ಪ್ರಕರಣವೇನು?
2023ರ ನವೆಂಬರ್ 15ರಂದು ನಡೆದ ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆಯು ಡಿಎಸ್ಪಿ ಗಳಾಗಿದ್ದ 30 ಮಂದಿ ಪ್ರತಿವಾದಿಗಳಿಗೆ ಐಪಿಎಸ್ ಯೇತರ ಎಸ್ಪಿ ವೃಂದಕ್ಕೆ (ಸಿವಿಲ್) ನೇರವಾಗಿ ಬಡ್ತಿ ನೀಡಲು ತೀರ್ಮಾನಿಸಿತ್ತು. ಆದರೆ, ಸರ್ಕಾರ ನೇರ ಬಡ್ತಿ ನೀಡುವ ಬದಲಿಗೆ ಕೆಸಿಎಸ್ಆರ್ ನಿಯಮ 32ರ ಅನ್ವಯ ಎಸ್ಪಿಗಳಾಗಿ ಉಸ್ತುವಾರಿ ಹೊಣೆ ನೀಡಿತ್ತು. ಇದನ್ನು ಪ್ರಶ್ನಿಸಿ, ಪ್ರಕರಣದ ಪ್ರತಿವಾದಿಗಳು ಕೆಎಸ್ಎಟಿ ಮೊರೆ ಹೋಗಿದ್ದರು. ನ್ಯಾಯಮಂಡಳಿ ಅಷ್ಟೂ ಮಂದಿಗೂ ಎಸ್ಪಿ ವೃಂದಕ್ಕೆ ಬಡ್ತಿ ನೀಡುವಂತೆ ಆದೇಶಿಸಿತ್ತು.