<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಜೂನ್ 20ರಿಂದ ಆರಂಭವಾಗಲಿದೆ. ಒಬ್ಬ ಅರ್ಹ ಮತದಾರರೂ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಕಟ್ಟುನಿಟ್ಟಿನ ಪರಿಷ್ಕರಣೆ ನಡೆಸಲಾಗುತ್ತದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.</p>.<p>‘ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಒಟ್ಟು 59,050 ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ), 5,905 ಬಿಎಲ್ಒ ಮೇಲ್ವಿಚಾರಕರು, 336 ಸಹಾಯಕ ಮತದಾರರ ನೋಂದಣಾಧಿಕಾರಿ, 224 ಮತದಾರರ ನೋಂದಣಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಸ್ಐಆರ್ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ’ ಎಂದು ತಿಳಿಸಿದರು.</p>.<p>‘ಎಸ್ಐಆರ್ಗೆ ಪೂರ್ವ ತಯಾರಿಯಾಗಿ ಮತದಾರರ ವಿವರಗಳನ್ನು ಹೋಲಿಸಿ, ಖಚಿತಪಡಿಸಿಕೊಳ್ಳುವ (ಮ್ಯಾಪಿಂಗ್) ಕೆಲಸ ಶೇ 86.46ರಷ್ಟಾಗಿದೆ. 2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.55 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 4.80 ಕೋಟಿ ಮತದಾರರ ವಿವರಗಳನ್ನು 2002ರ ಮತದಾರರ ಪಟ್ಟಿ ಮತ್ತು ಪೋಷಕರ ಮತದಾರರ ಚೀಟಿ ವಿವರಗಳ ಜತೆಗೆ ಹೋಲಿಸಿ ನೋಡಿ ಖಚಿತಪಡಿಸಿಕೊಳ್ಳಲಾಗಿದೆ. ಎಸ್ಐಆರ್ ಆರಂಭವಾಗುವರೆಗೂ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರೆಯಲಿದೆ’ ಎಂದು ಅವರು ತಿಳಿಸಿದರು.</p>.<p>‘ಮ್ಯಾಪಿಂಗ್ ಪ್ರಕ್ರಿಯೆಯ ಆಧಾರದಲ್ಲಿ ರಾಜ್ಯದ ಎಲ್ಲ 5.55 ಕೋಟಿ ಮತದಾರರಿಗೂ ಗಣತಿ ನಮೂನೆಗಳನ್ನು (ಎನ್ಯುಮರೇಷನ್ ಅರ್ಜಿ) ಸೃಜಿಸಲಾಗುತ್ತದೆ. ಪ್ರತಿ ಮತದಾರರಿಗಾಗಿ ಎರಡು ಗಣತಿ ನಮೂನೆಗಳಂತೆ, ಒಟ್ಟು ಸುಮಾರು 11 ಕೋಟಿ ನಮೂನೆಗಳನ್ನು ಸೃಜಿಸಲಾಗುತ್ತದೆ. ಮತದಾರರು ಎರಡೂ ನಮೂನೆಗಳನ್ನು ಭರ್ತಿ ಮಾಡಿ, ಒಂದನ್ನು ಬಿಎಲ್ಒಗಳಿಗೆ ನೀಡಬೇಕು ಮತ್ತು ಇನ್ನೊಂದನ್ನು ತಮ್ಮ ಬಳಿಯೇ ಇರಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದರೆ, ಈ ಅರ್ಜಿಯ ಆಧಾರದಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ’ ಎಂದು ವಿವರಿಸಿದರು.</p>.<p>‘ಬಿಎಲ್ಒಗಳು ಗಣತಿ ನಮೂನೆಗಳನ್ನು ಪಡೆದುಕೊಂಡ ನಂತರ, ಅವುಗಳನ್ನು ಪರಿಶೀಲಿಸಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ವಿವರ ತಪ್ಪಾಗಿದ್ದರೆ, ಆಕ್ಷೇಪಣೆ ಸಲ್ಲಿಸಬಹುದು. ಅದನ್ನು ಪರಿಶೀಲಿಸಿ, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟುಹೋಗಿದ್ದರೆ ಮತದಾರರು ಜಿಲ್ಲಾಧಿಕಾರಿ ಹಂತದ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ನಂತರದ ಹಂತದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>‘ಗಣತಿ ನಮೂನೆ ಭರ್ತಿ ಮಾಡುವಲ್ಲಿ ಮತದಾರರಿಗೆ ನೆರವಾಗಲು ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮಪಂಚಾಯತಿ ಮಟ್ಟದಲ್ಲಿ ಶಿಬಿರಗಳನ್ನು ತೆರೆಯಲಾಗುತ್ತದೆ. ಜತೆಗೆ ಜಿಲ್ಲಾ ಹಂತದಲ್ಲಿ ಸಹಾಯವಾಣಿಯನ್ನೂ ಆರಂಭಿಸಲಾಗುತ್ತದೆ’ ಎಂದರು.</p>.<p>ಇತರ ರಾಜ್ಯಗಳಲ್ಲಿ ನಡೆದ ಎಸ್ಐಆರ್ನಲ್ಲಿ ನಿರ್ದಿಷ್ಟ ಧಾರ್ಮಿಕ ಸಮುದಾಯವೊಂದರ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಅಂತಹ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಅನ್ಬುಕುಮಾರ್ ಉತ್ತರಿಸಿದರು.</p>.<p><strong>‘ವಿವರ ವ್ಯತ್ಯಾಸವಿದ್ದರೆ ನೋಟಿಸ್’</strong></p><p>l2025ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ‘ರಂಗಶಾಮಯ್ಯ ಎಂ.’<br>ಎಂದು ಇದ್ದು, 2002ರ ಮತದಾರರ ಪಟ್ಟಿಯಲ್ಲಿ ‘ರಂಗಶಾಮಯ್ಯ ಎಂ’ ಅಥವಾ ‘ಎಂ.ರಂಗಶಾಮಯ್ಯ’ ಎಂದಿದ್ದರೆ</p><p>l2025ರ ಮತದಾರರ ಪಟ್ಟಿಯಲ್ಲಿ ಮತದಾರ ಎಂ.ರಂಗಶಾಮಯ್ಯ ಅವರ ತಂದೆಯ ಹೆಸರು ‘ಜಿ.ಮಂಜಯ್ಯ’ ಎಂದು ಇದ್ದು, 2002ರ ಮತದಾರರ ಪಟ್ಟಿಯಲ್ಲಿ ‘ಮಂಜಯ್ಯ’ ಅಥವಾ ‘ಮಂಜಯ್ಯ.ಜಿ’ ಎಂದು ಇದ್ದರೆ. ತಾಯಿಯ ಹೆಸರಿನಲ್ಲೂ ಈ ರೀತಿಯ ವ್ಯತ್ಯಾಸವಿದ್ದರೂ ನೋಟಿಸ್</p><p>l2025ರ ಮತದಾರರ ಪಟ್ಟಿಯಲ್ಲಿ ಇರುವ ಜನ್ಮದಿನಾಂಕ ಮತ್ತು 2002ರ ಮತದಾರರ ಪಟ್ಟಿಯಲ್ಲಿ ಇರುವ ಜನ್ಮದಿನಾಂಕದಲ್ಲಿ ವ್ಯತ್ಯಾಸವಿದ್ದರೆ</p><p>l2025ರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದು, 2002ರಲ್ಲಿ ಅವರದ್ದಾಗಲೀ ಅವರ ಪೋಷಕರದ್ದಾಗಲಿ ಹೆಸರು ಇಲ್ಲದೇ ಇದ್ದ ಸಂದರ್ಭದಲ್ಲೂ ನೋಟಿಸ್ ನೀಡಲಾಗುತ್ತದೆ</p><p><strong>ಗಣತಿ ನಮೂನೆ: ಏನು, ಎತ್ತ...</strong></p><p>2025ರ ಮತದಾರರ ಪಟ್ಟಿಯಲ್ಲಿ ಇರುವ 5.55 ಕೋಟಿ ಮತದಾರರಿಗೂ ಪ್ರತ್ಯೇಕ ಗಣತಿ ನಮೂನೆಯನ್ನು (Enumeration Form) ಸೃಜಿಸಲಾಗುತ್ತದೆ. 2025ರ ಪಟ್ಟಿ ಮತ್ತು 2002ರ ಪಟ್ಟಿ ಎರಡರಲ್ಲೂ ಇರುವ ಮತದಾರರ ಭಾಗಶಃ ವಿವರಗಳು ಗಣತಿ ನಮೂನೆಯಲ್ಲಿ ಮುದ್ರಣವಾಗಿಯೇ ಬಂದಿರುತ್ತದೆ. 2025ರ ಪಟ್ಟಿಯಲ್ಲಿ ಇದ್ದು, 2002ರ ಪಟ್ಟಿಯಲ್ಲಿ ಪೋಷಕರ ವಿವರ ಇದ್ದವರ ಗಣತಿ ನಮೂನೆಯಲ್ಲಿ ಭಾಗಶಃ ವಿವರಗಳು ಮುದ್ರಣವಾಗಿರುತ್ತದೆ. ಜತೆಗೆ ಮತದಾರರ ಚಿತ್ರ ಮತ್ತು ಪ್ರತ್ಯೇಕ ಕ್ಯುಆರ್ ಕೋಡ್ ನಮೂನೆಯಲ್ಲಿ ಇರುತ್ತದೆ. ಆ ಕ್ಯುಆರ್ ಕೋಡ್ ಅನ್ನು ಬಿಎಲ್ಒಗಳು ತಮ್ಮ ಸ್ಮಾರ್ಟ್ಪೋನ್ನಲ್ಲಿರುವ ಬಿಎಲ್ಒ ಅಪ್ಲಿಕೇಷನ್ ಮೂಲಕ ಸ್ಕ್ಯಾನ್ ಮಾಡಿ, ಇತರ ವಿವರಗಳನ್ನು ಒದಗಿಸುತ್ತಾರೆ. ಆ ವಿವರಗಳನ್ನು ಮತದಾರರು ತುಂಬಬೇಕಾಗುತ್ತದೆ. </p><p><strong>ಅಸಂಗತ ವಿವರ</strong></p><p>ಮತದಾರರ ಪಟ್ಟಿಯಲ್ಲಿನ ವಿವರಗಳು ಅಸಂಗತವಾಗಿದ್ದರೆ, ಅಂತಹ ಮತದಾರರನ್ನು ‘logical discrepancy’ ಎಂದು ಪ್ರತ್ಯೇಕಿಸಲಾಗುತ್ತದೆ. ಮತದಾರರೊಬ್ಬರ ವಯಸ್ಸು ಮತ್ತು ಅವರ ತಂದೆ/ತಾಯಿಯ ವಯಸ್ಸಿನ ಅಂತರ<br>15 ವರ್ಷ ಎಂದಿದ್ದರೆ, ಪುರುಷ ಮತದಾರರ ಲಿಂಗ ಹೆಣ್ಣು ಎಂದಾಗಿದ್ದರೆ ಅಥವಾ ಮಹಿಳಾ ಮತದಾರರ ಲಿಂಗ ‘ಪುರುಷ’ ಎಂದಾಗಿದ್ದರೆ ಅವುಗಳನ್ನು ತಾರ್ಕಿಕವಾಗಿ ಅಸಂಗತ ಎಂದು ಪರಿಗಣಿಸಲಾಗುತ್ತದೆ. ಅಂತಹ ಮತದಾರರು ಅಗತ್ಯ ದಾಖಲೆಗಳನ್ನು ಒದಗಿಸಿ, ವಿವರಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಅನ್ಬುಕುಮಾರ್ ತಿಳಿಸಿದರು.</p>.<h2>ಯಾವೆಲ್ಲಾ ಗುರುತಿನ ಚೀಟಿ ಮಾನ್ಯ</h2><p>1. ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ಸರ್ಕಾರಿ ಉದ್ಯಮದ ಕಾಯಂ ಉದ್ಯೋಗಿ/ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಸಂದಾಯ ಪತ್ರ</p><p>2.ಭಾರತದಲ್ಲಿ 1987ಕ್ಕೂ ಮೊದಲು ಸರ್ಕಾರ/ಸ್ಥಳೀಯ ಪ್ರಾಧಿಕಾರಗಳು/ಬ್ಯಾಂಕುಗಳು/ಅಂಚೆ ಕಚೇರಿ/ಜೀವ ವಿಮಾ ನಿಗಮ/ಸರ್ಕಾರಿ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣಪತ್ರ/ ದಸ್ತಾವೇಜು</p><p>3. ಜನನ ಪ್ರಮಾಣಪತ್ರ</p><p>4. ಪಾಸ್ಪೋರ್ಟ್</p><p>5. ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯುಲೇಷನ್/ಶೈಕ್ಷಣಿಕ ಪ್ರಮಾಣಪತ್ರ</p><p>6. ರಾಜ್ಯ ಸರ್ಕಾರದ ಪ್ರಾಧಿಕಾರಗಳು ನೀಡಿರುವ ಕಾಯಂ ನಿವಾಸಿ ಪ್ರಮಾಣಪತ್ರ</p><p>7. ಅರಣ್ಯ ಹಕ್ಕು ಪ್ರಮಾಣಪತ್ರ</p><p>8. ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಯಾವುದೇ ಜಾತಿ ಪ್ರಮಾಣಪತ್ರಗಳು</p><p>9. ರಾಷ್ಟ್ರೀಯ ಪೌರತ್ವ ನೋಂದಣಿ ಚೀಟಿ (ಯಾವುದೇ ರಾಜ್ಯದಲ್ಲಿ ಇದ್ದರೂ ಮಾನ್ಯ)</p><p>10. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ನೋಂದಣಿ </p><p>11. ಜಮೀನು/ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರವು ನೀಡಿರುವ ಪ್ರಮಾಣ ಪತ್ರ/ಹಂಚಿಕೆ ಪತ್ರ</p><p>12. ಆಧಾರ್: (ಸುಪ್ರೀಂ ಕೋರ್ಟ್ನ ನಿರ್ದೇಶನ ಮತ್ತು ಆದೇಶದ ಅನ್ವಯ ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರವೇ ಪರಿಗಣಿಸಲಾಗುತ್ತದೆ. ಆಧಾರ್ ಅನ್ನು ಪೌರತ್ವ ಅಥವಾ ನಾಗರಿಕ ಪ್ರಮಾಣಪತ್ರವಾಗಿ ಪರಿಗಣಿಸುವುದಿಲ್ಲ)</p>.<div><blockquote>ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಪ್ರಾರಂಭಿಸಿದ್ದು, ರಾಜ್ಯ ಸರ್ಕಾರವೂ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ</blockquote><span class="attribution"> ಸಿದ್ದರಾಮಯ್ಯ, ಮುಖ್ಯಮಂತ್ರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಜೂನ್ 20ರಿಂದ ಆರಂಭವಾಗಲಿದೆ. ಒಬ್ಬ ಅರ್ಹ ಮತದಾರರೂ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಕಟ್ಟುನಿಟ್ಟಿನ ಪರಿಷ್ಕರಣೆ ನಡೆಸಲಾಗುತ್ತದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.</p>.<p>‘ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಒಟ್ಟು 59,050 ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ), 5,905 ಬಿಎಲ್ಒ ಮೇಲ್ವಿಚಾರಕರು, 336 ಸಹಾಯಕ ಮತದಾರರ ನೋಂದಣಾಧಿಕಾರಿ, 224 ಮತದಾರರ ನೋಂದಣಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಸ್ಐಆರ್ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ’ ಎಂದು ತಿಳಿಸಿದರು.</p>.<p>‘ಎಸ್ಐಆರ್ಗೆ ಪೂರ್ವ ತಯಾರಿಯಾಗಿ ಮತದಾರರ ವಿವರಗಳನ್ನು ಹೋಲಿಸಿ, ಖಚಿತಪಡಿಸಿಕೊಳ್ಳುವ (ಮ್ಯಾಪಿಂಗ್) ಕೆಲಸ ಶೇ 86.46ರಷ್ಟಾಗಿದೆ. 2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.55 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 4.80 ಕೋಟಿ ಮತದಾರರ ವಿವರಗಳನ್ನು 2002ರ ಮತದಾರರ ಪಟ್ಟಿ ಮತ್ತು ಪೋಷಕರ ಮತದಾರರ ಚೀಟಿ ವಿವರಗಳ ಜತೆಗೆ ಹೋಲಿಸಿ ನೋಡಿ ಖಚಿತಪಡಿಸಿಕೊಳ್ಳಲಾಗಿದೆ. ಎಸ್ಐಆರ್ ಆರಂಭವಾಗುವರೆಗೂ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರೆಯಲಿದೆ’ ಎಂದು ಅವರು ತಿಳಿಸಿದರು.</p>.<p>‘ಮ್ಯಾಪಿಂಗ್ ಪ್ರಕ್ರಿಯೆಯ ಆಧಾರದಲ್ಲಿ ರಾಜ್ಯದ ಎಲ್ಲ 5.55 ಕೋಟಿ ಮತದಾರರಿಗೂ ಗಣತಿ ನಮೂನೆಗಳನ್ನು (ಎನ್ಯುಮರೇಷನ್ ಅರ್ಜಿ) ಸೃಜಿಸಲಾಗುತ್ತದೆ. ಪ್ರತಿ ಮತದಾರರಿಗಾಗಿ ಎರಡು ಗಣತಿ ನಮೂನೆಗಳಂತೆ, ಒಟ್ಟು ಸುಮಾರು 11 ಕೋಟಿ ನಮೂನೆಗಳನ್ನು ಸೃಜಿಸಲಾಗುತ್ತದೆ. ಮತದಾರರು ಎರಡೂ ನಮೂನೆಗಳನ್ನು ಭರ್ತಿ ಮಾಡಿ, ಒಂದನ್ನು ಬಿಎಲ್ಒಗಳಿಗೆ ನೀಡಬೇಕು ಮತ್ತು ಇನ್ನೊಂದನ್ನು ತಮ್ಮ ಬಳಿಯೇ ಇರಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದರೆ, ಈ ಅರ್ಜಿಯ ಆಧಾರದಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ’ ಎಂದು ವಿವರಿಸಿದರು.</p>.<p>‘ಬಿಎಲ್ಒಗಳು ಗಣತಿ ನಮೂನೆಗಳನ್ನು ಪಡೆದುಕೊಂಡ ನಂತರ, ಅವುಗಳನ್ನು ಪರಿಶೀಲಿಸಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ವಿವರ ತಪ್ಪಾಗಿದ್ದರೆ, ಆಕ್ಷೇಪಣೆ ಸಲ್ಲಿಸಬಹುದು. ಅದನ್ನು ಪರಿಶೀಲಿಸಿ, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟುಹೋಗಿದ್ದರೆ ಮತದಾರರು ಜಿಲ್ಲಾಧಿಕಾರಿ ಹಂತದ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ನಂತರದ ಹಂತದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>‘ಗಣತಿ ನಮೂನೆ ಭರ್ತಿ ಮಾಡುವಲ್ಲಿ ಮತದಾರರಿಗೆ ನೆರವಾಗಲು ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮಪಂಚಾಯತಿ ಮಟ್ಟದಲ್ಲಿ ಶಿಬಿರಗಳನ್ನು ತೆರೆಯಲಾಗುತ್ತದೆ. ಜತೆಗೆ ಜಿಲ್ಲಾ ಹಂತದಲ್ಲಿ ಸಹಾಯವಾಣಿಯನ್ನೂ ಆರಂಭಿಸಲಾಗುತ್ತದೆ’ ಎಂದರು.</p>.<p>ಇತರ ರಾಜ್ಯಗಳಲ್ಲಿ ನಡೆದ ಎಸ್ಐಆರ್ನಲ್ಲಿ ನಿರ್ದಿಷ್ಟ ಧಾರ್ಮಿಕ ಸಮುದಾಯವೊಂದರ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಅಂತಹ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಅನ್ಬುಕುಮಾರ್ ಉತ್ತರಿಸಿದರು.</p>.<p><strong>‘ವಿವರ ವ್ಯತ್ಯಾಸವಿದ್ದರೆ ನೋಟಿಸ್’</strong></p><p>l2025ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ‘ರಂಗಶಾಮಯ್ಯ ಎಂ.’<br>ಎಂದು ಇದ್ದು, 2002ರ ಮತದಾರರ ಪಟ್ಟಿಯಲ್ಲಿ ‘ರಂಗಶಾಮಯ್ಯ ಎಂ’ ಅಥವಾ ‘ಎಂ.ರಂಗಶಾಮಯ್ಯ’ ಎಂದಿದ್ದರೆ</p><p>l2025ರ ಮತದಾರರ ಪಟ್ಟಿಯಲ್ಲಿ ಮತದಾರ ಎಂ.ರಂಗಶಾಮಯ್ಯ ಅವರ ತಂದೆಯ ಹೆಸರು ‘ಜಿ.ಮಂಜಯ್ಯ’ ಎಂದು ಇದ್ದು, 2002ರ ಮತದಾರರ ಪಟ್ಟಿಯಲ್ಲಿ ‘ಮಂಜಯ್ಯ’ ಅಥವಾ ‘ಮಂಜಯ್ಯ.ಜಿ’ ಎಂದು ಇದ್ದರೆ. ತಾಯಿಯ ಹೆಸರಿನಲ್ಲೂ ಈ ರೀತಿಯ ವ್ಯತ್ಯಾಸವಿದ್ದರೂ ನೋಟಿಸ್</p><p>l2025ರ ಮತದಾರರ ಪಟ್ಟಿಯಲ್ಲಿ ಇರುವ ಜನ್ಮದಿನಾಂಕ ಮತ್ತು 2002ರ ಮತದಾರರ ಪಟ್ಟಿಯಲ್ಲಿ ಇರುವ ಜನ್ಮದಿನಾಂಕದಲ್ಲಿ ವ್ಯತ್ಯಾಸವಿದ್ದರೆ</p><p>l2025ರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದು, 2002ರಲ್ಲಿ ಅವರದ್ದಾಗಲೀ ಅವರ ಪೋಷಕರದ್ದಾಗಲಿ ಹೆಸರು ಇಲ್ಲದೇ ಇದ್ದ ಸಂದರ್ಭದಲ್ಲೂ ನೋಟಿಸ್ ನೀಡಲಾಗುತ್ತದೆ</p><p><strong>ಗಣತಿ ನಮೂನೆ: ಏನು, ಎತ್ತ...</strong></p><p>2025ರ ಮತದಾರರ ಪಟ್ಟಿಯಲ್ಲಿ ಇರುವ 5.55 ಕೋಟಿ ಮತದಾರರಿಗೂ ಪ್ರತ್ಯೇಕ ಗಣತಿ ನಮೂನೆಯನ್ನು (Enumeration Form) ಸೃಜಿಸಲಾಗುತ್ತದೆ. 2025ರ ಪಟ್ಟಿ ಮತ್ತು 2002ರ ಪಟ್ಟಿ ಎರಡರಲ್ಲೂ ಇರುವ ಮತದಾರರ ಭಾಗಶಃ ವಿವರಗಳು ಗಣತಿ ನಮೂನೆಯಲ್ಲಿ ಮುದ್ರಣವಾಗಿಯೇ ಬಂದಿರುತ್ತದೆ. 2025ರ ಪಟ್ಟಿಯಲ್ಲಿ ಇದ್ದು, 2002ರ ಪಟ್ಟಿಯಲ್ಲಿ ಪೋಷಕರ ವಿವರ ಇದ್ದವರ ಗಣತಿ ನಮೂನೆಯಲ್ಲಿ ಭಾಗಶಃ ವಿವರಗಳು ಮುದ್ರಣವಾಗಿರುತ್ತದೆ. ಜತೆಗೆ ಮತದಾರರ ಚಿತ್ರ ಮತ್ತು ಪ್ರತ್ಯೇಕ ಕ್ಯುಆರ್ ಕೋಡ್ ನಮೂನೆಯಲ್ಲಿ ಇರುತ್ತದೆ. ಆ ಕ್ಯುಆರ್ ಕೋಡ್ ಅನ್ನು ಬಿಎಲ್ಒಗಳು ತಮ್ಮ ಸ್ಮಾರ್ಟ್ಪೋನ್ನಲ್ಲಿರುವ ಬಿಎಲ್ಒ ಅಪ್ಲಿಕೇಷನ್ ಮೂಲಕ ಸ್ಕ್ಯಾನ್ ಮಾಡಿ, ಇತರ ವಿವರಗಳನ್ನು ಒದಗಿಸುತ್ತಾರೆ. ಆ ವಿವರಗಳನ್ನು ಮತದಾರರು ತುಂಬಬೇಕಾಗುತ್ತದೆ. </p><p><strong>ಅಸಂಗತ ವಿವರ</strong></p><p>ಮತದಾರರ ಪಟ್ಟಿಯಲ್ಲಿನ ವಿವರಗಳು ಅಸಂಗತವಾಗಿದ್ದರೆ, ಅಂತಹ ಮತದಾರರನ್ನು ‘logical discrepancy’ ಎಂದು ಪ್ರತ್ಯೇಕಿಸಲಾಗುತ್ತದೆ. ಮತದಾರರೊಬ್ಬರ ವಯಸ್ಸು ಮತ್ತು ಅವರ ತಂದೆ/ತಾಯಿಯ ವಯಸ್ಸಿನ ಅಂತರ<br>15 ವರ್ಷ ಎಂದಿದ್ದರೆ, ಪುರುಷ ಮತದಾರರ ಲಿಂಗ ಹೆಣ್ಣು ಎಂದಾಗಿದ್ದರೆ ಅಥವಾ ಮಹಿಳಾ ಮತದಾರರ ಲಿಂಗ ‘ಪುರುಷ’ ಎಂದಾಗಿದ್ದರೆ ಅವುಗಳನ್ನು ತಾರ್ಕಿಕವಾಗಿ ಅಸಂಗತ ಎಂದು ಪರಿಗಣಿಸಲಾಗುತ್ತದೆ. ಅಂತಹ ಮತದಾರರು ಅಗತ್ಯ ದಾಖಲೆಗಳನ್ನು ಒದಗಿಸಿ, ವಿವರಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಅನ್ಬುಕುಮಾರ್ ತಿಳಿಸಿದರು.</p>.<h2>ಯಾವೆಲ್ಲಾ ಗುರುತಿನ ಚೀಟಿ ಮಾನ್ಯ</h2><p>1. ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ಸರ್ಕಾರಿ ಉದ್ಯಮದ ಕಾಯಂ ಉದ್ಯೋಗಿ/ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಸಂದಾಯ ಪತ್ರ</p><p>2.ಭಾರತದಲ್ಲಿ 1987ಕ್ಕೂ ಮೊದಲು ಸರ್ಕಾರ/ಸ್ಥಳೀಯ ಪ್ರಾಧಿಕಾರಗಳು/ಬ್ಯಾಂಕುಗಳು/ಅಂಚೆ ಕಚೇರಿ/ಜೀವ ವಿಮಾ ನಿಗಮ/ಸರ್ಕಾರಿ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣಪತ್ರ/ ದಸ್ತಾವೇಜು</p><p>3. ಜನನ ಪ್ರಮಾಣಪತ್ರ</p><p>4. ಪಾಸ್ಪೋರ್ಟ್</p><p>5. ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯುಲೇಷನ್/ಶೈಕ್ಷಣಿಕ ಪ್ರಮಾಣಪತ್ರ</p><p>6. ರಾಜ್ಯ ಸರ್ಕಾರದ ಪ್ರಾಧಿಕಾರಗಳು ನೀಡಿರುವ ಕಾಯಂ ನಿವಾಸಿ ಪ್ರಮಾಣಪತ್ರ</p><p>7. ಅರಣ್ಯ ಹಕ್ಕು ಪ್ರಮಾಣಪತ್ರ</p><p>8. ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಯಾವುದೇ ಜಾತಿ ಪ್ರಮಾಣಪತ್ರಗಳು</p><p>9. ರಾಷ್ಟ್ರೀಯ ಪೌರತ್ವ ನೋಂದಣಿ ಚೀಟಿ (ಯಾವುದೇ ರಾಜ್ಯದಲ್ಲಿ ಇದ್ದರೂ ಮಾನ್ಯ)</p><p>10. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ನೋಂದಣಿ </p><p>11. ಜಮೀನು/ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರವು ನೀಡಿರುವ ಪ್ರಮಾಣ ಪತ್ರ/ಹಂಚಿಕೆ ಪತ್ರ</p><p>12. ಆಧಾರ್: (ಸುಪ್ರೀಂ ಕೋರ್ಟ್ನ ನಿರ್ದೇಶನ ಮತ್ತು ಆದೇಶದ ಅನ್ವಯ ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರವೇ ಪರಿಗಣಿಸಲಾಗುತ್ತದೆ. ಆಧಾರ್ ಅನ್ನು ಪೌರತ್ವ ಅಥವಾ ನಾಗರಿಕ ಪ್ರಮಾಣಪತ್ರವಾಗಿ ಪರಿಗಣಿಸುವುದಿಲ್ಲ)</p>.<div><blockquote>ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಪ್ರಾರಂಭಿಸಿದ್ದು, ರಾಜ್ಯ ಸರ್ಕಾರವೂ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ</blockquote><span class="attribution"> ಸಿದ್ದರಾಮಯ್ಯ, ಮುಖ್ಯಮಂತ್ರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>