<p><strong>ಬೆಂಗಳೂರು</strong>: ರಾಜ್ಯದಲ್ಲಿ 2025ರ ಡಿಸೆಂಬರ್ನಲ್ಲಿ ಆರಂಭವಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಪೂರ್ವಭಾವಿ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಬಂದಿದ್ದು, 5.57 ಕೋಟಿ ಮತದಾರರ ಪೈಕಿ 1.10 ಕೋಟಿ ಜನರ ವಿವರ ಇನ್ನೂ ತಾಳೆಯಾಗಿಲ್ಲ.</p>.<p>ಭಾರತೀಯ ಚುನಾವಣಾ ಆಯೋಗವು ಈಗಾಗಲೇ 11 ರಾಜ್ಯಗಳಲ್ಲಿ ಎಸ್ಐಆರ್ ನಡೆಸಿದೆ. ಎಸ್ಐಆರ್ಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ 2002ರ ಮತ್ತು 2025ರ ಮತದಾರರ ಪಟ್ಟಿಯನ್ನು ನಾಲ್ಕು ಹಂತದಲ್ಲಿ ಹೋಲಿಸಿ ನೋಡಲಾಗಿದೆ. 2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.57 ಕೋಟಿ ಮತದಾರರು ನೋಂದಣಿ ಆಗಿದ್ದಾರೆ. ಇದೇ ಮಾರ್ಚ್ 26ರ ವೇಳೆಗೆ 4.46 ಕೋಟಿ ಮತದಾರರ ವಿವರಗಳಷ್ಟೇ ಹೋಲಿಕೆಯಾಗಿದೆ.</p>.<p>2002ರ ಮತ್ತು 2025ರ ಮತದಾರರ ಪಟ್ಟಿಗಳ ಮತಗಟ್ಟೆ ಮಟ್ಟದ ಹೋಲಿಕೆ, ವಿಧಾನಸಭಾ ಕ್ಷೇತ್ರವಾರು ಹೋಲಿಕೆ, ಜಿಲ್ಲಾವಾರು ಹೋಲಿಕೆ ಮಾಡಿ ನೋಡಲಾಗಿದೆ. ನಂತರದ ಹಂತದಲ್ಲಿ ಆಯೋಗವು ಮತಗಟ್ಟೆ ಅಧಿಕಾರಿಗಳ (ಬಿಎಲ್ಒ) ಮೇಲ್ವಿಚಾರಕರಿಗೆ ನೂತನ ತಂತ್ರಾಂಶ ಒದಗಿಸಿದ್ದು, 2025ರ ಮತದಾರರ ಪಟ್ಟಿಯಲ್ಲಿ ಇರುವವರ ಪೋಷಕರ ವಿವರಗಳನ್ನು ಅದರಲ್ಲಿ ಪರಿಶೀಲಿಸಬಹುದಾಗಿದೆ. ಇಷ್ಟೂ ಹಂತಗಳ ಪರಿಶೀಲನೆಯ ನಂತರವೂ 1.10 ಕೋಟಿ ಮತದಾರರ ವಿವರಗಳು ತಾಳೆಯಾಗಿಲ್ಲ. ಇದು ರಾಜ್ಯದ ಒಟ್ಟು ಮತದಾರರ ಶೇ 20ರಷ್ಟಾಗುತ್ತದೆ.</p>.<p>2025ರ ಮತದಾರರ ಪಟ್ಟಿಯಲ್ಲಿ ಇರುವವರ ಪೈಕಿ, 2002ರ ಮತದಾರರ ಪಟ್ಟಿಯಲ್ಲಿ ವಿವರ ಲಭ್ಯವಾದವರ ಸಂಖ್ಯೆ 2.25 ಕೋಟಿ ಮಾತ್ರ. 2002ರ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವ ಮತದಾರರ ಪೋಷಕರ (ತಂದೆ/ತಾಯಿ/ಅಜ್ಜ/ಅಜ್ಜಿ) ವಿವರಗಳನ್ನು ಹೋಲಿಸಿ ನೋಡಲಾಗಿದೆ. ಆಗ ಇನ್ನೂ 2.21 ಕೋಟಿ ಮತದಾರರ ವಿವರಗಳು ತಾಳೆಯಾಗಿವೆ. </p>.<p>‘ನನ್ನ ಮತ, ನನ್ನ ಹಕ್ಕು’ ಆಕ್ಷೇಪ: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಎಂದು ‘ನನ್ನ ಮತ, ನನ್ನ ಹಕ್ಕು’ ಸಂಘಟನೆಯು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದೆ.</p>.<p>‘ಯಾವುದೇ ಕೈಪಿಡಿ ಇಲ್ಲದೆ ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯ ಅಂದಂದಿನ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿಲ್ಲ. ಈ ಪ್ರಕ್ರಿಯೆ ಹೇಗೆ ನಡೆಯುತ್ತಿದೆ? ಅದರ ಸ್ಥಿತಿಗತಿ ಏನು ಎಂಬುದರ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ’ ಎಂದು ಆಕ್ಷೇಪ ಎತ್ತಿದೆ.</p>.<p>‘ಆಯೋಗವು ಒದಗಿಸಿದ ದಾಖಲೆಗಳಲ್ಲಿ 4.46 ಕೋಟಿ ಮತದಾರರ ವಿವರ ತಾಳೆಯಾಗಿದೆ ಎಂದು ತೋರಿಸಲಾಗಿದೆ. ಆದರೆ, ಬಿಎಲ್ಒಗಳು ಮತ್ತು ಆಯೋಗದ ತಂತ್ರಾಂಶವು ಹೋಲಿಸಿ ನೋಡಿದ ಮತದಾರರ ಸಂಖ್ಯೆ 19.13 ಲಕ್ಷ ಮಾತ್ರ. ಹೀಗಿರುವಾಗ 4.46 ಕೋಟಿ ಮತದಾರರ ವಿವರ ತಾಳೆಯಾಗಿದೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ’ ಎಂದು ಪ್ರಶ್ನಿಸಿದೆ.</p>.<p>ಸಂಘಟನೆಯ ಪರವಾಗಿ ಐಶ್ವರ್ಯ, ವಿನಯ್ ಶ್ರೀನಿವಾಸ, ಶ್ರೀಪಾದ ಭಟ್, ಗೀತಾ ಭಟ್, ಲೇಖಾ ಅಡವಿ, ಐಸಾಕ್ ಅಮೃತ್ರಾಜ್ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.</p>.<p><strong>‘ಲೋಪದ ಅಪಾಯ’</strong></p><p>‘2002ರ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವವರ ವಿವರಗಳನ್ನು ಅವರ ಪೋಷಕರ ಮತದಾರರ ಚೀಟಿ (ಎಪಿಕ್) ವಿವರಗಳೊಂದಿಗೆ ಹೋಲಿಸಿ ನೋಡಲಾಗುತ್ತಿದೆ. ಇದಕ್ಕಾಗಿ ಚುನಾವಣಾಧಿಕಾರಿ ಕಚೇರಿಯು ಒಂದು ತಂತ್ರಾಂಶವನ್ನು ಒದಗಿಸಿದೆ. ಈ ತಂತ್ರಾಂಶವು ವಿವರಗಳನ್ನು ಹೋಲಿಸಿ ಕ್ಷಿಪ್ರವಾಗಿ ಮಾಹಿತಿ ಒದಗಿಸುತ್ತದೆ. ಆದರೆ ನಿಖರತೆ ಕಡಿಮೆ. ತಂತ್ರಾಂಶವನ್ನೇ ಆಧರಿಸಿದ ಹೋಲಿಕೆಯಲ್ಲಿ ಲೋಪವಾಗುವ ಅಪಾಯವಿದೆ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಯಲ್ಲಿನ ಬಿಎಲ್ಒ ಮೇಲ್ವಿಚಾರಕರೊಬ್ಬರು ಕಳವಳ ವ್ಯಕ್ತಪಡಿಸಿದರು. ‘ತಂತ್ರಾಂಶದಲ್ಲಿ ಮತದಾರರ ಹೆಸರು ಮತ್ತು ಅವರ ತಂದೆಯ ಹೆಸರು ಹಾಕಿದರೆ ತಂದೆಯ ಹೆಸರಿನಲ್ಲಿ ಇರುವ ಎಲ್ಲ ಮತದಾರರ ವಿವರಗಳನ್ನು ಅದು ಒದಗಿಸುತ್ತದೆ. ಮತದಾರರು ಒದಗಿಸಿದ ಅವರ ತಂದೆಯ ಜನ್ಮದಿನಾಂಕ ಮತ್ತು ತಂತ್ರಾಂಶವು ಒದಗಿಸಿದ ಜನ್ಮದಿನಾಂಕ ಹಾಗೂ ವಿಳಾಸವನ್ನು ಪರಸ್ಪರ ಹೋಲಿಸಿ ವಿಲೇವಾರಿ ಮಾಡಬೇಕಿದೆ. ಆದರೆ ಹಲವು ಸಂದರ್ಭಗಳಲ್ಲಿ ಜನ್ಮದಿನಾಂಕ ಜನವರಿ 1 ಅಥವಾ ಜೂನ್ 1 ಎಂದು ಇರುತ್ತದೆ. ಇತರ ವಿವರಗಳು ಹೋಲಿಕೆ ಆಗದೇ ಇದ್ದರೂ ಹೆಸರು ಮತ್ತು ಜನ್ಮದಿನಾಂಕದ ಆಧಾರದಲ್ಲಿ ಬಿಎಲ್ಒಗಳು ವಿಲೇವಾರಿ ಮಾಡಿದ ಉದಾಹರಣೆಗಳು ಸಾಕಷ್ಟಿವೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದಲ್ಲಿ 2025ರ ಡಿಸೆಂಬರ್ನಲ್ಲಿ ಆರಂಭವಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಪೂರ್ವಭಾವಿ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಬಂದಿದ್ದು, 5.57 ಕೋಟಿ ಮತದಾರರ ಪೈಕಿ 1.10 ಕೋಟಿ ಜನರ ವಿವರ ಇನ್ನೂ ತಾಳೆಯಾಗಿಲ್ಲ.</p>.<p>ಭಾರತೀಯ ಚುನಾವಣಾ ಆಯೋಗವು ಈಗಾಗಲೇ 11 ರಾಜ್ಯಗಳಲ್ಲಿ ಎಸ್ಐಆರ್ ನಡೆಸಿದೆ. ಎಸ್ಐಆರ್ಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ 2002ರ ಮತ್ತು 2025ರ ಮತದಾರರ ಪಟ್ಟಿಯನ್ನು ನಾಲ್ಕು ಹಂತದಲ್ಲಿ ಹೋಲಿಸಿ ನೋಡಲಾಗಿದೆ. 2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.57 ಕೋಟಿ ಮತದಾರರು ನೋಂದಣಿ ಆಗಿದ್ದಾರೆ. ಇದೇ ಮಾರ್ಚ್ 26ರ ವೇಳೆಗೆ 4.46 ಕೋಟಿ ಮತದಾರರ ವಿವರಗಳಷ್ಟೇ ಹೋಲಿಕೆಯಾಗಿದೆ.</p>.<p>2002ರ ಮತ್ತು 2025ರ ಮತದಾರರ ಪಟ್ಟಿಗಳ ಮತಗಟ್ಟೆ ಮಟ್ಟದ ಹೋಲಿಕೆ, ವಿಧಾನಸಭಾ ಕ್ಷೇತ್ರವಾರು ಹೋಲಿಕೆ, ಜಿಲ್ಲಾವಾರು ಹೋಲಿಕೆ ಮಾಡಿ ನೋಡಲಾಗಿದೆ. ನಂತರದ ಹಂತದಲ್ಲಿ ಆಯೋಗವು ಮತಗಟ್ಟೆ ಅಧಿಕಾರಿಗಳ (ಬಿಎಲ್ಒ) ಮೇಲ್ವಿಚಾರಕರಿಗೆ ನೂತನ ತಂತ್ರಾಂಶ ಒದಗಿಸಿದ್ದು, 2025ರ ಮತದಾರರ ಪಟ್ಟಿಯಲ್ಲಿ ಇರುವವರ ಪೋಷಕರ ವಿವರಗಳನ್ನು ಅದರಲ್ಲಿ ಪರಿಶೀಲಿಸಬಹುದಾಗಿದೆ. ಇಷ್ಟೂ ಹಂತಗಳ ಪರಿಶೀಲನೆಯ ನಂತರವೂ 1.10 ಕೋಟಿ ಮತದಾರರ ವಿವರಗಳು ತಾಳೆಯಾಗಿಲ್ಲ. ಇದು ರಾಜ್ಯದ ಒಟ್ಟು ಮತದಾರರ ಶೇ 20ರಷ್ಟಾಗುತ್ತದೆ.</p>.<p>2025ರ ಮತದಾರರ ಪಟ್ಟಿಯಲ್ಲಿ ಇರುವವರ ಪೈಕಿ, 2002ರ ಮತದಾರರ ಪಟ್ಟಿಯಲ್ಲಿ ವಿವರ ಲಭ್ಯವಾದವರ ಸಂಖ್ಯೆ 2.25 ಕೋಟಿ ಮಾತ್ರ. 2002ರ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವ ಮತದಾರರ ಪೋಷಕರ (ತಂದೆ/ತಾಯಿ/ಅಜ್ಜ/ಅಜ್ಜಿ) ವಿವರಗಳನ್ನು ಹೋಲಿಸಿ ನೋಡಲಾಗಿದೆ. ಆಗ ಇನ್ನೂ 2.21 ಕೋಟಿ ಮತದಾರರ ವಿವರಗಳು ತಾಳೆಯಾಗಿವೆ. </p>.<p>‘ನನ್ನ ಮತ, ನನ್ನ ಹಕ್ಕು’ ಆಕ್ಷೇಪ: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಎಂದು ‘ನನ್ನ ಮತ, ನನ್ನ ಹಕ್ಕು’ ಸಂಘಟನೆಯು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದೆ.</p>.<p>‘ಯಾವುದೇ ಕೈಪಿಡಿ ಇಲ್ಲದೆ ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯ ಅಂದಂದಿನ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿಲ್ಲ. ಈ ಪ್ರಕ್ರಿಯೆ ಹೇಗೆ ನಡೆಯುತ್ತಿದೆ? ಅದರ ಸ್ಥಿತಿಗತಿ ಏನು ಎಂಬುದರ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ’ ಎಂದು ಆಕ್ಷೇಪ ಎತ್ತಿದೆ.</p>.<p>‘ಆಯೋಗವು ಒದಗಿಸಿದ ದಾಖಲೆಗಳಲ್ಲಿ 4.46 ಕೋಟಿ ಮತದಾರರ ವಿವರ ತಾಳೆಯಾಗಿದೆ ಎಂದು ತೋರಿಸಲಾಗಿದೆ. ಆದರೆ, ಬಿಎಲ್ಒಗಳು ಮತ್ತು ಆಯೋಗದ ತಂತ್ರಾಂಶವು ಹೋಲಿಸಿ ನೋಡಿದ ಮತದಾರರ ಸಂಖ್ಯೆ 19.13 ಲಕ್ಷ ಮಾತ್ರ. ಹೀಗಿರುವಾಗ 4.46 ಕೋಟಿ ಮತದಾರರ ವಿವರ ತಾಳೆಯಾಗಿದೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ’ ಎಂದು ಪ್ರಶ್ನಿಸಿದೆ.</p>.<p>ಸಂಘಟನೆಯ ಪರವಾಗಿ ಐಶ್ವರ್ಯ, ವಿನಯ್ ಶ್ರೀನಿವಾಸ, ಶ್ರೀಪಾದ ಭಟ್, ಗೀತಾ ಭಟ್, ಲೇಖಾ ಅಡವಿ, ಐಸಾಕ್ ಅಮೃತ್ರಾಜ್ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.</p>.<p><strong>‘ಲೋಪದ ಅಪಾಯ’</strong></p><p>‘2002ರ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವವರ ವಿವರಗಳನ್ನು ಅವರ ಪೋಷಕರ ಮತದಾರರ ಚೀಟಿ (ಎಪಿಕ್) ವಿವರಗಳೊಂದಿಗೆ ಹೋಲಿಸಿ ನೋಡಲಾಗುತ್ತಿದೆ. ಇದಕ್ಕಾಗಿ ಚುನಾವಣಾಧಿಕಾರಿ ಕಚೇರಿಯು ಒಂದು ತಂತ್ರಾಂಶವನ್ನು ಒದಗಿಸಿದೆ. ಈ ತಂತ್ರಾಂಶವು ವಿವರಗಳನ್ನು ಹೋಲಿಸಿ ಕ್ಷಿಪ್ರವಾಗಿ ಮಾಹಿತಿ ಒದಗಿಸುತ್ತದೆ. ಆದರೆ ನಿಖರತೆ ಕಡಿಮೆ. ತಂತ್ರಾಂಶವನ್ನೇ ಆಧರಿಸಿದ ಹೋಲಿಕೆಯಲ್ಲಿ ಲೋಪವಾಗುವ ಅಪಾಯವಿದೆ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಯಲ್ಲಿನ ಬಿಎಲ್ಒ ಮೇಲ್ವಿಚಾರಕರೊಬ್ಬರು ಕಳವಳ ವ್ಯಕ್ತಪಡಿಸಿದರು. ‘ತಂತ್ರಾಂಶದಲ್ಲಿ ಮತದಾರರ ಹೆಸರು ಮತ್ತು ಅವರ ತಂದೆಯ ಹೆಸರು ಹಾಕಿದರೆ ತಂದೆಯ ಹೆಸರಿನಲ್ಲಿ ಇರುವ ಎಲ್ಲ ಮತದಾರರ ವಿವರಗಳನ್ನು ಅದು ಒದಗಿಸುತ್ತದೆ. ಮತದಾರರು ಒದಗಿಸಿದ ಅವರ ತಂದೆಯ ಜನ್ಮದಿನಾಂಕ ಮತ್ತು ತಂತ್ರಾಂಶವು ಒದಗಿಸಿದ ಜನ್ಮದಿನಾಂಕ ಹಾಗೂ ವಿಳಾಸವನ್ನು ಪರಸ್ಪರ ಹೋಲಿಸಿ ವಿಲೇವಾರಿ ಮಾಡಬೇಕಿದೆ. ಆದರೆ ಹಲವು ಸಂದರ್ಭಗಳಲ್ಲಿ ಜನ್ಮದಿನಾಂಕ ಜನವರಿ 1 ಅಥವಾ ಜೂನ್ 1 ಎಂದು ಇರುತ್ತದೆ. ಇತರ ವಿವರಗಳು ಹೋಲಿಕೆ ಆಗದೇ ಇದ್ದರೂ ಹೆಸರು ಮತ್ತು ಜನ್ಮದಿನಾಂಕದ ಆಧಾರದಲ್ಲಿ ಬಿಎಲ್ಒಗಳು ವಿಲೇವಾರಿ ಮಾಡಿದ ಉದಾಹರಣೆಗಳು ಸಾಕಷ್ಟಿವೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>