<p><strong>ಬೆಂಗಳೂರು:</strong> ಐದು ನಗರ ಪಾಲಿಕೆಗಳ ಬಜೆಟ್ಗೆ ಅನುಮೋದನೆ ನೀಡುವ ಜೊತೆಗೆ, ರಾಜ್ಯದಾದ್ಯಂತ ನಡೆಯುವ ಕೆಂಪೇಗೌಡ ಜಯಂತಿ ಆಚರಣೆ, ಭವನ ನಿರ್ಮಾಣ, ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಪ್ರಾಧಿಕಾರಕ್ಕೆ ಹಣ ನೀಡುವಂತೆ ಸರ್ಕಾರ ಸೂಚಿಸಿದೆ.</p>.<p>ರಾಜ್ಯ ಎಲ್ಲ ತಾಲ್ಲೂಕುಗಳಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ, ಬೆಂಗಳೂರು ವಕೀಲರ ಸಂಘದ ಭವನ ನಿರ್ವಹಣೆ, ತುಮಕೂರು, ಮಾಗಡಿಯಲ್ಲಿ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ನಗರ ಪಾಲಿಕೆಗಳು ಹಣ ನೀಡಬೇಕೆಂದು ಮೊತ್ತವನ್ನು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.</p>.<p>ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುವ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯ ₹3 ಸಾವಿರ ಕೋಟಿ ಅನುದಾನದಲ್ಲಿ, ₹2,199 ಕೋಟಿಯನ್ನು ಐದು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿದ್ದು, ಉಳಿದ ಹಣದಲ್ಲಿ, ₹600 ಕೋಟಿಯನ್ನು ಬಿ–ಸ್ಮೈಲ್ ಸಂಸ್ಥೆಗೆ ಹಾಗೂ ಬಿಎಸ್ಡಬ್ಲ್ಯುಎಂಎಲ್ಗೆ ₹200.01 ಕೋಟಿಯನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಹಣಕಾಸು ಆಯೋಗದ ₹250 ಕೋಟಿ ವಿಶೇಷ ಅನುದಾನವನ್ನು ನಾಲ್ಕು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.</p>.<p>ಐದು ನಗರ ಪಾಲಿಕೆಗಳ ಪರವಾಗಿ ಬಿ–ಸ್ಮೈಲ್ ವತಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ವಿಳಂಬ ಮಾಡದೆ, ವಾಸ್ತವಿಕ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೂ (ಬಿಎಸ್ಡಬ್ಲ್ಯುಎಂಎಲ್) ಅನುದಾನವನ್ನು ಪ್ರತಿ ತಿಂಗಳು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ.</p>.<p><strong>ವಾರ್ಡ್ಗೆ ₹2.5 ಲಕ್ಷ:</strong> ಐದು ನಗರ ಪಾಲಿಕೆಗಳು ಪ್ರತಿ ವಾರ್ಡ್ಗಳ ನಿರ್ವಹಣೆಗೆ ತಲಾ ₹5 ಲಕ್ಷವನ್ನು ಬಜೆಟ್ನಲ್ಲಿ ಮೀಸಲಿರಿಸಿದ್ದವು. ಅದನ್ನು ಪರಿಷ್ಕರಿಸಿರುವ ನಗರಾಭಿವೃದ್ಧಿ ಇಲಾಖೆ, ಪ್ರತಿ ವಾರ್ಡ್ಗೆ ₹2.5 ಲಕ್ಷಕ್ಕೆ ಮಿತಿಗೊಳಿಸಿದೆ.</p>.<p>ಬಿಬಿಎಂಪಿ ಅವಧಿಯಲ್ಲಿ ಉಸ್ತುವಾರಿ ಸಚಿವರ ವಿವೇಚನಾ ನಿಧಿಯಡಿ ₹360 ಕೋಟಿ ನಿಗದಿಪಡಿಸಲಾಗಿತ್ತು. ಈ ಅನುದಾನದಲ್ಲಿ ₹298.40 ಕೋಟಿಯನ್ನು ಬಿಎಸ್ಡಬ್ಲ್ಯುಎಂಎಲ್ಗೆ ಹಂಚಿಕೆ ಮಾಡಿ, ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿತ್ತು. ಈ ಕಾಮಗಾರಿಗಳಿಗೆ ಈ ಸಾಲಿನಲ್ಲಿ ಪ್ರತಿ ನಗರ ಪಾಲಿಕೆ ₹59.68 ಕೋಟಿಯನ್ನು ಪ್ರತ್ಯೇಕವಾಗಿ ಬಿಎಸ್ಡಬ್ಲ್ಯುಎಂಎಲ್ಗೆ ಬಿಡುಗಡೆ ಮಾಡಬೇಕು.</p>.<p>ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಪಾವತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಗರ ಪಾಲಿಕೆಗಳು ಬಜೆಟ್ನಲ್ಲಿ ತಲಾ ₹85 ಕೋಟಿ ಮೀಸಲಿರಿಸಿದ್ದವು. ಈ ಮೊತ್ತವನ್ನು ₹75 ಕೋಟಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಐದು ನಗರ ಪಾಲಿಕೆಗಳ ಬಜೆಟ್ಗೆ ಅನುಮೋದನೆ ನೀಡುವ ಜೊತೆಗೆ, ರಾಜ್ಯದಾದ್ಯಂತ ನಡೆಯುವ ಕೆಂಪೇಗೌಡ ಜಯಂತಿ ಆಚರಣೆ, ಭವನ ನಿರ್ಮಾಣ, ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಪ್ರಾಧಿಕಾರಕ್ಕೆ ಹಣ ನೀಡುವಂತೆ ಸರ್ಕಾರ ಸೂಚಿಸಿದೆ.</p>.<p>ರಾಜ್ಯ ಎಲ್ಲ ತಾಲ್ಲೂಕುಗಳಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ, ಬೆಂಗಳೂರು ವಕೀಲರ ಸಂಘದ ಭವನ ನಿರ್ವಹಣೆ, ತುಮಕೂರು, ಮಾಗಡಿಯಲ್ಲಿ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ನಗರ ಪಾಲಿಕೆಗಳು ಹಣ ನೀಡಬೇಕೆಂದು ಮೊತ್ತವನ್ನು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.</p>.<p>ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುವ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯ ₹3 ಸಾವಿರ ಕೋಟಿ ಅನುದಾನದಲ್ಲಿ, ₹2,199 ಕೋಟಿಯನ್ನು ಐದು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿದ್ದು, ಉಳಿದ ಹಣದಲ್ಲಿ, ₹600 ಕೋಟಿಯನ್ನು ಬಿ–ಸ್ಮೈಲ್ ಸಂಸ್ಥೆಗೆ ಹಾಗೂ ಬಿಎಸ್ಡಬ್ಲ್ಯುಎಂಎಲ್ಗೆ ₹200.01 ಕೋಟಿಯನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಹಣಕಾಸು ಆಯೋಗದ ₹250 ಕೋಟಿ ವಿಶೇಷ ಅನುದಾನವನ್ನು ನಾಲ್ಕು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.</p>.<p>ಐದು ನಗರ ಪಾಲಿಕೆಗಳ ಪರವಾಗಿ ಬಿ–ಸ್ಮೈಲ್ ವತಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ವಿಳಂಬ ಮಾಡದೆ, ವಾಸ್ತವಿಕ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೂ (ಬಿಎಸ್ಡಬ್ಲ್ಯುಎಂಎಲ್) ಅನುದಾನವನ್ನು ಪ್ರತಿ ತಿಂಗಳು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ.</p>.<p><strong>ವಾರ್ಡ್ಗೆ ₹2.5 ಲಕ್ಷ:</strong> ಐದು ನಗರ ಪಾಲಿಕೆಗಳು ಪ್ರತಿ ವಾರ್ಡ್ಗಳ ನಿರ್ವಹಣೆಗೆ ತಲಾ ₹5 ಲಕ್ಷವನ್ನು ಬಜೆಟ್ನಲ್ಲಿ ಮೀಸಲಿರಿಸಿದ್ದವು. ಅದನ್ನು ಪರಿಷ್ಕರಿಸಿರುವ ನಗರಾಭಿವೃದ್ಧಿ ಇಲಾಖೆ, ಪ್ರತಿ ವಾರ್ಡ್ಗೆ ₹2.5 ಲಕ್ಷಕ್ಕೆ ಮಿತಿಗೊಳಿಸಿದೆ.</p>.<p>ಬಿಬಿಎಂಪಿ ಅವಧಿಯಲ್ಲಿ ಉಸ್ತುವಾರಿ ಸಚಿವರ ವಿವೇಚನಾ ನಿಧಿಯಡಿ ₹360 ಕೋಟಿ ನಿಗದಿಪಡಿಸಲಾಗಿತ್ತು. ಈ ಅನುದಾನದಲ್ಲಿ ₹298.40 ಕೋಟಿಯನ್ನು ಬಿಎಸ್ಡಬ್ಲ್ಯುಎಂಎಲ್ಗೆ ಹಂಚಿಕೆ ಮಾಡಿ, ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿತ್ತು. ಈ ಕಾಮಗಾರಿಗಳಿಗೆ ಈ ಸಾಲಿನಲ್ಲಿ ಪ್ರತಿ ನಗರ ಪಾಲಿಕೆ ₹59.68 ಕೋಟಿಯನ್ನು ಪ್ರತ್ಯೇಕವಾಗಿ ಬಿಎಸ್ಡಬ್ಲ್ಯುಎಂಎಲ್ಗೆ ಬಿಡುಗಡೆ ಮಾಡಬೇಕು.</p>.<p>ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಪಾವತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಗರ ಪಾಲಿಕೆಗಳು ಬಜೆಟ್ನಲ್ಲಿ ತಲಾ ₹85 ಕೋಟಿ ಮೀಸಲಿರಿಸಿದ್ದವು. ಈ ಮೊತ್ತವನ್ನು ₹75 ಕೋಟಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>