<p><strong>ಬೆಂಗಳೂರು:</strong> ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಲಕ್ಷಾಂತರ ಬಡ ಮತ್ತು ಗ್ರಾಮಾಂತರ ಪ್ರದೇಶದ ಸರ್ಕಾರಿ ನೌಕರಿ ಆಕಾಂಕ್ಷಿಗಳ ಕನಸುಗಳನ್ನು ಕೊಲ್ಲುವ ಕೇಂದ್ರವಾಗಿದೆ’ ಎಂದು ಬಿಜೆಪಿಯ ವಿ.ಸುನಿಲ್ಕುಮಾರ್ ಕಿಡಿಕಾರಿದರು.</p>.<p>ಕೆಪಿಎಸ್ಸಿ ನೇಮಕಾತಿಯ ಬಗ್ಗೆ ಎದುರಾಗಿರುವ ಆರೋಪಗಳ ಕುರಿತು ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ, ಅಂಕಗಳ ಕ್ರೋಡೀಕರಣ ಮತ್ತು ಅರ್ಹತಾ ಪಟ್ಟಿಯ ಬಗ್ಗೆ ಸಾಕಷ್ಟು ಅನುಮಾನಗಳು ಎದ್ದಿವೆ. ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದೆ ಮತ್ತು ಕೋಟ್ಯಂತರ ರುಪಾಯಿ ಕೈಬದಲಾಗಿದೆ ಎಂದು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಇದರ ವಾಸ್ತವಾಂಶ ನಾಡಿನ ಜನರಿಗೆ ಗೊತ್ತಾಗಬೇಕು’ ಎಂದು ಹೇಳಿದರು.</p>.<p>‘ಒಂದೇ ಕೊಠಡಿಯಲ್ಲಿ 24 ಜನ ಪರೀಕ್ಷೆ ಬರೆದಿದ್ದು ಒಂದೇ ಸೀರಿಯಲ್ ಸಂಖ್ಯೆಯಲ್ಲಿದ್ದ 11 ಜನ ಉತ್ತೀರ್ಣರಾಗಿ, ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ನಾಲ್ಕು ಜನ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳ ಕುಟುಂಬಕ್ಕೆ ಸೇರಿದವರೂ ಇದ್ದಾರೆ. ಪರೀಕ್ಷಾ ಕೊಠಡಿಯನ್ನೇ ಮ್ಯಾನೇಜ್ ಮಾಡಿದ್ದಾರೆ ಎಂಬ ಆರೋಪ ಇದೆ’ ಎಂದರು.</p>.<p>‘ನಾಲ್ಕು ವರ್ಷದ ಅವಧಿಯಲ್ಲಿ 5ರಿಂದ 6 ಕಾರ್ಯದರ್ಶಿಗಳು ಬದಲಾಗಿದ್ದಾರೆ. ಆದರೆ, ಕಂಟ್ರೋಲರ್ ಮಾತ್ರ ಬದಲಾಗುತ್ತಿಲ್ಲ. ಬಹಳ ವರ್ಷಗಳಿಂದ ಒಬ್ಬರೇ ಇದ್ದಾರೆ. ಈ ವ್ಯಕ್ತಿಯ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಇವರು ಅಧ್ಯಕ್ಷ, ಕಾರ್ಯದರ್ಶಿಗಿಂತಲೂ ಮೇಲಾ? ಇವರನ್ನು ಏಕೆ ಬದಲಾಯಿಸುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.</p>.<p>‘ಸರ್ಕಾರಿ ನೌಕರಿ ಎಂದರೆ ಕೇವಲ ಪ್ರಭಾವಿಗಳು, ಉಳ್ಳವರಿಗೆ ಮಾತ್ರವೇ? ಹಳ್ಳಿಯವರಿಗೆ, ಬಡ ಜನರಿಗೆ ಸರ್ಕಾರಿ ನೌಕರಿ ಪಡೆಯಬಾರದು ಎಂಬುದು ಹುನ್ನಾರ ಏನಾದರೂ ಇದೆಯೇ? ಕೆಪಿಎಸ್ಸಿ ನಿಗೂಢವಾದ ಸಂಸ್ಥೆ, ಅಲ್ಲಿ ನಡೆಯುವ ಪರೀಕ್ಷೆ ರಹಸ್ಯಮಯ, ಫಲಿತಾಂಶ ಶಂಕಿತರೂಪದಲ್ಲಿದೆ. ಕೆಪಿಎಸ್ಸಿ ಕೆಲಸ ಗಿಟ್ಟಿಸಿದವರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ಉದ್ಭವವಾಗಿದೆ’ ಎಂದು ಸುನಿಲ್ ಕುಮಾರ್ ಹೇಳಿದರು.</p>.<p><strong>ಕೆಪಿಎಸ್ಸಿಯನ್ನೇ ರದ್ದು ಪಡಿಸಬೇಕು: ಪ್ರಿಯಾಂಕ್</strong> </p><p>‘ಕೆಪಿಎಸ್ಸಿಗೆ ಕಾನೂನಿನ ಭಯವಿಲ್ಲ. ಯಾವುದೇ ಹೊಣೆಗಾರಿಕೆಯೂ ಇಲ್ಲ. ಆ ಸಂಸ್ಥೆಯನ್ನೇ ರದ್ದು ಮಾಡಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು ‘ಕೆಪಿಎಸ್ಸಿಗೆ ಸಂಬಂಧಿಸಿದಂತೆ ಹಿಂದೆ ನಾನು ಖಾಸಗಿ ಮಸೂದೆ ಮಂಡಿಸಿದ್ದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದು ಕಾಯ್ದೆ ಆಯ್ತು. ಅದರ ಪ್ರಕಾರ ಅವ್ಯವಹಾರ ಎಸಗಿದವರಿಗೆ ₹10 ಕೋಟಿವರೆಗೆ ದಂಡ ಹಾಕಬಹುದು ಆಸ್ತಿ ಮುಟ್ಟುಗೋಲು ಹಾಕಬಹುದು. ಇಂತಹ ಕಠಿಣ ಕಾಯ್ದೆ ಇದ್ದರೂ ಅವರಿಗೆ ಭಯ ಇಲ್ಲ’ ಎಂದರು. </p>.<p><strong>ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?</strong> </p><p>‘ಕಠಿಣ ಕಾಯ್ದೆ ಇದ್ದರೂ ಕೆಪಿಎಸ್ಸಿ ಎಂಬ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ’ ಎಂದು ಬಿಜೆಪಿಯ ಎಸ್.ಸುರೇಶ್ಕುಮಾರ್ ಪ್ರಶ್ನಿಸಿದರು. ಕೆಪಿಎಸ್ಸಿಯಲ್ಲಿರುವ ಅಧ್ಯಕ್ಷ ಸದಸ್ಯರಿಗೆ ಪರೀಕ್ಷೆ ಬರೆಯುವ ಸಾಮಾನ್ಯ ಅಭ್ಯರ್ಥಿಗಳಿಗಿಂತ ತಮ್ಮ ಮಕ್ಕಳು ಮೊಮ್ಮಕ್ಕಳು ಸಂಬಂಧಿಕರ ಬಗ್ಗೆಯೇ ಚಿಂತೆ. ಹಿಂದೆ ತಾಳಿ ಭಾಗ್ಯ ಇತ್ತು. ಈಗ ಅಕ್ರಮದ ಸ್ವರೂಪ ಬದಲಾಗಿದೆ. ಉತ್ತಮವಾಗಿ ಕೆಲಸ ಮಾಡುವ ಕಾರ್ಯದರ್ಶಿಗಳನ್ನು ಅಲ್ಲಿ ಇರಲು ಬಿಡುವುದಿಲ್ಲ’ ಎಂದು ಹೇಳಿದರು. ಸರ್ಕಾರವು ಶಾಶ್ವತ ಪರೀಕ್ಷಾ ಮೌಲ್ಯ ಮಾಪಕರ ಮಂಡಳಿ ರಚಿಸಿ ಅದರ ಮೂಲಕ ಮೌಲ್ಯ ಮಾಪಕರನ್ನು ಬಳಸಿಕೊಳ್ಳಬೇಕು ಎಂದು ಹೇಳಿದ ಅವರು ಕೆಪಿಎಸ್ಸಿಯ ಶುದ್ಧೀಕರಣ ಆಗಬೇಕು. ಇದಕ್ಕಾಗಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.</p>.<p> <strong>ಕೋಚಿಂಗ್ನಲ್ಲಿ ತಾರತಮ್ಯ ಬೇಡ: ಅಶೋಕ</strong> </p><p>ಕಲಬುರಗಿಯಲ್ಲಿ ಐಎಎಸ್–ಕೆಎಎಸ್ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಎಸ್ಸಿ–ಎಸ್ಟಿ ಸಮುದಾಯದವರಿಗೆ ಶಿಷ್ಯ ವೇತನ ನೀಡುತ್ತಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ವಸತಿ ಸಹಿತ ಶಿಷ್ಯ ವೇತನ ನೀಡಲಾಗುತ್ತದೆ. ಈ ತಾರತಮ್ಯ ನಿಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು. ಈ ಗೊಂದಲ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಲಕ್ಷಾಂತರ ಬಡ ಮತ್ತು ಗ್ರಾಮಾಂತರ ಪ್ರದೇಶದ ಸರ್ಕಾರಿ ನೌಕರಿ ಆಕಾಂಕ್ಷಿಗಳ ಕನಸುಗಳನ್ನು ಕೊಲ್ಲುವ ಕೇಂದ್ರವಾಗಿದೆ’ ಎಂದು ಬಿಜೆಪಿಯ ವಿ.ಸುನಿಲ್ಕುಮಾರ್ ಕಿಡಿಕಾರಿದರು.</p>.<p>ಕೆಪಿಎಸ್ಸಿ ನೇಮಕಾತಿಯ ಬಗ್ಗೆ ಎದುರಾಗಿರುವ ಆರೋಪಗಳ ಕುರಿತು ವಿಧಾನಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ, ಅಂಕಗಳ ಕ್ರೋಡೀಕರಣ ಮತ್ತು ಅರ್ಹತಾ ಪಟ್ಟಿಯ ಬಗ್ಗೆ ಸಾಕಷ್ಟು ಅನುಮಾನಗಳು ಎದ್ದಿವೆ. ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದೆ ಮತ್ತು ಕೋಟ್ಯಂತರ ರುಪಾಯಿ ಕೈಬದಲಾಗಿದೆ ಎಂದು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಇದರ ವಾಸ್ತವಾಂಶ ನಾಡಿನ ಜನರಿಗೆ ಗೊತ್ತಾಗಬೇಕು’ ಎಂದು ಹೇಳಿದರು.</p>.<p>‘ಒಂದೇ ಕೊಠಡಿಯಲ್ಲಿ 24 ಜನ ಪರೀಕ್ಷೆ ಬರೆದಿದ್ದು ಒಂದೇ ಸೀರಿಯಲ್ ಸಂಖ್ಯೆಯಲ್ಲಿದ್ದ 11 ಜನ ಉತ್ತೀರ್ಣರಾಗಿ, ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ನಾಲ್ಕು ಜನ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳ ಕುಟುಂಬಕ್ಕೆ ಸೇರಿದವರೂ ಇದ್ದಾರೆ. ಪರೀಕ್ಷಾ ಕೊಠಡಿಯನ್ನೇ ಮ್ಯಾನೇಜ್ ಮಾಡಿದ್ದಾರೆ ಎಂಬ ಆರೋಪ ಇದೆ’ ಎಂದರು.</p>.<p>‘ನಾಲ್ಕು ವರ್ಷದ ಅವಧಿಯಲ್ಲಿ 5ರಿಂದ 6 ಕಾರ್ಯದರ್ಶಿಗಳು ಬದಲಾಗಿದ್ದಾರೆ. ಆದರೆ, ಕಂಟ್ರೋಲರ್ ಮಾತ್ರ ಬದಲಾಗುತ್ತಿಲ್ಲ. ಬಹಳ ವರ್ಷಗಳಿಂದ ಒಬ್ಬರೇ ಇದ್ದಾರೆ. ಈ ವ್ಯಕ್ತಿಯ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಇವರು ಅಧ್ಯಕ್ಷ, ಕಾರ್ಯದರ್ಶಿಗಿಂತಲೂ ಮೇಲಾ? ಇವರನ್ನು ಏಕೆ ಬದಲಾಯಿಸುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.</p>.<p>‘ಸರ್ಕಾರಿ ನೌಕರಿ ಎಂದರೆ ಕೇವಲ ಪ್ರಭಾವಿಗಳು, ಉಳ್ಳವರಿಗೆ ಮಾತ್ರವೇ? ಹಳ್ಳಿಯವರಿಗೆ, ಬಡ ಜನರಿಗೆ ಸರ್ಕಾರಿ ನೌಕರಿ ಪಡೆಯಬಾರದು ಎಂಬುದು ಹುನ್ನಾರ ಏನಾದರೂ ಇದೆಯೇ? ಕೆಪಿಎಸ್ಸಿ ನಿಗೂಢವಾದ ಸಂಸ್ಥೆ, ಅಲ್ಲಿ ನಡೆಯುವ ಪರೀಕ್ಷೆ ರಹಸ್ಯಮಯ, ಫಲಿತಾಂಶ ಶಂಕಿತರೂಪದಲ್ಲಿದೆ. ಕೆಪಿಎಸ್ಸಿ ಕೆಲಸ ಗಿಟ್ಟಿಸಿದವರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ಉದ್ಭವವಾಗಿದೆ’ ಎಂದು ಸುನಿಲ್ ಕುಮಾರ್ ಹೇಳಿದರು.</p>.<p><strong>ಕೆಪಿಎಸ್ಸಿಯನ್ನೇ ರದ್ದು ಪಡಿಸಬೇಕು: ಪ್ರಿಯಾಂಕ್</strong> </p><p>‘ಕೆಪಿಎಸ್ಸಿಗೆ ಕಾನೂನಿನ ಭಯವಿಲ್ಲ. ಯಾವುದೇ ಹೊಣೆಗಾರಿಕೆಯೂ ಇಲ್ಲ. ಆ ಸಂಸ್ಥೆಯನ್ನೇ ರದ್ದು ಮಾಡಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು ‘ಕೆಪಿಎಸ್ಸಿಗೆ ಸಂಬಂಧಿಸಿದಂತೆ ಹಿಂದೆ ನಾನು ಖಾಸಗಿ ಮಸೂದೆ ಮಂಡಿಸಿದ್ದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದು ಕಾಯ್ದೆ ಆಯ್ತು. ಅದರ ಪ್ರಕಾರ ಅವ್ಯವಹಾರ ಎಸಗಿದವರಿಗೆ ₹10 ಕೋಟಿವರೆಗೆ ದಂಡ ಹಾಕಬಹುದು ಆಸ್ತಿ ಮುಟ್ಟುಗೋಲು ಹಾಕಬಹುದು. ಇಂತಹ ಕಠಿಣ ಕಾಯ್ದೆ ಇದ್ದರೂ ಅವರಿಗೆ ಭಯ ಇಲ್ಲ’ ಎಂದರು. </p>.<p><strong>ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?</strong> </p><p>‘ಕಠಿಣ ಕಾಯ್ದೆ ಇದ್ದರೂ ಕೆಪಿಎಸ್ಸಿ ಎಂಬ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ’ ಎಂದು ಬಿಜೆಪಿಯ ಎಸ್.ಸುರೇಶ್ಕುಮಾರ್ ಪ್ರಶ್ನಿಸಿದರು. ಕೆಪಿಎಸ್ಸಿಯಲ್ಲಿರುವ ಅಧ್ಯಕ್ಷ ಸದಸ್ಯರಿಗೆ ಪರೀಕ್ಷೆ ಬರೆಯುವ ಸಾಮಾನ್ಯ ಅಭ್ಯರ್ಥಿಗಳಿಗಿಂತ ತಮ್ಮ ಮಕ್ಕಳು ಮೊಮ್ಮಕ್ಕಳು ಸಂಬಂಧಿಕರ ಬಗ್ಗೆಯೇ ಚಿಂತೆ. ಹಿಂದೆ ತಾಳಿ ಭಾಗ್ಯ ಇತ್ತು. ಈಗ ಅಕ್ರಮದ ಸ್ವರೂಪ ಬದಲಾಗಿದೆ. ಉತ್ತಮವಾಗಿ ಕೆಲಸ ಮಾಡುವ ಕಾರ್ಯದರ್ಶಿಗಳನ್ನು ಅಲ್ಲಿ ಇರಲು ಬಿಡುವುದಿಲ್ಲ’ ಎಂದು ಹೇಳಿದರು. ಸರ್ಕಾರವು ಶಾಶ್ವತ ಪರೀಕ್ಷಾ ಮೌಲ್ಯ ಮಾಪಕರ ಮಂಡಳಿ ರಚಿಸಿ ಅದರ ಮೂಲಕ ಮೌಲ್ಯ ಮಾಪಕರನ್ನು ಬಳಸಿಕೊಳ್ಳಬೇಕು ಎಂದು ಹೇಳಿದ ಅವರು ಕೆಪಿಎಸ್ಸಿಯ ಶುದ್ಧೀಕರಣ ಆಗಬೇಕು. ಇದಕ್ಕಾಗಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.</p>.<p> <strong>ಕೋಚಿಂಗ್ನಲ್ಲಿ ತಾರತಮ್ಯ ಬೇಡ: ಅಶೋಕ</strong> </p><p>ಕಲಬುರಗಿಯಲ್ಲಿ ಐಎಎಸ್–ಕೆಎಎಸ್ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಎಸ್ಸಿ–ಎಸ್ಟಿ ಸಮುದಾಯದವರಿಗೆ ಶಿಷ್ಯ ವೇತನ ನೀಡುತ್ತಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ವಸತಿ ಸಹಿತ ಶಿಷ್ಯ ವೇತನ ನೀಡಲಾಗುತ್ತದೆ. ಈ ತಾರತಮ್ಯ ನಿಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು. ಈ ಗೊಂದಲ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>