<p>ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಬೆಳಗಿನ ಪ್ರಮುಖ ಸುದ್ದಿಗಳು ಇಂತಿವೆ..</p>.<p><strong>ಬೆಂಗಳೂರು</strong>: ಮುಂದಿನ ತಿಂಗಳು ತೆರವಾಗಲಿರುವ ರಾಜ್ಯಸಭೆಯ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 24 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆ ಆರಂಭಿಸಿದೆ.</p> .ಕರ್ನಾಟಕದ 4 ಸೇರಿ ರಾಜ್ಯಸಭೆಯ ಒಟ್ಟು 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್.<p>ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ. ಯುವಕರು ‘ಜಿರಳೆ’ಗಳಂತೆ ವೇಷ ಧರಿಸಿ ಯಮುನಾ ನದಿಯಲ್ಲಿ ಕಸವನ್ನು ಸ್ವಚ್ಛಗೊಳಿಸುವ ಮೂಲಕ ಮಾಲಿನ್ಯದ ಕಡೆಗೆ ಜನರ ಗಮನ ಸೆಳೆದಿದ್ದಾರೆ.</p> .Explainer: ಜಿರಳೆಗಳಂತೆ ವೇಷ ಧರಿಸಿ ಯಮುನಾ ನದಿ ಸ್ವಚ್ಛಗೊಳಿಸಿದ ಯಂಗ್ ಕಾಕ್ರೋಚಸ್.<p><strong>ಬೆಂಗಳೂರು</strong>: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವರದೇ ಹಳೆಯ ಭರವಸೆಯನ್ನು ನೆನಪಿಸಿ ಕಾಲೆಳೆದಿದೆ.</p> .ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಸಿದ್ದರಾಮಯ್ಯರ ಹಳೇ ಭರವಸೆ ನೆನಪಿಸಿದ ಬಿಜೆಪಿ!.<p><strong>ಬೆಂಗಳೂರು</strong>: ನಗರದಲ್ಲಿ ಮೇ 25ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.</p> .ಬೆಂಗಳೂರಿನಲ್ಲಿ ಮೇ 25ರವರೆಗೆ ಮಳೆ: ಯೆಲ್ಲೋ ಅಲರ್ಟ್ ನೀಡಿದ ಐಎಂಡಿ.<p><strong>ನವದೆಹಲಿ</strong>: ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಬೆನ್ನಲ್ಲೇ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶಕ್ಕೆ ಒಟ್ಟಿಗೆ ಪರೀಕ್ಷೆ ನಡೆಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಹಾಗೆಯೇ, ಪ್ರಶ್ನೆಪತ್ರಿಕೆಗಳನ್ನು ತಯಾರಿಸಲು ಹೊರಗಿನ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವ ಕುರಿತಾಗಿಯೂ ಪರಿಶೀಲನೆ ನಡೆಸುತ್ತಿದೆ.</p> .ನೀಟ್–ಯುಜಿ ಪ್ರಶ್ನೆಪತ್ರಿಕೆ ‘ಸೋರಿಕೆ’ ಒಪ್ಪದ ಎನ್ಟಿಎ ಅಧಿಕಾರಿಗಳು.<p><strong>ಅಹಮದಾಬಾದ್:</strong> ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) 2026ರ ಅಭಿಯಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರಾಶಾದಾಯಕವಾಗಿ ಕೊನೆಗೊಳಿಸಿದೆ. ಗುರುವಾರ ಮುಕ್ತಾಯಗೊಂಡ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡವು ಹೀನಾಯ ಸೋಲು ಅನುಭವಿಸಿ, ಟೂರ್ನಿಯಿಂದ ಹೊರನಡೆದಿದೆ. ಸೋಲಿನ ನಡುವೆ ತಂಡದ ನಾಯಕ ಸೇರಿ ಇತರೆ ಆಟಗಾರರು ಭಾರಿ ಮೊತ್ತದ ದಂಡಕ್ಕೂ ಒಳಗಾಗಿದ್ದಾರೆ.</p> .IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ.<p><strong>ವಾಷಿಂಗ್ಟನ್:</strong> ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-3’ ಮಿಷನ್ಗೆ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (ಎಐಎಎ) ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.</p> .<p><strong>ಬೆಂಗಳೂರು</strong>: ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಶುರುವಾಗಿದ್ದು, ಮತದಾರರ ಹಕ್ಕು ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವುದೂ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. </p> .<p><strong>ಇರಾನ್: </strong>ಬಂದೂಕುಧಾರಿಗಳು ಶಿಯಾ ಸಮುದಾಯದ ಪ್ರಮುಖ ಪ್ರಾರ್ಥನಾ ಮಂದಿರದಲ್ಲಿ ಗುಂಡಿನ ದಾಳಿ ನಡೆಸಿ ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ನಗರವಾದ ಶಿರಾಜ್ ನಗರದಲ್ಲಿ ಬುಧವಾರ ನಡೆದಿದೆ.</p> .ಇರಾನ್ನಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ: ಕನಿಷ್ಠ 15 ಮಂದಿ ಸಾವು.<p><strong>ನವದೆಹಲಿ</strong>: ಆಲ್ರೌಂಡರ್ ಅನುಕೂಲ್ ರಾಯ್ ಅವರನ್ನು ತ್ರಿಕೋನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಲಿರುವ ಭಾರತ ‘ಎ’ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಈ ತಂಡದಲ್ಲಿದ್ದ ಹರ್ಷ ದುಬೆ ಅವರು ಭಾರತ ಸೀನಿಯರ್ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದು ಅವರ ಸ್ಥಾನಕ್ಕೆ ಅನುಕೂಲ್ ಸೇರ್ಪಡೆಯಾಗಿದ್ದಾರೆ.</p>.ಭಾರತ ‘ಎ’ ತಂಡಕ್ಕೆ ಆಲ್ರೌಂಡರ್ ಅನುಕೂಲ್ ರಾಯ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಬೆಳಗಿನ ಪ್ರಮುಖ ಸುದ್ದಿಗಳು ಇಂತಿವೆ..</p>.<p><strong>ಬೆಂಗಳೂರು</strong>: ಮುಂದಿನ ತಿಂಗಳು ತೆರವಾಗಲಿರುವ ರಾಜ್ಯಸಭೆಯ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 24 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆ ಆರಂಭಿಸಿದೆ.</p> .ಕರ್ನಾಟಕದ 4 ಸೇರಿ ರಾಜ್ಯಸಭೆಯ ಒಟ್ಟು 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್.<p>ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ. ಯುವಕರು ‘ಜಿರಳೆ’ಗಳಂತೆ ವೇಷ ಧರಿಸಿ ಯಮುನಾ ನದಿಯಲ್ಲಿ ಕಸವನ್ನು ಸ್ವಚ್ಛಗೊಳಿಸುವ ಮೂಲಕ ಮಾಲಿನ್ಯದ ಕಡೆಗೆ ಜನರ ಗಮನ ಸೆಳೆದಿದ್ದಾರೆ.</p> .Explainer: ಜಿರಳೆಗಳಂತೆ ವೇಷ ಧರಿಸಿ ಯಮುನಾ ನದಿ ಸ್ವಚ್ಛಗೊಳಿಸಿದ ಯಂಗ್ ಕಾಕ್ರೋಚಸ್.<p><strong>ಬೆಂಗಳೂರು</strong>: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವರದೇ ಹಳೆಯ ಭರವಸೆಯನ್ನು ನೆನಪಿಸಿ ಕಾಲೆಳೆದಿದೆ.</p> .ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಸಿದ್ದರಾಮಯ್ಯರ ಹಳೇ ಭರವಸೆ ನೆನಪಿಸಿದ ಬಿಜೆಪಿ!.<p><strong>ಬೆಂಗಳೂರು</strong>: ನಗರದಲ್ಲಿ ಮೇ 25ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.</p> .ಬೆಂಗಳೂರಿನಲ್ಲಿ ಮೇ 25ರವರೆಗೆ ಮಳೆ: ಯೆಲ್ಲೋ ಅಲರ್ಟ್ ನೀಡಿದ ಐಎಂಡಿ.<p><strong>ನವದೆಹಲಿ</strong>: ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಬೆನ್ನಲ್ಲೇ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶಕ್ಕೆ ಒಟ್ಟಿಗೆ ಪರೀಕ್ಷೆ ನಡೆಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಹಾಗೆಯೇ, ಪ್ರಶ್ನೆಪತ್ರಿಕೆಗಳನ್ನು ತಯಾರಿಸಲು ಹೊರಗಿನ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವ ಕುರಿತಾಗಿಯೂ ಪರಿಶೀಲನೆ ನಡೆಸುತ್ತಿದೆ.</p> .ನೀಟ್–ಯುಜಿ ಪ್ರಶ್ನೆಪತ್ರಿಕೆ ‘ಸೋರಿಕೆ’ ಒಪ್ಪದ ಎನ್ಟಿಎ ಅಧಿಕಾರಿಗಳು.<p><strong>ಅಹಮದಾಬಾದ್:</strong> ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) 2026ರ ಅಭಿಯಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರಾಶಾದಾಯಕವಾಗಿ ಕೊನೆಗೊಳಿಸಿದೆ. ಗುರುವಾರ ಮುಕ್ತಾಯಗೊಂಡ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡವು ಹೀನಾಯ ಸೋಲು ಅನುಭವಿಸಿ, ಟೂರ್ನಿಯಿಂದ ಹೊರನಡೆದಿದೆ. ಸೋಲಿನ ನಡುವೆ ತಂಡದ ನಾಯಕ ಸೇರಿ ಇತರೆ ಆಟಗಾರರು ಭಾರಿ ಮೊತ್ತದ ದಂಡಕ್ಕೂ ಒಳಗಾಗಿದ್ದಾರೆ.</p> .IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ.<p><strong>ವಾಷಿಂಗ್ಟನ್:</strong> ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-3’ ಮಿಷನ್ಗೆ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (ಎಐಎಎ) ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.</p> .<p><strong>ಬೆಂಗಳೂರು</strong>: ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಶುರುವಾಗಿದ್ದು, ಮತದಾರರ ಹಕ್ಕು ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವುದೂ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. </p> .<p><strong>ಇರಾನ್: </strong>ಬಂದೂಕುಧಾರಿಗಳು ಶಿಯಾ ಸಮುದಾಯದ ಪ್ರಮುಖ ಪ್ರಾರ್ಥನಾ ಮಂದಿರದಲ್ಲಿ ಗುಂಡಿನ ದಾಳಿ ನಡೆಸಿ ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ನಗರವಾದ ಶಿರಾಜ್ ನಗರದಲ್ಲಿ ಬುಧವಾರ ನಡೆದಿದೆ.</p> .ಇರಾನ್ನಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ: ಕನಿಷ್ಠ 15 ಮಂದಿ ಸಾವು.<p><strong>ನವದೆಹಲಿ</strong>: ಆಲ್ರೌಂಡರ್ ಅನುಕೂಲ್ ರಾಯ್ ಅವರನ್ನು ತ್ರಿಕೋನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಲಿರುವ ಭಾರತ ‘ಎ’ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಈ ತಂಡದಲ್ಲಿದ್ದ ಹರ್ಷ ದುಬೆ ಅವರು ಭಾರತ ಸೀನಿಯರ್ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದು ಅವರ ಸ್ಥಾನಕ್ಕೆ ಅನುಕೂಲ್ ಸೇರ್ಪಡೆಯಾಗಿದ್ದಾರೆ.</p>.ಭಾರತ ‘ಎ’ ತಂಡಕ್ಕೆ ಆಲ್ರೌಂಡರ್ ಅನುಕೂಲ್ ರಾಯ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>