<p><strong>ಬೆಂಗಳೂರು:</strong> ‘ಪಿಗ್ಮಿ ಏಜೆಂಟ್ ಸಮೂಹ ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂಬ ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ‘ಪಿಗ್ಮಿ ಏಜೆಂಟರನ್ನು ವ್ಯವಹಾರ ಸುಗಮಕಾರರು (ಬ್ಯುಸಿನೆಸ್ ಫೆಸಿಲಿಟೇಟರ್) ಎಂದು ವಿವರಿಸಲು ಪ್ರಯತ್ನಿಸಿರುವುದು ವಾಣಿಜ್ಯ ತೆರಿಗೆ ಇಲಾಖೆಯ ದುರ್ಬಲ ನಡೆ’ ಎಂದು ಬಣ್ಣಿಸಿದೆ.</p><p>‘ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ಜಾರಿ ಮಾಡಿರುವ ಷೋಕಾಸ್ ನೋಟಿಸ್ಗಳನ್ನು ರದ್ದುಪಡಿಸಬೇಕು’ ಎಂದು ಕೋರಿ, ಧಾರವಾಡದ ‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್’ ಪರ ರಾಮಚಂದ್ರ ಕಾಂಬ್ಳೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.</p><p>‘ಪಿಗ್ಮಿ ಏಜೆಂಟರುಗಳಿಗೆ ಸಿಜಿಎಸ್ಟಿ (ಕೇಂದ್ರ ಸರಕು ಸೇವೆಗಳ ತೆರಿಗೆ) ಮತ್ತು ಕೆಜಿಎಸ್ಟಿ (ಕರ್ನಾಟಕ ಸರಕು ಸೇವೆಗಳ ತೆರಿಗೆ) ಅನ್ವಯವಾಗುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.</p><p>ವಿಚಾರಣೆ ವೇಳೆ ಬ್ಯಾಂಕ್ ಪರ ಪದಾಂಕಿತ ಹಿರಿಯ ವಕೀಲ ವಿ.ರಘುರಾಮನ್, ‘ಪಿಗ್ಮಿ ಏಜೆಂಟರು ವ್ಯವಹಾರವನ್ನು ಸುಗಮಗೊಳಿಸುವ ಸೂತ್ರಧಾರರು ಎಂದು ಅವರನ್ನು; ರಿವರ್ಸ್ ಚಾರ್ಜ್ ಕಾರ್ಯವಿಧಾನದ ವ್ಯಾಪ್ತಿಯಲ್ಲಿ ಒಳಪಡಿಸಲು ಆಗದು. ಇವರೆಲ್ಲಾ ಕೈಗಾರಿಕಾ ವಿವಾದಗಳ ಕಾಯ್ದೆ–1947ರ ವ್ಯಾಪ್ತಿಗೆ ಒಳಪಡುತ್ತಾರೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಪ್ರಕರಣದಲ್ಲಿ ಎತ್ತಿಹಿಡಿದಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.</p><p>‘ಪಿಗ್ಮಿ ಏಜೆಂಟರು ವ್ಯವಹಾರ ಸುಗಮಕಾರರಲ್ಲ. ಅವರೆಲ್ಲಾ ಬ್ಯಾಂಕ್ ನೌಕರರು. ಪಿಗ್ಮಿ ಏಜೆಂಟರ ಸಂಬಳದಲ್ಲಿಯೇ ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ಹಿಡಿಯಲಾಗುತ್ತದೆ. ಹಾಗಾಗಿ, ಅವರಿಗೆ ನೀಡಲಾಗುವ ಸಂಬಳದ ಮೇಲೆ ಜಿಎಸ್ಟಿ ಹೇರಲು ಬರುವುದಿಲ್ಲ’ ಎಂದು ವಿವರಿಸಿದ್ದರು. </p><p>ಈ ವಾದಾಂಶವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಪಿಗ್ಮಿ ಏಜೆಂಟ್ರು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದಿಸಿದ ಮಾದರಿಯಲ್ಲಿ ನೇಮಕಗೊಂಡ ಮಧ್ಯವರ್ತಿಗಳಲ್ಲ. ಅವರ ಪಾತ್ರವೇನಿದ್ದರೂ ಬ್ಯಾಂಕಿನ ಪಿಗ್ಮಿ ಠೇವಣಿ ಯೋಜನೆ ಅಡಿಯಲ್ಲಿ ಠೇವಣಿ ಸಂಗ್ರಹಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅವರು ವ್ಯವಹಾರ ಸುಗಮಕಾರರ ಅಡಿಯಲ್ಲಿ ಕಲ್ಪಿಸಲಾದ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂಬುದು ಗಮನಾರ್ಹ’ ಎಂದು ತಿಳಿಸಿದೆ.</p><p>‘ವ್ಯವಹಾರ ಸುಗಮಕಾರರು ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿದ ಮತ್ತು ನಿಯಂತ್ರಣ ಮಾದರಿಗಳ ಅಡಿಯಲ್ಲಿ ನೇಮಕಗೊಂಡ ಮಧ್ಯವರ್ತಿಯನ್ನು ಸೂಚಿಸುತ್ತದೆ. ಇಂತಹ ಸುಗಮಕಾರರು ವ್ಯಾಖ್ಯಾನದ ವಿವರಣೆಗೆ ಅನುಗುಣವಾಗಿ, ನಿಯಂತ್ರಿತ ಚೌಕಟ್ಟಿನಲ್ಲಿ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವವರಾಗಿರುತ್ತಾರೆ. ಆದರೆ, ಈ ಪ್ರಕರಣದಲ್ಲಿ ತೆರಿಗೆ ಇಲಾಖೆಯು ಪಿಗ್ಮಿ ಏಜೆಂಟ್ರನ್ನು ವ್ಯವಹಾರ ಸುಗಮಕಾರರ ವರ್ಗಕ್ಕೆ ವರ್ಗಾಯಿಸುವ ಪ್ರಯತ್ನ ನಡೆಸಿರುವುದು ಅತ್ಯಂತ ದೋಷಪೂರಿತ ಹೆಜ್ಜೆ’ ಎಂದು ವಿಷಾದಿಸಿದೆ.</p>.<div><blockquote>ಈ ಪ್ರಕರಣದಲ್ಲಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗೆ ಹುಬ್ಬಳ್ಳಿಯ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ನೀಡಿರುವ ಷೋಕಾಸ್ ನೋಟಿಸ್ಗಳು ತೆರಿಗೆ ಪದ್ಧತಿಯ ಕಾಯ್ದೆ ವ್ಯಾಪ್ತಿಯನ್ನು ಮೀರಿವೆ.</blockquote><span class="attribution">ನ್ಯಾ.ಎಂ.ನಾಗಪ್ರಸನ್ನ</span></div>.<h2>ಷೋಕಾಸ್ ನೋಟಿಸ್ ಪ್ರಶ್ನಿಸಿದ್ದ ಬ್ಯಾಂಕ್</h2><p>‘ನಗರ ಶಾಖೆಗಳಲ್ಲಿನ ಪಿಗ್ಮಿ ಏಜೆಂಟ್ಗಳಿಗೆ ಪಾವತಿಸಲಾಗುವ ಕಮಿಷನ್ ಮೊತ್ತಕ್ಕೆ ಪ್ರತಿಯಾಗಿ, ರಿವರ್ಸ್ ಚಾರ್ಜ್ ಕಾರ್ಯವಿಧಾನದ (ಆರ್ಸಿಎಂ) ಅಡಿಯಲ್ಲಿ ತೆರಿಗೆ ಮೊತ್ತವನ್ನು ಠೇವಣಿ ಮಾಡಲು ಬ್ಯಾಂಕ್ ವಿಫಲವಾಗಿದೆ’ ಎಂದು ಹುಬ್ಬಳ್ಳಿಯ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ಆರೋಪಿಸಿದ್ದರು.</p><p>‘ತೆರಿಗೆ ಅನುಸರಣೆಗೆ ಸಂಬಂಧಿಸಿದಂತೆ ಆರ್ಥಿಕ ವರ್ಷ 2018–19, 2019–20 ಮತ್ತು 2020–21ರ ಸಾಲಿನ ತೆರಿಗೆ ವಸೂಲಾತಿಯಲ್ಲಿ ಪಿಗ್ಮಿ ಏಜೆಂಟರುಗಳನ್ನು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಕಾಯ್ದೆ–2017ರ ಕಲಂ 67ರ ಅಡಿಯಲ್ಲಿ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿ ತೆರಿಗೆ ಪಾವತಿಸಬೇಕು’ ಎಂದು ಸೂಚಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗೆ 2023ರ ಡಿಸೆಂಬರ್ 27 ಮತ್ತು 28ರಂದು ಷೋಕಾಸ್ ನೋಟಿಸ್ಗಳನ್ನು ಜಾರಿ ಮಾಡಲಾಗಿತ್ತು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪಿಗ್ಮಿ ಏಜೆಂಟ್ ಸಮೂಹ ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂಬ ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ‘ಪಿಗ್ಮಿ ಏಜೆಂಟರನ್ನು ವ್ಯವಹಾರ ಸುಗಮಕಾರರು (ಬ್ಯುಸಿನೆಸ್ ಫೆಸಿಲಿಟೇಟರ್) ಎಂದು ವಿವರಿಸಲು ಪ್ರಯತ್ನಿಸಿರುವುದು ವಾಣಿಜ್ಯ ತೆರಿಗೆ ಇಲಾಖೆಯ ದುರ್ಬಲ ನಡೆ’ ಎಂದು ಬಣ್ಣಿಸಿದೆ.</p><p>‘ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ಜಾರಿ ಮಾಡಿರುವ ಷೋಕಾಸ್ ನೋಟಿಸ್ಗಳನ್ನು ರದ್ದುಪಡಿಸಬೇಕು’ ಎಂದು ಕೋರಿ, ಧಾರವಾಡದ ‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್’ ಪರ ರಾಮಚಂದ್ರ ಕಾಂಬ್ಳೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.</p><p>‘ಪಿಗ್ಮಿ ಏಜೆಂಟರುಗಳಿಗೆ ಸಿಜಿಎಸ್ಟಿ (ಕೇಂದ್ರ ಸರಕು ಸೇವೆಗಳ ತೆರಿಗೆ) ಮತ್ತು ಕೆಜಿಎಸ್ಟಿ (ಕರ್ನಾಟಕ ಸರಕು ಸೇವೆಗಳ ತೆರಿಗೆ) ಅನ್ವಯವಾಗುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.</p><p>ವಿಚಾರಣೆ ವೇಳೆ ಬ್ಯಾಂಕ್ ಪರ ಪದಾಂಕಿತ ಹಿರಿಯ ವಕೀಲ ವಿ.ರಘುರಾಮನ್, ‘ಪಿಗ್ಮಿ ಏಜೆಂಟರು ವ್ಯವಹಾರವನ್ನು ಸುಗಮಗೊಳಿಸುವ ಸೂತ್ರಧಾರರು ಎಂದು ಅವರನ್ನು; ರಿವರ್ಸ್ ಚಾರ್ಜ್ ಕಾರ್ಯವಿಧಾನದ ವ್ಯಾಪ್ತಿಯಲ್ಲಿ ಒಳಪಡಿಸಲು ಆಗದು. ಇವರೆಲ್ಲಾ ಕೈಗಾರಿಕಾ ವಿವಾದಗಳ ಕಾಯ್ದೆ–1947ರ ವ್ಯಾಪ್ತಿಗೆ ಒಳಪಡುತ್ತಾರೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಪ್ರಕರಣದಲ್ಲಿ ಎತ್ತಿಹಿಡಿದಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.</p><p>‘ಪಿಗ್ಮಿ ಏಜೆಂಟರು ವ್ಯವಹಾರ ಸುಗಮಕಾರರಲ್ಲ. ಅವರೆಲ್ಲಾ ಬ್ಯಾಂಕ್ ನೌಕರರು. ಪಿಗ್ಮಿ ಏಜೆಂಟರ ಸಂಬಳದಲ್ಲಿಯೇ ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ಹಿಡಿಯಲಾಗುತ್ತದೆ. ಹಾಗಾಗಿ, ಅವರಿಗೆ ನೀಡಲಾಗುವ ಸಂಬಳದ ಮೇಲೆ ಜಿಎಸ್ಟಿ ಹೇರಲು ಬರುವುದಿಲ್ಲ’ ಎಂದು ವಿವರಿಸಿದ್ದರು. </p><p>ಈ ವಾದಾಂಶವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಪಿಗ್ಮಿ ಏಜೆಂಟ್ರು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದಿಸಿದ ಮಾದರಿಯಲ್ಲಿ ನೇಮಕಗೊಂಡ ಮಧ್ಯವರ್ತಿಗಳಲ್ಲ. ಅವರ ಪಾತ್ರವೇನಿದ್ದರೂ ಬ್ಯಾಂಕಿನ ಪಿಗ್ಮಿ ಠೇವಣಿ ಯೋಜನೆ ಅಡಿಯಲ್ಲಿ ಠೇವಣಿ ಸಂಗ್ರಹಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅವರು ವ್ಯವಹಾರ ಸುಗಮಕಾರರ ಅಡಿಯಲ್ಲಿ ಕಲ್ಪಿಸಲಾದ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂಬುದು ಗಮನಾರ್ಹ’ ಎಂದು ತಿಳಿಸಿದೆ.</p><p>‘ವ್ಯವಹಾರ ಸುಗಮಕಾರರು ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿದ ಮತ್ತು ನಿಯಂತ್ರಣ ಮಾದರಿಗಳ ಅಡಿಯಲ್ಲಿ ನೇಮಕಗೊಂಡ ಮಧ್ಯವರ್ತಿಯನ್ನು ಸೂಚಿಸುತ್ತದೆ. ಇಂತಹ ಸುಗಮಕಾರರು ವ್ಯಾಖ್ಯಾನದ ವಿವರಣೆಗೆ ಅನುಗುಣವಾಗಿ, ನಿಯಂತ್ರಿತ ಚೌಕಟ್ಟಿನಲ್ಲಿ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವವರಾಗಿರುತ್ತಾರೆ. ಆದರೆ, ಈ ಪ್ರಕರಣದಲ್ಲಿ ತೆರಿಗೆ ಇಲಾಖೆಯು ಪಿಗ್ಮಿ ಏಜೆಂಟ್ರನ್ನು ವ್ಯವಹಾರ ಸುಗಮಕಾರರ ವರ್ಗಕ್ಕೆ ವರ್ಗಾಯಿಸುವ ಪ್ರಯತ್ನ ನಡೆಸಿರುವುದು ಅತ್ಯಂತ ದೋಷಪೂರಿತ ಹೆಜ್ಜೆ’ ಎಂದು ವಿಷಾದಿಸಿದೆ.</p>.<div><blockquote>ಈ ಪ್ರಕರಣದಲ್ಲಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗೆ ಹುಬ್ಬಳ್ಳಿಯ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ನೀಡಿರುವ ಷೋಕಾಸ್ ನೋಟಿಸ್ಗಳು ತೆರಿಗೆ ಪದ್ಧತಿಯ ಕಾಯ್ದೆ ವ್ಯಾಪ್ತಿಯನ್ನು ಮೀರಿವೆ.</blockquote><span class="attribution">ನ್ಯಾ.ಎಂ.ನಾಗಪ್ರಸನ್ನ</span></div>.<h2>ಷೋಕಾಸ್ ನೋಟಿಸ್ ಪ್ರಶ್ನಿಸಿದ್ದ ಬ್ಯಾಂಕ್</h2><p>‘ನಗರ ಶಾಖೆಗಳಲ್ಲಿನ ಪಿಗ್ಮಿ ಏಜೆಂಟ್ಗಳಿಗೆ ಪಾವತಿಸಲಾಗುವ ಕಮಿಷನ್ ಮೊತ್ತಕ್ಕೆ ಪ್ರತಿಯಾಗಿ, ರಿವರ್ಸ್ ಚಾರ್ಜ್ ಕಾರ್ಯವಿಧಾನದ (ಆರ್ಸಿಎಂ) ಅಡಿಯಲ್ಲಿ ತೆರಿಗೆ ಮೊತ್ತವನ್ನು ಠೇವಣಿ ಮಾಡಲು ಬ್ಯಾಂಕ್ ವಿಫಲವಾಗಿದೆ’ ಎಂದು ಹುಬ್ಬಳ್ಳಿಯ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ಆರೋಪಿಸಿದ್ದರು.</p><p>‘ತೆರಿಗೆ ಅನುಸರಣೆಗೆ ಸಂಬಂಧಿಸಿದಂತೆ ಆರ್ಥಿಕ ವರ್ಷ 2018–19, 2019–20 ಮತ್ತು 2020–21ರ ಸಾಲಿನ ತೆರಿಗೆ ವಸೂಲಾತಿಯಲ್ಲಿ ಪಿಗ್ಮಿ ಏಜೆಂಟರುಗಳನ್ನು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಕಾಯ್ದೆ–2017ರ ಕಲಂ 67ರ ಅಡಿಯಲ್ಲಿ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿ ತೆರಿಗೆ ಪಾವತಿಸಬೇಕು’ ಎಂದು ಸೂಚಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗೆ 2023ರ ಡಿಸೆಂಬರ್ 27 ಮತ್ತು 28ರಂದು ಷೋಕಾಸ್ ನೋಟಿಸ್ಗಳನ್ನು ಜಾರಿ ಮಾಡಲಾಗಿತ್ತು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>