<p><strong>ಸಾಗರ (ಶಿವಮೊಗ್ಗ):</strong> ತಾಲ್ಲೂಕಿನ ತುಮರಿ ಗ್ರಾಮದ ಹಾ.ಮ.ಭಟ್ಟ ಅವರ ಅಳಿಯ, ಕವಯತ್ರಿ ಹಾ.ಮ.ಕನಕ ಅವರ ಪತಿ ಪಿ.ಸಿ.ವಿಷ್ಣುನಾಥ್ ಕೇರಳ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ 4ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.</p><p>ಎಐಸಿಸಿ ಕಾರ್ಯದರ್ಶಿಯೂ ಆಗಿರುವ ವಿಷ್ಣುನಾಥ್ ಈ ಬಾರಿ ಕೇರಳದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿದ್ದರು. </p><p>ಕೇರಳದ ನೂತನ ಸಚಿವ ಸಂಪುಟದಲ್ಲಿ ವಿಷ್ಣುನಾಥ್ ಅವರಿಗೆ ಪ್ರಮುಖ ಸ್ಥಾನ ದೊರಕುವ ನಿರೀಕ್ಷೆ ಇದೆ.</p><p>ಹಾ.ಮ.ಭಟ್ಟರ ನೆನಪಿನಲ್ಲಿ ಅವರ ಪುತ್ರ ರಘು ಹಲ್ಕರೆ ಮತ್ತು ಅವರ ಕುಟುಂಬದವರು ಪ್ರತಿ ವರ್ಷ ತುಮರಿಯಲ್ಲಿ ಸಾಹಿತೋತ್ಸವ ಸಂಘಟಿಸುತ್ತಾರೆ. ಕಳೆದ ವರ್ಷ ಈ ಉತ್ಸವಕ್ಕೆ ವಿಷ್ಣುನಾಥ್ ಬಂದಿದ್ದರು. ಸರಳ ಸ್ವಭಾವದ ಸಜ್ಜನಿಕೆಯ ವ್ಯಕ್ತಿತ್ವದ ರಾಜಕಾರಣಿ ಎಂದೇ ಅವರು ಹೆಸರಾಗಿದ್ದಾರೆ.</p><p>ವಿಷ್ಣುನಾಥ್ ತಮ್ಮ 26ನೇ ವಯಸ್ಸಿನಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದಾಗ ಕೇರಳ ಯೂತ್ ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಮೊದಲ ಬಾರಿಗೆ ಚುನಾವಣೆ ಮೂಲಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಹೆಗ್ಗಳಿಕೆ ಅವರದ್ದು. ನಂತರ ಕೇರಳ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.</p><p><strong>ನಮ್ಮದು ಪ್ರೇಮ ವಿವಾಹ- ಹ.ಮ.ಕನಕ:</strong> </p><p>2005 ರಲ್ಲಿ ಗುಜರಾತ್ ನಲ್ಲಿ ಗಾಂಧಿ ಪೌಂಡೇಷನ್ ಆಯೋಜಿಸಿದ್ದ ಗಾಂಧೀಜಿಯ ದಂಡಿ ಯಾತ್ರೆಯ 75 ನೇ ವರ್ಷದ ಆಚರಣೆ ಕಾರ್ಯಕ್ರಮ ದಲ್ಲಿ ಮೊದಲ ಬಾರಿ ವಿಷ್ಣುನಾಥ್ ಅವರನ್ನು ಭೇಟಿಯಾದೆ.ಈ ಪರಿಚಯ ನಂತರ ಪ್ರೇಮಕ್ಕೆ ತಿರುಗಿ 2007 ರಲ್ಲಿ ನಾವು ಕೇರಳದ ಗುರುವಾಯೂರಿನಲ್ಲಿ ಮದುವೆಯಾದೆವು ಎಂದು ಅಂದಿನ ದಿನಗಳನ್ನು ಹಾ.ಮ.ಕನಕ ನೆನಪಿಸಿಕೊಳ್ಳುತ್ತಾರೆ.</p><p>'ನಿನ್ನೆಲ್ಲ ಬಯಕೆಗಳನ್ನು ಬದಿಗಿಡು' ಇದು ಮದುವೆಗೆ ಮುನ್ನ ವಿಷ್ಣು ನನಗೆ ಹೇಳಿದ ಮಾತು. ಇಂದಿಗೂ ನಾವು ತಿರುವನಂತಪುರದಲ್ಲಿ ಬಾಡಿಗೆ ಮನೆಯಲ್ಲೆ ಇದ್ದೇವೆ ಎನ್ನುತ್ತಾರೆ ಹಾ.ಮ.ಕನಕ.</p>.Kerala Results: ಯುಡಿಎಫ್ ಅಭೂತಪೂರ್ವ ಸಾಧನೆ, ಯಾರಾಗಲಿದ್ದಾರೆ ಕೇರಳ ಸಿಎಂ?.Kerala Results: ಕೇರಳದಲ್ಲಿ ಬಿಜೆಪಿ ದಾಖಲೆ, ಮೂರು ಕ್ಷೇತ್ರಗಳಲ್ಲಿ ಅರಳಿದ ಕಮಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ (ಶಿವಮೊಗ್ಗ):</strong> ತಾಲ್ಲೂಕಿನ ತುಮರಿ ಗ್ರಾಮದ ಹಾ.ಮ.ಭಟ್ಟ ಅವರ ಅಳಿಯ, ಕವಯತ್ರಿ ಹಾ.ಮ.ಕನಕ ಅವರ ಪತಿ ಪಿ.ಸಿ.ವಿಷ್ಣುನಾಥ್ ಕೇರಳ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ 4ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.</p><p>ಎಐಸಿಸಿ ಕಾರ್ಯದರ್ಶಿಯೂ ಆಗಿರುವ ವಿಷ್ಣುನಾಥ್ ಈ ಬಾರಿ ಕೇರಳದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿದ್ದರು. </p><p>ಕೇರಳದ ನೂತನ ಸಚಿವ ಸಂಪುಟದಲ್ಲಿ ವಿಷ್ಣುನಾಥ್ ಅವರಿಗೆ ಪ್ರಮುಖ ಸ್ಥಾನ ದೊರಕುವ ನಿರೀಕ್ಷೆ ಇದೆ.</p><p>ಹಾ.ಮ.ಭಟ್ಟರ ನೆನಪಿನಲ್ಲಿ ಅವರ ಪುತ್ರ ರಘು ಹಲ್ಕರೆ ಮತ್ತು ಅವರ ಕುಟುಂಬದವರು ಪ್ರತಿ ವರ್ಷ ತುಮರಿಯಲ್ಲಿ ಸಾಹಿತೋತ್ಸವ ಸಂಘಟಿಸುತ್ತಾರೆ. ಕಳೆದ ವರ್ಷ ಈ ಉತ್ಸವಕ್ಕೆ ವಿಷ್ಣುನಾಥ್ ಬಂದಿದ್ದರು. ಸರಳ ಸ್ವಭಾವದ ಸಜ್ಜನಿಕೆಯ ವ್ಯಕ್ತಿತ್ವದ ರಾಜಕಾರಣಿ ಎಂದೇ ಅವರು ಹೆಸರಾಗಿದ್ದಾರೆ.</p><p>ವಿಷ್ಣುನಾಥ್ ತಮ್ಮ 26ನೇ ವಯಸ್ಸಿನಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದಾಗ ಕೇರಳ ಯೂತ್ ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಮೊದಲ ಬಾರಿಗೆ ಚುನಾವಣೆ ಮೂಲಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಹೆಗ್ಗಳಿಕೆ ಅವರದ್ದು. ನಂತರ ಕೇರಳ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.</p><p><strong>ನಮ್ಮದು ಪ್ರೇಮ ವಿವಾಹ- ಹ.ಮ.ಕನಕ:</strong> </p><p>2005 ರಲ್ಲಿ ಗುಜರಾತ್ ನಲ್ಲಿ ಗಾಂಧಿ ಪೌಂಡೇಷನ್ ಆಯೋಜಿಸಿದ್ದ ಗಾಂಧೀಜಿಯ ದಂಡಿ ಯಾತ್ರೆಯ 75 ನೇ ವರ್ಷದ ಆಚರಣೆ ಕಾರ್ಯಕ್ರಮ ದಲ್ಲಿ ಮೊದಲ ಬಾರಿ ವಿಷ್ಣುನಾಥ್ ಅವರನ್ನು ಭೇಟಿಯಾದೆ.ಈ ಪರಿಚಯ ನಂತರ ಪ್ರೇಮಕ್ಕೆ ತಿರುಗಿ 2007 ರಲ್ಲಿ ನಾವು ಕೇರಳದ ಗುರುವಾಯೂರಿನಲ್ಲಿ ಮದುವೆಯಾದೆವು ಎಂದು ಅಂದಿನ ದಿನಗಳನ್ನು ಹಾ.ಮ.ಕನಕ ನೆನಪಿಸಿಕೊಳ್ಳುತ್ತಾರೆ.</p><p>'ನಿನ್ನೆಲ್ಲ ಬಯಕೆಗಳನ್ನು ಬದಿಗಿಡು' ಇದು ಮದುವೆಗೆ ಮುನ್ನ ವಿಷ್ಣು ನನಗೆ ಹೇಳಿದ ಮಾತು. ಇಂದಿಗೂ ನಾವು ತಿರುವನಂತಪುರದಲ್ಲಿ ಬಾಡಿಗೆ ಮನೆಯಲ್ಲೆ ಇದ್ದೇವೆ ಎನ್ನುತ್ತಾರೆ ಹಾ.ಮ.ಕನಕ.</p>.Kerala Results: ಯುಡಿಎಫ್ ಅಭೂತಪೂರ್ವ ಸಾಧನೆ, ಯಾರಾಗಲಿದ್ದಾರೆ ಕೇರಳ ಸಿಎಂ?.Kerala Results: ಕೇರಳದಲ್ಲಿ ಬಿಜೆಪಿ ದಾಖಲೆ, ಮೂರು ಕ್ಷೇತ್ರಗಳಲ್ಲಿ ಅರಳಿದ ಕಮಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>