಿಲ್ಲಲು ನಿರ್ಧರಿಸಿದ್ದ ಕೃಷಿ ಇಲಾಖೆ, ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿತ್ತು. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಅಧಿಕ ಇಳುವರಿ ನೀಡುವ ದೇಸಿ ತಳಿಗಳ ಬೀಜಗಳನ್ನು ಸಂರಕ್ಷಿಸಿಕೊಂಡು ಬಂದಿದ್ದ ರಾಜ್ಯದ ರೈತರನ್ನು ಆಹ್ವಾನಿಸಿ, ಚರ್ಚಿಸಿತ್ತು.</p>.<p>ಮೊದಲ ಹಂತದಲ್ಲಿ 1,000ಕ್ಕೂ ಹೆಚ್ಚು ದೇಸಿ ತಳಿಗಳನ್ನು ಕಲೆ ಹಾಕಲಾಗಿತ್ತು. ನಂತರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಬೆಳೆ ಪ್ರಾತ್ಯಕ್ಷಿಕೆ ನಡೆಸಿತ್ತು. ದೇಸಿ ತಳಿಗಳ ಪ್ರಾತ್ಯಕ್ಷಿಕೆಯಲ್ಲಿ ಬಂದ ಇಳುವರಿ ಕಂಡು ಕೃಷಿ ವಿಶ್ವವಿದ್ಯಾಲಯಗಳೇ ಬೆರಗಾಗಿವೆ. ಹಲವು ತಳಿಗಳು ರೋಗ ಬಾಧೆಗೂ ಸಿಲುಕದೆ, ಪ್ರಕೃತಿ ವಿಕೋಪಗಳನ್ನು ಮೆಟ್ಟಿನಿಂತು ರೈತರಿಗೆ ಆಶಾಕಿರಣವಾಗಿ ಪರಿಣಮಿಸಿವೆ. ಅವುಗಳಲ್ಲಿ ಭತ್ತ, ರಾಗಿ, ಜೋಳ, ಎಣ್ಣೆಕಾಳು, ದ್ವಿದಳ ಧಾನ್ಯ, ಸಿರಿಧಾನ್ಯ ಸೇರಿದಂತೆ 30ಕ್ಕೂ ಹೆಚ್ಚು ಬೆಳೆಗಳ 490 ತಳಿಗಳನ್ನು ಆಯ್ಕೆ ಮಾಡಲಾಗಿದೆ. </p>.<p>ಕರ್ನಾಟಕದ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ, ಕಡಿಮೆ ನೀರು ಹಾಗೂ ಗೊಬ್ಬರಕ್ಕೆ ಹುಲುಸಾಗಿ ಬೆಳೆಯುವ ಉತ್ತಮ ಪೌಷ್ಟಿಕತೆ ಮತ್ತು ಔಷಧೀಯ ಗುಣಗಳನ್ನು ಒಳಗೊಂಡ ತಳಿಗಳ ಬೀಜಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳನ್ನು ವೈಜ್ಞಾನಿಕ ದೃಢೀಕರಣಕ್ಕೆ ಒಳಪಡಿಸಿದ ನಂತರ ಆಯ್ಕೆಯಾದ ತಳಿಗಳನ್ನು ಮಾರಾಟ ಮಾಡಲು ರೈತರಿಗೆ ಪರವಾನಗಿ ನೀಡಲಾಗಿದೆ.</p>.<p>ಕಠಿಣ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾದ ಎಲ್ಲ ತಳಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆಯಾ ರೈತರಿಗೆ ಅನುಕೂಲವಾಗುವಂತೆ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ತಳಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆರ್ಥಿಕ ಸಹಾಯ ನೀಡಲಾಗಿದೆ. ಕೃಷಿ ವಿಜ್ಞಾನಿಗಳ ನೆರವಿನ ಹಸ್ತ ಕಲ್ಪಿಸಲಾಗಿದೆ. ಕರ್ನಾಟಕದ ಆಚೆಗೂ ಮಾರುಕಟ್ಟೆ ವಿಸ್ತರಿಸಲು ರಾಷ್ಟ್ರಮಟ್ಟದಲ್ಲಿ ನೋಂದಣಿ ಮಾಡಿಸಿ (ಜಿಐ ಟ್ಯಾಗ್), ಡಿಜಿಟಲ್ ವೇದಿಕೆ ಮತ್ತು ಮಾರುಕಟ್ಟೆ ಸಂಪರ್ಕಗಳ ಸೌಲಭ್ಯವನ್ನೂ ಕಲ್ಪಿಸಲಾಗಿದೆ.</p>.<div><blockquote>ಗತಿಪರ ರೈತರನ್ನು ಭೇಟಿ ಮಾಡಿದಾಗ ದೇಸಿ ತಳಿಗಳನ್ನು ಸಂರಕ್ಷಣೆ ಮಾಡಿರುವುದು ಗೊತ್ತಾಯಿತು. ತಕ್ಷಣ ಅವುಗಳನ್ನು ಪ್ರಯೋಗಕ್ಕೆ ಒಳಪಡಿಸಲು ವಿಜ್ಞಾನಿಗಳಿಗೆ ಸೂಚಿಸಲಾಗಿತ್ತು. ಇಂತಹ ಪ್ರಯತ್ನ ದೇಶದಲ್ಲೇ ಮೊದಲು </blockquote><span class="attribution">ಎನ್.ಚಲುವರಾಯಸ್ವಾಮಿ ಕೃಷಿ ಸಚಿವ</span></div>.<h2> ₹1.30 ಕೋಟಿ ಪ್ರೋತ್ಸಾಹ ಧನ </h2>.<p>ಕಠಿಣ ಪ್ರಯೋಗಗಳ ಮೂಲಕ ರಾಜ್ಯದ ಕೃಷಿ ವಿಜ್ಞಾನಿಗಳು ಆಯ್ಕೆ ಮಾಡಿರುವ ಸ್ಥಳೀಯ ತಳಿಗಳ ಬೀಜಗಳು ಭಾರತದ ಕೃಷಿ ಪರಂಪರೆಯ ಪ್ರಮುಖ ಅಂಗವಾಗಿದ್ದು ಇಂತಹ ತಳಿಗಳನ್ನು ತಲೆಮಾರುಗಳಿಂದ ಸಂರಕ್ಷಸಿಕೊಂಡು ಬಂದಿದ್ದ ರೈತರಿಗೆ ಕೃಷಿ ಇಲಾಖೆ ಮೊದಲ ಹಂತದಲ್ಲಿ ₹1.30 ಕೋಟಿ ಪ್ರೋತ್ಸಾಹಧನ ನೀಡಿ ಗೌರವಿಸಿದೆ. ಉತ್ತರ ಕನ್ನಡ ಬೆಳಗಾವಿ ಬೀದರ್ ಮಂಡ್ಯ ಶಿವಮೊಗ್ಗ ಚಾಮರಾಜನಗರ ಜಿಲ್ಲೆಯ ರೈತರು ಸಂರಕ್ಷಿಸಿದ ಬಹುತೇಕ ತಳಿಗಳು ಹವಾಮಾನ ವೈಪರೀತ್ಯದಲ್ಲೂ ಅಧಿಕ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಇಂತಹ ತಳಿಗಳನ್ನು ರಾಜ್ಯದ ಕೃಷಿ ಕ್ಷೇತ್ರಕ್ಕೆ ನೀಡಿದ ಹಲವರಲ್ಲಿ ಮಂಡ್ಯದ ಸಯ್ಯದ್ ಘನಿ ಖಾನ್ ದಕ್ಷಿಣ ಕನ್ನಡದ ಬಿ.ಕೆ.ದೇವರಾವ್ ಬೆಳಗಾವಿಯ ಶಂಕರ ಲಾಂಗ್ಟಿ ಉತ್ತರ ಕನ್ನಡದ ರಾಮಕೃಷ್ಣ ಭಟ್ ಅವರು ಮುಂಚೂಣಿಯಲ್ಲಿದ್ದಾರೆ. ಪ್ರತಿಯೊಬ್ಬರು ₹3 ಲಕ್ಷದಿಂದ ಸುಮಾರು ₹10 ಲಕ್ಷದವರೆಗೂ ಬಹುಮಾನ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>