<p><strong>ಬೆಂಗಳೂರು</strong>: ರಾಜ್ಯದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಅನುಮೋದಿತ ಚಾರಣ ಪಥಗಳಲ್ಲಿ ಚಾರಣ ನಡೆಸುವಾಗ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್ಒಪಿ), ಇಲಾಖೆಯು ಜಾರಿಗೆ ತಂದಿದೆ.</p>.<p>ಅರಣ್ಯ ಇಲಾಖೆಯ ಅನುಮೋದಿತ 44 ಚಾರಣ ಪಥಗಳಲ್ಲಿ, ಚಾರಣ ಕೈಗೊಳ್ಳುವ ವೇಳೆ ಮಾರ್ಗದರ್ಶಕರು ಇರುವುದನ್ನು ಕಡ್ಡಾಯಗೊಳಿಸಿರುವ ಈ ಎಸ್ಒಪಿಯನ್ನು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಶುಕ್ರವಾರ ಬಿಡುಗಡೆ ಮಾಡಿದರು.</p>.<p>‘ಕೊಡಗಿನ ತಡಿಯಾಂಡಮೋಳ್ ಪರ್ವತ ಚಾರಣದ ವೇಳೆ ಕೇರಳದ ಯುವತಿಯೊಬ್ಬರು ನಾಪತ್ತೆಯಾಗಿ, ಮೂರು ದಿನಗಳ ನಂತರ ಪತ್ತೆಯಾಗಿದ್ದರು. ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿದ್ದ ಬಾಲಕಿ ನಂತರ, ಶವವಾಗಿ ಪತ್ತೆಯಾಗಿದ್ದಳು. ಈ ಎರಡೂ ಘಟನೆಗಳ ಕಾರಣಕ್ಕೆ, ಚಾರಣಿಗರ ಸುರಕ್ಷೆ ಗಮನದಲ್ಲಿ ಇರಿಸಿಕೊಂಡು ಈ ಎಸ್ಒಪಿ ರೂಪಿಸಲಾಗಿದೆ’ ಎಂದರು ಈಶ್ವರ ಬಿ.ಖಂಡ್ರೆ ಹೇಳಿದರು.</p>.<p>‘ಅನುಮೋದಿತ ಚಾರಣ ಪಥಗಳಲ್ಲಿ, ‘ಅರಣ್ಯ ವಿಹಾರ’ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡವರಿಗಷ್ಟೇ ಚಾರಣ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಚಾರಣಿಗರ ಮೊಬೈಲ್ನಲ್ಲಿ ಅರಣ್ಯ ಇಲಾಖೆಯ ಪಥದರ್ಶಕ ಆ್ಯಪ್ ಅನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಎಸ್ಒಪಿ ಪಾಲಿಸದವರ ವಿವರವನ್ನು ಕಪ್ಪುಪಟ್ಟಿಗೆ ಆ್ಯಪ್ನಲ್ಲಿ ಸೇರಿಸಲು ಅವಕಾಶವಿದೆ. ಅಂತಹವರು ಚಾರಣ ಕೈಗೊಳ್ಳುವುದನ್ನು ನಿರ್ಬಂಧಿಸಲಾಗುತ್ತದೆ’ ಎಂದು ‘ಪ್ರಜಾವಾಣಿ’ಯ ಪ್ರಶ್ನೆಗೆ ಉತ್ತರಿಸಿದರು.</p>.<p>‘ಎಸ್ಒಪಿ ಪಾಲಿಸದೆ ಚಾರಣಿಗರು ಅಪಾಯಕ್ಕೆ ತುತ್ತಾದರೆ, ಸಂಬಂಧಿತ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊಣೆ ಮಾಡಿ ಕ್ರಮ ಜರುಗಿಸಲಾಗುತ್ತದೆ. ಎಸ್ಒಪಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಮೂರರಿಂದ ನಾಲ್ಕು ವಾರಗಳಾಗಬಹುದು’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.</p>.<p>ಮೂಲಸೌಕರ್ಯಕ್ಕೆ ಒತ್ತು: ಚಾರಣ ಪಥಗಳಲ್ಲಿ ಚಾರಣಿಗರ ಸುರಕ್ಷತೆಗಾಗಿ ಹಲವು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಎಸ್ಒಪಿ ಹೇಳುತ್ತದೆ. ಮೂಲ ಶಿಬಿರದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಇರಬೇಕು. ಚಾರಣದ ಹಾದಿಯಲ್ಲಿ ಪ್ರತಿ 200 ಮೀಟರ್ಗೆ ಒಂದು ಗುರುತನ್ನು ಲಗತ್ತಿಸಬೇಕು. ಪ್ರತಿ ಎರಡು ಕಿ.ಮೀ. ಅಂತರದಲ್ಲಿ ಒಂದು ವಿಶ್ರಾಂತಿ ತಾಣ ನಿರ್ಮಿಸಬೇಕು ಎಂಬ ವಿವರ ಎಸ್ಒಪಿಯಲ್ಲಿ ಇದೆ.</p>.<div><blockquote>ಪ್ರತಿ ಚಾರಣ ಪಥಕ್ಕೆ ಒಮ್ಮೆಗೆ 150 ಚಾರಣಿಗರಿಗಷ್ಟೇ ಅವಕಾಶ ನೀಡಲಾಗುತ್ತದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಲಾಗಿದೆ.</blockquote><span class="attribution">– ಈಶ್ವರ ಬಿ.ಖಂಡ್ರೆ ಅರಣ್ಯ ಸಚಿವ</span></div>.<p> <strong>ಮಾರ್ಗದರ್ಶಕ ಕಡ್ಡಾಯ</strong></p><p>ಪ್ರತಿ ಚಾರಣದ ವೇಳೆ ಅರಣ್ಯ ಇಲಾಖೆಯಿಂದ ನಿಯೋಜಿತರಾದ ಮಾರ್ಗದರ್ಶಕ ಚಾರಣಿಗರ ಗುಂಪಿನೊಂದಿಗೆ ಇರುವುದನ್ನು ಎಸ್ಒಪಿ ಕಡ್ಡಾಯ ಮಾಡಿದೆ. ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯಿಂದ ತರಬೇತಿ ಪಡೆದ ಸ್ಥಳೀಯ ಯುವಕರನ್ನು ಮಾರ್ಗದರ್ಶಕರಾಗಿ ನಿಯೋಜನೆ ಮಾಡಲಾಗುತ್ತದೆ.</p><ul><li><p>ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಕ ಇರುವುದು ಕಡ್ಡಾಯ. 10ಕ್ಕಿಂತ ಕಡಿಮೆ ಚಾರಣಿಗರು ಇದ್ದರೂ ಮಾರ್ಗದರ್ಶಕ ಚಾರಣದುದ್ದಕ್ಕೂ ಅವರೊಂದಿಗೆ ಇರಬೇಕು</p></li><li><p>ಮೂಲ ಶಿಬಿರದಲ್ಲಿ ಚಾರಣಿಗರಿಗೆ ಎಸ್ಒಪಿ ಕುರಿತ ವಿವರಣೆ ನೀಡಬೇಕು. ಪ್ರತಿ ಚಾರಣಿಗರೂ ತಮ್ಮ ಫೋನ್ಗಳಲ್ಲಿ ಆಫ್ಲೈನ್ ಜಿಪಿಎಸ್ ನಕ್ಷೆ ಮತ್ತು ಇಲಾಖೆಯ ಪಥದರ್ಶಕ ಆ್ಯಪ್ ಅಳವಡಿಸಿಕೊಳ್ಳುವುದು ಕಡ್ಡಾಯ</p></li><li><p>ಮಾರ್ಗದರ್ಶಕನ ಬಳಿ ಜಿಪಿಎಸ್ ಅಳವಡಿಸಿರುವ ವಾಕಿಟಾಕಿ ಇರಲಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಮಾರ್ಗದರ್ಶಕನು ತಮ್ಮ ಗುಂಪುನಲ್ಲಿರುವ ಚಾರಣಿಗರ ಸಂಖ್ಯೆಯನ್ನು ಖಾತರಿಪಡಿಸಿಕೊಳ್ಳಬೇಕು ಮತ್ತು ಆ ಬಗ್ಗೆ ಮೂಲ ಶಿಬಿರಕ್ಕೆ ವಾಕಿಟಾಕಿ ಮೂಲಕ ಮಾಹಿತಿ ನೀಡಬೇಕು</p></li><li><p>ಒಂದು ತಾಸಿಗೂ ಹೆಚ್ಚು ಅವಧಿಯಲ್ಲಿ ಮಾರ್ಗದರ್ಶಕನು ಮೂಲ ಶಿಬಿರಕ್ಕೆ ಮಾಹಿತಿ ನೀಡದೇ ಇದ್ದರೆ ಇಲಾಖೆ ಸಿಬ್ಬಂದಿ ಸ್ವತಃ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು. ಅಚಾತುರ್ಯಗಳು ನಡೆದಿದ್ದರೆ ಕೂಡಲೇ ಕಾರ್ಯಾಚರಣೆ ನಡೆಸಬೇಕು</p></li><li><p>ತುರ್ತು ಸ್ಥಿತಿಯಲ್ಲಿ ಬಳಸಲು ಟಾರ್ಚ್ ಹೆಡ್ಲ್ಯಾಂಪ್ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಔಷಧಗಳು ಮಾರ್ಗದರ್ಶಕನ ಬಳಿ ಇರಬೇಕು</p></li></ul>.<p><strong>ಚಾರಣಿಗರಿಗೆ ನಿಯಮ</strong></p><ul><li><p>ಬೆಂಕಿ ಹೊತ್ತಿಸುವಂತಹ ಸಾಧನ ಬೆಂಕಿ ಪೊಟ್ಟಣ ಪಟಾಕಿ ಸಿಗರೇಟ್ಗಳನ್ನು ಒಯ್ಯಬಾರದು</p></li><li><p>ಪ್ರತಿಯೊಬ್ಬರು ಕನಿಷ್ಠ 2 ಲೀಟರ್ನಷ್ಟು ನೀರು ಮತ್ತು ಲಘು ತಿನಿಸು ಒಯ್ಯಬೇಕು</p></li><li><p>ಕಾಡಿನ ಪರಿಸರದ ಮಧ್ಯೆ ಎದ್ದು ಕಾಣುವಂತ ಜಾಕೆಟ್/ಟಿ–ಶರ್ಟ್ ಧರಿಸಬೇಕು</p></li><li><p>ತಮಗಿರುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾರ್ಗದರ್ಶಕರಿಗೆ ಮಾಹಿತಿ ನೀಡಿರಬೇಕು</p></li><li><p>ಚಾರಣದ ವೇಳೆ ಪ್ರತಿ ಚಾರಣಿಗರಿಗೂ ಒಂದು ವಿಶಲ್ ನೀಡಲಾಗುತ್ತದೆ. ಚಾರಣಿಗರು ತಮ್ಮ ಗುಂಪಿನಿಂದ ದೂರವುಳಿದ ಅಥವಾ ನಾಪತ್ತೆಯಾದ ಸಂದರ್ಭದಲ್ಲಿ ಅದನ್ನು ಬಳಸಬಹುದು</p></li><li><p>ಚಾರಣ ಪಥದಿಂದ ಆಚೆಗೆ ಹೋಗುವಂತಿಲ್ಲ. ಚಾರಣ ಆರಂಭವಾಗಿ ಮುಗಿಯುವವರೆಗೂ ಮಾರ್ಗದರ್ಶಕನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ</p></li><li><p>ಚಾರಣದ ವೇಳೆ ಅಬ್ಬರದ ಸಂಗೀತ ಹಾಕಬಾರದು. ಅಂತಹ ಸಾಧನಗಳನ್ನು ಬಳಸಬಾರದು. ಕ್ಯಾಮೆರಾಗಳನ್ನು ಬಳಸಲು ಅವಕಾಶವಿದ್ದು ಫ್ಲ್ಯಾಶ್ಗಳ ಬಳಕೆಗೆ ನಿರ್ಬಂಧವಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಅನುಮೋದಿತ ಚಾರಣ ಪಥಗಳಲ್ಲಿ ಚಾರಣ ನಡೆಸುವಾಗ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್ಒಪಿ), ಇಲಾಖೆಯು ಜಾರಿಗೆ ತಂದಿದೆ.</p>.<p>ಅರಣ್ಯ ಇಲಾಖೆಯ ಅನುಮೋದಿತ 44 ಚಾರಣ ಪಥಗಳಲ್ಲಿ, ಚಾರಣ ಕೈಗೊಳ್ಳುವ ವೇಳೆ ಮಾರ್ಗದರ್ಶಕರು ಇರುವುದನ್ನು ಕಡ್ಡಾಯಗೊಳಿಸಿರುವ ಈ ಎಸ್ಒಪಿಯನ್ನು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಶುಕ್ರವಾರ ಬಿಡುಗಡೆ ಮಾಡಿದರು.</p>.<p>‘ಕೊಡಗಿನ ತಡಿಯಾಂಡಮೋಳ್ ಪರ್ವತ ಚಾರಣದ ವೇಳೆ ಕೇರಳದ ಯುವತಿಯೊಬ್ಬರು ನಾಪತ್ತೆಯಾಗಿ, ಮೂರು ದಿನಗಳ ನಂತರ ಪತ್ತೆಯಾಗಿದ್ದರು. ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿದ್ದ ಬಾಲಕಿ ನಂತರ, ಶವವಾಗಿ ಪತ್ತೆಯಾಗಿದ್ದಳು. ಈ ಎರಡೂ ಘಟನೆಗಳ ಕಾರಣಕ್ಕೆ, ಚಾರಣಿಗರ ಸುರಕ್ಷೆ ಗಮನದಲ್ಲಿ ಇರಿಸಿಕೊಂಡು ಈ ಎಸ್ಒಪಿ ರೂಪಿಸಲಾಗಿದೆ’ ಎಂದರು ಈಶ್ವರ ಬಿ.ಖಂಡ್ರೆ ಹೇಳಿದರು.</p>.<p>‘ಅನುಮೋದಿತ ಚಾರಣ ಪಥಗಳಲ್ಲಿ, ‘ಅರಣ್ಯ ವಿಹಾರ’ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡವರಿಗಷ್ಟೇ ಚಾರಣ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಚಾರಣಿಗರ ಮೊಬೈಲ್ನಲ್ಲಿ ಅರಣ್ಯ ಇಲಾಖೆಯ ಪಥದರ್ಶಕ ಆ್ಯಪ್ ಅನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಎಸ್ಒಪಿ ಪಾಲಿಸದವರ ವಿವರವನ್ನು ಕಪ್ಪುಪಟ್ಟಿಗೆ ಆ್ಯಪ್ನಲ್ಲಿ ಸೇರಿಸಲು ಅವಕಾಶವಿದೆ. ಅಂತಹವರು ಚಾರಣ ಕೈಗೊಳ್ಳುವುದನ್ನು ನಿರ್ಬಂಧಿಸಲಾಗುತ್ತದೆ’ ಎಂದು ‘ಪ್ರಜಾವಾಣಿ’ಯ ಪ್ರಶ್ನೆಗೆ ಉತ್ತರಿಸಿದರು.</p>.<p>‘ಎಸ್ಒಪಿ ಪಾಲಿಸದೆ ಚಾರಣಿಗರು ಅಪಾಯಕ್ಕೆ ತುತ್ತಾದರೆ, ಸಂಬಂಧಿತ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊಣೆ ಮಾಡಿ ಕ್ರಮ ಜರುಗಿಸಲಾಗುತ್ತದೆ. ಎಸ್ಒಪಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಮೂರರಿಂದ ನಾಲ್ಕು ವಾರಗಳಾಗಬಹುದು’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.</p>.<p>ಮೂಲಸೌಕರ್ಯಕ್ಕೆ ಒತ್ತು: ಚಾರಣ ಪಥಗಳಲ್ಲಿ ಚಾರಣಿಗರ ಸುರಕ್ಷತೆಗಾಗಿ ಹಲವು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಎಸ್ಒಪಿ ಹೇಳುತ್ತದೆ. ಮೂಲ ಶಿಬಿರದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಇರಬೇಕು. ಚಾರಣದ ಹಾದಿಯಲ್ಲಿ ಪ್ರತಿ 200 ಮೀಟರ್ಗೆ ಒಂದು ಗುರುತನ್ನು ಲಗತ್ತಿಸಬೇಕು. ಪ್ರತಿ ಎರಡು ಕಿ.ಮೀ. ಅಂತರದಲ್ಲಿ ಒಂದು ವಿಶ್ರಾಂತಿ ತಾಣ ನಿರ್ಮಿಸಬೇಕು ಎಂಬ ವಿವರ ಎಸ್ಒಪಿಯಲ್ಲಿ ಇದೆ.</p>.<div><blockquote>ಪ್ರತಿ ಚಾರಣ ಪಥಕ್ಕೆ ಒಮ್ಮೆಗೆ 150 ಚಾರಣಿಗರಿಗಷ್ಟೇ ಅವಕಾಶ ನೀಡಲಾಗುತ್ತದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಲಾಗಿದೆ.</blockquote><span class="attribution">– ಈಶ್ವರ ಬಿ.ಖಂಡ್ರೆ ಅರಣ್ಯ ಸಚಿವ</span></div>.<p> <strong>ಮಾರ್ಗದರ್ಶಕ ಕಡ್ಡಾಯ</strong></p><p>ಪ್ರತಿ ಚಾರಣದ ವೇಳೆ ಅರಣ್ಯ ಇಲಾಖೆಯಿಂದ ನಿಯೋಜಿತರಾದ ಮಾರ್ಗದರ್ಶಕ ಚಾರಣಿಗರ ಗುಂಪಿನೊಂದಿಗೆ ಇರುವುದನ್ನು ಎಸ್ಒಪಿ ಕಡ್ಡಾಯ ಮಾಡಿದೆ. ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯಿಂದ ತರಬೇತಿ ಪಡೆದ ಸ್ಥಳೀಯ ಯುವಕರನ್ನು ಮಾರ್ಗದರ್ಶಕರಾಗಿ ನಿಯೋಜನೆ ಮಾಡಲಾಗುತ್ತದೆ.</p><ul><li><p>ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಕ ಇರುವುದು ಕಡ್ಡಾಯ. 10ಕ್ಕಿಂತ ಕಡಿಮೆ ಚಾರಣಿಗರು ಇದ್ದರೂ ಮಾರ್ಗದರ್ಶಕ ಚಾರಣದುದ್ದಕ್ಕೂ ಅವರೊಂದಿಗೆ ಇರಬೇಕು</p></li><li><p>ಮೂಲ ಶಿಬಿರದಲ್ಲಿ ಚಾರಣಿಗರಿಗೆ ಎಸ್ಒಪಿ ಕುರಿತ ವಿವರಣೆ ನೀಡಬೇಕು. ಪ್ರತಿ ಚಾರಣಿಗರೂ ತಮ್ಮ ಫೋನ್ಗಳಲ್ಲಿ ಆಫ್ಲೈನ್ ಜಿಪಿಎಸ್ ನಕ್ಷೆ ಮತ್ತು ಇಲಾಖೆಯ ಪಥದರ್ಶಕ ಆ್ಯಪ್ ಅಳವಡಿಸಿಕೊಳ್ಳುವುದು ಕಡ್ಡಾಯ</p></li><li><p>ಮಾರ್ಗದರ್ಶಕನ ಬಳಿ ಜಿಪಿಎಸ್ ಅಳವಡಿಸಿರುವ ವಾಕಿಟಾಕಿ ಇರಲಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಮಾರ್ಗದರ್ಶಕನು ತಮ್ಮ ಗುಂಪುನಲ್ಲಿರುವ ಚಾರಣಿಗರ ಸಂಖ್ಯೆಯನ್ನು ಖಾತರಿಪಡಿಸಿಕೊಳ್ಳಬೇಕು ಮತ್ತು ಆ ಬಗ್ಗೆ ಮೂಲ ಶಿಬಿರಕ್ಕೆ ವಾಕಿಟಾಕಿ ಮೂಲಕ ಮಾಹಿತಿ ನೀಡಬೇಕು</p></li><li><p>ಒಂದು ತಾಸಿಗೂ ಹೆಚ್ಚು ಅವಧಿಯಲ್ಲಿ ಮಾರ್ಗದರ್ಶಕನು ಮೂಲ ಶಿಬಿರಕ್ಕೆ ಮಾಹಿತಿ ನೀಡದೇ ಇದ್ದರೆ ಇಲಾಖೆ ಸಿಬ್ಬಂದಿ ಸ್ವತಃ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು. ಅಚಾತುರ್ಯಗಳು ನಡೆದಿದ್ದರೆ ಕೂಡಲೇ ಕಾರ್ಯಾಚರಣೆ ನಡೆಸಬೇಕು</p></li><li><p>ತುರ್ತು ಸ್ಥಿತಿಯಲ್ಲಿ ಬಳಸಲು ಟಾರ್ಚ್ ಹೆಡ್ಲ್ಯಾಂಪ್ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಔಷಧಗಳು ಮಾರ್ಗದರ್ಶಕನ ಬಳಿ ಇರಬೇಕು</p></li></ul>.<p><strong>ಚಾರಣಿಗರಿಗೆ ನಿಯಮ</strong></p><ul><li><p>ಬೆಂಕಿ ಹೊತ್ತಿಸುವಂತಹ ಸಾಧನ ಬೆಂಕಿ ಪೊಟ್ಟಣ ಪಟಾಕಿ ಸಿಗರೇಟ್ಗಳನ್ನು ಒಯ್ಯಬಾರದು</p></li><li><p>ಪ್ರತಿಯೊಬ್ಬರು ಕನಿಷ್ಠ 2 ಲೀಟರ್ನಷ್ಟು ನೀರು ಮತ್ತು ಲಘು ತಿನಿಸು ಒಯ್ಯಬೇಕು</p></li><li><p>ಕಾಡಿನ ಪರಿಸರದ ಮಧ್ಯೆ ಎದ್ದು ಕಾಣುವಂತ ಜಾಕೆಟ್/ಟಿ–ಶರ್ಟ್ ಧರಿಸಬೇಕು</p></li><li><p>ತಮಗಿರುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾರ್ಗದರ್ಶಕರಿಗೆ ಮಾಹಿತಿ ನೀಡಿರಬೇಕು</p></li><li><p>ಚಾರಣದ ವೇಳೆ ಪ್ರತಿ ಚಾರಣಿಗರಿಗೂ ಒಂದು ವಿಶಲ್ ನೀಡಲಾಗುತ್ತದೆ. ಚಾರಣಿಗರು ತಮ್ಮ ಗುಂಪಿನಿಂದ ದೂರವುಳಿದ ಅಥವಾ ನಾಪತ್ತೆಯಾದ ಸಂದರ್ಭದಲ್ಲಿ ಅದನ್ನು ಬಳಸಬಹುದು</p></li><li><p>ಚಾರಣ ಪಥದಿಂದ ಆಚೆಗೆ ಹೋಗುವಂತಿಲ್ಲ. ಚಾರಣ ಆರಂಭವಾಗಿ ಮುಗಿಯುವವರೆಗೂ ಮಾರ್ಗದರ್ಶಕನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ</p></li><li><p>ಚಾರಣದ ವೇಳೆ ಅಬ್ಬರದ ಸಂಗೀತ ಹಾಕಬಾರದು. ಅಂತಹ ಸಾಧನಗಳನ್ನು ಬಳಸಬಾರದು. ಕ್ಯಾಮೆರಾಗಳನ್ನು ಬಳಸಲು ಅವಕಾಶವಿದ್ದು ಫ್ಲ್ಯಾಶ್ಗಳ ಬಳಕೆಗೆ ನಿರ್ಬಂಧವಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>