ಕೆಪಿಎಸ್ಸಿ ಸುಧಾರಣೆಯಾಗಬೇಕು ಎಂದರೆ, ಅದರ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಕರ ನಡುವಿನ ಸಂಘರ್ಷ ತಪ್ಪಬೇಕು. ರಾಜಕೀಯ ನಂಟು, ಒತ್ತಾಸೆಯೊಂದಿಗೆ ಆಯೋಗಕ್ಕೆ ಅಡಿಯಿಡುವ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪರೀಕ್ಷಾ ನಿಯಂತ್ರಕರಾಗಿ ಬರುವ ಅಧಿಕಾರಿಗಳ ಮೇಲೆ ವಿಪರೀತ ಒತ್ತಡ ಹೇರುತ್ತಾರೆ. ಅವರನ್ನು ಕೇವಲ ಲಿಪಿಕಾರರಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾಗಿ ಅನೇಕ ಅಧಿಕಾರಿಗಳು ಕೆಪಿಎಸ್ಸಿಗೆ ಬರಲು ಹಿಂದೇಟು ಹಾಕುವುದೂ ಇದೆ. ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರಿಗೆ ಸರ್ಕಾರದ ಪ್ರಭಾವಿಗಳ ಅಭಯ ಇರುವುದೇ ವ್ಯವಸ್ಥೆ ಹಳಿತಪ್ಪಲು ಪ್ರಮುಖ ಕಾರಣ ಎನ್ನುವ ಆರೋಪವಿದೆ