<p><strong>ನವದೆಹಲಿ:</strong> ಕೆಪಿಟಿಸಿಎಲ್ನ ವಿದ್ಯುತ್ ಮಾರ್ಗಕ್ಕೆ ಅನುಮತಿ ಪಡೆಯದೇ ಅರಣ್ಯ ಬಳಸಿದ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಸೇರಿದಂತೆ ಒಂಬತ್ತು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಕೊಳ್ಳೆಗಾಲ ಡಿಸಿಎಫ್ ಪ್ರಸ್ತಾವ ಸಲ್ಲಿಸಿದ್ದರೆ, ಬೆಳಗಾವಿ ಪ್ರಕರಣದಲ್ಲಿ ಕೆಪಿಟಿಸಿಎಲ್ ಗೊತ್ತಿಲ್ಲದೇ ಅರಣ್ಯ ಬಳಸಿದೆ ಎಂದು ಬೆಳಗಾವಿ ಡಿಸಿಎಫ್ ವರದಿ ಸಲ್ಲಿಸಿದ್ದಾರೆ. </p>.<p>‘ಬೆಳಗಾವಿಯಲ್ಲಿ ಕೆಪಿಟಿಸಿಎಲ್ನವರು ನಿಯಮಬಾಹಿರವಾಗಿ 24 ಎಕರೆ ಅರಣ್ಯ ಬಳಸಿದ್ದರೂ ಡಿಸಿಎಫ್ ಯಾವುದೇ ಕ್ರಮಕ್ಕೆ ಶಿಫಾರಸು ಮಾಡಿಲ್ಲ. ಲೋಪ ಎಸಗಿದ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ’ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ರಾಘವೇಂದ್ರ ಎಂಬವರು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ. ‘ಅರಣ್ಯ ಭೂಮಿ ಎಂದು ಗೊತ್ತಿದ್ದರೂ ಅರಣ್ಯೇತರ ಚಟುವಟಿಕೆ ತಡೆಯಲು ವಿಫಲರಾದ ಬೆಳಗಾವಿ ಉಪವಿಭಾಗದ ಎಸಿಎಫ್ ಹಾಗೂ ವಲಯ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡದೆ ಬೆಳಗಾವಿ ಡಿಸಿಎಫ್ ಗಂಭೀರ ಲೋಪ ಎಸಗಿದ್ದಾರೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. </p>.<p><strong>ಪ್ರಕರಣ 1:</strong> ‘ಕಾವೇರಿ ವನ್ಯಜೀವಿಧಾಮದ ಧನಗೂರು ಅರಣ್ಯ ಪ್ರದೇಶದಲ್ಲಿ ಕೆಪಿಟಿಸಿಎಲ್ 66/11 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಕೆಪಿಟಿಸಿಎಲ್ನವರಿಗೆ ಮಂಜೂರಾತಿ ಮಾಡಿರುವ 2 ಎಕರೆ ಜಾಗವು ಕಂದಾಯ ಜಾಗ ಅಲ್ಲ. ಅರಣ್ಯ ಪ್ರದೇಶವನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ. ಈ ಪ್ರಕರಣದಲ್ಲಿ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಎಸ್.ಅಶ್ವತಿ, ಉಪವಿಭಾಗಾಧಿಕಾರಿಯಾಗಿದ್ದ ಬಿ.ಸಿ.ಶಿವಾನಂದ ಮೂರ್ತಿ, ತಹಶೀಲ್ದಾರ್ ಎಂ. ವಿಜಯಣ್ಣ ಸೇರಿದಂತೆ ಒಂಬತ್ತು ಅಧಿಕಾರಿಗಳು ಗಂಭೀರ ಲೋಪ ಎಸಗಿದ್ದಾರೆ. ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಕಂದಾಯ ಇಲಾಖೆಗೆ ಶಿಫಾರಸು ಮಾಡಬೇಕು’ ಎಂದು ಕೊಳ್ಳೆಗಾಲ ಡಿಸಿಎಫ್ ಅವರು ಪ್ರಸ್ತಾವ ಸಲ್ಲಿಸಿದ್ದಾರೆ. </p>.<p><strong>ಪ್ರಕರಣ 2:</strong> ಬೆಳಗಾವಿಯ ಇಸ್ಲಾಮ್ಪುರದಿಂದ ವಂಟಮುರಿಯ ವರೆಗೆ ಕೆಪಿಟಿಸಿಎಲ್ 110 ಕೆ.ವಿ. ವಿದ್ಯುತ್ ಮಾರ್ಗ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಮಾರ್ಗವು ಹಲವು ಹಳ್ಳಿಗಳ ಮೂಲಕ ಹಾದು ಹೋಗುತ್ತದೆ. ಈ ಯೋಜನೆಗೆ 24 ಎಕರೆ ಅರಣ್ಯ ಭೂಮಿ ಬಳಸಿಕೊಳ್ಳಲಾಗುತ್ತಿದೆ. ಸ್ಥಳ ಪರಿಶೀಲನೆ ನಡೆಸಿದ ಬೆಳಗಾವಿ ಡಿಸಿಎಫ್ ಅವರು, ‘ಅರಣ್ಯ ಪ್ರದೇಶದಲ್ಲೇ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಈ ಜಾಗವನ್ನು ಖಾಸಗಿಯವರಿಂದ ಕೆಪಿಸಿಎಲ್ನವರು ಖರೀದಿ ಮಾಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, ಈ ಜಾಗವು ಮೀಸಲು ಅರಣ್ಯ. ಇದು ಅರಣ್ಯ ಭೂಮಿ ಎಂಬುದು ಕೆಪಿಟಿಸಿಎಲ್ನವರಿಗೆ ಗೊತ್ತಿರಲಿಲ್ಲ. ಇದು ಉದ್ದೇಶಪೂರ್ವಕ ಲೋಪ ಅಲ್ಲ’ ಎಂದು ವರದಿ ಸಲ್ಲಿಸಿದ್ದಾರೆ. ‘ಅರಣ್ಯ ಭೂಮಿ ಬಳಕೆಗೆ ಕೆಪಿಟಿಸಿಎಲ್ ಪ್ರಸ್ತಾವ ಸಲ್ಲಿಸಲಿದೆ. ಹೀಗಾಗಿ, ಅರಣ್ಯ ಭೂಮಿ ಬಳಸಲು ಒಪ್ಪಿಗೆ ನೀಡಬಹುದು’ ಎಂದು ಶಿಫಾರಸು ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೆಪಿಟಿಸಿಎಲ್ನ ವಿದ್ಯುತ್ ಮಾರ್ಗಕ್ಕೆ ಅನುಮತಿ ಪಡೆಯದೇ ಅರಣ್ಯ ಬಳಸಿದ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಸೇರಿದಂತೆ ಒಂಬತ್ತು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಕೊಳ್ಳೆಗಾಲ ಡಿಸಿಎಫ್ ಪ್ರಸ್ತಾವ ಸಲ್ಲಿಸಿದ್ದರೆ, ಬೆಳಗಾವಿ ಪ್ರಕರಣದಲ್ಲಿ ಕೆಪಿಟಿಸಿಎಲ್ ಗೊತ್ತಿಲ್ಲದೇ ಅರಣ್ಯ ಬಳಸಿದೆ ಎಂದು ಬೆಳಗಾವಿ ಡಿಸಿಎಫ್ ವರದಿ ಸಲ್ಲಿಸಿದ್ದಾರೆ. </p>.<p>‘ಬೆಳಗಾವಿಯಲ್ಲಿ ಕೆಪಿಟಿಸಿಎಲ್ನವರು ನಿಯಮಬಾಹಿರವಾಗಿ 24 ಎಕರೆ ಅರಣ್ಯ ಬಳಸಿದ್ದರೂ ಡಿಸಿಎಫ್ ಯಾವುದೇ ಕ್ರಮಕ್ಕೆ ಶಿಫಾರಸು ಮಾಡಿಲ್ಲ. ಲೋಪ ಎಸಗಿದ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ’ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ರಾಘವೇಂದ್ರ ಎಂಬವರು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ. ‘ಅರಣ್ಯ ಭೂಮಿ ಎಂದು ಗೊತ್ತಿದ್ದರೂ ಅರಣ್ಯೇತರ ಚಟುವಟಿಕೆ ತಡೆಯಲು ವಿಫಲರಾದ ಬೆಳಗಾವಿ ಉಪವಿಭಾಗದ ಎಸಿಎಫ್ ಹಾಗೂ ವಲಯ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡದೆ ಬೆಳಗಾವಿ ಡಿಸಿಎಫ್ ಗಂಭೀರ ಲೋಪ ಎಸಗಿದ್ದಾರೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. </p>.<p><strong>ಪ್ರಕರಣ 1:</strong> ‘ಕಾವೇರಿ ವನ್ಯಜೀವಿಧಾಮದ ಧನಗೂರು ಅರಣ್ಯ ಪ್ರದೇಶದಲ್ಲಿ ಕೆಪಿಟಿಸಿಎಲ್ 66/11 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಕೆಪಿಟಿಸಿಎಲ್ನವರಿಗೆ ಮಂಜೂರಾತಿ ಮಾಡಿರುವ 2 ಎಕರೆ ಜಾಗವು ಕಂದಾಯ ಜಾಗ ಅಲ್ಲ. ಅರಣ್ಯ ಪ್ರದೇಶವನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ. ಈ ಪ್ರಕರಣದಲ್ಲಿ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಎಸ್.ಅಶ್ವತಿ, ಉಪವಿಭಾಗಾಧಿಕಾರಿಯಾಗಿದ್ದ ಬಿ.ಸಿ.ಶಿವಾನಂದ ಮೂರ್ತಿ, ತಹಶೀಲ್ದಾರ್ ಎಂ. ವಿಜಯಣ್ಣ ಸೇರಿದಂತೆ ಒಂಬತ್ತು ಅಧಿಕಾರಿಗಳು ಗಂಭೀರ ಲೋಪ ಎಸಗಿದ್ದಾರೆ. ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಕಂದಾಯ ಇಲಾಖೆಗೆ ಶಿಫಾರಸು ಮಾಡಬೇಕು’ ಎಂದು ಕೊಳ್ಳೆಗಾಲ ಡಿಸಿಎಫ್ ಅವರು ಪ್ರಸ್ತಾವ ಸಲ್ಲಿಸಿದ್ದಾರೆ. </p>.<p><strong>ಪ್ರಕರಣ 2:</strong> ಬೆಳಗಾವಿಯ ಇಸ್ಲಾಮ್ಪುರದಿಂದ ವಂಟಮುರಿಯ ವರೆಗೆ ಕೆಪಿಟಿಸಿಎಲ್ 110 ಕೆ.ವಿ. ವಿದ್ಯುತ್ ಮಾರ್ಗ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಮಾರ್ಗವು ಹಲವು ಹಳ್ಳಿಗಳ ಮೂಲಕ ಹಾದು ಹೋಗುತ್ತದೆ. ಈ ಯೋಜನೆಗೆ 24 ಎಕರೆ ಅರಣ್ಯ ಭೂಮಿ ಬಳಸಿಕೊಳ್ಳಲಾಗುತ್ತಿದೆ. ಸ್ಥಳ ಪರಿಶೀಲನೆ ನಡೆಸಿದ ಬೆಳಗಾವಿ ಡಿಸಿಎಫ್ ಅವರು, ‘ಅರಣ್ಯ ಪ್ರದೇಶದಲ್ಲೇ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಈ ಜಾಗವನ್ನು ಖಾಸಗಿಯವರಿಂದ ಕೆಪಿಸಿಎಲ್ನವರು ಖರೀದಿ ಮಾಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, ಈ ಜಾಗವು ಮೀಸಲು ಅರಣ್ಯ. ಇದು ಅರಣ್ಯ ಭೂಮಿ ಎಂಬುದು ಕೆಪಿಟಿಸಿಎಲ್ನವರಿಗೆ ಗೊತ್ತಿರಲಿಲ್ಲ. ಇದು ಉದ್ದೇಶಪೂರ್ವಕ ಲೋಪ ಅಲ್ಲ’ ಎಂದು ವರದಿ ಸಲ್ಲಿಸಿದ್ದಾರೆ. ‘ಅರಣ್ಯ ಭೂಮಿ ಬಳಕೆಗೆ ಕೆಪಿಟಿಸಿಎಲ್ ಪ್ರಸ್ತಾವ ಸಲ್ಲಿಸಲಿದೆ. ಹೀಗಾಗಿ, ಅರಣ್ಯ ಭೂಮಿ ಬಳಸಲು ಒಪ್ಪಿಗೆ ನೀಡಬಹುದು’ ಎಂದು ಶಿಫಾರಸು ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>