<p>ದೇಶ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ..</p>.<p><strong>ಬೆಂಗಳೂರು:</strong> ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಿದ್ದು, ಮೇ 31 ಅಥವಾ ಜೂನ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.</p>.ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ನಾಳೆ ಅಥವಾ ನಾಡಿದ್ದು ? .<p><strong>ವಿಜಯಪುರ</strong>: ಚಡಚಣ ತಾಲ್ಲೂಕಿನ ಭೀಮಾ ನದಿ ತೀರದ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಶುಕ್ರವಾರ ಗುಂಪೊಂದು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದೆ. ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ರೇವಣ ಸಿದ್ದಪ್ಪ ನಿರಾಳೆ(65), ಶಿವಪುತ್ರ ರೇವಣ ಸಿದ್ದಪ್ಪ ನಿರಾಳೆ (58), ಚಂದ್ರಕಾಂತ ಅಲಿಯಾಸ್ ಚಂದು ರೇವಣಸಿದ್ದಪ್ಪ ನಿರಾಳೆ (55), ರಾಹುಲ್ ಶಿವಪುತ್ರ ನಿರಾಳೆ(25), ಸಮರ್ಥ ಶಿವಪುತ್ರ ನಿರಾಳೆ (23) ಮತ್ತು ಚಡಚಣದ ಶಬ್ಬೀರ್ ಬಾಬುಸಾಬ ಅತ್ತಾರ(45) ಕೊಲೆಯಾದವರು.</p>.ಹುಬ್ಬಳ್ಳಿ: ಖಾರದ ಪುಡಿ ಎರಚಿ ವ್ಯಕ್ತಿ ಕೊಲೆ.<p>ಜನ ಚಳವಳಿಗಳ ಕಾರ್ಯಕರ್ತರ ಭಾವನೆಗಳಿಗೆ ಹಾಗೂ ದುರ್ಬಲ ಸಮುದಾಯಗಳ ಸಂಕಟಗಳಿಗೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯ ‘ಇವ ನಮ್ಮವ’ ಎನ್ನುವ ವರ್ಚಸ್ಸು ಗಳಿಸಿಕೊಂಡಿರುವ ರಾಜಕಾರಣಿ. ಕರ್ನಾಟಕದ ಯಾವ ಮುಖ್ಯಮಂತ್ರಿಗೂ ದೊರೆಯದಿದ್ದ ಪ್ರಜ್ಞಾವಂತರ ವಲಯದ ಮೆಚ್ಚುಗೆ–ಬೆಂಬಲ ಅವರಿಗೆ ದೊರಕಿದೆ.</p>.ವಿಶ್ಲೇಷಣೆ | ಸಿದ್ದರಾಮಯ್ಯ: ‘ಇವ ನಮ್ಮವ...’.<p>ಭಾರತದ ಚುನಾವಣಾ ಆಯೋಗ (ಇಸಿಐ) ವಿನ್ಯಾಸಗೊಳಿಸಿ ಹಲವೆಡೆ ಜಾರಿಗೊಳಿಸಿರುವ ವಿವಾದಾತ್ಮಕ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿರಾಶಾದಾಯಕವಾದುದು. ತಾತ್ತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ಪ್ರಜಾಸತ್ತಾತ್ಮಕವಲ್ಲದ ಮತ್ತು ‘ಹೊರಗಿಡುವ’ ಧೋರಣೆಯ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ತೀರ್ಪು ಮಾನ್ಯಗೊಳಿಸಿದೆ; ಆಯೋಗದ ಬಹುತೇಕ ನಿಲುವು ಮತ್ತು ವಾದಗಳನ್ನು ಸಮರ್ಥಿಸಿದೆ</p>.ಸಂಪಾದಕೀಯ | ಎಸ್ಐಆರ್ಗೆ ಸುಪ್ರೀಂ ಸಮರ್ಥನೆ: ದೋಷಪೂರಿತ ಪ್ರಕ್ರಿಯೆಗೆ ಸಮ್ಮತಿ.<p><strong>ಮುಲ್ಲನಪುರ:</strong> ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಅನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.</p>.ಗಿಲ್ ಶತಕದ ನೆರವಿನಿಂದ ಟೈಟನ್ಸ್ ಫೈನಲ್ಗೆ: ಸೋಲಿನಲ್ಲೂ ಹಲವು ದಾಖಲೆ ಬರೆದ ವೈಭವ್.<p><strong>ಬೆಂಗಳೂರು:</strong> ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಮೊದಲ 100 ಶ್ರೇಯಾಂಕಗಳ ಪಟ್ಟಿಯಲ್ಲಿ ಕರ್ನಾಟಕದ 30 ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ.</p>.ಕಾಮೆಡ್–ಕೆ : 100ರೊಳಗೆ ರಾಜ್ಯದ 30 ಅಭ್ಯರ್ಥಿಗಳು.<p><strong>ಮೈಸೂರು:</strong> ‘ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ. ಅವರು ರಾಜಮನೆತನಕ್ಕೆ ಹತ್ತಿರವೂ ಇಲ್ಲ, ದೂರವೂ ಇಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.</p>.ಮಂಡ್ಯ ವಿವಿಯ ಗೌರವ ಡಾಕ್ಟರೇಟ್: ಆದಿಚುಂಚನಗಿರಿಶ್ರೀ, ಪ್ರಮೋದಾದೇವಿ ಒಡೆಯರ್ ಆಯ್ಕೆ.<p><strong>ಭಟ್ಕಳ (ಉತ್ತರ ಕನ್ನಡ ಜಿಲ್ಲೆ):</strong> ‘ಮುರಿನಕಟ್ಟೆ ತೆರವುಗೊಳಿಸಿರುವ ಸ್ಥಳದಲ್ಲೇ ಕಟ್ಟೆಯನ್ನು ಪುನರ್ ನಿರ್ಮಿಸಬೇಕು. ಸರ್ಕಾರವೇ ಮುಂದಿನ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಆರ್.ಅಶೋಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. </p>.ಮುರಿನಕಟ್ಟೆ ವಿವಾದ: ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಬಿಜೆಪಿ ಮೆರವಣಿಗೆ.<p><strong>ನವದೆಹಲಿ:</strong> ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾದ ಬೆನ್ನಲ್ಲೇ, ಸಚಿವ ಸ್ಥಾನದ ಆಕಾಂಕ್ಷಿಗಳು ಬಿರುಸಿನ ಲಾಬಿ ಆರಂಭಿಸಿದ್ದಾರೆ.</p>.ಸಚಿವಗಿರಿಗೆ ಲಾಬಿ ಜೋರು.<p>ಜಾವಾಣಿ ಕನ್ನಡ ಸಿನಿ ಸಮ್ಮಾನ’ 4ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. 2025ನೇ ಸಾಲಿನ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವರ ವಿವರಗಳನ್ನು ತಿಳಿಸುವ ಸಮಯ ಇದು. 15 ವಿಭಾಗಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಲು ಪರಿಣತರ ತಂಡವು ನಾಮನಿರ್ದೇಶನಗಳನ್ನು ಮಾಡಿದೆ.</p>.PV Cine Sammana: ಸಿನಿ ಸಮ್ಮಾನ ಮತ್ತಷ್ಟು ನಾಮನಿರ್ದೇಶಿತರ ವಿವರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ..</p>.<p><strong>ಬೆಂಗಳೂರು:</strong> ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಿದ್ದು, ಮೇ 31 ಅಥವಾ ಜೂನ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.</p>.ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ನಾಳೆ ಅಥವಾ ನಾಡಿದ್ದು ? .<p><strong>ವಿಜಯಪುರ</strong>: ಚಡಚಣ ತಾಲ್ಲೂಕಿನ ಭೀಮಾ ನದಿ ತೀರದ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಶುಕ್ರವಾರ ಗುಂಪೊಂದು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದೆ. ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ರೇವಣ ಸಿದ್ದಪ್ಪ ನಿರಾಳೆ(65), ಶಿವಪುತ್ರ ರೇವಣ ಸಿದ್ದಪ್ಪ ನಿರಾಳೆ (58), ಚಂದ್ರಕಾಂತ ಅಲಿಯಾಸ್ ಚಂದು ರೇವಣಸಿದ್ದಪ್ಪ ನಿರಾಳೆ (55), ರಾಹುಲ್ ಶಿವಪುತ್ರ ನಿರಾಳೆ(25), ಸಮರ್ಥ ಶಿವಪುತ್ರ ನಿರಾಳೆ (23) ಮತ್ತು ಚಡಚಣದ ಶಬ್ಬೀರ್ ಬಾಬುಸಾಬ ಅತ್ತಾರ(45) ಕೊಲೆಯಾದವರು.</p>.ಹುಬ್ಬಳ್ಳಿ: ಖಾರದ ಪುಡಿ ಎರಚಿ ವ್ಯಕ್ತಿ ಕೊಲೆ.<p>ಜನ ಚಳವಳಿಗಳ ಕಾರ್ಯಕರ್ತರ ಭಾವನೆಗಳಿಗೆ ಹಾಗೂ ದುರ್ಬಲ ಸಮುದಾಯಗಳ ಸಂಕಟಗಳಿಗೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯ ‘ಇವ ನಮ್ಮವ’ ಎನ್ನುವ ವರ್ಚಸ್ಸು ಗಳಿಸಿಕೊಂಡಿರುವ ರಾಜಕಾರಣಿ. ಕರ್ನಾಟಕದ ಯಾವ ಮುಖ್ಯಮಂತ್ರಿಗೂ ದೊರೆಯದಿದ್ದ ಪ್ರಜ್ಞಾವಂತರ ವಲಯದ ಮೆಚ್ಚುಗೆ–ಬೆಂಬಲ ಅವರಿಗೆ ದೊರಕಿದೆ.</p>.ವಿಶ್ಲೇಷಣೆ | ಸಿದ್ದರಾಮಯ್ಯ: ‘ಇವ ನಮ್ಮವ...’.<p>ಭಾರತದ ಚುನಾವಣಾ ಆಯೋಗ (ಇಸಿಐ) ವಿನ್ಯಾಸಗೊಳಿಸಿ ಹಲವೆಡೆ ಜಾರಿಗೊಳಿಸಿರುವ ವಿವಾದಾತ್ಮಕ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿರಾಶಾದಾಯಕವಾದುದು. ತಾತ್ತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ಪ್ರಜಾಸತ್ತಾತ್ಮಕವಲ್ಲದ ಮತ್ತು ‘ಹೊರಗಿಡುವ’ ಧೋರಣೆಯ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ತೀರ್ಪು ಮಾನ್ಯಗೊಳಿಸಿದೆ; ಆಯೋಗದ ಬಹುತೇಕ ನಿಲುವು ಮತ್ತು ವಾದಗಳನ್ನು ಸಮರ್ಥಿಸಿದೆ</p>.ಸಂಪಾದಕೀಯ | ಎಸ್ಐಆರ್ಗೆ ಸುಪ್ರೀಂ ಸಮರ್ಥನೆ: ದೋಷಪೂರಿತ ಪ್ರಕ್ರಿಯೆಗೆ ಸಮ್ಮತಿ.<p><strong>ಮುಲ್ಲನಪುರ:</strong> ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಅನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.</p>.ಗಿಲ್ ಶತಕದ ನೆರವಿನಿಂದ ಟೈಟನ್ಸ್ ಫೈನಲ್ಗೆ: ಸೋಲಿನಲ್ಲೂ ಹಲವು ದಾಖಲೆ ಬರೆದ ವೈಭವ್.<p><strong>ಬೆಂಗಳೂರು:</strong> ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಮೊದಲ 100 ಶ್ರೇಯಾಂಕಗಳ ಪಟ್ಟಿಯಲ್ಲಿ ಕರ್ನಾಟಕದ 30 ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ.</p>.ಕಾಮೆಡ್–ಕೆ : 100ರೊಳಗೆ ರಾಜ್ಯದ 30 ಅಭ್ಯರ್ಥಿಗಳು.<p><strong>ಮೈಸೂರು:</strong> ‘ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ. ಅವರು ರಾಜಮನೆತನಕ್ಕೆ ಹತ್ತಿರವೂ ಇಲ್ಲ, ದೂರವೂ ಇಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.</p>.ಮಂಡ್ಯ ವಿವಿಯ ಗೌರವ ಡಾಕ್ಟರೇಟ್: ಆದಿಚುಂಚನಗಿರಿಶ್ರೀ, ಪ್ರಮೋದಾದೇವಿ ಒಡೆಯರ್ ಆಯ್ಕೆ.<p><strong>ಭಟ್ಕಳ (ಉತ್ತರ ಕನ್ನಡ ಜಿಲ್ಲೆ):</strong> ‘ಮುರಿನಕಟ್ಟೆ ತೆರವುಗೊಳಿಸಿರುವ ಸ್ಥಳದಲ್ಲೇ ಕಟ್ಟೆಯನ್ನು ಪುನರ್ ನಿರ್ಮಿಸಬೇಕು. ಸರ್ಕಾರವೇ ಮುಂದಿನ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಆರ್.ಅಶೋಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. </p>.ಮುರಿನಕಟ್ಟೆ ವಿವಾದ: ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಬಿಜೆಪಿ ಮೆರವಣಿಗೆ.<p><strong>ನವದೆಹಲಿ:</strong> ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾದ ಬೆನ್ನಲ್ಲೇ, ಸಚಿವ ಸ್ಥಾನದ ಆಕಾಂಕ್ಷಿಗಳು ಬಿರುಸಿನ ಲಾಬಿ ಆರಂಭಿಸಿದ್ದಾರೆ.</p>.ಸಚಿವಗಿರಿಗೆ ಲಾಬಿ ಜೋರು.<p>ಜಾವಾಣಿ ಕನ್ನಡ ಸಿನಿ ಸಮ್ಮಾನ’ 4ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. 2025ನೇ ಸಾಲಿನ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವರ ವಿವರಗಳನ್ನು ತಿಳಿಸುವ ಸಮಯ ಇದು. 15 ವಿಭಾಗಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಲು ಪರಿಣತರ ತಂಡವು ನಾಮನಿರ್ದೇಶನಗಳನ್ನು ಮಾಡಿದೆ.</p>.PV Cine Sammana: ಸಿನಿ ಸಮ್ಮಾನ ಮತ್ತಷ್ಟು ನಾಮನಿರ್ದೇಶಿತರ ವಿವರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>