<p>ಅಣುವಿದ್ಯುತ್ ಸ್ಥಾವರ ಸ್ಥಾಪನೆ ಮತ್ತು ಅದರ ವಿರೋಧಿ ಕೂಗು ಮತ್ತೆ ರಾಜ್ಯದಲ್ಲಿ ಪ್ರತಿಧ್ವನಿಸಲಾರಂಭಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬಾವಿಕೇರಿಯಲ್ಲಿ ಸ್ಥಾವರಗಳ ಸ್ಥಾಪನೆಗೆ ಸ್ಥಳ ಗುರುತಿಸುವಿಕೆ ಆರಂಭಗೊಂಡಿದೆ ಎಂದು ಆತಂಕಗೊಂಡಿರುವ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟಗಾರರು ಮತ್ತೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ. </p><p>ಉತ್ತರ ಕನ್ನಡ, ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲೂ ಇಂಥ ಪ್ರಯತ್ನಗಳು ನಡೆದಿರುವ ಮತ್ತು ಅದಕ್ಕೆ ಅಲ್ಲಿನ ಸ್ಥಳೀಯರ ವಿರೋಧ ವ್ಯಕ್ತವಾಗಿರುವುದೂ ಈ ಹಿಂದೆ ವರದಿಯಾಗಿದೆ. ಪರಮಾಣು ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಆಯಾ ಜಿಲ್ಲೆಯ ಸಧ್ಯದ ಚಿತ್ರಣ ಹೇಗಿದೆ ಎಂಬುದರ ಸ್ಥೂಲ ನೋಟ ಇಲ್ಲಿದೆ.</p><p>ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಮೀಪದ ಆವಿನಹಳ್ಳಿ ಹೋಬಳಿಯ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರವನ್ನು ಶರಾವತಿ ನದಿ ದಂಡೆಯಲ್ಲಿ ಸ್ಥಾಪನೆ ಮಾಡುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.</p><p>ನಾಡಿನ ಬೆಳಕಿಗೆ ಶರಾವತಿ ನದಿ ದಂಡೆ ಜನರು ಎರೆಡು ಬಾರಿ ಮುಳುಗಿದ್ದಾರೆ. ಮೂಲ ಸಂತ್ರಸ್ತರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ಈ ನಡುವೆ ಅಣುಸ್ಥಾವರ ಯೋಜನೆ ಮೂಲಕ ನದಿ ದಂಡೆಯ ಪರಿಸರ ಮತ್ತು ಜನರ ಬದುಕು ಎರಡನ್ನೂ ಅಪಾಯಕಾರಿ ಬಿಕ್ಕಟ್ಟಿಗೆ ಸಿಕ್ಕಿಸುವುದನ್ನು ಒಪ್ಪಲು ಸಾಧ್ಯ ಇಲ್ಲ. ಅಭಿವೃದ್ಧಿ ಯೋಜನೆಗಾಗಿ ಒಂದೇ ನದಿ ದಂಡೆ ಜನರು ಎಷ್ಟು ಬಾರಿ ಸಂತ್ರಸ್ತರಾಗಬೇಕು ಎಂಬ ಪ್ರಶ್ನೆಯನ್ನು ಸಾಗರ ತಾಲ್ಲೂಕಿನ ಹೋರಾಟಗಾರರು ಮುಂದಿಟ್ಟಿದ್ದಾರೆ.</p><p>ಇಂಧನ ಸ್ವಾವಲಂಬಿ ಸ್ಥಾಪನೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಜನವರಿಯಲ್ಲಿ ಸ್ಥಳ ಪರಿಶೀಲನೆ ನಡೆಸಿರುವುದಕ್ಕೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.</p><p>ಜೀವ ವಿರೋಧಿ ಹಾಗೂ ಪರಿಸರ ವಿರೋಧಿ ವಿನಾಶಕಾರಿಯಾದ ಅಣು ವಿದ್ಯುತ್ ಸ್ಥಾವರ ಘಟಕವನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲೇಬಾರದು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ನಾಗರಿಕರ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ರಾಯಚೂರಿನ ಜಿಲ್ಲಾಡಳಿತ ಭವನದ ಎದುರು 2026ರ ಜನವರಿ 29ರಂದು ಪ್ರತಿಭಟನೆ ನಡೆಸಿದ್ದರು.</p><p>‘ಜಿಲ್ಲೆಯಲ್ಲಿ ಎರಡು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ರಾಯಚೂರಿನ ಜನತೆಗೆ ನಲುಗಿ ಹೋಗಿದ್ದಾರೆ. ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಿಂದ ಕೇವಲ 20 ಕಿ.ಮೀ ಅಂತರದಲ್ಲಿರುವ ಶಕ್ತಿನಗರದಲ್ಲಿ ಘಟಕ ಸ್ಥಾಪನೆ ಮಾಡಿದರೆ ಹೆಚ್ಚಿನ ಅನಾಹುತಗಳು ಸಂಭವಿಸಲಿವೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅಣುಸ್ಥಾವರ ಸ್ಥಾಪನೆಗೆ ಆಸ್ಪದ ಕೊಡುವುದಿಲ್ಲ’ ಎಂದು ರಾಯಚೂರು ಜಿಲ್ಲಾ ನಾಗರಿಕರ ವೇದಿಕೆ ಮುಖಂಡ ಬಸವರಾಜ್ ಕಳಸ ಹೇಳಿದ್ದಾರೆ.</p><h2>ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಅಣುಸ್ಥಾವರ; ಎನು ಎತ್ತ?</h2><h2></h2><p>ಕೊಪ್ಪಳ: ರಾಜ್ಯದಲ್ಲಿ ಮತ್ತೊಂದು ಅಣುಸ್ಥಾವರ ಸ್ಥಾಪನೆ ಮಾಡಲಾಗುತ್ತಿದೆ ಎನ್ನುವ ಸುದ್ದಿಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರೆ, ಈ ಕುರಿತು ಎರಡು ವರ್ಷಗಳ ಹಿಂದೆಯೇ ಸ್ಥಳದ ಹುಡುಕಾಟ ನಡೆದಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.</p><p>ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಿಲ್ಲೆಯಲ್ಲಿ ಸಮತಟ್ಟಾದ ಒಂದೇ ಕಡೆ ಇರುವ 1,200 ಎಕರೆ ಭೂಮಿ ಹುಡುಕುವಂತೆ ಹಿಂದಿನ ಜಿಲ್ಲಾಧಿಕಾರಿ ನಲಿನ್ ಅತುಲ್ ತಹಶೀಲ್ದಾರ್ಗಳಿಗೆ ಸೂಚಿಸಿದ್ದರು. ಆಗ ಸ್ಥಾವರ ಸ್ಥಾಪನೆಗೆ ಜನರಿಂದ ವಿರೋಧ ವ್ಯಕ್ತವಾಗಿತ್ತು.</p><p>ಕೊಪ್ಪಳ ತಾಲ್ಲೂಕಿನ ಅರಸನಕೇರಿ ಬಳಿ ಮೊದಲು ಜಾಗ ಪರಿಶೀಲನೆ ಮಾಡಲಾಗಿತ್ತು. ವಾಸ್ತವದಲ್ಲಿ ಅಲ್ಲಿ ಒಂದೇ ಕಡೆ 600 ಎಕರೆಗಿಂತಲೂ ಹೆಚ್ಚಿನ ಭೂಮಿ ಲಭ್ಯವಾಗಿಲ್ಲ ಎನ್ನುವುದು ಖಾತ್ರಿ ಆಗಿದ್ದರಿಂದ ಜನ ಹೋರಾಟ ಕೈ ಬಿಟ್ಟಿದ್ದರು.</p><p>ಬಳಿಕ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್–ಎಡೆಹಳ್ಳಿ ಗ್ರಾಮಗಳ ಸುತ್ತಲು ಭೂಮಿ ಹುಡುಕಲಾಗಿತ್ತು. ಈಗ ಅಣುಸ್ಥಾವರಕ್ಕೆ ಭೂಮಿ ಹುಡುಕಾಟದ ಚರ್ಚೆ ಮುನ್ನಲೆಗೆ ಬಂದಿದೆ.</p><p>ಪ್ರಸ್ತುತ ಬೆಳವಣಿಗೆ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು, 'ಅಣುಸ್ಥಾವರ ಸಂಬಂಧ ಜಿಲ್ಲೆಯಿಂದ ಯಾವುದೇ ಪ್ರಸ್ತಾವ ಹೋಗಿಲ್ಲ, ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.</p>. <h2>ನೌಕಾನೆಲೆ ಸಮೀಪದಲ್ಲೇ ಅಣು ಸ್ಥಾವರಕ್ಕೆ ಜಾಗ!</h2><h2></h2><p>ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಈಗಾಗಲೆ ನಾಲ್ಕು ಅಣು ವಿದ್ಯುತ್ ಉತ್ಪಾದನಾ ಘಟಕಗಳಿದ್ದರೂ ಇದೇ ಜಿಲ್ಲೆಯಲ್ಲಿ ಮತ್ತೊಂದು ಸ್ಥಾವರ ಸ್ಥಾಪನೆಗೆ ಜಾಗ ಗುರುತಿಸಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿಎಲ್) ಮುಂದಾಗಿರುವುದು ಬೆಳಕಿಗೆ ಬಂದಿದೆ.</p><p>ಅಂಕೋಲಾ ತಾಲ್ಲೂಕಿನ ಭಾವಿಕೇರಿ ಮತ್ತು ಬೇಲೆಕೇರಿ ಗ್ರಾಮಗಳ ನಡುವಿನ ಪ್ರದೇಶದಲ್ಲಿ ಅಣು ಸ್ಥಾವರ ಸ್ಥಾಪನೆಗೆ ಸಮೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಹೊಸದೊಂದು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಜಾಗ ಗುರುತಿಸಲು ಕಳೆದ ವರ್ಷವೇ ಸಮೀಕ್ಷೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು.</p><p>ಈಚೆಗಷ್ಟೆ ಕೈಗಾದಲ್ಲಿನ ಅಣು ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣದ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಅಣು ವಿದ್ಯುತ್ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಭುವನಚಂದ್ರ ಪಾಠಕ್, ‘ಕರ್ನಾಟಕದಲ್ಲಿ ಇನ್ನೊಂದು ಅಣು ಸ್ಥಾವರ ಸ್ಥಾಪನೆಗೆ ಜಾಗ ಗುರುತಿಸಲಾಗುತ್ತಿದೆ’ ಎಂದಿದ್ದರು.</p><p>‘ಎನ್ಟಿಪಿಸಿಎಲ್ ಸಮೀಕ್ಷೆ ನಡೆಸಿದ್ದ ಭಾವಿಕೇರಿ ಗ್ರಾಮದ ಸಮೀಪದ ಜಾಗ ಅಣು ಸ್ಥಾವರಕ್ಕೆ ಯೋಗ್ಯವಲ್ಲ ಎಂದು ಸರ್ಕಾರಕ್ಕೆ ಈಗಾಗಲೆ ವರದಿ ಸಲ್ಲಿಸಿದ್ದೇವೆ. ಉದ್ದೇಶಿತ ಸ್ಥಳಕ್ಕೆ ಸಮೀಪದಲ್ಲೇ ನೌಕಾನೆಲೆ ಇದೆ. ಅಲ್ಲದೇ ಇದು ಸಂಪೂರ್ಣ ಜನವಸತಿ ಪ್ರದೇಶ ಆಗಿರುವುದರಿಂದ ಅಣು ಸ್ಥಾವರಕ್ಕೆ ಯೋಗ್ಯವಲ್ಲ ಎಂದು ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ.</p><p>‘ಕೆಲ ದಿನಗಳ ಹಿಂದೆ ಭಾವಿಕೇರಿ ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಾಗ ಒದಗಿಸುವ ಕುರಿತು ಜಿಲ್ಲಾಡಳಿತ ಹಾಗೂ ಇಂಧನ ಇಲಾಖೆ ನಡೆಸುತ್ತಿರುವ ಸಿದ್ಧತೆಗಳ ಬಗ್ಗೆ ತಕ್ಷಣವೇ ಅಧಿಕೃತ ಸ್ಪಷ್ಟನೆ ನೀಡಬೇಕು. ಕಂದಾಯ ಇಲಾಖೆಯ ರಾಜ್ಯ ಅಧೀನ ಕಾರ್ಯದರ್ಶಿ ಫೆ.3ರಂದು ಸಂಬಂಧಪಟ್ಟ ಜಿಲ್ಲಾಧಿಕಾರಿ ಜತೆ ಈ ಬಗ್ಗೆ ಮಹತ್ವದ ಸಭೆ ನಡೆಸಿದ್ದರೂ, ಈ ಮಾಹಿತಿಯನ್ನು ಜನತೆಯಿಂದ ಮುಚ್ಚಿಡಲಾಗಿದೆ’ ಎಂದು ವೃಕ್ಷಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಹೆಗಡೆ ಅಶೀಸರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>‘ಉತ್ತರ ಕನ್ನಡದ ಬಾವಿಕೇರಿ, ಶಿವಮೊಗ್ಗದ ಬೇಸೂರು ಸೇರಿದಂತೆ ರಾಜ್ಯದ ವಿವಿಧೆಡೆ ತಲಾ 2,000 ಎಕರೆ ಭೂಮಿಯನ್ನು ಪರಮಾಣು ಸ್ಥಾವರಕ್ಕಾಗಿ ಈಗಾಗಲೇ ಗುರುತಿಸಲಾಗಿದೆ. ಕೈಗಾ ಅಣು ಸ್ಥಾವರದ ವಿಕಿರಣದಿಂದಾಗಿ 35 ವರ್ಷಗಳಿಂದ ಜಿಲ್ಲೆಯ ಜನರು ಆರೋಗ್ಯ ಮತ್ತು ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳಿಂದ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮತ್ತೊಂದು ಅಣು ಸ್ಥಾವರದ ಪ್ರಸ್ತಾವಜನರಲ್ಲಿ ಆತಂಕದ ಕಿಚ್ಚು ಹಚ್ಚಿದೆ’ ಎಂದಿದ್ದಾರೆ.</p><h2>ಅಣು ವಿದ್ಯುತ್ ಸ್ಥಾವರಕ್ಕೆ ವಿಜಯಪುರ ಜಿಲ್ಲೆಯಲ್ಲೂ 1200 ಎಕರೆ ಜಾಗ ಗುರುತು</h2><p>ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಣೂರು ಗ್ರಾಮದ ಬಳಿ ಅಣು ವಿದ್ಯುತ್ ಸ್ಥಾವರಕ್ಕಾಗಿ ಸುಮಾರು 1200 ಎಕರೆ ಜಾಗವನ್ನು ಪ್ರಾಥಮಿಕವಾಗಿ ಗುರುತಿಸಲಾಗಿದೆ.</p><p>ಮಣೂರಿನಲ್ಲಿ ತಲಾ ಒಂದು ಸಾವಿರ ಮೆಗಾವ್ಯಾಟ್ನ ಎರಡು ಘಟಕಗಳ ಸ್ಥಾಪನೆ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 2025ರ ನವೆಂಬರ್ನಲ್ಲೇ ಭೂಮಿ ಗುರುತಿಸಲಾಗಿದೆ.</p><p>ಎನ್ಟಿಪಿಸಿ ಕೋರಿಕೆಯಂತೆ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಿಂದ ತಹಶೀಲ್ದಾರ್ ಕಚೇರಿಗೆ ಪತ್ರ ಬರೆಯಲಾಗಿತ್ತು. ಇದರ ಆಧಾರದ ಮೇಲೆ ಮಣೂರು ಗ್ರಾಮದ ಸಮೀಪ ಜಾಗವನ್ನು ಗುರುತಿಸಲಾಗಿದೆ.</p><p>ಇದು ಸಂಪೂರ್ಣ ಖಾಸಗಿ ಜಮೀನಾಗಿದ್ದು, ಕೃಷಿ ಹಾಗೂ ನೀರಾವರಿ ಭೂಮಿಯಾಗಿದೆ ಎಂದು ಬಸವನ ಬಾಗೇವಾಡಿ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ. </p> <p><strong>ವಿರೋಧ:</strong></p><p>ಬಸವನಬಾಗೇವಾಡಿ ತಾಲ್ಲೂಕಿನ ಮಣೂರು ಗ್ರಾಮದ ಬಳಿ ಅಣು ವಿದ್ಯುತ್ ಸ್ಥಾವರದ ಪ್ರಾಥಮಿಕ ಅಧ್ಯಯನಕ್ಕಾಗಿ ಗುರುತಿಸಲಾದ ಸ್ಥಳದ ಬಗ್ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.</p><p>ಉದ್ದೇಶಿತ ಅಣು ಸ್ಥಾವರ ಸ್ಥಾಪನೆ ಜಾಗದ ವ್ಯಾಪ್ತಿಯಲ್ಲಿ ಒಂದು ಬೃಹತ್ ಕೆರೆ ಇದೆ. ಜತೆಗೆ ಪಕ್ಕದಲ್ಲೇ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಕೂಡ ಹಾದು ಹೋಗಿದ್ದು, ಅರಣ್ಯ ಪ್ರದೇಶವೂ ಇದೆ. ಇದರ ಸಮೀಪದಲ್ಲೇ ಐತಿಹಾಸಿಕ ಬಸವ ಜನ್ಮ ಸ್ಥಳ ಬಸವನ ಬಾಗೇವಾಡಿ ಇದೆ. ಸುಮಾರು 25 ಕಿ.ಮೀ. ವ್ಯಾಪ್ತಿಯಲ್ಲಿ ಆಲಮಟ್ಟಿ ಜಲಾಶಯ ಮತ್ತು ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಇದ್ದು, ಅಣು ವಿದ್ಯುತ್ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ.</p><p><strong>ಮಾಹಿತಿ: ರಾಯಚೂರು, ಕೊಪ್ಪಳ, ವಿಜಯಪುರ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ವರದಿಗಾರರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಣುವಿದ್ಯುತ್ ಸ್ಥಾವರ ಸ್ಥಾಪನೆ ಮತ್ತು ಅದರ ವಿರೋಧಿ ಕೂಗು ಮತ್ತೆ ರಾಜ್ಯದಲ್ಲಿ ಪ್ರತಿಧ್ವನಿಸಲಾರಂಭಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬಾವಿಕೇರಿಯಲ್ಲಿ ಸ್ಥಾವರಗಳ ಸ್ಥಾಪನೆಗೆ ಸ್ಥಳ ಗುರುತಿಸುವಿಕೆ ಆರಂಭಗೊಂಡಿದೆ ಎಂದು ಆತಂಕಗೊಂಡಿರುವ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟಗಾರರು ಮತ್ತೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ. </p><p>ಉತ್ತರ ಕನ್ನಡ, ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲೂ ಇಂಥ ಪ್ರಯತ್ನಗಳು ನಡೆದಿರುವ ಮತ್ತು ಅದಕ್ಕೆ ಅಲ್ಲಿನ ಸ್ಥಳೀಯರ ವಿರೋಧ ವ್ಯಕ್ತವಾಗಿರುವುದೂ ಈ ಹಿಂದೆ ವರದಿಯಾಗಿದೆ. ಪರಮಾಣು ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಆಯಾ ಜಿಲ್ಲೆಯ ಸಧ್ಯದ ಚಿತ್ರಣ ಹೇಗಿದೆ ಎಂಬುದರ ಸ್ಥೂಲ ನೋಟ ಇಲ್ಲಿದೆ.</p><p>ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಮೀಪದ ಆವಿನಹಳ್ಳಿ ಹೋಬಳಿಯ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರವನ್ನು ಶರಾವತಿ ನದಿ ದಂಡೆಯಲ್ಲಿ ಸ್ಥಾಪನೆ ಮಾಡುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.</p><p>ನಾಡಿನ ಬೆಳಕಿಗೆ ಶರಾವತಿ ನದಿ ದಂಡೆ ಜನರು ಎರೆಡು ಬಾರಿ ಮುಳುಗಿದ್ದಾರೆ. ಮೂಲ ಸಂತ್ರಸ್ತರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ಈ ನಡುವೆ ಅಣುಸ್ಥಾವರ ಯೋಜನೆ ಮೂಲಕ ನದಿ ದಂಡೆಯ ಪರಿಸರ ಮತ್ತು ಜನರ ಬದುಕು ಎರಡನ್ನೂ ಅಪಾಯಕಾರಿ ಬಿಕ್ಕಟ್ಟಿಗೆ ಸಿಕ್ಕಿಸುವುದನ್ನು ಒಪ್ಪಲು ಸಾಧ್ಯ ಇಲ್ಲ. ಅಭಿವೃದ್ಧಿ ಯೋಜನೆಗಾಗಿ ಒಂದೇ ನದಿ ದಂಡೆ ಜನರು ಎಷ್ಟು ಬಾರಿ ಸಂತ್ರಸ್ತರಾಗಬೇಕು ಎಂಬ ಪ್ರಶ್ನೆಯನ್ನು ಸಾಗರ ತಾಲ್ಲೂಕಿನ ಹೋರಾಟಗಾರರು ಮುಂದಿಟ್ಟಿದ್ದಾರೆ.</p><p>ಇಂಧನ ಸ್ವಾವಲಂಬಿ ಸ್ಥಾಪನೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಜನವರಿಯಲ್ಲಿ ಸ್ಥಳ ಪರಿಶೀಲನೆ ನಡೆಸಿರುವುದಕ್ಕೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.</p><p>ಜೀವ ವಿರೋಧಿ ಹಾಗೂ ಪರಿಸರ ವಿರೋಧಿ ವಿನಾಶಕಾರಿಯಾದ ಅಣು ವಿದ್ಯುತ್ ಸ್ಥಾವರ ಘಟಕವನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲೇಬಾರದು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ನಾಗರಿಕರ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ರಾಯಚೂರಿನ ಜಿಲ್ಲಾಡಳಿತ ಭವನದ ಎದುರು 2026ರ ಜನವರಿ 29ರಂದು ಪ್ರತಿಭಟನೆ ನಡೆಸಿದ್ದರು.</p><p>‘ಜಿಲ್ಲೆಯಲ್ಲಿ ಎರಡು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ರಾಯಚೂರಿನ ಜನತೆಗೆ ನಲುಗಿ ಹೋಗಿದ್ದಾರೆ. ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಿಂದ ಕೇವಲ 20 ಕಿ.ಮೀ ಅಂತರದಲ್ಲಿರುವ ಶಕ್ತಿನಗರದಲ್ಲಿ ಘಟಕ ಸ್ಥಾಪನೆ ಮಾಡಿದರೆ ಹೆಚ್ಚಿನ ಅನಾಹುತಗಳು ಸಂಭವಿಸಲಿವೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅಣುಸ್ಥಾವರ ಸ್ಥಾಪನೆಗೆ ಆಸ್ಪದ ಕೊಡುವುದಿಲ್ಲ’ ಎಂದು ರಾಯಚೂರು ಜಿಲ್ಲಾ ನಾಗರಿಕರ ವೇದಿಕೆ ಮುಖಂಡ ಬಸವರಾಜ್ ಕಳಸ ಹೇಳಿದ್ದಾರೆ.</p><h2>ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಅಣುಸ್ಥಾವರ; ಎನು ಎತ್ತ?</h2><h2></h2><p>ಕೊಪ್ಪಳ: ರಾಜ್ಯದಲ್ಲಿ ಮತ್ತೊಂದು ಅಣುಸ್ಥಾವರ ಸ್ಥಾಪನೆ ಮಾಡಲಾಗುತ್ತಿದೆ ಎನ್ನುವ ಸುದ್ದಿಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರೆ, ಈ ಕುರಿತು ಎರಡು ವರ್ಷಗಳ ಹಿಂದೆಯೇ ಸ್ಥಳದ ಹುಡುಕಾಟ ನಡೆದಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.</p><p>ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಿಲ್ಲೆಯಲ್ಲಿ ಸಮತಟ್ಟಾದ ಒಂದೇ ಕಡೆ ಇರುವ 1,200 ಎಕರೆ ಭೂಮಿ ಹುಡುಕುವಂತೆ ಹಿಂದಿನ ಜಿಲ್ಲಾಧಿಕಾರಿ ನಲಿನ್ ಅತುಲ್ ತಹಶೀಲ್ದಾರ್ಗಳಿಗೆ ಸೂಚಿಸಿದ್ದರು. ಆಗ ಸ್ಥಾವರ ಸ್ಥಾಪನೆಗೆ ಜನರಿಂದ ವಿರೋಧ ವ್ಯಕ್ತವಾಗಿತ್ತು.</p><p>ಕೊಪ್ಪಳ ತಾಲ್ಲೂಕಿನ ಅರಸನಕೇರಿ ಬಳಿ ಮೊದಲು ಜಾಗ ಪರಿಶೀಲನೆ ಮಾಡಲಾಗಿತ್ತು. ವಾಸ್ತವದಲ್ಲಿ ಅಲ್ಲಿ ಒಂದೇ ಕಡೆ 600 ಎಕರೆಗಿಂತಲೂ ಹೆಚ್ಚಿನ ಭೂಮಿ ಲಭ್ಯವಾಗಿಲ್ಲ ಎನ್ನುವುದು ಖಾತ್ರಿ ಆಗಿದ್ದರಿಂದ ಜನ ಹೋರಾಟ ಕೈ ಬಿಟ್ಟಿದ್ದರು.</p><p>ಬಳಿಕ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್–ಎಡೆಹಳ್ಳಿ ಗ್ರಾಮಗಳ ಸುತ್ತಲು ಭೂಮಿ ಹುಡುಕಲಾಗಿತ್ತು. ಈಗ ಅಣುಸ್ಥಾವರಕ್ಕೆ ಭೂಮಿ ಹುಡುಕಾಟದ ಚರ್ಚೆ ಮುನ್ನಲೆಗೆ ಬಂದಿದೆ.</p><p>ಪ್ರಸ್ತುತ ಬೆಳವಣಿಗೆ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು, 'ಅಣುಸ್ಥಾವರ ಸಂಬಂಧ ಜಿಲ್ಲೆಯಿಂದ ಯಾವುದೇ ಪ್ರಸ್ತಾವ ಹೋಗಿಲ್ಲ, ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.</p>. <h2>ನೌಕಾನೆಲೆ ಸಮೀಪದಲ್ಲೇ ಅಣು ಸ್ಥಾವರಕ್ಕೆ ಜಾಗ!</h2><h2></h2><p>ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಈಗಾಗಲೆ ನಾಲ್ಕು ಅಣು ವಿದ್ಯುತ್ ಉತ್ಪಾದನಾ ಘಟಕಗಳಿದ್ದರೂ ಇದೇ ಜಿಲ್ಲೆಯಲ್ಲಿ ಮತ್ತೊಂದು ಸ್ಥಾವರ ಸ್ಥಾಪನೆಗೆ ಜಾಗ ಗುರುತಿಸಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿಎಲ್) ಮುಂದಾಗಿರುವುದು ಬೆಳಕಿಗೆ ಬಂದಿದೆ.</p><p>ಅಂಕೋಲಾ ತಾಲ್ಲೂಕಿನ ಭಾವಿಕೇರಿ ಮತ್ತು ಬೇಲೆಕೇರಿ ಗ್ರಾಮಗಳ ನಡುವಿನ ಪ್ರದೇಶದಲ್ಲಿ ಅಣು ಸ್ಥಾವರ ಸ್ಥಾಪನೆಗೆ ಸಮೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಹೊಸದೊಂದು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಜಾಗ ಗುರುತಿಸಲು ಕಳೆದ ವರ್ಷವೇ ಸಮೀಕ್ಷೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು.</p><p>ಈಚೆಗಷ್ಟೆ ಕೈಗಾದಲ್ಲಿನ ಅಣು ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣದ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಅಣು ವಿದ್ಯುತ್ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಭುವನಚಂದ್ರ ಪಾಠಕ್, ‘ಕರ್ನಾಟಕದಲ್ಲಿ ಇನ್ನೊಂದು ಅಣು ಸ್ಥಾವರ ಸ್ಥಾಪನೆಗೆ ಜಾಗ ಗುರುತಿಸಲಾಗುತ್ತಿದೆ’ ಎಂದಿದ್ದರು.</p><p>‘ಎನ್ಟಿಪಿಸಿಎಲ್ ಸಮೀಕ್ಷೆ ನಡೆಸಿದ್ದ ಭಾವಿಕೇರಿ ಗ್ರಾಮದ ಸಮೀಪದ ಜಾಗ ಅಣು ಸ್ಥಾವರಕ್ಕೆ ಯೋಗ್ಯವಲ್ಲ ಎಂದು ಸರ್ಕಾರಕ್ಕೆ ಈಗಾಗಲೆ ವರದಿ ಸಲ್ಲಿಸಿದ್ದೇವೆ. ಉದ್ದೇಶಿತ ಸ್ಥಳಕ್ಕೆ ಸಮೀಪದಲ್ಲೇ ನೌಕಾನೆಲೆ ಇದೆ. ಅಲ್ಲದೇ ಇದು ಸಂಪೂರ್ಣ ಜನವಸತಿ ಪ್ರದೇಶ ಆಗಿರುವುದರಿಂದ ಅಣು ಸ್ಥಾವರಕ್ಕೆ ಯೋಗ್ಯವಲ್ಲ ಎಂದು ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ.</p><p>‘ಕೆಲ ದಿನಗಳ ಹಿಂದೆ ಭಾವಿಕೇರಿ ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಾಗ ಒದಗಿಸುವ ಕುರಿತು ಜಿಲ್ಲಾಡಳಿತ ಹಾಗೂ ಇಂಧನ ಇಲಾಖೆ ನಡೆಸುತ್ತಿರುವ ಸಿದ್ಧತೆಗಳ ಬಗ್ಗೆ ತಕ್ಷಣವೇ ಅಧಿಕೃತ ಸ್ಪಷ್ಟನೆ ನೀಡಬೇಕು. ಕಂದಾಯ ಇಲಾಖೆಯ ರಾಜ್ಯ ಅಧೀನ ಕಾರ್ಯದರ್ಶಿ ಫೆ.3ರಂದು ಸಂಬಂಧಪಟ್ಟ ಜಿಲ್ಲಾಧಿಕಾರಿ ಜತೆ ಈ ಬಗ್ಗೆ ಮಹತ್ವದ ಸಭೆ ನಡೆಸಿದ್ದರೂ, ಈ ಮಾಹಿತಿಯನ್ನು ಜನತೆಯಿಂದ ಮುಚ್ಚಿಡಲಾಗಿದೆ’ ಎಂದು ವೃಕ್ಷಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಹೆಗಡೆ ಅಶೀಸರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>‘ಉತ್ತರ ಕನ್ನಡದ ಬಾವಿಕೇರಿ, ಶಿವಮೊಗ್ಗದ ಬೇಸೂರು ಸೇರಿದಂತೆ ರಾಜ್ಯದ ವಿವಿಧೆಡೆ ತಲಾ 2,000 ಎಕರೆ ಭೂಮಿಯನ್ನು ಪರಮಾಣು ಸ್ಥಾವರಕ್ಕಾಗಿ ಈಗಾಗಲೇ ಗುರುತಿಸಲಾಗಿದೆ. ಕೈಗಾ ಅಣು ಸ್ಥಾವರದ ವಿಕಿರಣದಿಂದಾಗಿ 35 ವರ್ಷಗಳಿಂದ ಜಿಲ್ಲೆಯ ಜನರು ಆರೋಗ್ಯ ಮತ್ತು ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳಿಂದ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮತ್ತೊಂದು ಅಣು ಸ್ಥಾವರದ ಪ್ರಸ್ತಾವಜನರಲ್ಲಿ ಆತಂಕದ ಕಿಚ್ಚು ಹಚ್ಚಿದೆ’ ಎಂದಿದ್ದಾರೆ.</p><h2>ಅಣು ವಿದ್ಯುತ್ ಸ್ಥಾವರಕ್ಕೆ ವಿಜಯಪುರ ಜಿಲ್ಲೆಯಲ್ಲೂ 1200 ಎಕರೆ ಜಾಗ ಗುರುತು</h2><p>ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಣೂರು ಗ್ರಾಮದ ಬಳಿ ಅಣು ವಿದ್ಯುತ್ ಸ್ಥಾವರಕ್ಕಾಗಿ ಸುಮಾರು 1200 ಎಕರೆ ಜಾಗವನ್ನು ಪ್ರಾಥಮಿಕವಾಗಿ ಗುರುತಿಸಲಾಗಿದೆ.</p><p>ಮಣೂರಿನಲ್ಲಿ ತಲಾ ಒಂದು ಸಾವಿರ ಮೆಗಾವ್ಯಾಟ್ನ ಎರಡು ಘಟಕಗಳ ಸ್ಥಾಪನೆ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 2025ರ ನವೆಂಬರ್ನಲ್ಲೇ ಭೂಮಿ ಗುರುತಿಸಲಾಗಿದೆ.</p><p>ಎನ್ಟಿಪಿಸಿ ಕೋರಿಕೆಯಂತೆ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಿಂದ ತಹಶೀಲ್ದಾರ್ ಕಚೇರಿಗೆ ಪತ್ರ ಬರೆಯಲಾಗಿತ್ತು. ಇದರ ಆಧಾರದ ಮೇಲೆ ಮಣೂರು ಗ್ರಾಮದ ಸಮೀಪ ಜಾಗವನ್ನು ಗುರುತಿಸಲಾಗಿದೆ.</p><p>ಇದು ಸಂಪೂರ್ಣ ಖಾಸಗಿ ಜಮೀನಾಗಿದ್ದು, ಕೃಷಿ ಹಾಗೂ ನೀರಾವರಿ ಭೂಮಿಯಾಗಿದೆ ಎಂದು ಬಸವನ ಬಾಗೇವಾಡಿ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ. </p> <p><strong>ವಿರೋಧ:</strong></p><p>ಬಸವನಬಾಗೇವಾಡಿ ತಾಲ್ಲೂಕಿನ ಮಣೂರು ಗ್ರಾಮದ ಬಳಿ ಅಣು ವಿದ್ಯುತ್ ಸ್ಥಾವರದ ಪ್ರಾಥಮಿಕ ಅಧ್ಯಯನಕ್ಕಾಗಿ ಗುರುತಿಸಲಾದ ಸ್ಥಳದ ಬಗ್ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.</p><p>ಉದ್ದೇಶಿತ ಅಣು ಸ್ಥಾವರ ಸ್ಥಾಪನೆ ಜಾಗದ ವ್ಯಾಪ್ತಿಯಲ್ಲಿ ಒಂದು ಬೃಹತ್ ಕೆರೆ ಇದೆ. ಜತೆಗೆ ಪಕ್ಕದಲ್ಲೇ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಕೂಡ ಹಾದು ಹೋಗಿದ್ದು, ಅರಣ್ಯ ಪ್ರದೇಶವೂ ಇದೆ. ಇದರ ಸಮೀಪದಲ್ಲೇ ಐತಿಹಾಸಿಕ ಬಸವ ಜನ್ಮ ಸ್ಥಳ ಬಸವನ ಬಾಗೇವಾಡಿ ಇದೆ. ಸುಮಾರು 25 ಕಿ.ಮೀ. ವ್ಯಾಪ್ತಿಯಲ್ಲಿ ಆಲಮಟ್ಟಿ ಜಲಾಶಯ ಮತ್ತು ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಇದ್ದು, ಅಣು ವಿದ್ಯುತ್ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ.</p><p><strong>ಮಾಹಿತಿ: ರಾಯಚೂರು, ಕೊಪ್ಪಳ, ವಿಜಯಪುರ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ವರದಿಗಾರರು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>