<p><strong>ಬೆಂಗಳೂರು:</strong> ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಪೂರ್ವಭಾವಿಯಾಗಿ ರಾಜ್ಯದಲ್ಲಿ ಈವರೆಗೆ 4.67 ಕೋಟಿ ಮತದಾರರ ವಿವರಗಳನ್ನು ಹೋಲಿಸಿ ನೋಡಲಾಗಿದೆ (ಮ್ಯಾಪಿಂಗ್). ಇನ್ನೂ ಸುಮಾರು 90 ಲಕ್ಷ ಮತದಾರರ ವಿವರ ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಇದೆ.</p>.<p>2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 5.57 ಕೋಟಿ ಮತದಾರರಿದ್ದಾರೆ. ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆಯಲ್ಲಿ ಶೇ 84.08ರಷ್ಟು ಮತದಾರರ ವಿವರದ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ.</p>.<p>‘ಈ ಪ್ರಕ್ರಿಯೆಯ ಭಾಗವಾಗಿ 2025ರ ಮತದಾರರ ಪಟ್ಟಿಯಲ್ಲಿ ಇರುವವರ ವಿವರಗಳನ್ನು 2002ರ ಮತದಾರರ ಪಟ್ಟಿಯಲ್ಲಿ ವಿವರಗಳೊಂದಿಗೆ ಹೋಲಿಸಿ ನೋಡಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿ 3.24 ಕೋಟಿ ಮತದಾರರು ಇದ್ದರು. 2025ರ ಪಟ್ಟಿಯಲ್ಲಿ ಇರುವವರ ಪೈಕಿ, 2002ರ ಮತದಾರರ ಪಟ್ಟಿಯಲ್ಲಿ 2.24 ಕೋಟಿ ಮತದಾರರ ವಿವರಗಳು ದೊರೆತಿವೆ’ ಎಂದು ಜಿಬಿಎ ಪಾಲಿಕೆಗಳ ವ್ಯಾಪ್ತಿಯಲ್ಲಿ ಮ್ಯಾಪಿಂಗ್ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>‘2025ರ ಮತದಾರರ ಪಟ್ಟಿಯಲ್ಲಿ ಇರುವವರ ಪೋಷಕರ ವಿವರಗಳನ್ನು ಎರಡನೇ ಹಂತದಲ್ಲಿ ಪರಿಶೀಲಿಸಲಾಗಿದೆ. ಈ ಹಂತದ ನಂತರ 2.43 ಕೋಟಿ ಮತದಾರರ ವಿವರಗಳನ್ನು ಮ್ಯಾಪಿಂಗ್ ಮಾಡಲಾಗಿದೆ. ಈಗ ಒಂದೇ ತೆರನಾದ ಹೆಸರು, ಪೋಷಕರ ಹೆಸರು ಮತ್ತು ಜನ್ಮದಿನಾಂಕ ಇರುವವರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಅವೆಲ್ಲಾ ಒಬ್ಬರಿಗೇ ಸೇರಿದ ಮತದಾರರ ಚೀಟಿಯೇ ಅಥವಾ ಬೇರೆ–ಬೇರೆ ವ್ಯಕ್ತಿಗಳಿಗೆ ಸೇರಿದ ಮತದಾರರ ಚೀಟಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ’ ಎಂದು ಅವರು ವಿವರಿಸಿದರು.</p>.<p><strong>ನೋಟಿಸ್ ನೀಡಿಲ್ಲ:</strong> ಮತದಾರರ ವಿವರಗಳನ್ನು ಪರಸ್ಪರ ಹೋಲಿಸಿ ನೋಡಿ, ಮ್ಯಾಪಿಂಗ್ ಮಾಡುವ ಹೊಣೆಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ವಹಿಸಲಾಗಿದೆ. ಅವರೇ ಆ ಕೆಲಸವನ್ನು ಮಾಡುತ್ತಿದ್ದಾರೆ. ಈ ಸಲುವಾಗಿ ಯಾವ ಮತದಾರರಿಗೂ ನೋಟಿಸ್ ನೀಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮೂಲಗಳು ಹೇಳಿವೆ.</p>.<p><strong>ಜನಗಣತಿಯಿಂದ ವಿಳಂಬ..?</strong></p><p>ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುವವರಿಗೆ ತರಬೇತಿ ಮತ್ತು ಈಗ ಮನೆಗಣತಿ ಕಾರ್ಯ ಆರಂಭವಾಗಿರುವ ಕಾರಣಕ್ಕೆ ಎಸ್ಐಆರ್ ಪೂರ್ವಭಾವಿ ಮ್ಯಾಪಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.</p><p>ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಯೇ ಜನಗಣತಿಗೂ ನಿಯೋಜನೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ವ್ಯಾಪ್ತಿಯ ಹಲವು ವಾರ್ಡ್ಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಏಪ್ರಿಲ್ ಮೊದಲ ವಾರದಿಂದಲೇ ಎಸ್ಐಆರ್ ಪೂರ್ವಭಾವಿ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ. ಮತಗಟ್ಟೆ ಮಟ್ಟದ ಅಧಿಕಾರಿಗಳನ್ನೂ (ಬಿಎಲ್ಒ) ಜನಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಈ ಸಿಬ್ಬಂದಿ ಮನೆಗಣತಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿ ವಿವರಿಸಿದರು.</p><p>ಎಸ್ಐಆರ್ ಪೂರ್ವಭಾವಿ ಮ್ಯಾಪಿಂಗ್ನ ದತ್ತಾಂಶಗಳೂ ಈ ಅಂಶವನ್ನು ಪುಷ್ಠೀಕರಿಸುತ್ತವೆ. ಮಾರ್ಚ್ 26ರ ಗುರುವಾರದ ವೇಳೆಗೆ 4.46 ಕೋಟಿ ಮತದಾರರ (ಶೇ 80ರಷ್ಟು) ವಿವರದ ಮ್ಯಾಪಿಂಗ್ ಪೂರ್ಣಗೊಂಡಿತ್ತು. ಏಪ್ರಿಲ್ 2ರ ವೇಳೆಗೆ 4.62 ಕೋಟಿ (ಶೇ 83ರಷ್ಟು) ಮತದಾರರ ಮ್ಯಾಪಿಂಗ್ ಕೆಲಸ ಮುಗಿಸಲಾಗಿತ್ತು. ಆದರೆ ನಂತರದ ಸುಮಾರು 16 ದಿನಗಳಲ್ಲಿ ಇನ್ನೂ ಸುಮಾರು 5 ಲಕ್ಷ ಮತದಾರರ ವಿವರಗಳನ್ನಷ್ಟೇ ಮ್ಯಾಪಿಂಗ್ ಮಾಡಲು ಸಾಧ್ಯವಾಗಿದೆ.</p><p>‘ಏಪ್ರಿಲ್ ತಿಂಗಳಿನಲ್ಲಿ ಸಾಲು ಸಾಲು ರಜೆ ಬಂದಿದ್ದು ಮತ್ತು ಒಂದೇ ಸ್ವರೂಪದ ವಿವರ ಇರುವ ಹಲವು ಮತದಾರರ ಚೀಟಿಗಳನ್ನು ಪರಸ್ಪರ ಹೋಲಿಸುವ ಕೆಲಸ ನಡೆಯುತ್ತಿರುವ ಕಾರಣದಿಂದ ತುಸು ವಿಳಂಬವಾಗುತ್ತಿದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.</p>.<p><strong>ಪ್ರತಿರೋಧ ಸಮಾವೇಶ</strong></p><p>‘ಎಸ್ಐಆರ್ ಮೂಲಕ ದೇಶದ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅದನ್ನು ಖಂಡಿಸಿ ಇದೇ 23ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿರೋಧ ಸಮಾವೇಶ ಆಯೋಜಿಸಲಾಗಿದೆ’ ಎಂದು ಎಸ್ಐಆರ್ ವಿರೋಧಿ ಒಕ್ಕೂಟದ ಜೆ.ಎಂ.ವೀರಸಂಗಯ್ಯ ತಿಳಿಸಿದರು.</p><p>ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ‘ ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ವಿರೋಧಿ ಹೋರಾಟ ನಡೆಸುತ್ತಿರುವ ‘ವೋಟರ್ ಅಧಿಕಾರ್ ಮಂಚ್’ನ ಶೇಕ್ ಫರೀದ್ಉಲ್ಲಾ ಇಸ್ಲಾಂ ಅವರು 23ರ ಪ್ರತಿರೋಧ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ’ ಎಂದಿದ್ದಾರೆ. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಕಾಂಗ್ರೆಸ್, ಸಿಪಿಎಂ ಮತ್ತು ಸಿಪಿಐ ಪಕ್ಷದ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಪೂರ್ವಭಾವಿಯಾಗಿ ರಾಜ್ಯದಲ್ಲಿ ಈವರೆಗೆ 4.67 ಕೋಟಿ ಮತದಾರರ ವಿವರಗಳನ್ನು ಹೋಲಿಸಿ ನೋಡಲಾಗಿದೆ (ಮ್ಯಾಪಿಂಗ್). ಇನ್ನೂ ಸುಮಾರು 90 ಲಕ್ಷ ಮತದಾರರ ವಿವರ ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಇದೆ.</p>.<p>2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 5.57 ಕೋಟಿ ಮತದಾರರಿದ್ದಾರೆ. ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆಯಲ್ಲಿ ಶೇ 84.08ರಷ್ಟು ಮತದಾರರ ವಿವರದ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ.</p>.<p>‘ಈ ಪ್ರಕ್ರಿಯೆಯ ಭಾಗವಾಗಿ 2025ರ ಮತದಾರರ ಪಟ್ಟಿಯಲ್ಲಿ ಇರುವವರ ವಿವರಗಳನ್ನು 2002ರ ಮತದಾರರ ಪಟ್ಟಿಯಲ್ಲಿ ವಿವರಗಳೊಂದಿಗೆ ಹೋಲಿಸಿ ನೋಡಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿ 3.24 ಕೋಟಿ ಮತದಾರರು ಇದ್ದರು. 2025ರ ಪಟ್ಟಿಯಲ್ಲಿ ಇರುವವರ ಪೈಕಿ, 2002ರ ಮತದಾರರ ಪಟ್ಟಿಯಲ್ಲಿ 2.24 ಕೋಟಿ ಮತದಾರರ ವಿವರಗಳು ದೊರೆತಿವೆ’ ಎಂದು ಜಿಬಿಎ ಪಾಲಿಕೆಗಳ ವ್ಯಾಪ್ತಿಯಲ್ಲಿ ಮ್ಯಾಪಿಂಗ್ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p>‘2025ರ ಮತದಾರರ ಪಟ್ಟಿಯಲ್ಲಿ ಇರುವವರ ಪೋಷಕರ ವಿವರಗಳನ್ನು ಎರಡನೇ ಹಂತದಲ್ಲಿ ಪರಿಶೀಲಿಸಲಾಗಿದೆ. ಈ ಹಂತದ ನಂತರ 2.43 ಕೋಟಿ ಮತದಾರರ ವಿವರಗಳನ್ನು ಮ್ಯಾಪಿಂಗ್ ಮಾಡಲಾಗಿದೆ. ಈಗ ಒಂದೇ ತೆರನಾದ ಹೆಸರು, ಪೋಷಕರ ಹೆಸರು ಮತ್ತು ಜನ್ಮದಿನಾಂಕ ಇರುವವರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಅವೆಲ್ಲಾ ಒಬ್ಬರಿಗೇ ಸೇರಿದ ಮತದಾರರ ಚೀಟಿಯೇ ಅಥವಾ ಬೇರೆ–ಬೇರೆ ವ್ಯಕ್ತಿಗಳಿಗೆ ಸೇರಿದ ಮತದಾರರ ಚೀಟಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ’ ಎಂದು ಅವರು ವಿವರಿಸಿದರು.</p>.<p><strong>ನೋಟಿಸ್ ನೀಡಿಲ್ಲ:</strong> ಮತದಾರರ ವಿವರಗಳನ್ನು ಪರಸ್ಪರ ಹೋಲಿಸಿ ನೋಡಿ, ಮ್ಯಾಪಿಂಗ್ ಮಾಡುವ ಹೊಣೆಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ವಹಿಸಲಾಗಿದೆ. ಅವರೇ ಆ ಕೆಲಸವನ್ನು ಮಾಡುತ್ತಿದ್ದಾರೆ. ಈ ಸಲುವಾಗಿ ಯಾವ ಮತದಾರರಿಗೂ ನೋಟಿಸ್ ನೀಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮೂಲಗಳು ಹೇಳಿವೆ.</p>.<p><strong>ಜನಗಣತಿಯಿಂದ ವಿಳಂಬ..?</strong></p><p>ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುವವರಿಗೆ ತರಬೇತಿ ಮತ್ತು ಈಗ ಮನೆಗಣತಿ ಕಾರ್ಯ ಆರಂಭವಾಗಿರುವ ಕಾರಣಕ್ಕೆ ಎಸ್ಐಆರ್ ಪೂರ್ವಭಾವಿ ಮ್ಯಾಪಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.</p><p>ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಯೇ ಜನಗಣತಿಗೂ ನಿಯೋಜನೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ವ್ಯಾಪ್ತಿಯ ಹಲವು ವಾರ್ಡ್ಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಏಪ್ರಿಲ್ ಮೊದಲ ವಾರದಿಂದಲೇ ಎಸ್ಐಆರ್ ಪೂರ್ವಭಾವಿ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ. ಮತಗಟ್ಟೆ ಮಟ್ಟದ ಅಧಿಕಾರಿಗಳನ್ನೂ (ಬಿಎಲ್ಒ) ಜನಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಈ ಸಿಬ್ಬಂದಿ ಮನೆಗಣತಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿ ವಿವರಿಸಿದರು.</p><p>ಎಸ್ಐಆರ್ ಪೂರ್ವಭಾವಿ ಮ್ಯಾಪಿಂಗ್ನ ದತ್ತಾಂಶಗಳೂ ಈ ಅಂಶವನ್ನು ಪುಷ್ಠೀಕರಿಸುತ್ತವೆ. ಮಾರ್ಚ್ 26ರ ಗುರುವಾರದ ವೇಳೆಗೆ 4.46 ಕೋಟಿ ಮತದಾರರ (ಶೇ 80ರಷ್ಟು) ವಿವರದ ಮ್ಯಾಪಿಂಗ್ ಪೂರ್ಣಗೊಂಡಿತ್ತು. ಏಪ್ರಿಲ್ 2ರ ವೇಳೆಗೆ 4.62 ಕೋಟಿ (ಶೇ 83ರಷ್ಟು) ಮತದಾರರ ಮ್ಯಾಪಿಂಗ್ ಕೆಲಸ ಮುಗಿಸಲಾಗಿತ್ತು. ಆದರೆ ನಂತರದ ಸುಮಾರು 16 ದಿನಗಳಲ್ಲಿ ಇನ್ನೂ ಸುಮಾರು 5 ಲಕ್ಷ ಮತದಾರರ ವಿವರಗಳನ್ನಷ್ಟೇ ಮ್ಯಾಪಿಂಗ್ ಮಾಡಲು ಸಾಧ್ಯವಾಗಿದೆ.</p><p>‘ಏಪ್ರಿಲ್ ತಿಂಗಳಿನಲ್ಲಿ ಸಾಲು ಸಾಲು ರಜೆ ಬಂದಿದ್ದು ಮತ್ತು ಒಂದೇ ಸ್ವರೂಪದ ವಿವರ ಇರುವ ಹಲವು ಮತದಾರರ ಚೀಟಿಗಳನ್ನು ಪರಸ್ಪರ ಹೋಲಿಸುವ ಕೆಲಸ ನಡೆಯುತ್ತಿರುವ ಕಾರಣದಿಂದ ತುಸು ವಿಳಂಬವಾಗುತ್ತಿದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.</p>.<p><strong>ಪ್ರತಿರೋಧ ಸಮಾವೇಶ</strong></p><p>‘ಎಸ್ಐಆರ್ ಮೂಲಕ ದೇಶದ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅದನ್ನು ಖಂಡಿಸಿ ಇದೇ 23ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿರೋಧ ಸಮಾವೇಶ ಆಯೋಜಿಸಲಾಗಿದೆ’ ಎಂದು ಎಸ್ಐಆರ್ ವಿರೋಧಿ ಒಕ್ಕೂಟದ ಜೆ.ಎಂ.ವೀರಸಂಗಯ್ಯ ತಿಳಿಸಿದರು.</p><p>ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ‘ ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ವಿರೋಧಿ ಹೋರಾಟ ನಡೆಸುತ್ತಿರುವ ‘ವೋಟರ್ ಅಧಿಕಾರ್ ಮಂಚ್’ನ ಶೇಕ್ ಫರೀದ್ಉಲ್ಲಾ ಇಸ್ಲಾಂ ಅವರು 23ರ ಪ್ರತಿರೋಧ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ’ ಎಂದಿದ್ದಾರೆ. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಕಾಂಗ್ರೆಸ್, ಸಿಪಿಎಂ ಮತ್ತು ಸಿಪಿಐ ಪಕ್ಷದ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>