ಕಡಲತೀರಕ್ಕೆ ಬಂದ ಬೋಯ್ಕಾ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯಾ ಗಿದೆ. ಗಾಳಿಯ ವೇಗವೂ ಹೆಚ್ಚಿರುವ ಪರಿಣಾಮ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಕಾರವಾರದ ದೇವಗಡ ಲೈಟ್ ಹೌಸ್ ಬಳಿ ಹಡಗುಗಳಿಗೆ ಪಥ ತೋರಿಸಲು ಬಂದರು ಇಲಾಖೆ ಅಳವಡಿಸಿದ್ದ ಬೋಯ್ (ತೇಲುವ ಯಂತ್ರ) ಅಲೆಗಳ ಅಬ್ಬರಕ್ಕೆ ಟ್ಯಾಗೋರ್ ಕಡಲತೀರಕ್ಕೆ ಬಂದು ನಿಂತಿದೆ. ಉಳಿದಂತೆ, ಹೊನ್ನಾವರದ ಮುಗ್ವಾ ಬಳಿ ರಾಷ್ಟ್ರೀಯ ಹೆದ್ದಾರಿ–69ರ ಪಕ್ಕದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಟ್ಕಳ, ಕುಮಟಾದಲ್ಲೂ ರಭಸದ ಮಳೆಯಾಗಿದೆ.